ಶಿವಮೊಗ್ಗ ಜಂಬೂ ಸವಾರಿಗೆ ಕ್ಷಣಗಣನೆ, ಆನೆಗಳು ರೆಡಿ

Elephant-All-set-for-Dasara-in-Shimoga

DASARA NEWS, 12 OCTOBER 2024 : ಶಿವಮೊಗ್ಗ ದಸರಾದ ಜಂಬೂ ಸವಾರಿಗೆ ಕ್ಷಣಗಣನೆ ಆರಂಭವಾಗಿದೆ. ಸಕ್ರೆಬೈಲು ಬಿಡಾರದ ಸಾಗರ ಆನೆ (Elephant) ನೇತೃತ್ವದ ಗಜಪಡೆ ಅಂಬಾರಿ ಹೊತ್ತು ಮೆರವಣಿಗೆಯಲ್ಲಿ ಭಾಗವಹಿಸಲಿದೆ. ಜಂಬೂ ಸವಾರಿ ಹಿನ್ನೆಲೆ ಸಕ್ರೆಬೈಲು ಬಿಡಾರದ ಸಾಗರ, ಬಹದ್ದೂರ್‌, ಬಾಲಣ್ಣ ಆನೆಗಳಿಗೆ ಅಲಂಕಾರ ಆರಂಭವಾಗಿದೆ. ವಾಸವಿ ಶಾಲೆ ಆವರಣದಲ್ಲಿ ಮೂರು ಆನೆಗಳಿಗೆ ಕಲಾವಿದರು ವಿವಿಧ ಬಣ್ಣಗಳಿಂದ ಅಲಂಕಾರ ಮಾಡಿದ್ದಾರೆ. ಇನ್ನು, ಜಂಬೂ ಸವಾರಿಯಲ್ಲಿ ಭಾಗವಹಿಸಲಿರುವ ಕಲಾ ತಂಡಗಳು ಕೂಡ ಸಿದ್ಧತೆ ಮಾಡಿಕೊಂಡಿವೆ. ಇಂದು ಮಧ್ಯಾಹ್ನ … Read more

ಜೋಗ ಜಲಪಾತ, ಫಾಲ್ಸ್‌ ಸಮೀಪವೇ ಇದ್ದ ಮನೆ ತೆರವು

Jog-Falls-in-2024

JOG FALLS NEWS, 2 OCTOBER 2024 : ಜೋಗದ ರಾಣಿ ಫಾಲ್ಸ್ (Jog Falls) ಪ್ರದೇಶದಲ್ಲಿ ಹೃಸ್ತಿಕ್ ರೋಡ್ರಿಗಸ್ ಎಂಬುವರ ಮನೆಯನ್ನು ಜಿಲ್ಲಾಧಿಕಾರಿಗಳ ಆದೇಶದಂತೆ ಉಪ ವಿಭಾಗಾಧಿಕಾರಿಗಳ ನೇತೃತ್ವದಲ್ಲಿ ಮಂಗಳವಾರ ಮನೆಯವರ ಪ್ರತಿರೋಧದ ನಡುವೆಯೂ ಕಾರ್ಯಾಚರಣೆ ಮೂಲಕ ತೆರವುಗೊಳಿಸಲಾಯಿತು. ಇಲ್ಲಿ ವಾಹನ ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡುವ ಸಲುವಾಗಿ ಮನೆ ತೆರವು ಮಾಡಲಾಗಿದೆ. ಈ ಹಿಂದೆ ಅವರು ಕಟ್ಟಿಕೊಂಡಿದ್ದ ಕೊಟ್ಟಿಗೆ ಮತ್ತು ಅಡಕೆ ತೋಟಗಳನ್ನು ತೆರವುಗೊಳಿಸಲಾಗಿತ್ತು. ಆಗ ಅವರಿಗೆ ಪರಿಹಾರ ರೂಪದಲ್ಲಿ ನಿಗಮದಿಂದ ವಾಸಕ್ಕೆ ಮನೆ ಹಾಗೂ ಜೋಗ … Read more

ಲಿಂಗನಮಕ್ಕಿ ಡ್ಯಾಮ್‌ನಿಂದ ಮತ್ತೆ ನೀರು ಹೊರಕ್ಕೆ, ಮೈದುಂಬಿದ ಜೋಗ ಜಲಪಾತ

linganamakki-dam-and-jog-falls

SAGARA, 27 AUGUST 2024 : ಹಿನ್ನೀರು ಭಾಗದಲ್ಲಿ ಮಳೆಯಾಗುತ್ತಿದ್ದು ಲಿಂಗನಮಕ್ಕಿ ಜಲಾಶಯದ ಒಳ ಹರಿವು ಹೆಚ್ಚಳವಾಗಿದೆ. ಹಾಗಾಗಿ ಗೇಟ್‌ಗಳನ್ನು ಮೇಲೆತ್ತಿ ನೀರನ್ನು ಹೊರ ಬಿಡಲಾಗುತ್ತಿದೆ. ಇದರಿಂದ ಜೋಗ ಜಲಪಾತ ಪುನಃ ಮೈದುಂಬಿಕೊಂಡಿದೆ. ಸೋಮವಾರದಿಂದಲೇ ನೀರು ಹೊರಕ್ಕೆ ಸೋಮವಾರದಿಂದಲೇ ಲಿಂಗನಮಕ್ಕಿ ಜಲಾಶಯದಿಂದ ನೀರು ಹೊರ ಬಿಡಲಾಗುತ್ತಿದೆ. 9 ಗೇಟ್‌ಗಳ ಮೂಲಕ 20 ಸಾವಿರ ಕ್ಯೂಸೆಕ್‌ವರೆಗೆ ನೀರನ್ನು ಹೊರಗೆ ಹರಿಸಲಾಗಿತ್ತು. ಇದರಿಂದ ಶರಾವತಿ ನದಿಯಲ್ಲಿ ನೀರಿನ ಮಟ್ಟ ಹೆಚ್ಚಳವಾಗಿದೆ. ಮೈದುಂಬಿದ ಜೋಗ ಜಲಪಾತ ಜಲಾಶಯದಿಂದ ನೀರು ಹೊರ ಬಿಡುತ್ತಿದ್ದಂತೆ … Read more

ಸಾಗರದಲ್ಲಿ ಸಾಲಬಾಧೆಗೆ ರೈತ ಆತ್ಮಹತ್ಯೆ

sagara-kudaruru-village-farmer-succumbed

SAGARA, 27 AUGUST 2024 : ಸಾಲಬಾಧೆಗೆ ಮನನೊಂದು ರೈತರೊಬ್ಬರು (FARMER) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಗರ ತಾಲೂಕು ಕುದರೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೈನೆಮನೆ ಗ್ರಾಮದ ಅಶೋಕ್‌ (42) ಮೃತ ರೈತ. ಅಶೋಕ್‌ ಅವರು ಎರಡು ಎಕರೆ ಅಡಿಕೆ ತೋಟ ಹೊಂದಿದ್ದಾರೆ. ಇದಕ್ಕಾಗಿ ಬ್ಯಾಂಕುಗಳಲ್ಲಿ ಸಾಲ ಪಡೆದಿದ್ದರು. ಆದರೆ ಕೊಳೆ ರೋಗದಿಂದ ಅಶೋಕ್‌ ಅವರು ತೀವ್ರ ನಷ್ಟ ಅನುಭವಿಸಿದ್ದರು. ಇದರಿಂದ ಮನನೊಂದು ಕೃಷಿ ಹೊಂಡಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರಿಗೆ ಪತ್ನಿ, ಮೂವರು ಮಕ್ಕಳಿದ್ದಾರೆ. ಕಾರ್ಗಲ್‌ ಠಾಣೆಯಲ್ಲಿ … Read more

‘ರಕ್ತ ಕೊಟ್ಟೇವು, ನೀರು ಕೊಡುವುದಿಲ್ಲ’ ಅಂದವರು ಈಗ ಧ್ವನಿ ಎತ್ತಬೇಕು, ಮಾಜಿ ಮಿನಿಸ್ಟರ್‌ ಆಗ್ರಹ

Former-Minister-Haratalu-Halappa-BJP

SAGARA, 22 AUGUST 2024 | ಶರಾವತಿ ನದಿ ನೀರನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗುವ ಯೋಜನೆಯೇ ಆವೈಜ್ಞಾನಿಕ (Unscientific). ಇದರ ವಿರುದ್ಧ ಹೋರಾಟ ನಡೆಸುವ ಸಂಘಟನೆಗಳಿಗೆ ಪಕ್ಷಾತೀತ ಬೆಂಬಲ ನೀಡುವುದಾಗಿ ಮಾಜಿ ಸಚಿವ ಹರತಾಳು ಹಾಲಪ್ಪ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರಮುಖ ವಿಷಯ ಪ್ರಸ್ತಾಪಿಸಿದರು. ಹಾಲಪ್ಪ ಏನೆಲ್ಲ ಹೇಳಿದರು? ಇದನ್ನೂ ಓದಿ ⇒ ಪಡಿತರ ಚೀಟಿದಾರರೆ ಗಮನಿಸಿ, ಆ.31 ಕೊನೆ ದಿನ, ತಪ್ಪಿದರೆ ಪಡಿತರ ಸಿಗಲ್ಲ ಸುದ್ದಿಗೋಷ್ಠಿಯಲ್ಲಿ ಡಾ. ರಾಜನಂದಿನಿ, ದೇವೇಂದ್ರಪ್ಪ ಯಲಕುಂದ್ಲಿ, ಕೆ.ಆರ್.ಗಣೇಶ್‌ ಪ್ರಸಾದ್‌, ಸತೀಶ್.ಕೆ … Read more

ಶರಾವತಿ ಹಿನ್ನೀರಿನಲ್ಲಿ ಮುಳುಗಿ ಯುವಕ ಸಾವು

crime name image

SAGARA, 20 AUGUST 2024 : ಶರಾವತಿ ಹಿನ್ನೀರಿನಲ್ಲಿ (BACK WATER) ಮುಳುಗಿ ಯುವಕನೊಬ್ಬ ಮೃತಪಟ್ಟಿದ್ದಾನೆ. ಸಾಗರ ತಾಲೂಕು ತುಮರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಡ್ಡಿನಬೈಲು ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಬ್ರಾಹ್ಮಣ ಕೆಪ್ಪಿಗೆ ಗ್ರಾಮದ ರವಿ (30) ಮೃತ ದುರ್ದೈವಿ. ಜಡ್ಡಿನಬೈಲು ಶರಾವತಿ ಹಿನ್ನೀರು ಭಾಗದಲ್ಲಿ ಮೀನುಗಾರ ರವಿ ಅವರು ಬಲೆ ಹಾಕಿದ್ದರು. ಇವತ್ತು ಬಲೆ ತೆಗೆಯಲು ಹಿನ್ನೀರಿಗೆ ಇಳಿದಾಗ ಕಾಲು ಜಾರಿ ಬಿದ್ದು ಮುಳುಗಿ ಮೃತಪಟ್ಟಿದ್ದಾರೆ. ಕಾರ್ಗಲ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ ⇒ ನಮ್ಮೂರಲ್ಲೇ … Read more

ಸಾಗರದಲ್ಲಿ ಭಾರಿ ಮಳೆಗೆ ಮೋರಿ ಕುಸಿತ, ರಸ್ತೆ ಸಂಪರ್ಕ ಕಡಿತ

road-connectivity-lost-due-to-heavy-rain-at-edajigalemane-in-sagara

SAGARA, 16 AUGUST 2024 : ಭಾರಿ ಮಳೆಗೆ ಸಾಗರ ತಾಲೂಕು ಮೋರಿ ಕುಸಿದು ರಸ್ತೆ ಸಂಪರ್ಕ (Road Connectivity) ಕಡಿತಗೊಂಡಿದೆ. ಎಡಜಿಗಳೇಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಂಕಟವಳ್ಳಿ ಹಾಗೂ ರಾಮನಗದ್ದೆ ನಡುವಿನ ಸಂಪರ್ಕ ರಸ್ತೆಯ ಮೋರಿ ಸಂಪೂರ್ಣವಾಗಿ ಕುಸಿದಿದೆ. ಈ ಗ್ರಾಮಗಳ ನಡುವಿನ ಸಂಚಾರ ಕಡಿತಗೊಂಡಿದೆ. ವಿಷಯ ತಿಳಿದು ಎಡಜಿಗಳೆಮನೆ ಗ್ರಾ.ಪಂ. ಅಧ್ಯಕ್ಷೆ ನಾಗವೇಣಿ ಪ್ರವೀಣ, ಸದಸ್ಯ ರವಿ, ಸ್ಥಳೀಯ ವಾರ್ಡ್ ಸದಸ್ಯೆ ಪ್ರಶಾಂತಿ ಉಮೇಶ್ ಭೇಟಿ ನೀಡಿದರು. ಇನ್ನು, ಬೆಂಕಟವಳ್ಳಿ ಭಾಗದಿಂದ ಹರಿದುಬಂದ ನೀರಿನ … Read more

ಅಪಘಾತದಲ್ಲಿ ವಿದ್ಯಾರ್ಥಿ ಸಾವು, ಕುಟುಂಬಕ್ಕೆ ನೆರವಾಗಲು ವಾಟ್ಸಪ್‌ ಗ್ರೂಪ್‌ ಶುರು, ಹರಿದು ಬಂತು ನೆರವು

Whatsapp-Group-for-sachin.

SAGARA, 11 AUGUST 2024 : ಆವಿನಹಳ್ಳಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟ ಯುವಕನ ಕುಟುಂಬಕ್ಕೆ ನೆರವಾಗಲು ಆತನ ಸ್ನೇಹಿತರು ವಾಟ್ಸಪ್‌ ಗ್ರೂಪ್‌ (WhatsApp Group) ಆರಂಭಿಸಿದ್ದಾರೆ. ವಿವಿಧೆಡೆಯ ನೆರವು ಹೆರಿದು ಬರುತ್ತಿದೆ. ಸಚಿನ್‌ ಹೆಸರಲ್ಲಿ ವಾಟ್ಸಪ್‌ ಗ್ರೂಪ್‌ ಆವಿನಹಳ್ಳಿ ಬಳಿ ಟಿಪ್ಪರ್‌ ಮತ್ತು ಬೈಕ್‌ ನಡುವೆ ಅಪಘಾತ ಸಂಭವಿಸಿ ಕಟ್ಟಿನಕಾರು ಗ್ರಾಮದ ಕೆ.ಪಿ.ಸಚಿನ್‌ (18) ಮೃತಪಟ್ಟಿದ್ದ. ಸಚಿನ್‌ ಕುಟುಂಬ ಆರ್ಥಿಕ ಸಂಕಷ್ಟದಲ್ಲಿದೆ. ಹಾಗಾಗಿ ಸಮಾನ ಮನಸ್ಕರು ಧನ ಸಂಗ್ರಹ ಆರಂಭಿಸಿದ್ದಾರೆ. ‘ಸಚಿನ್ ಪಡಬೀಡು ಇವರ ಉಸಿರಿಗೊಂದು ಆಸರೆಯಾಗಿ … Read more

ನಾಗರ ಪಂಚಮಿಯಂದೆ ಹಾವು ಕಡಿದು ಬಾಣಂತಿ ಸಾವು

Woman-succumbed-at-huttadinda-in-Sagara-snake-bite.

SAGARA, 9 AUGUST 2024 : ಮೇವು ತರಲು ತೆರಳಿದ್ದ ವೇಳೆ ಬಾಣಂತಿಯೊಬ್ಬರಿಗೆ (Woman) ಹಾವು ಕಡಿದು ಶುಕ್ರವಾರ ಮೃತಪಟ್ಟಿದ್ದಾರೆ. ಸಾಗರ ತಾಲೂಕಿನ ಹುತ್ತಾದಿಂಬ ಗ್ರಾಮದಲ್ಲಿ ಗದ್ದೆಯಲ್ಲಿ ಘಟನೆ ಸಂಭವಿಸಿದೆ. ರಂಜಿತಾ (22) ಮೃತರು. ಗದ್ದೆಯಲ್ಲಿ ಮೇವು ತರಲು ಹೋಗಿದ್ದಾಗ ಹಾವು ಕಡಿದಿದೆ. ಕುಟುಂಬದವರು ನೋಡಿದಾಗ ಬಾಣಂತಿ ರಂಜಿತಾ ಗದ್ದೆಯಲ್ಲಿ ಕುಸಿದು ಬಿದ್ದಿದ್ದರು. ತಕ್ಷಣ ಸಾಗರದ ಉಪ ವಿಭಾಗೀಯ ಆಸ್ಪತ್ರೆಗೆ ದಾಖಲಿಸಿದ್ದರು.   ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾರ್ಗ ಮಧ್ಯೆ ರಂಜಿತಾ ಮೃತಪಟ್ಟಿದ್ದಾರೆ. … Read more

ಟಿಪ್ಪರ್‌, ಬೈಕ್‌ ಮಧ್ಯೆ ಅಪಘಾತ, ಯುವಕ ಸಾವು, ಮತ್ತೊಬ್ಬ ಸ್ಥಿತಿ ಗಂಭೀರ

Avinahalli-mishap-youth-succumbed-sagara.

SAGARA, 9 AUGUST 2024 : ಆವಿನಹಳ್ಳಿ ಬಳಿ ಬೈಕ್‌ ಮತ್ತು ಟಿಪ್ಪರ್‌ (Tipper) ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಒಬ್ಬ ಯುವಕ ಸಾವನ್ನಪ್ಪಿದ್ದಾನೆ. ಮತ್ತೊಬ್ಬ ಗಂಭೀರ ಗಾಯಗೊಂಡಿದ್ದು ಕುಂದಾಪುರದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಟ್ಟಿನಕಾರು ಗ್ರಾಮದ ಸಚಿನ್‌ (19) ಮೃತ ದುರ್ದೈವಿ. ಬೈಕ್‌ ಚಲಾಯಿಸುತ್ತಿದ್ದ ಸುಮಂತ್‌ ಗಂಭೀರ ಗಾಯೊಂಡಿದ್ದಾನೆ. ಹೇಗಾಯ್ತು ಅಪಘಾತ? ಸಾಗರದಿಂದ ಗೆಣಸಿನಕುಣಿ ಕಡೆಗೆ ತೆರಳುತ್ತಿದ್ದ ಟಿಪ್ಪರ್‌ ಲಾರಿ ಮತ್ತು ಕಟ್ಟಿನಕಾರು ಸಮೀಪದ ಪಡಬೀಡು ಗ್ರಾಮದಿಂದ ಸಾಗರಕ್ಕೆ ತೆರಳುತ್ತಿದ್ದ ಬೈಕ್‌ ಮಧ್ಯೆ ಅಪಘಾತವಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ … Read more