ಶಿವಮೊಗ್ಗಕ್ಕೆ ನಾಳೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭೇಟಿ

Karnataka-Governer-Thawar-Chand-Gehlot-in-Kuvempu-University

SHIMOGA | ರಾಜ್ಯಪಾಲ (GOVERNOR) ಥಾವರ್ ಚಂದ್ ಗೆಹ್ಲೋಟ್ ಅವರು ಸೆ.28ರಂದು ಶಿವಮೊಗ್ಗಕ್ಕೆ ಆಗಮಿಸುತ್ತಿದ್ದಾರೆ. ಸಾಗರದ ಇರುವಕ್ಕಿಯಲ್ಲಿರುವ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ರಾಜ್ಯಪಾಲ (GOVERNOR) ಥಾವರ್ ಚಂದ್ ಗೆಹ್ಲೋಟ್ ಅವರು ಸೆ.28 ರ ಬೆಳಿಗ್ಗೆ 9.30ಕ್ಕೆ ಬೆಂಗಳೂರಿನಿಂದ ಹೊರಟು ಮಧ್ಯಾಹ್ನ 12 ಗಂಟೆಗೆ ಚಿತ್ರದುರ್ಗದ ಪ್ರವಾಸಿಮಂದಿರಕ್ಕೆ ತೆರಳಲಿದ್ದಾರೆ. ಮಧ್ಯಾಹ್ನ 12.30 ಕ್ಕೆ ಚಿತ್ರದುರ್ಗದಿಂದ ಹೊರಟು 2 ಗಂಟೆಗೆ ಶಿವಮೊಗ್ಗದ ಪ್ರವಾಸಿ ಮಂದಿರಕ್ಕೆ ಆಗಮಿಸಲಿದ್ದಾರೆ. ಮಧ್ಯಾಹ್ನ 2.20 ಕ್ಕೆ ಶಿವಮೊಗ್ಗ ಪ್ರವಾಸಿ ಮಂದಿರದಿಂದ … Read more

ಶಿವಮೊಗ್ಗ, ಭದ್ರಾವತಿಯಲ್ಲಿ ಪೊಲೀಸರ ದಾಳಿ, ಐವರ ಬಂಧನ, ಕಾರಣ ಬಿಚ್ಚಿಟ್ಟ ಗೃಹ ಸಚಿವರು

Police-Raid-on-PFI-Workers-at-Bhadravathi

SHIMOGA | ರಾಜ್ಯಾದ್ಯಂತ ಪಾಪ್ಯೂಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಸಂಘಟನೆ ಕಾರ್ಯಕರ್ತರ ಮೇಲೆ ಪೊಲೀಸರು ದಾಳಿ (RAID ON PFI) ನಡೆಸಿದ್ದಾರೆ. ಶಿವಮೊಗ್ಗ ಮತ್ತು ಭದ್ರಾವತಿಯಲ್ಲಿ ಪೊಲೀಸರು ದಾಳಿ ಮಾಡಿ, ಐವರನ್ನು ವಶಕ್ಕೆ ಬಂಧಿಸಲಾಗಿದೆ. ಈ ಕುರಿತು ಜಿಲ್ಲಾ ಪೊಲೀಸ್ ಇಲಾಖೆ ಪ್ರಕಟಣೆ ಬಿಡುಗಡೆ ಮಾಡಿದೆ. ‘ಕಾನೂನು, ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಭದ್ರಾವತಿಯಲ್ಲಿ ಮೂವರು ಮತ್ತು ಶಿವಮೊಗ್ಗದಲ್ಲಿ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಆಯಾ ತಾಲೂಕು ದಂಡಾಧಿಕಾರಿ ಅವರ ಮುಂದೆ ಹಾಜರುಪಡಿಸಲಾಗಿದೆ. ಮುಂಜಾಗ್ರತ ಕ್ರಮವಾಗಿ ಬಂಧನಕ್ಕೆ ಅವರು … Read more

ಶಿವಮೊಗ್ಗದಲ್ಲಿ ರೈತ ದಸರಾದ ಮೆರಗು ಹೆಚ್ಚಿಸಿದ ಕೆಸರು ಗದ್ದೆ ಓಟ, ಹಗ್ಗ ಜಗ್ಗಾಟ

Kesaru-Gadde-Ota-in-Shimoga-Dasara

SHIMOGA | ರೈತ ದಸರಾದ ಅಂಗವಾಗಿ ಶಿವಮೊಗ್ಗದ ಮಲವಗೊಪ್ಪದಲ್ಲಿ ಕೆಸರು ಗದ್ದೆ ಓಟ (Hagga Jaggata) ಸೇರಿದಂದ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಸುತ್ತಮುತ್ತಲ ಬಡಾವಣೆಯ ನಿವಾಸಿಗಳು ಈ ಸ್ಪರ್ಧೆಗಳಲ್ಲಿ ಭಾಗಹಿಸಿ ಖುಷಿ ಪಟ್ಟರು. ಮಲವಗೊಪ್ಪದ ಗದ್ದೆಯೊಂದರಲ್ಲಿ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಮಹಿಳೆಯರು, ಮಕ್ಕಳು ಸಹಿತ ಹಲವರು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಕ್ಲಿಕ್ ಮಾಡಿ ಇದನ್ನೂ ಓದಿ | ಅಮ್ಮ – ಮಗಳ ರಾಂಪ್ ವಾಕ್, ಭರ್ಜರಿ ಡಾನ್ಸ್, ಮಹಿಳಾ ದಸರಾದಲ್ಲಿ ಮಾನಿನಿಯರ ಸಂಭ್ರಮ ಕೆಸರು ಗದ್ದೆ ಓಟ, ರಿಲೇ, ಹಗ್ಗೆ ಜಗ್ಗಾಟ … Read more

ಪಿತೃ ಪಕ್ಷಕ್ಕೆ ಊರಿಗೆ ಹೋದ ಸ್ಟಾಫ್ ನರ್ಸ್ ಗಳ ಮನೆ ಬೀಗ ಮುರಿದ ಖದೀಮರು

theft case general image

SHIMOGA | ಪಿತೃ ಪಕ್ಷಕ್ಕೆ ತೆರಳಿದ್ದ ಸ್ಟಾಫ್ ನರ್ಸ್ ಗಳ (STAFF NURSE) ಮನೆಗಳ ಬೀಗ ಮುರಿದು ಕಳ್ಳತನ ಮಾಡಲಾಗಿದೆ. ಶರಾವತಿ ನಗರದಲ್ಲಿರುವ ನರ್ಸ್ ಕ್ವಾರ್ಟರ್ಸ್ ನಲ್ಲಿ ಘಟನೆ ಸಂಭವಿಸಿದೆ. ಮೆಗ್ಗಾನ್ ಆಸ್ಪತ್ರೆಯ ಸ್ಟಾಫ್ ನರ್ಸ್ (STAFF NURSE) ಆಗಿ ಕೆಲಸ ಮಾಡುತ್ತಿರುವ ಸ್ವಾಮಿ ಅವರ ಮನೆಯಲ್ಲಿ ಕಳ್ಳತನವಾಗಿದೆ. ಪಿತೃ ಪಕ್ಷದ ಪೂಜೆಗಾಗಿ ಸ್ವಾಮಿ ಅವರು ಕುಟುಂಬದೊಂದಿಗೆ ಮಂಡ್ಯ ಜಿಲ್ಲೆಯ ತಮ್ಮ ಊರಿಗೆ ತೆರಳಿದ್ದರು. ಕ್ವಾರ್ಟರ್ಸ್ ನ ಎಫ್ 6 ಬ್ಲಾಕ್ ನಲ್ಲಿರುವ ಸ್ವಾಮಿ ಅವರ ಮನೆಯ … Read more

ಶಿವಮೊಗ್ಗದಲ್ಲಿ ದೇವಿ ಮೂರ್ತಿಗೆ ಚಾಕ್ಲೇಟ್, ಬಿಸ್ಕೇಟ್ ಅಲಂಕಾರ, ಕಣ್ತುಂಬಿಕೊಳ್ಳಲು ಭಕ್ತರ ದಂಡು

Sigehatti-Antragattamma-temple-navarathri

SHIMOGA | ನವರಾತ್ರಿ ಸಂದರ್ಭ ಎಲ್ಲಾ ದೇವಿಯ ದೇವಸ್ಥಾನಗಳಲ್ಲಿ ವಿಶೇಷ ಅಲಂಕಾರ ಮಾಡಿ, ಪೂಜೆ ಸಲ್ಲಿಸಲಾಗುತ್ತದೆ. ಶಿವಮೊಗ್ಗದ ದೇವಸ್ಥಾನವೊಂದರಲ್ಲಿ ದೇವಿಯ ಮೂರ್ತಿಗೆ ಬಿಸ್ಕೇಟ್ (Biscuit), ಚಾಕ್ಲೇಟ್ ನಿಂದ ಅಲಂಕಾರ ಮಾಡಲಾಗಿದೆ. ನಗರದ ಸೀಗೆಹಟ್ಟಿಯ ಶ್ರೀ ಅಂತರಘಟ್ಟಮ್ಮ ದೇವಸ್ಥಾನದಲ್ಲಿ ಇವತ್ತು ಅಂತರ ಘಟ್ಟಮ್ಮ ದೇವಿಯ ಮೂರ್ತಿಗೆ ಬೆಣ್ಣೆ, ಬಿಸ್ಕೇಟ್ (Biscuit), ಚಾಕ್ಲೇಟ್ ನಿಂದ ಅಲಂಕಾರ ಮಾಡಲಾಗಿದೆ. ಇವತ್ತು ಮಧ್ಯಾಹ್ನ 12 ಗಂಟೆವರೆಗೆ ಈ ಅಲಂಕಾರವನ್ನು ಕಣ್ತುಂಬಿಕೊಳ್ಳಲು ಅವಕಾಶವಿದೆ. ನವರಾತ್ರಿ ಅಂಗವಾಗಿ ಶ್ರೀ ಅಂತರಘಟ್ಟಮ್ಮ ದೇವಿ ದೇವಸ್ಥಾನದಲ್ಲಿ ನಿತ್ಯ ಒಂದೊಂದು … Read more

ಅಮ್ಮ – ಮಗಳ ರಾಂಪ್ ವಾಕ್, ಭರ್ಜರಿ ಡಾನ್ಸ್, ಮಹಿಳಾ ದಸರಾದಲ್ಲಿ ಮಾನಿನಿಯರ ಸಂಭ್ರಮ

Mahila-Dasara-in-Shimoga-City

SHIMOGA | ಸಾಧಕಿಯರಿಗೆ ಸನ್ಮಾನ, ಅಮ್ಮ, ಮಕ್ಕಳ ರಾಂಪ್ ವಾಕ್, ಭರ್ಜರಿ ಡಾನ್ಸ್.. ಇದು ಮಹಿಳಾ ದಸರಾದ (mahila dasara) ಹೈಲೈಟ್. ಶಿವಮೊಗ್ಗದ ಫ್ರೀಡಂ ಪಾರ್ಕ್ ನಲ್ಲಿ ಮಹಿಳಾ ದಸರಾದ (mahila dasara) ಭಾಗವಾಗಿ ಮಹಿಳೆಯರಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಅಮ್ಮ ಮಗಳ ರಾಂಪ್ ವಾಕ್ ಮತ್ತು ಡಾನ್ಸ್ ಸ್ಪರ್ಧೆಗಳನ್ನು ನಡೆಸಲಾಯಿತು. ನಗರದ ವಿವಿಧೆಡೆಯ ಮಹಿಳೆಯರು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಇದಕ್ಕೂ ಮೊದಲು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ 9 ಮಹಿಳೆಯರನ್ನು ಸನ್ಮಾನಿಸಲಾಯಿತು. ಕ್ಲಿಕ್ ಮಾಡಿ ಇದನ್ನೂ ಓದಿ … Read more

ಶಿವಮೊಗ್ಗದಲ್ಲಿ ದೇಹದಾರ್ಢ್ಯ ಸ್ಪರ್ಧೆ, ಹೇಗಿತ್ತು ಕಾಂಪಿಟೇಷನ್?

state-level-Body-Building-competation-in-Shimoga.

SHIMOGA | ಯುವ ದಸರಾದ ಅಂಗವಾಗಿ ಶಿವಮೊಗ್ಗದಲ್ಲಿ ರಾಜ್ಯಮಟ್ಟದ ದೇಹದಾರ್ಢ್ಯ (BODY BUILDING) ಸ್ಪರ್ಧೆ ಆಯೋಜಿಸಲಾಗಿತ್ತು. ರಾಜ್ಯದ ವಿವಿಧೆಡೆಯ ಸ್ಪರ್ಧಿಗಳು ಭಾಗವಹಿಸಿದ್ದರು. ಕುವೆಂಪು ರಂಗಮಂದಿರದಲ್ಲಿ ರಾಜ್ಯದಮಟ್ಟದ ದೇಹದಾರ್ಢ್ಯ (BODY BUILDING) ಸ್ಪರ್ಧೆ ನಡೆಯಿತು. ವಿವಿಧ ವಿಭಾಗಗಳಲ್ಲಿ ನಡೆದ ಸ್ಪರ್ಧೆಯಲ್ಲಿ ದೇಹದಾರ್ಢ್ಯ ಪಟುಗಳು ಪ್ರಬಲ ಸ್ಪರ್ಧೆ ಒಡ್ಡಿದರು. ಸ್ಪರ್ಧೆ ಕಣ್ತುಂಬಿಕೊಳ್ಳಲು ಕುವೆಂಪು ರಂಗಮಂದಿರದಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನ ಸೇರಿದ್ದರು. ಕ್ಲಿಕ್ ಮಾಡಿ ಇದನ್ನೂ ಓದಿ | ‘ಶಿವಮೊಗ್ಗ ನಗರಕ್ಕೆ ರಾಷ್ಟ್ರಮಟ್ಟದ ಪ್ರಶಸ್ತಿ, ರಾಷ್ಟ್ರಪತಿಯಿಂದ ಪ್ರದಾನ’ ADVERTISEMENT ಆರೋಗ್ಯ ತುರ್ತು ಸಂದರ್ಭದಲ್ಲಿ … Read more

ಶಿವಮೊಗ್ಗದಲ್ಲಿ ಹಸಿರು ಟವೆಲ್ ತಿರುಗಿಸಿ ಸರ್ಕಾರದ ವಿರುದ್ಧ ಘೋಷಣೆ ಮೊಳಗಿಸಿದ ರೈತರು

KT-Gangadhar-Protest-in-DC-Offie

SHIMOGA | ವಿದ್ಯುತ್ ಶಕ್ತಿ ಕ್ಷೇತ್ರ ಖಾಸಗೀಕರಣಕ್ಕೆ (PRIVATIZE) ಯತ್ನ ಸೇರಿದಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ನೀತಿಗಳನ್ನು ಖಂಡಿಸಿ, ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ಶಿವಮೊಗ್ಗದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ರೈತ ಮುಖಂಡ ಕೆ.ಟಿ.ಗಂಗಾಧರ್ ಅವರ ನೇತೃತ್ವದಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಯಿತು. ಬಳಿಕ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ರೈತರು ಪ್ರತಿಭಟಿಸಿದರು. ರೈತರ ಬೇಡಿಕೆಗಳೇನು? ಕೇಂದ್ರ ಸರ್ಕಾರ ಮೂರು ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆದಿದೆ. … Read more