ಭದ್ರಾವತಿಯ ಗೋಣಿಬೀಡಿನ ಶಕ್ತಿಧಾಮದಲ್ಲಿ ಅಪ್ಪಾಜಿಗೌಡರ ಅಮೃತ ಶಿಲೆಯ ಪ್ರತಿಮೆ ಅನಾವರಣ
ಶಿವಮೊಗ್ಗ ಲೈವ್.ಕಾಂ | BHADRAVATHI NEWS | 21 ಸೆಪ್ಟೆಂಬರ್ 2021 ಮಾಜಿ ಶಾಸಕ ಅಪ್ಪಾಜಿಗೌಡ ಅವರ ಸಮಾಧಿ ಸ್ಥಳದಲ್ಲಿ, ಅವರ ಪುತ್ಥಳಿಯನ್ನು ಇವತ್ತು ಅನಾವರಣ ಮಾಡಲಾಯಿತು. ಭದ್ರಾವತಿ ತಾಲೂಕು ಗೋಣಿಬೀಡು ಗ್ರಾಮದಲ್ಲಿರುವ ಶಕ್ತಿಧಾಮದಲ್ಲಿ ಪ್ರತಿಮೆ ಸ್ಥಾಪಿಸಲಾಗಿದೆ. ಅದನ್ನು ಇವತ್ತು ಅನಾವರಣ ಮಾಡಿ, ಪ್ರಥಮ ವರ್ಷದ ಪುಣ್ಯ ಸ್ಮರಣೆ ಮಾಡಲಾಯಿತು. ಹೇಗಿದೆ ಅಪ್ಪಾಜಿಗೌಡರ ಪ್ರತಿಮೆ? ಅಮೃತ ಶಿಲೆಯಲ್ಲಿ ಅಪ್ಪಾಜಿಗೌಡ ಅವರ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಪ್ರತಿಮೆಯು ನಾಲ್ಕೂವರೆ ಅಡಿ ಉದ್ದ, ಮೂರೂವರೆ ಅಡಿ ಅಗಲವಿದೆ. ಅಪ್ಪಾಜಿಗೌಡ ಅವರು ಕುರ್ಚಿಯೊಂದರ … Read more