ಶಿವಮೊಗ್ಗದಲ್ಲಿ ಮುಂದುವರೆದ ಮಳೆ, ಯಾವ್ಯಾವ ತಾಲೂಕಿನಲ್ಲಿ ಎಷ್ಟು ಮಳೆಯಾಗಿದೆ?

Rain-in-Shimoga-Students

SHIVAMOGGA LIVE NEWS | SHIMOGA | 12 ಜುಲೈ 2022 ಶಿವಮೊಗ್ಗ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗುತ್ತಿದೆ (RAIN) . ಕಳೆದ 24 ಗಂಟೆ ಅವಧಿಯಲ್ಲಿ ನಿರಂತರ ಮಳೆಯಾಗಿದೆ. ಕಳೆದ 24 ಗಂಟೆ ಅವಧಿಯಲ್ಲಿ ಶಿವಮೊಗ್ಗ ತಾಲೂಕಿನ್ಲಿ 18.20 ಮಿಮಿ., ಭದ್ರಾವತಿ 10.80 ಮಿಮಿ., ತೀರ್ಥಹಳ್ಳಿ 55.70 ಮಿಮಿ., ಸಾಗರ 63.10 ಮಿಮಿ., ಶಿಕಾರಿಪುರ 16.80 ಮಿಮಿ., ಸೊರಬ 26.80 ಮಿಮಿ. ಹಾಗೂ ಹೊಸನಗರ 54 ಮಿಮಿ. ಮಳೆಯಾಗಿದೆ. ಇದನ್ನೂ ಓದಿ – ಭದ್ರಾ ಜಲಾಶಯದಿಂದ ನೀರು ಹರಿಸಲು ಸೂಚನೆ, ಯಾವ್ಯಾವ … Read more

ಇವತ್ತೂ ಜೋರು ಮಳೆ ಮುನ್ಸೂಚನೆ, ಯಾವ್ಯಾವ ಊರಲ್ಲಿ ನೂರು ಮಿ.ಮೀ.ಗಿಂತಲೂ ಜಾಸ್ತಿ ಮಳೆಯಾಗಿದೆ?

Rain-At-Shimoga-City

SHIVAMOGGA LIVE NEWS | SHIMOGA | 12 ಜುಲೈ 2022 ಶಿವಮೊಗ್ಗದಲ್ಲಿ ಮಳೆ ಮುಂದುವರೆದಿದೆ. ಜಿಲ್ಲೆಯಾದ್ಯಂತ ಇವತ್ತು ಕೂಡ ಭಾರಿ ಮಳೆ (HEAVY RAIN) ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಭಾರಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಶಿವಮೊಗ್ಗ, ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ 115.6 ಮಿ.ಮೀ ನಿಂದ 204.4 ಮಿ.ಮೀ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ. ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ? … Read more

ಶಿವಮೊಗ್ಗ ಜಿಲ್ಲೆಯಲ್ಲಿ ನಿರಂತರ ಮಳೆ, ಈವರೆಗೂ ಏನೆಲ್ಲ ಹಾನಿ ಆಗಿದೆ?

Rain-Damage-in-Shimoga-DC-Selvamani-Report

SHIVAMOGGA LIVE NEWS | SHIMOGA| 11 ಜುಲೈ 2022 ಶಿವಮೊಗ್ಗ ಜಿಲ್ಲೆಯಾದ್ಯಂತ ಮಳೆ (RAIN) ಹಾನಿ (DAMAGE) ಕುರಿತು ಪರಿಶೀಲನೆ ನಡೆಸಲಾಗುತ್ತಿದೆ. ಎನ್.ಡಿ.ಆರ್.ಎಫ್ ಮಾನದಂಡದ ಅಡಿಯಲ್ಲಿ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ (DEPUTY COMMISSIONER) ಡಾ.ಸೆಲ್ವಮಣಿ ಅವರು ತಿಳಿಸಿದ್ದಾರೆ. ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ (DC) ಡಾ.ಸೆಲ್ವಮಣಿ ಅವರು, ಜಿಲ್ಲೆಯಲ್ಲಿ 129 ಮನೆಗಳು ಭಾಗಶಃ ಹಾನಿಯಾಗಿವೆ. 24 ಮನೆಗಳು (HOUSE) ಸಂಪೂರ್ಣ ಹಾನಿಯಾಗಿವೆ. ಇವುಗಳಿಗೆ ಎನ್.ಡಿ.ಆರ್.ಎಫ್ ಮಾನದಂಡದ ಅಡಿಯಲ್ಲಿ ಪರಿಹಾರ ನೀಡಲಾಗುತ್ತದೆ … Read more

ಸುರಿಯುವ ಮಳೆಯಲ್ಲೆ ಹೆದ್ದಾರಿ ತಡೆದು ಗ್ರಾಮಸ್ಥರ ಪ್ರತಿಭಟನೆ

100722 Highway Bandh Protest At Talaguppa

SHIVAMOGGA LIVE | SAGARA | 10 JULY 2022 ರಾಷ್ಟ್ರೀಯ ಹೆದ್ದಾರಿಯ ಅವ್ಯವಸ್ಥೆ ಖಂಡಿಸಿ ಗ್ರಾಮಸ್ಥರು ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡಿದರು. ಸುರಿಯುವ ಮಳೆಯಲ್ಲೆ ಮಕ್ಕಳು, ಹಿರಿಯರು ಸೇರಿ ಗ್ರಾಮಸ್ಥರು ಪ್ರತಿಭಟಿಸಿದರು. ಸಾಗರ (SAGARA) ತಾಲೂಕು ತಾಳಗುಪ್ಪ (TALAGUPPA) ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಡ್ಡೆಮನೆ ಗ್ರಾಮದ ಬಳಿ ಗ್ರಾಮಸ್ಥರು ಹೆದ್ದಾರಿ (HIGHWAY) ತಡೆದು ಪ್ರತಿಭಟನೆ (PROTEST) ನಡೆಸಿದರು. ಗುಡ್ಡೆಮನೆ ಬಳಿ ರಾಷ್ಟ್ರೀಯ ಹೆದ್ದಾರಿ ಹಾಳಾಗಿದೆ. ಇದನ್ನು ಸರಿಪಡಿಸುವಂತೆ ಮನವಿ ಮಾಡಿದರೂ ಪ್ರಯೋಜನ ಆಗಿಲ್ಲ. ಇಲ್ಲಿ … Read more

ಶಾಲೆಗಳಿಗೆ ರಜೆ ವಿಚಾರದಲ್ಲಿ ಸುಳ್ಳು ಮೆಸೇಜ್, ಕಿಡಿಗೇಡಿಗಳ ವಿರುದ್ಧ ಶಿಸ್ತು ಕ್ರಮದ ವಾರ್ನಿಂಗ್

shimoga dc office

SHIVAMOGGA LIVE NEWS | SHIMOGA | 8 ಜುಲೈ 2022 ಶಾಲೆಗಳ (SCHOOL) ರಜೆ ವಿಚಾರವಾಗಿ ವಾಟ್ಸಪ್ ಮತ್ತು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿದೆ. ಇದರಿಂದ ಜಿಲ್ಲೆಯಲ್ಲಿ ಗೊಂದಲ ನಿರ್ಮಾಣವಾಗಿದೆ. ಈ ನಡುವೆ ಸುಳ್ಳು ಸುದ್ದಿ ಹರಡಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ಎಚ್ಚರಿಕೆ ನೀಡಿದ್ದಾರೆ. ರಜೆ ವಿಚಾರವಾಗಿ ಸುಳ್ಳು ಸುದ್ದಿ ಜಿಲ್ಲೆಯಲ್ಲಿ ಹೆಚ್ಚು ಮಳೆ ಆಗುತ್ತಿರುವ ತಾಲೂಕುಗಳ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಜಿಲ್ಲಾಧಿಕಾರಿ … Read more

ಶಿವಮೊಗ್ಗ ಜಿಲ್ಲೆಯಾದ್ಯಂತ ಮುಂದುವರೆದ ಮಳೆ, ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ?

Rain-at-Shimoga

SHIVAMOGGA LIVE NEWS | SHIMOGA | 7 ಜುಲೈ 2022 ಶಿವಮೊಗ್ಗ ಜಿಲ್ಲೆಯಾದ್ಯಂತ ಮಳೆ ಮುಂದುವರೆದಿದೆ. ಕಳೆದ 24 ಗಂಟೆ ಅವಧಿಯಲ್ಲಿ ಜಿಲ್ಲೆಯಲ್ಲಿ 472.60 ಮಿ.ಮೀ ಮಳೆಯಾಗಿದೆ (RAIN). ಇನ್ನೂ ನಾಲ್ಕು ದಿನ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ? ಶಿವಮೊಗ್ಗದಲ್ಲಿ 48.70 ಮಿಮಿ., ಭದ್ರಾವತಿಯಲ್ಲಿ 31.90 ಮಿಮಿ., ತೀರ್ಥಹಳ್ಳಿಯಲ್ಲಿ 94.40 ಮಿಮಿ., ಸಾಗರದಲ್ಲಿ 111.4 ಮಿಮಿ., ಶಿಕಾರಿಪುರದಲ್ಲಿ 33.00 ಮಿಮಿ., ಸೊರಬದಲ್ಲಿ 46.80 ಮಿಮಿ. ಹಾಗೂ ಹೊಸನಗರದಲ್ಲಿ … Read more

BREAKING NEWS | ಭಾರಿ ಮಳೆ, ಶಿವಮೊಗ್ಗ ಜಿಲ್ಲೆಯಾದ್ಯಂತ ಶಾಲೆಗಳಿಗೆ ರಜೆ ಘೋಷಣೆ

breaking news graphics

SHIVAMOGGA LIVE NEWS | SHIMOGA | 7 ಜುಲೈ 2022 ಜಿಲ್ಲೆಯಾದ್ಯಂತ ಭಾರಿ ಮಳೆ ಹಿನ್ನೆಲೆಯಲ್ಲಿ ಮೂರು ತಾಲೂಕಿನ ಶಾಲೆಗಳಿಗೆ (SCHOOL) ರಜೆ ಘೋಷಣೆ ಮಾಡಲಾಗಿತ್ತು. ಈಗ ಜಿಲ್ಲೆಯಾದ್ಯಂತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಅವರು ಆದೇಶ ಹೊರಡಿಸಿದ್ದಾರೆ. ಸಾಗರ, ಹೊಸನಗರ, ತೀರ್ಥಹಳ್ಳಿ ತಾಲೂಕಿನ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿತ್ತು. ಈಗ ಸೊರಬ, ಶಿಕಾರಿಪುರ, ಶಿವಮೊಗ್ಗ ಮತ್ತು ಭದ್ರಾವತಿ ತಾಲೂಕಿನ ಶಾಲೆಗಳಿಗೂ ರಜೆ ಘೋಷಣೆ ಮಾಡಲಾಗಿದೆ. ಎಲ್ಲಾ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ … Read more

ಅಂಜನಾಪುರ ಜಲಾಶಯ ಭರ್ತಿಗೆ ಇನ್ನೆರಡು ಅಡಿ ಬಾಕಿ

Anjanapura-Dam-Shikaripura

SHIVAMOGGA LIVE NEWS | SHIKARIPURA | 6 ಜುಲೈ 2022 ನಿರಂತರ ಮಳೆಯಿಂದಾಗಿ ಅಂಜನಾಪುರ ಜಲಾಶಯದ (DAM) ಒಳ ಹರಿವು ಹೆಚ್ಚಳವಾಗಿದೆ. ಇನ್ನೊಂದೆರಡು ದಿನ ಮಳೆ ಮುಂದುವರೆದರೆ ಜಲಾಶಯ ಭರ್ತಿ ಆಗಲಿದೆ. ರಿಪ್ಪನ್ ಪೇಟೆ, ತೀರ್ಥಹಳ್ಳಿ, ಹೊಸನಗರ ಭಾಗದಲ್ಲಿ ಭಾರಿ ಮಳೆ ಆಗುತ್ತಿದೆ. ಇದರಿಂದ ಅಂಜನಾಪುರ ಜಲಾಶಯಕ್ಕೆ ನಿತ್ಯ 400 ರಿಂದ 450 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಹಾಗಾಗಿ ನೀರಿನ ಮಟ್ಟ 21 ಅಡಿಗೆ ಏರಿಕೆಯಾಗಿದೆ. ಇನ್ನು ಎರಡು ಅಡಿ ನೀರು ಬಂದರೆ ಕೋಡಿ … Read more

ಆಗುಂಬೆ ಘಾಟಿಯಲ್ಲಿ ಗುಡ್ಡ ಕುಸಿತ, ವಾಹನ ಸಂಚಾರಕ್ಕಿಲ್ಲ ಸಮಸ್ಯೆ

Agumbe Ghat Home Stay Forest

SHIVAMOGGA LIVE NEWS | AGUMBE | 6 ಜುಲೈ 2022 ನಿರಂತರ ಮಳೆಯಿಂದಾಗಿ ಆಗುಂಬೆಯಲ್ಲಿ (AGUMBE) ಸಣ್ಣ ಪ್ರಮಾಣದಲ್ಲಿ ಗುಡ್ಡ ಕುಸಿದಿದೆ. ಎರಡು ಕಡೆ ಗುಡ್ಡ ಕುಸಿದಿದೆ. ಆದರೆ ವಾಹನ ಸಂಚಾರಕ್ಕೆ ಯಾವುದೆ ಅಡ್ಡಿಯಾಗಿಲ್ಲ. ಆಗುಂಬೆ ಘಾಟಿಯ ಸೂರ್ಯಸ್ತಮಾನ ವೀಕ್ಷಣಾ ಸ್ಥಳದ ಬಳಿ ಗುಡ್ಡ ಕುಸಿದಿದೆ. ಗುಡ್ಡದ ಮಣ್ಣು ರಸ್ತೆಗೆ ಬಿದ್ದಿದೆ. ಹಾಗಾಗಿ ರಸ್ತೆ ಮೇಲೆ ಭಾರಿ ಪ್ರಮಾಣದ ನೀರು ಹರಿದು ಹೋಗುತ್ತಿದೆ. ಇನ್ನು, ನಾಲ್ಕನೆ ತಿರುವಿನಲ್ಲೂ ಗುಡ್ಡ ಕುಸಿದಿದೆ. ಇದರಿಂದ ವಾಹನ ಸಂಚಾರಕ್ಕೆ ಸ್ವಲ್ಪ … Read more

ಶಿವಮೊಗ್ಗ ಸೇರಿ ರಾಜ್ಯದ ದಕ್ಷಿಣ ಒಳನಾಡು ಜಿಲ್ಲೆಗಳಿಗೆ ಹವಾಮಾನ ಇಲಾಖೆಯಿಂದ ಮುನ್ನೆಚ್ಚರಿಕೆ

Rain-At-shimoga-city

SHIVAMOGGA LIVE NEWS | SHIMOGA | 6 ಜುಲೈ 2022 ಶಿವಮೊಗ್ಗ ಜಿಲ್ಲೆಯಾದ್ಯಂತ ಇನ್ನು ಐದು ದಿನ ಭಾರಿ ಮಳೆ (RAIN ALERT) ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಜುಲೈ 7 ರಿಂದ ಐದು ದಿನ ರಾಜ್ಯದ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಭಾರಿ ಮಳೆ ಸುರಿಯಲಿದೆ. ಚಿಕ್ಕಮಗಳೂರು, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಜುಲೈ 7 ಮತ್ತು 8ರಂದು ಹೆಚ್ಚು ಮಳೆ ಸುರಿಯಲಿದೆ. 115.6 ಮಿ.ಮೀ ನಿಂದ 204.4 ಮಿ.ಮೀ ಮಳೆ ಆಗುವ … Read more