ಮಾಜಿ ಸ್ಪೀಕರ್ ವಿರುದ್ಧ ಮಹಿಳೆಯರು ಗರಂ, ಡಿಸಿ ಕಚೇರಿ ಮುಂದೆ ಆಕ್ರೋಶ

181221 BJP mahila Morcha protest in shimoga

ಶಿವಮೊಗ್ಗ ಲೈವ್.ಕಾಂ | SHIMOGA NEWS | 18 ಡಿಸೆಂಬರ್ 2021

ವಿಧಾನಸಭೆಯಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಅತ್ಯಾಚಾರ ಸಂಬಂಧ ನೀಡಿದ ಹೇಳಿಕೆ ಖಂಡಿಸಿ, ಬಿಜೆಪಿ ಮಹಿಳಾ ಮೋರ್ಚಾದ ವತಿಯಿಂದ ಶಿವಮೊಗ್ಗದಲ್ಲಿ ಪ್ರತಿಭಟನೆ ನಡೆಸಲಾಯಿತು.

AVvXsEgvkqR5na6VBgyQ7GpgkZA0SK3TnlX05prWtKfmX8meEFOtOAl

ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಮಹಿಳಾ ಮೋರ್ಚಾ ಕಾರ್ಯಕರ್ತೆಯರು, ರಮೇಶ್ ಕುಮಾರ್ ಅವರು ಸ್ಪೀಕರ್ ಆಗಿದ್ದಾಗ ಸದನದಲ್ಲಿ ‘ಅತ್ಯಾಚಾರಕ್ಕೊಳಗಾದ ಮಹಿಳೆಯ ಪರಿಸ್ಥಿತಿಯಂತಾಗಿದೆ’ ಎಂದು ಹೀನ ಹೇಳಿಕೆ ನೀಡಿದ್ದರು. ಈಗಲೂ ಅದೇ ರೀತಿಯ ಹೇಳಿಕೆ ನೀಡಿ ಸ್ತ್ರೀ ಕುಲಕ್ಕೆ ಅಪಮಾನ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದೇ ವೇಳೆ ಮಾತನಾಡಿದ ಬಿಜೆಪಿ ಮಹಿಳಾ ಮೋರ್ಚಾ ನಗರಾಧ್ಯಕ್ಷೆ ಸುರೇಖಾ ಮುರಳೀಧರ್ ಅವರು, ವಿಧಾನಸಭೆ ಎಂಬುದು ಪೂಜ್ಯ ಸ್ಥಳ. ಜನರು ಆರಿಸಿ ಕಳುಹಿಸಿರುವ ಸದಸ್ಯರು ಗೌರವಯುತವಾಗಿ ನಡೆದುಕೊಳ್ಳಬೇಕು. ಆದರೆ ರಮೇಶ್ ಕುಮಾರ್ ಅವರು ಮುಗ್ದರಲ್ಲ, ಪೆದ್ದರಲ್ಲ. ಅನುಭವಿ ರಾಜಕಾರಣಿ. ಅಂತಹವರಿಗೆ ನಾವು ಬುದ್ದಿ ಹೇಳಿಕೊಡಬೇಕಾಗಿದೆ ಎಂದು ಆರೋಪಿಸಿದರು.

ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ವಿದ್ಯಾ ಲಕ್ಷ್ಮೀಪತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

AVvXsEgY0A26IE y0MrSWU2Nhq NbY5r6IvdVAKiSQlCXuR7xKzIr4hSuc9W yGrITav 4ZjYV74DCIvaVT5hUcqjFXBT7hnpUXY7zQtIRM kkVW cGJVjd K3 SvHXLH6Fgsej8C07CLO8Hr42mJJXaH8QPkwYVv8WkXIB l38IILPRYh wPLPnfSapk1m2YQ=s926

AVvXsEi4pTnVBdEIdJX i5tL5Ib lMuTDs7uvY3BFR89nyiTvsHo0QZC50UhRxiLnYU9RXr1Ca31le3gRfespsbNL959CwqbLOeQdrM9ASnyaSZUdjxRyznDmMD1PG 13X9tZhMxSpN0D 2lIv4JShjn0Xw17NdV9kElX8los CQ8QoEo9hfJ wse1igmLdmtg=s926

AVvXsEg8PYjZT ELrbhw5nVW1u32zE7if1Y6k8BFd7gXYkYTpYcyBXXyltUW6f4WLgrzdmY NsiW61wXdhhaHpFKMoPXUEU8Iqz7rWMvkEqlV2plAjTJchN npPYgrmZu59sX6LWLhXZcr OpVMW4Edy3DnOGX4 0 6Up0IRvaZBwVAssKn0Z4oSxsk4 tdQA=s926

Read more

ಬಗೆಬಗೆ ತಿಂಡಿ, ತಿನಿಸು, ಪಾನೀಯ, ವಸ್ತು ಪ್ರದರ್ಶನ, ಶಿವಮೊಗ್ಗದಲ್ಲಿ ಖಾದ್ಯ ಮೇಳಕ್ಕೆ ಭರ್ಜರಿ ರೆಸ್ಪಾನ್ಸ್, PHOTO ALBUM

061221 Chunchadri Mahila Vedike Khadya Mela

ಶಿವಮೊಗ್ಗ ಲೈವ್.ಕಾಂ | SHIMOGA NEWS | 6 ಡಿಸೆಂಬರ್ 2021 ಶಿವಮೊಗ್ಗದ ಒಕ್ಕಲಿಗ ಸಮುದಾಯ ಭಾವನದಲ್ಲಿ ನಡೆದ ಖಾದ್ಯ ಮೇಳಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಚುಂಚಾದ್ರಿ ಮಹಿಳಾ ವೇದಿಕೆ, ಒಕ್ಕಲಿಗರ ಸಂಘದ ಸಹಯೋಗದೊಂದಿಗೆ ಖಾದ್ಯ ಮೇಳ ಆಯೋಜಿಸಲಾಗಿತ್ತು. ವಿವಿಧ ತಿಂಡಿ, ತನಿಸು, ಪಾನಿಯಗಳನ್ನು ಖಾದ್ಯ ಮೇಳದಲ್ಲಿ ಇಡಲಾಗಿತ್ತು. ಗೃಹೋಪಯೋಗಿ ವಸ್ತುಗಳು, ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟವನ್ನು ಆಯೋಜಿಸಲಾಗಿತ್ತು. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, … Read more

ಊರುಗಡೂರಿನಲ್ಲಿ ಬಿಜೆಪಿ ಮಹಿಳಾ ಮೋರ್ಚಾದಿಂದ ರುದ್ರಾಭಿಷೇಕ

Shimoga Map Graphics

ಶಿವಮೊಗ್ಗ ಲೈವ್.ಕಾಂ | SHIMOGA NEWS | 24 ಆಗಸ್ಟ್ 2021 ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಲೋಕಕಲ್ಯಾಣಾರ್ಥವಾಗಿ ರುದ್ರಾಭಿಷೇಕ ನಡೆಸಲಾಯಿತು. ಊರಗಡೂರಿನ ಗುಡ್ಡೇಮರಡಿಯ ಮಲ್ಲೇಶ್ವರ ದೇವಾಲಯದಲ್ಲಿ ರುದ್ರಾಭಿಷೇಕ ಮತ್ತು ಸಭೆಯನ್ನು ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಮಾತನಾಡಿ, ಮಹಿಳಾ ಮೋರ್ಛಾವನ್ನು ಮತ್ತಷ್ಟು ಬಲಗೊಳಿಸಲಾಗುವುದು. ಸಂಘಟನೆಗೆ ಆದ್ಯತೆ ನೀಡಲಾಗುವುದು. ಮಹಿಳಾ ಕಾರ್ಯಕರ್ತೆಯರು ಮತ್ತಷ್ಟು ಕ್ರಿಯಾಶೀಲಾರಾಗುವಂತೆ ಕರೆ ನೀಡಿದರು. ಮಹಿಳಾ ಮೋರ್ಛಾ ನಗರಾಧ್ಯಕ್ಷೆ ಸುರೇಖಾ ಮುರಳೀಧರ್ ಅಧ್ಯಕ್ಷತೆ … Read more

ಗಾಂಧಿ ಬಜಾರಲ್ಲಿ ಹಬ್ಬದ ಖರೀದಿಗೆ ಬಂದ ಮಹಿಳೆಯರಿಗೆ ಅರಿಶಿಣ, ಕುಂಕುಮ ಜೊತೆ ಉಚಿತ ಮಾಸ್ಕ್

200820 Mahila Morcha BJP distributes Mask 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 20 ಆಗಸ್ಟ್ 2020 ಬಿಜೆಪಿ ಮಹಿಳಾ ಮೋರ್ಚಾದ ವತಿಯಿಂದ ಶಿವಮೊಗ್ಗದಲ್ಲಿ ವಿಭಿನ್ನವಾಗಿ ಕರೋನ ಜಾಗೃತಿ ಮೂಡಿಸಲಾಯಿತು. ಕರೋನ ತೊಲಗಲಿ ಎಂಬ ಸಂಕಲ್ಪದೊಂದಿಗೆ ಮಾಸ್ಕ್ ವಿತರಿಸಲಾಯಿತು. ಹಬ್ಬದ ಖರೀದಿಗಾಗಿ ಗಾಂಧಿ ಬಜಾರ್‍ಗೆ ಬಂದಿದ್ದ ಮಹಿಳೆಯರಿಗೆ ಉಚಿತವಾಗಿ ಮಾಸ್ಕ್ ವಿತರಿಸಲಾಯಿತು. ಅರಿಶಿಣ, ಕುಂಕುಮ, ಹೂವಿನ ಜೊತೆಗೆ ಮಾಸ್ಕ್ ವಿತರಿಸಲಾಯಿತು. ‘ಎರಡು ಸಾವಿರ ಮಾಸ್ಕ್ ಹಂಚಲಾಗುತ್ತಿದೆ. ಈ ಪೈಕಿ ಒಂದೂವರೆ ಸಾವಿರ ಮಾಸ್ಕ್‍ಗಳನ್ನು ಮಹಿಳಾ ಮೋರ್ಚಾ ಕಾರ್ಯಕರ್ತೆಯರು ಮನೆಯಲ್ಲಿ ಹೊಲೆದು ತಂದಿದ್ದಾರೆ. ಐನೂರು … Read more