ಶಿವಮೊಗ್ಗದಲ್ಲಿ ತಮಿಳು ಸಿನಿಮಾ ಪೋಸ್ಟರ್ ಹರಿದು ಆಕ್ರೋಶ
SHIVAMOGGA LIVE NEWS | 10 OCTOBER 2023 SHIMOGA : ತಮಿಳು ಚಿತ್ರ (Tamil Cinema) ಪ್ರದರ್ಶನ ವಿರೋಧಿಸಿ, ಕೂಡಲೇ ಚಿತ್ರ ಪ್ರದರ್ಶನ ಸ್ಥಗಿತಕ್ಕೆ ಆಗ್ರಹಿಸಿ ಕನ್ನಡ ಕಾರ್ಮಿಕರ ರಕ್ಷಣಾ ವೇದಿಕೆ ವೀರಭದ್ರೇಶ್ವರ ಚಿತ್ರಮಂದಿರದ ಮಾಲೀಕರಿಗೆ ಮನವಿ ಮಾಡಿತು. ಇದೆ ವೇಳೆ ತಮಿಳು ಚಿತ್ರದ ಪೋಸ್ಟರ್ ಹರಿದು ಆಕ್ರೋಶ ವ್ಯಕ್ತಪಡಿಸಲಾಯಿತು. ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಬಿಡುತ್ತಿರುವುದನ್ನು ವಿರೋಧಿಸಿ ಹೋರಾಟ ನಡೆಯುತ್ತಿದೆ. ಕಾವೇರಿ ನದಿಯಿಂದ ನೀರು ಹರಿಸುವುದು ನಿಲ್ಲಿಸುವ ತನಕ ನಗರದಲ್ಲಿ ತಮಿಳು ಚಲನಚಿತ್ರ ಪ್ರದರ್ಶಿಸಬಾರದು. … Read more