ರೆಡ್ ಅಲರ್ಟ್ ಬೆನ್ನಿಗೆ ತುಂಗಾ ಜಲಾಶಯದಿಂದಲೂ ಮುನ್ನೆಚ್ಚರಿಕೆ ಪ್ರಕಟ

Tunga-Dam-Shimoga-

ಶಿವಮೊಗ್ಗ ಲೈವ್.ಕಾಂ | SHIMOGA NEWS | 14 MAY 2021 ಹವಾಮಾನ ಇಲಾಖೆ ಭಾರಿ ಮಳೆಯ ಮುನ್ಸೂಚನೆ ನೀಡಿದೆ. ಇದರ ಬೆನ್ನಿಗೆ ತುಂಗಾ ಜಲಾಶಯ ಭರ್ತಿಯಾಗುವ ಸಂಭವವಿದ್ದು, ಯಾವುದೆ ಸಂದರ್ಭದಲ್ಲಿ ನೀರು ಹೊರಬಿಡುವ ಸಾದ್ಯತೆ ಇದೆ ಎಂದು ಕರ್ನಾಟಕ ನೀರಾವರಿ ನಿಗಮ ಮುನ್ನೆಚ್ಚರಿಕೆ ನೀಡಿದೆ. ಜಲಾಶಯದ ಗರಿಷ್ಠ ಮಟ್ಟ 588.24 ಮೀ. ಆಗಿದ್ದು, ಇವತ್ತು 588.02 ಮೀಟರ್‍ನಷ್ಟು ನೀರು ಭರ್ತಿಯಾಗಿದೆ. ಮಳೆ ಹೆಚ್ಚಾದರೆ ಜಲಾಶಯದ ಒಳ ಹರಿವು ಹೆಚ್ಚಾಗಬಹುದು. ಹಾಗಾಗಿ ಯಾವುದೆ ಕ್ಷಣದಲ್ಲಿ ಜಲಾಶಯದಿಂದ ಹೊರ … Read more

ಹೊಸನಗರದ ಚಕ್ರಾ ಹಿನ್ನೀರಿನಲ್ಲಿ ಕಣ್ಮರೆಯಾಗಿದ್ದ ಬೆಂಗಳೂರಿನ ವ್ಯಕ್ತಿಯ ಮೃತದೇಹ ಪತ್ತೆ

ಶಿವಮೊಗ್ಗ ಲೈವ್.ಕಾಂ | HOSANAGARA NEWS | 28 MARCH 2021 ಹೊಸನಗರದ ಚಕ್ರಾ ಅಣೆಕಟ್ಟೆ ಹಿನ್ನೀರಿನಲ್ಲಿ ಈಜಲು ಹೋಗಿ ಕಣ್ಮರೆಯಾಗಿದ್ದ ಬೆಂಗಳೂರಿನ ವ್ಯಕ್ತಿ, ಶವವಾಗಿ ಪತ್ತೆಯಾಗಿದ್ದಾರೆ. ಶ್ರೀಹರಿ (58) ಮೃತದೇಹವು ಇವತ್ತು ಹಿನ್ನೀರಿನಲ್ಲಿ ತೇಲುತ್ತಿತ್ತು. ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ವೇಳೆ ಶವ ಪತ್ತೆಯಾಗಿದ್ದು, ದಡಕ್ಕೆ ತರಲಾಯಿತು. ಇದನ್ನೂ ಓದಿ  | ಚಕ್ರಾ ಹಿನ್ನೀರಿನಲ್ಲಿ ಮುಳುಗಿದ ಪ್ರವಾಸಿಗರು, ಒಬ್ಬ ಸಾವು, ಮತ್ತೊಬ್ಬ ನಾಪತ್ತೆ ಶನಿವಾರ ವಿಶ್ವೇಶ್ವರ  (58) ಎಂಬುವವರು ನೀರಿನಲ್ಲಿ ಮುಳುಗಿದ್ದು, ಅವರ ರಕ್ಷಣೆ ಮಾಡಿ, ಆಸ್ಪತ್ರೆ ರವಾನಿಸಲಾಗಿತ್ತು. … Read more

ಚಕ್ರಾ ಹಿನ್ನೀರಿನಲ್ಲಿ ಮುಳುಗಿದ ಪ್ರವಾಸಿಗರು, ಒಬ್ಬ ಸಾವು, ಮತ್ತೊಬ್ಬ ನಾಪತ್ತೆ

HOSANAGARA MAP GRAPHICS 1

ಶಿವಮೊಗ್ಗ ಲೈವ್.ಕಾಂ | HOSANAGARA NEWS | 28 MARCH 2021 ಚಕ್ರಾ ಡ್ಯಾಂ ಹಿನ್ನೀರಿನಲ್ಲಿ ಈಜುತ್ತಿದ್ದ ಇಬ್ಬರು ಪ್ರವಾಸಿಗರು ನೀರಿನಲ್ಲಿ ಮುಳುಗಿದ್ದಾರೆ. ಒಬ್ಬರು ಮೃತಪಟ್ಟಿದ್ದು, ಮತ್ತೊಬ್ಬರಿಗೆ ಶೋಧ ಕಾರ್ಯ ನಡೆಯುತ್ತಿದೆ. ವಿಶ್ವೇಶ್ವರ (58) ಮೃತರು. ಹರಿ (58) ಎಂಬುವವರಿಗೆ ಶೋಧ ಕಾರ್ಯ ನಡೆಯುತ್ತಿದೆ. ಶನಿವಾರ ಹಿನ್ನೀರಿನಲ್ಲಿ ಈಜುತ್ತಿದ್ದಾಗ ಘಟನೆ ಸಂಭವಿಸಿದೆ. ದೇವಸ್ಥಾನಕ್ಕೆ ಹೋಗಿದ್ದರು ಬೆಂಗಳೂರಿನ ಬಸವನಗುಡಿಯಿಂದ ನಾಲ್ವರು ಮಹಿಳೆಯರು ಸೇರಿ 16 ಮಂದಿ ಪ್ರವಾಸಕ್ಕೆ ಬಂದಿದ್ದರು. ಚಕ್ರಾನಗರ ಅರಣ್ಯ ಪ್ರದೇಶದಲ್ಲಿರುವ ಮತ್ತೂರು ಶ್ರೀ ವನದುರ್ಗಾ ಪರಮೇಶ್ವರಿ … Read more

SHIMOGA |ಬೇಸಿಗೆಯಲ್ಲಿ ಭತ್ತ ಬೆಳೆಯಬೇಡಿ, ಬೆಳೆ ಹಾನಿಯಾದರೆ ಇಲಾಖೆ ಜವಾಬ್ದಾರಿಯಲ್ಲ, ರೈತರಿಗೆ ಸೂಚನೆ

180620 Gajanur Tunga Dam Full Four Gates Opened 1

(FILE PHOTO) ಶಿವಮೊಗ್ಗ ಲೈವ್.ಕಾಂ | SHIMOGA NEWS | 02 FEBRUARY 2021 ತುಂಗಾ ಜಲಾಶಯದಲ್ಲಿ ಲಭ್ಯವಿರುವ ನೀರಿನ ಪ್ರಮಾಣಕ್ಕೆ ಅನುಗುಣವಾಗಿ ಎಡದಂಡೆ ಮತ್ತು ಬಲದಂಡೆ ನಾಲೆಗಳಲ್ಲಿ ನೀರು ಹರಿಸಲಾಗುತ್ತಿದೆ. ಬೇಸಿಗೆಯಲ್ಲಿ ಶಿವಮೊಗ್ಗ ನಗರಕ್ಕೆ ಕುಡಿಯುವ ನೀರಿನ ಸರಬರಾಜಿಗಾಗಿ ನೀರಿನ ಶೇಖರಣೆ ಅತ್ಯವಶಕ್ಯಕವಾಗಿದೆ. ತೋಟಗಾರಿಕೆ ಹಾಗೂ ನಿಂತ ಬೆಳೆಗಳಿಗೆ ಮಾತ್ರ ಕಾಲುವೆಯಲ್ಲಿ ನೀರು ಹರಿಸಲಾಗುತ್ತದೆ ಎಂದು ನೀರಾವರಿ ನಿಗಮ ತಿಳಿಸಿದೆ. ಈ ಭಾಗಗಳಲ್ಲಿ ಭತ್ತದ ಬೆಳೆಗೆ ನೀರನ್ನು ಪೂರೈಸಲು ಸಾಧ್ಯ ಆಗುವುದಿಲ್ಲ. ಆದ್ದರಿಂದ ರೈತರು ಬೇಸಿಗೆಯಲ್ಲಿ … Read more

ಸೆಲ್ಫಿ ಗಂಡಾಂತರ, ತುಂಗಾ ಡ್ಯಾಂನಲ್ಲಿ ಕಾಲು ಜಾರಿ ನದಿಗೆ ಬಿದ್ದ ಯುವಕ, ಪತ್ತೆಯಾಯ್ತು ಮೃತದೇಹ

ಈಗ ಬಟ್ಟೆ ಒಗೆಯೋದು ಬಹಳ ಸುಲಭ, ಹೇಗದು? | ವಿಡಿಯೋಗಾಗಿ ಕ್ಲಿಕ್ ಮಾಡಿ ಶಿವಮೊಗ್ಗ ಲೈವ್.ಕಾಂ | SHIMOGA NEWS | 12 JANUARY 2021 ಗಾಜನೂರಿನ ತುಂಗಾ ಜಲಾಶಯದಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ವೇಳೆ ಕಾಲು ಜಾರಿ ಬಿದ್ದು, ಯುವಕನೊಬ್ಬ ನೀರುಪಾಲಾಗಿದ್ದಾನೆ. ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮೃತದೇಹವನ್ನು ಹೊರತೆಗೆದಿದ್ದಾರೆ. ವಿನಾಯಕ (22), ಮೃತ ದುರ್ದೈವಿ. ಇವತ್ತು ಕುಟುಂಬದವರ ಜೊತೆಗೆ ವಿನಾಯಕ ಗಾಜನೂರಿಗೆ ಆಗಮಿಸಿದ್ದ. ಈ ವೇಳೆ ಸೆಲ್ಫಿ ಕ್ಲಿಕ್ ಮಾಡಿಕೊಳ್ಳುತ್ತಿದ್ದಾಗ, ಕಾಲು ಜಾರಿ ಹೊಳೆಗೆ ಬಿದ್ದಿದ್ದಾನೆ. … Read more

ಭದ್ರಾ ಜಲಾಶಯದ ನೀರಿನ ಮಟ್ಟ ಸೇರಿ ವಿವಿಧ ಮಾಹಿತಿಗೆ ಸಹಾಯವಾಣಿ ಶುರು

Bhadra-Dam-No-Water

ಶಿವಮೊಗ್ಗ : ಭದ್ರಾ ಜಲಾಶಯದಿಂದ ನೀರು ಬಿಡುಗಡೆ ಸೇರಿದಂತೆ ವಿವಿಧ ಮಾಹಿತಿಗೆ ಕರ್ನಾಟಕ ನೀರಾವರಿ ನಿಗಮ ಸಹಾಯವಾಣಿ ಆರಂಭಿಸಿದೆ. 08282-256338 ಗೆ ಕಚೇರಿ ಅವಧಿಯಲ್ಲಿ ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ. ಜಲಾಶಯದ ನೀರಿನ ಮಟ್ಟ, ಪ್ರವಾಹದಿಂದಾಗುವ ನೀರಿನ ಮಟ್ಟ, ನೀರಿನ ಕಾಲುವೆಗಳ ಸುಸ್ಥಿತಿ, ದುಸ್ಥಿತಿಯ ಬಗ್ಗೆ ಮತ್ತು ನಾಲೆಗಳಲ್ಲಿ ನೀರು ಹರಿಸುವ, ನಿಲ್ಲಿಸುವ ಸೇರಿದಂತೆ ವಿವಿಧ ಮಾಹಿತಿಗಳನ್ನು ಇಲ್ಲಿ ಪಡೆಯಬಹುದಾಗಿದೆ ಎಂದು ಭದ್ರಾ ಯೋಜನಾ ಬಿ.ಆರ್.ಪ್ರಾಜೆಕ್ಟ್‌ ಅಧೀಕ್ಷಕ ಇಂಜಿನಿಯರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಕಳೆದ 24 ಗಂಟೆಯಲ್ಲಿ ಶಿವಮೊಗ್ಗ ಜಿಲ್ಲೆಯಾದ್ಯಂತ 459 ಮಿ.ಮೀ ಮಳೆ, ಯಾವ್ಯಾವ ತಾಲೂಕಲ್ಲಿ ಎಷ್ಟು ಮಳೆಯಾಗಿದೆ?

rain in shimoga

ಶಿವಮೊಗ್ಗ ಲೈವ್.ಕಾಂ | SHIMOGA NEWS | 15 ಅಕ್ಟೋಬರ್ 2020 ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ ಒಟ್ಟು 459 ಮಿಮಿ ಮಳೆಯಾಗಿದೆ. ಸರಾಸರಿ 65.57 ಮಿಮಿ ಮಳೆ ದಾಖಲಾಗಿದೆ. ಅಕ್ಟೋಬರ್ ತಿಂಗಳ ಸಾಮಾನ್ಯ ಮಳೆಯ ಸರಾಸರಿ ಪ್ರಮಾಣ 143.14 ಮಿಮಿ ಇದ್ದು, ಇದುವರೆಗೆ ಸರಾಸರಿ 118.83 ಮಿಮಿ ಮಳೆ ದಾಖಲಾಗಿದೆ. ಯಾವ್ಯಾವ ತಾಲೂಕನಲ್ಲಿ ಎಷ್ಟು ಮಳೆಯಾಗಿದೆ? ಶಿವಮೊಗ್ಗ 40.60 ಮಿಮಿ., ಭದ್ರಾವತಿ 18.40 ಮಿಮಿ., ತೀರ್ಥಹಳ್ಳಿ 55.40 ಮಿಮಿ., ಸಾಗರ 64.00 ಮಿಮಿ., … Read more

ಭದ್ರಾ ಜಲಾಶಯಕ್ಕೆ ಒಳ ಹರಿವು ಹೆಚ್ಚಳ, ಹೊರ ಹರಿವು ಕೂಡ ಏರಿಕೆ

Bhadra-Dam-Water-Outflow

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 15 ಅಕ್ಟೋಬರ್ 2020 ಹಿನ್ನೀರು ಭಾಗದಲ್ಲಿ ಮಳೆ ಜೋರಿರುವುದರಿಂದ ಭದ್ರಾ ಜಲಾಶಯದ ಒಳ ಮತ್ತು ಹೊರ ಹರಿವು ಪ್ರಮಾಣ ಹೆಚ್ಚಳವಾಗಿದೆ. ಕ್ರಸ್ಟ್ ಗೇಟ್‍ಗಳ ಮೂಲಕ ಹೊಳೆಗೆ ನೀರು ಹರಿಸಲಾಗುತ್ತಿದೆ. ಭದ್ರಾ ಜಲಾಶಯಕ್ಕೆ ಇವತ್ತು 14,304 ಕ್ಯೂಸೆಕ್ ನೀರು ಒಳ ಹರಿವು ದಾಖಲಾಗಿದೆ. ಹಾಗಾಗಿ 8,251 ಕ್ಯೂಸೆಕ್ ನೀರನ್ನು ಹೊರಗೆ ಬಿಡಲಾಗುತ್ತಿದೆ. ಈ ಪೈಕಿ ಬಲ ದಂಡೆ ನಾಲೆಗೆ 300 ಕ್ಯೂಸೆಕ್, ಎಡ ದಂಡೆ ನಾಲೆಗೆ 50 ಕ್ಯೂಸೆಕ್ ಹರಿಸಲಾಗುತ್ತಿದೆ. … Read more

ಭದ್ರಾ ಜಲಾಶಯದಿಂದ ಮತ್ತೊಮ್ಮೆ ನೀರು ಹೊರಕ್ಕೆ, ಎಷ್ಟು ಪ್ರಮಾಣದ ನೀರು ಹರಿಸಲಾಗುತ್ತಿದೆ?

Bhadra-Dam-Water-Outflow

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 14 ಅಕ್ಟೋಬರ್ 2020 ಭದ್ರಾ ಜಲಾಶಯದ ಕ್ರಸ್ಟ್ ಗೇಟ್‍ಗಳಿಂದ ಮತ್ತೊಮ್ಮೆ ನೀರು ಹೊರಬಿಡಲಾಗಿದೆ. ಜಲಾಶಯದಿಂದ ಇವತ್ತು 4300 ಕ್ಯೂಸೆಕ್ ನೀರು ಹೊರ ಬಿಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕ್ರಸ್ಟ್ ಗೇಟ್‍ಗಳಿಂದ 3300 ಕ್ಯೂಸೆಕ್ ನೀರನ್ನು ಹೊರ ಹರಿಸಲಾಗುತ್ತಿದೆ. ಭದ್ರಾ ಜಲಾಶಯಕ್ಕೆ ಇವತ್ತು 2471 ಕ್ಯೂಸೆಕ್ ಒಳ ಹರಿವು ಇದೆ. ಜಲಾಶಯದ ನೀರಿ ಮಟ್ಟ185.3 ಅಡಿಯಷ್ಟಿದೆ. FILE PHOTO ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494 ವಾಟ್ಸಪ್ ನಂಬರ್ … Read more

ಭದ್ರಾವತಿ ಹೊಸ ಸೇತುವೆ, ನೀರಿನ ಪೈಪ್‌ಲೈನ್‌ ಹಾನಿ, ಬುಡಮೇಲಾಯ್ತು ಸೇತುವೆ ಮುಂದಿದ್ದ ಮರ

210920 Bhadravathi New Bridge Damaged 1

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 21 ಸೆಪ್ಟಂಬರ್ 2020 ಹಿನ್ನೀರು ಭಾಗದಲ್ಲಿ ಮಳೆ ಕಡಿಮೆಯಾಗಿದ್ದು ಭದ್ರಾ ಜಲಾಶಯದ ಒಳ ಮತ್ತು ಹೊರ ಹರಿವಿನ ಪ್ರಮಾಣ ಇವತ್ತು ತಗ್ಗಿದೆ. ಭದ್ರಾವತಿ ಸೇರಿದಂತೆ ನದಿ ಪಾತ್ರದ ಜನರಲ್ಲಿ ಉಂಟಾಗಿದ್ದ ನೆರೆ ಆತಂಕ ದೂರಾಗಿದೆ. ಮತ್ತೊಂದೆಡೆ ಜಲಾವೃತವಾಗಿದ್ದ ಭದ್ರಾವತಿ ಹೊಸ ಸೇತುವೆಗೆ ಹಾನಿಯಾಗಿದೆ. ಸೇತುವೆಗೆ ಹಾನಿ, ಹೇಗೆ? ಭದ್ರಾ ಜಲಾಶಯದಿಂದ 60 ಸಾವಿರ ಕ್ಯೂಸೆಕ್‍ಗಿಂತಲೂ ಹೆಚ್ಚು ಪ್ರಮಾಣದ ನೀರನ್ನು ಹೊರಬಿಟ್ಟಿದ್ದರಿಂದ ಹೊಸ ಸೇತುವೆ ಮುಳುಗಿತ್ತು. ನೀರಿನ ರಭಸ ಮತ್ತು … Read more