ಶಿವಮೊಗ್ಗದಲ್ಲಿ ನಾಗರ ಹಾವು ಹಿಡಿಯಲು ಹೋದಾಗ ಮಹಿಳೆಯರ ಮೈಮೇಲೆ ನಾಗ ದೇವತೆ ಪ್ರತ್ಯಕ್ಷ..!

Nagadevathe-on-women-at-Shimoga-snake-kiran

SHIMOGA | ನಾಗರ ಹಾವು ಹಿಡಿಯಲು ಹೋದಾಗ ಇಬ್ಬರು ಮಹಿಳೆಯರ ಮೈಮೇಲೆ ದೇವರು (SNAKE GOD) ಬಂದಿದೆ. ನಾಗರ ಹಾವನ್ನು ಹಿಡಿಯಬಾರದು, ಅದನ್ನು ಅಲ್ಲಿಯೆ ಬಿಡಬೇಕು ಎಂದು ಉರಗ ರಕ್ಷಕ ಸ್ನೇಕ್ ಕಿರಣ್ ಅವರಿಗೆ ಸೂಚನೆ ಸೂಚನೆ ನೀಡಿದ ಘಟನೆ ನಡೆದಿದೆ. ಶಿವಮೊಗ್ಗದ ಹೊನ್ನಾಳಿ ರಸ್ತೆಯ ಫ್ಲೈ ಓವರ್ ಪಕ್ಕದ ಚೌಡೇಶ್ವರಿ ಕಾಲೋನಿಯಲ್ಲಿರುವ ಶಂಕರ ರೇಂಜ್ ನರ್ಸರಿಯಲ್ಲಿ ಘಟನೆ ಸಂಭವಿಸಿದೆ. ಒಂದು ಅಡಿಯ ನಾಗರ ಹಾವು (SNAKE GOD) ನರ್ಸರಿಯಲ್ಲಿ ಹಾವು ಕಾಣಿಸಿಕೊಂಡಿದೆ ಎಂದು ನಾಗರಾಜ್ ಎಂಬುವವರು … Read more

ವಿದ್ಯಾನಗರ ಬಳಿ ಬೈಕ್’ಗೆ ಡಿಕ್ಕಿ ಹೊಡೆದು ಪರಾರಿಯಾದ ಟಾಟಾ ಸುಮೋ

Vidyanagara-Smart-city-board

SHIMOGA | ದ್ವಿಚಕ್ರ ವಾಹನಕ್ಕೆ ಟಾಟಾ ಸುಮೋ (TATA SUMO) ಕಾರೊಂದು ಹಿಂಬದಿಯಿಂದ ಡಿಕ್ಕಿ ಹೊಡೆದು ಪರಾರಿಯಾಗಿದೆ. ಅಪಘಾತ ಪಡಿಸಿದ ವಾಹನವನ್ನು ಹುಡುಕಿದಾಗ ಚಾಲಕ ಚಿಕಿತ್ಸೆ ವೆಚ್ಚ ಭರಿಸುವುದಾಗಿ ಭರವಸೆ ನೀಡಿದ್ದ. ಆದರೆ ಈತನಕ ನೆರವು ನೀಡದ ಹಿನ್ನೆಲೆ ಗಾಯಾಳುಗಳು ಪ್ರಕರಣ ದಾಖಲು ಮಾಡಿದ್ದಾರೆ. ಶಿವಮೊಗ್ಗ ವಿದ್ಯಾನಗರದ ಗಣೇಶ್ ಭವನ ಬಸ್ ಸ್ಟಾಪ್ ಬಳಿ ಘಟನೆ ಸಂಭವಿಸಿದೆ. ಗಾಂಧಿ ಬಜಾರ್ ನಿಂದ ಮಲವಗೊಪ್ಪಕ್ಕೆ ತೆರಳುತ್ತಿದ್ದ ದ್ವಿಚಕ್ರ ವಾಹನಕ್ಕೆ, ಹಿಂಬದಿಯಿಂದ ವೇಗವಾಗಿ ಬಂದ ಟಾಟಾ ಸುಮೋ ವಾಹನ ಡಿಕ್ಕಿ … Read more

ಈಜಲು ಹೋಗಿದ್ದ ಯುವಕ ಉಸಿರುಗಟ್ಟಿ ಸಾವು, ಸ್ವಿಮ್ಮಿಂಗ್ ಪೂಲ್ ಮಾಲೀಕನ ವಿರುದ್ಧ ಕೇಸ್

Drowned-Reference-Image-

SHIMOGA | ಸ್ನೇಹಿತರೊಂದಿಗೆ ಈಜಲು ತೆರಳಿದ್ದ ಯುವಕನೊಬ್ಬ ಸ್ವಿಮ್ಮಿಂಗ್ ಪೂಲ್ ನಲ್ಲಿ (swimming pool) ಮುಳುಗಿ ಪ್ರಾಣ ಕಳೆದುಕೊಂಡಿದ್ದಾನೆ. ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳದ ಪೂಲ್ ಮಾಲೀಕರ ವಿರುದ್ಧ ಪ್ರಕರಣ ದಾಖಲಾಗಿದೆ. ಶಿವಮೊಗ್ಗದ ಜೋಸೆಫ್ ನಗರದ ರಾಕೇಶ್ (18) ಮೃತ ದುರ್ದೈವಿ. ಡಿವಿಎಸ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ ರಾಕೇಶ್, ಸ್ನೇಹಿತರೊಂದಿಗೆ ಸ್ವಿಮ್ಮಿಂಗ್ ಪೂಲ್ ಗೆ ತೆರಳಿದ್ದಾಗ ಅವಘಡ ಸಂಭವಿಸಿದೆ. ಏನಿದು ಪ್ರಕರಣ? (swimming pool) ಕಾಲೇಜಿಗೆ ತೆರಳುವುದಾಗಿ ತಿಳಿಸಿ ರಾಕೇಶ್ ಮನೆಯಿಂದ ಹೋಗಿದ್ದ. ಮಧ್ಯಾಹ್ನ ಸ್ನೇಹಿತರೊಂದಿಗೆ … Read more

ಮುಳುಗಿದ ಲಾಂಚ್, ಜನರ ಪರದಾಟ, ಇನ್ನಾದರೂ ಬಗೆಹರಿಯುತ್ತಾ ಸಮಸ್ಯೆ?

shiggalu-karuru-launch-drowned

SAGARA | ಸೂಕ್ತ ನಿರ್ವಹಣೆ ಇಲ್ಲದೆ ಶಿಗ್ಗಲು – ಕರೂರು ಲಾಂಚ್ ನೀರಿನಲ್ಲಿ ಮುಳುಗಿದೆ (launch drowned). ಇದನ್ನು ಮೇಲೆತ್ತಿ, ಪುನಃ ಸೇವೆ ಆರಂಭಿಸುವ ಪ್ರಯತ್ನವಾಗಿಲ್ಲ. ಹಾಗಾಗಿ ಈ ಭಾಗದ ಜನರು ಸಂಕಷ್ಟಕ್ಕೀಡಾಗಿದ್ದಾರೆ. ಚನ್ನಗೊಂಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜನರ ಅನುಕೂಲಕ್ಕೆ ಎಂದು ಕಳೆದ ವರ್ಷ ಲಾಂಚ್ ಸೇವೆ ಆರಂಭಿಸಲಾಗಿತ್ತು. ಆದರೆ ಈ ಲಾಂಚ್ ನೀರಿನಲ್ಲಿ ಮುಳುಗಿ ನಾಲ್ಕು ತಿಂಗಳಾಗಿದೆ. ಹಾಗಾಗಿ ಚನ್ನಗೊಂಡ ಮತ್ತು ಸುತ್ತಮುತ್ತಲ ಜನರು ಪರದಾಡುವಂತಾಗಿದೆ. ಹಸಿರುಮಕ್ಕಿಯಿಂದ ತಂದ ಲಾಂಚ್ launch drowned ಶಿಗ್ಗಲು … Read more

ಜೆಡಿಎಸ್ ಜಿಲ್ಲಾಧ್ಯಕ್ಷ ಶ್ರೀಕಾಂತ್’ಗೆ ಪಕ್ಷದಲ್ಲಿ ಮತ್ತೊಂದು ಮಹತ್ವದ ಜವಾಬ್ದಾರಿ

M-Srikanth-JDS-Leader-Shrikanth.webp

SHIMOGA | ಜೆಡಿಎಸ್ ಪಕ್ಷ ಜಿಲ್ಲಾಧ್ಯಕ್ಷ ಎಂ.ಶ್ರೀಕಾಂತ್ (M SRIKANTH) ಅವರಿಗೆ ಪಕ್ಷದಲ್ಲಿ ರಾಜ್ಯಮಟ್ಟದ ಮತ್ತೊಂದು ಜವಾಬ್ದಾರಿ ನೀಡಲಾಗಿದೆ. ಎಂ.ಶ್ರೀಕಾಂತ್ (M SRIKANTH) ಅವರನ್ನು ಪಕ್ಷ ರಾಜ್ಯ ವಕ್ತಾರರನ್ನಾಗಿ ನೇಮಕ ಮಾಡಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಅವರು ಆದೇಶಿಸಿದ್ದಾರೆ. ಇನ್ಮುಂದೆ ಪಕ್ಷದ ಕಾರ್ಯಕ್ರಮಗಳು, ತಮ್ಮ ಪಕ್ಷದ ಸರ್ಕಾರವಿದ್ದ ಅವಧಿಯಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳ ಕುರಿತು ಸಾರ್ವಜನಿಕರಿಗೆ ಪರಿಣಾಮಕಾರಿಯಾಗಿ ತಲುಪಿಸುವ ಪ್ರಯತ್ನ ಮಾಡುವ ಭರವಸೆ ಇದೆ ಎಂದು ಆದೇಶ ಪ್ರತಿಯಲ್ಲಿ ತಿಳಿಸಲಾಗಿದೆ. ಕ್ಲಿಕ್ ಮಾಡಿ ಇದನ್ನೂ ಓದಿ | ಶಿವಮೊಗ್ಗ … Read more