ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಬೆಳಗ್ಗೆಯಿಂದಲೆ ಗುಡುಗು ಸಹಿತ ಜೋರು ಮಳೆ, ತಗ್ಗಿದ ತಾಪಮಾನ

Rain-at-Shimoga

SHIVAMOGGA LIVE | 30 MAY 2023 SHIMOGA : ಜಿಲ್ಲೆಯ ವಿವಿಧೆಡೆ ಬೆಳಗ್ಗೆಯಿಂದ ಗುಡುಗು ಸಹಿತ ಜೋರು ಮಳೆಯಾಗುತ್ತಿದೆ. ಹೊಸನಗರ, ಸಾಗರ, ತೀರ್ಥಹಳ್ಳಿಯ ವಿವಿಧೆಡೆ ಮಳೆ ಸುರಿಯುತ್ತಿದೆ. ಶಿವಮೊಗ್ಗ, ಭದ್ರಾವತಿಯಲ್ಲಿ ಮೋಡ ಕವಿದ ವಾತಾವರಣವಿದೆ. ಸಾಗರ, ಆನಂದಪುರ, ಹೊಸನಗರ, ರಿಪ್ಪನ್‌ಪೇಟೆ, ತೀರ್ಥಹಳ್ಳಿ ತಾಲೂಕಿನ ವಿವಿಧೆಡೆ ಬೆಳಗ್ಗೆಯಿಂದಲೆ ಗುಡುಗು ಸಹಿತ ಮಳೆಯಾಗುತ್ತಿದೆ. ಸಿಡಿಲು, ಗುಡುಗು ಜೋರಾಗಿರುವುದರಿಂದ ಜನರು ಮನೆಯಿಂದ ಹೊರ ಬರಲು ಹೆದರುವಂತಾಗಿದೆ. ಇದನ್ನೂ ಓದಿ – ಗಾಳಿ, ಮಳೆ ಹಿನ್ನೆಲೆ, ಸಿಟಿ ರೌಂಡ್ಸ್‌ ಆರಂಭಿಸಿದ ಶಿವಮೊಗ್ಗ ಎಂಎಲ್‌ಎ … Read more

ಶರಾವತಿ ಹಿನ್ನೀರಿನ ಮುಪ್ಪಾನೆ ಲಾಂಚ್‌ ಸೇವೆ ತಾತ್ಕಾಲಿಕ ಸ್ಥಗಿತ, ಕಾರಣವೇನು?

Muppane-Launch-in-Sagara-Sharavathi-River.

SHIVAMOGGA LIVE | 27 MAY 2023 TUMARI : ಶರಾವತಿ ಹಿನ್ನೀರಿನಲ್ಲಿ ನೀರಿನ ಮಟ್ಟ ಕಡಿಮೆಯಾಗಿರುವುದರಿಂದ ಮುಪ್ಪಾನೆ ಲಾಂಚ್‌ (Muppane Launch) ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಬಂದರು ಮತ್ತು ಒಳನಾಡು ಜಾಲ ಸಾರಿಗೆ ಇಲಾಖೆ ನಿರ್ಧರಿಸಿದೆ. ಲಾಂಚ್‌ ಮತ್ತು ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಶುಕ್ರವಾರ ಆಗಿದ್ದೇನು? ಶರಾವತಿ ಹಿನ್ನೀರು ಭಾಗದ ಹಲ್ಕೆ – ಮುಪ್ಪಾನೆ ಲಾಂಚ್‌ (Muppane Launch) ಸಂಚರಿಸುತ್ತದೆ. ಶುಕ್ರವಾರ ಲಾಂಚ್‌ಗೆ ಮರದ ದಿಮ್ಮಿಗಳು, ಮರಳಿನ ದಿಬ್ಬ ತಗುಲಿದೆ. ನೀರಿನ … Read more

ಅರ್ಧ ದಾರಿಗೆ ಪ್ರಯಾಣಿಕರನ್ನು ಇಳಿಸಿ‌ ಗ್ಯಾರೇಜ್‌ಗೆ ಹೋದ ಕೆಎಸ್‌ಆರ್‌ಟಿಸಿ ಬಸ್‌

Passangers-wait-for-two-hours-in-Sagara-KSRTC-Bus-Stand

SHIVAMOGGA LIVE NEWS | 20 MAY 2023 SAGARA : ತಾಂತ್ರಿಕ ದೋಷದಿಂದ ಕೆಎಸ್‌ಆರ್‌ಟಿಸಿ ಬಸ್‌ (KSRTC Bus) ಕೆಟ್ಟು ನಿಂತು, ಪ್ರಯಾಣಿಕರು ಸುಮಾರು ಮೂರು ಗಂಟೆ ಪರದಾಡುವಂತಾಯಿತು. ಸಾಗರ ಬಸ್‌ ನಿಲ್ದಾಣದಲ್ಲಿ ಘಟನೆ ಸಂಭವಿಸಿದೆ. ಪರ್ಯಾಯ ಬಸ್‌ ವ್ಯವಸ್ಥೆ ಮಾಡದ್ದಕ್ಕೆ ಅಧಿಕಾರಿಗಳ ವಿರುದ್ಧ ಪ್ರಯಾಣಿಕರು ಹಿಡಿಶಾಪ ಹಾಕಿದರು. ಶಿವಮೊಗ್ಗ – ಸಾಗರ – ಕಾರವಾರ ಮಾರ್ಗದ ಕೆಎಸ್‌ಅರ್‌ಟಿಸಿ ಬಸ್ಸಿನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಸಾಗರ ಬಸ್‌ ನಿಲ್ದಾಣಕ್ಕೆ ಬರುತ್ತಿದ್ದಂತೆ ಪ್ರಯಾಣಿಕರನ್ನು ಕೆಳಗಿಳಿಸಿ ಬಸ್ಸನ್ನು ರಿಪೇರಿಗೆ … Read more

ಶಿವಮೊಗ್ಗ ಜಿಲ್ಲೆಯ ಮೂವರು ಶಾಸಕರ ಪೈಕಿ ಯಾರಾಗ್ತಾರೆ ಮಿನಿಸ್ಟರ್?

Beluru-Gopalakrishna-Madhu-Bangarappa-BK-Sangameshwara

SHIVAMOGGA LIVE NEWS | 18 MAY 2023 SHIMOGA : ಮುಖ್ಯಮಂತ್ರಿ ಕುರಿತ ಗೊಂದಲಕ್ಕೆ ತೆರೆ ಬಿದ್ದಿದೆ. ಸಿದ್ದರಾಮಯ್ಯ ಅವರು ರಾಜ್ಯದ ನೂತನ ಮುಖ್ಯಮಂತ್ರಿ, ಡಿ.ಕೆ.ಶಿವಕುಮಾರ್‌ ಅವರು ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಮಧ್ಯೆ ಸಚಿವಾಕಾಂಕ್ಷಿಗಳ ಕಣ್ಣು ಈಗ ಹೈಕಮಾಂಡ್‌ನತ್ತ ತಿರುಗಿದೆ. ಶಿವಮೊಗ್ಗ ಜಿಲ್ಲೆಯ ಮೂವರು ಶಾಸಕರ ಪೈಕಿ ಯಾರಿಗೆ ಸಚಿವ (Minister) ಸ್ಥಾನ ಒಲಿಯಲಿದೆ ಎಂಬ ಕುತೂಹಲವು ಮೊಳಕೆಯೊಡೆದಿದೆ. ಯಾರಾಗಬಹುದು ಮಿನಿಸ್ಟರ್?‌ ಶಿವಮೊಗ್ಗ ಜಿಲ್ಲೆಯ ಏಳು ವಿಧಾನಸಭೆ ಕ್ಷೇತ್ರಗಳ ಪೈಕಿ ಮೂರು … Read more

ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ವಿರುದ್ಧ ಸಾಗರದಲ್ಲಿ ಎಫ್‌ಐಆರ್‌, ಕಾರಣವೇನು?

CS-Shadakshari-Press-Meet-in-Shimoga.

SHIVAMOGGA LIVE NEWS | 17 MAY 2023 SHIMOGA : ಮಾಹಿತಿ ಹಕ್ಕು ಕಾರ್ಯಕರ್ತನಿಗೆ ಜೀವ ಬೆದರಿಕೆ ಒಡ್ಡಿದ ಆರೋಪದ ಹಿನ್ನೆಲೆ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಅವರ ವಿರುದ್ಧ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಲಾಗಿತ್ತು. ಈಗ ನ್ಯಾಯಾಲಯದ ಸೂಚನೆ ಮೇರೆಗೆ ಸಾಗರ ಪೊಲೀಸ್‌ ಠಾಣೆಯಲ್ಲಿ ಸಿ.ಎಸ್.ಷಡಾಕ್ಷರಿ ಅವರ ವಿರುದ್ಧ ಎಫ್‌ಐಆರ್‌ (FIR) ದಾಖಲಾಗಿದೆ. WATCH VIDEO ತಾಳಗುಪ್ಪದ ಓಂಕಾರ.ಎಸ್‌.ಪಿ ಅವರು ಸಿ.ಎಸ್.ಷಡಾಕ್ಷರಿ ಅವರ ವಿರುದ್ಧ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು. ಏನಿದು ಪ್ರಕರಣ? … Read more

ಮರಕ್ಕೆ ಕಾರು ಡಿಕ್ಕಿಯಾಗಿ ಕಾಂಗ್ರೆಸ್‌ ಮುಖಂಡ ಸಾವು, ಇನ್ನಿಬ್ಬರಿಗೆ ಗಾಯ

Car-Mishap-near-anandapura-congress-leader-dies

SHIVAMOGGA LIVE NEWS | 17 MAY 2023 ANANDAPURA : ರಸ್ತೆ ಪಕ್ಕದ ಮರಕ್ಕೆ ಕಾರು (Car) ಡಿಕ್ಕಿಯಾಗಿ ಕಾಂಗ್ರೆಸ್‌ ಮುಖಂಡ ಸಾವನ್ನಪ್ಪಿದ್ದಾರೆ. ಕಾರಿನಲ್ಲಿದ್ದ ಮತ್ತಿಬ್ಬರು ಗಾಯಗೊಂಡಿದ್ದು, ಈ ಪೈಕಿ ಒಬ್ಬನಿಗೆ ಗಂಭೀರ ಗಾಯವಾಗಿದೆ. ಸಾಗರ ತಾಲೂಕು ಆನಂದಪುರ ಸಮೀಪ ಅಂಬ್ಲಿಗೊಳ ಬಳಿ ಘಟನೆ ಸಂಭವಿಸಿದೆ. ಕಾಂಗ್ರೆಸ್‌ ಮುಖಂಡ ತುರುಗೋಡು ನಾಗರಾಜ ಗೌಡ (55) ಮೃತಪಟ್ಟಿದ್ದಾರೆ. WATCH VIDEO ಶಿಕಾರಿಪುರದಿಂದ ಮಾರುತಿ ಸ್ವಿಫ್ಟ್‌ ಕಾರಿನಲ್ಲಿ (Car) ತಮ್ಮೂರಿಗೆ ಹಿಂತಿರುಗುತ್ತಿದ್ದರು. ಈ ವೇಳೆ ನಿಯಂತ್ರಣ ತಪ್ಪಿದ ಕಾರು … Read more

ತೋಟಕ್ಕೆ ಹೋಗುತ್ತಿದ್ದ ವ್ಯಕ್ತಿ ಮೇಲೆ ಕರಡಿ ದಾಳಿ, ಗಂಭೀರ ಗಾಯ

karadi-attack-on-a-person-in-Sagara

SHIVAMOGGA LIVE NEWS | 2 MAY 2023 SAGARA : ಕಟ್ಟಿಗೆ ತರಲು ಹೋಗಿದ್ದ ವ್ಯಕ್ತಿಯೊಬ್ಬರ ಮೇಲೆ ಕರಡಿ ದಾಳಿ (Bear Attack) ನಡೆಸಿದೆ. ಗಂಭೀರವಾಗಿ ಗಾಯಗೊಂಡಿರುವ ಅವರನ್ನು ಶಿವಮೊಗ್ಗದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ತಿಮ್ಮಾನಾಯ್ಕ್‌ (88) ಎಂಬುವವರು ಕರಡಿ ದಾಳಿಗೆ (Bear Attack) ಗಾಯಗೊಂಡಿದ್ದಾರೆ. ತೋಟದಲ್ಲಿ ಕಟ್ಟಿಗೆ ತರಲು ಕಾಡು ದಾರಿಯಲ್ಲಿ ತೆರಳುತ್ತಿದ್ದಾಗ ಕರಡಿ ದಾಳಿ ನಡೆಸಿದೆ. ಸಾಗರ ತಾಲೂಕು ಜೋಗ ಹೆನ್ನಿ ವಡನ್‌ಬೈಲ್‌ ಬಳಿ ಘಟನೆ ಸಂಭವಿಸಿದೆ. ಇದನ್ನೂ ಓದಿ – ಟಿಪ್ಪರ್‌ ಲಾರಿ … Read more

40 ವರ್ಷದಿಂದ ಈಡೇರದ ಬೇಡಿಕೆ, ನೀರಿನ ಟ್ಯಾಂಕ್‌ ಏರಿ ಆತ್ಮಹತ್ಯೆಯ ಬೆದರಿಕೆ, ಮುಂದೇನಾಯ್ತು? ಡಿಮಾಂಡ್‌ ಏನು?

Sagara-Protest-on-top-a-over-head-tank

SHIVAMOGGA LIVE NEWS | 2 MAY 2023 SAGARA : ಸಮುದಾಯ ಭವನ ನಿರ್ಮಾಣಕ್ಕೆ ನಿವೇಶನ ನೀಡದ್ದಕ್ಕೆ ಬೇಸರಗೊಂಡು ವ್ಯಕ್ತಿಯೊಬ್ಬರು ಟ್ಯಾಂಕ್‌ (Water Tank) ಏರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸವಿತಾ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ 40 ವರ್ಷದಿಂದ ನಿವೇಶನ ನೀಡಿಲ್ಲ ಎಂದು ಆರೋಪಿಸಿ ಈಶ್ವರ್‌ ಎಂಬಾತ ಟ್ಯಾಂಕ್‌ ಏರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಒಡ್ಡಿದ್ದರು. ವರದಳ್ಳಿ ರಸ್ತೆಯಲ್ಲಿರುವ ನೀರಿನ ಟ್ಯಾಂಕ್‌ (Water Tank) ಏರಿದ್ದ ಈಶ್ವರ್‌, ತಮ್ಮ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ ಕೂಡಲೆ … Read more

ಸಾವಿರ ಸಾವಿರ ಅಭಿಮಾನಿಗಳೊಂದಿಗೆ ಮೆರವಣಿಗೆ, ಸಾಗರದಲ್ಲಿ ಹಾಲಪ್ಪ ಉಮೇದುವಾರಿಕೆ

BJP-Haratalu-Halappa-Nomination-in-Sagara.

SHIVAMOGGA LIVE NEWS | 12 APRIL 2023 SAGARA : ಬಿಜೆಪಿ ಅಭ್ಯರ್ಥಿ ಹರತಾಳು ಹಾಲಪ್ಪ  ಅವರು ಇವತ್ತು ನಾಮಪತ್ರ ಸಲ್ಲಿಸಿದರು. ದೊಡ್ಡ ಸಂಖ್ಯೆಯ ಅಭಿಮಾನಿಗಳು, ಬೆಂಬಲಿಗರ ಜೊತೆಗೆ ಮೆರವಣಿಗೆ ನಡೆಸಿದ ಹಾಲಪ್ಪ ಅವರು, ಚುನಾವಣಾಧಿಕಾರಿ ಕಚೇರಿಯಲ್ಲಿ ನಾಮಪತ್ರ (Nomination) ಸಲ್ಲಿಸಿದರು. ಪತ್ನಿ ಯಶೋಧ, ಈಚೆಗಷ್ಟೆ ಬಿಜೆಪಿ ಸೇರ್ಪಡೆಯಾದ ಡಾ. ರಾಜನಂದಿನಿ ಕಾಗೋಡು, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್‌, ರಾಜೇಶ್‌ ಕೀಳಂಬಿ ಅವರೊಂದಿಗೆ ಉಪ ವಿಭಾಗಾಧಿಕಾರಿ ಕಚೇರಿಯಲ್ಲಿ ಚುನಾವಣಾಧಿಕಾರಿಗೆ ನಾಮಪತ್ರ (Nomination) ಸಲ್ಲಿಸಿದರು. ಹುಟ್ಟೂರು, ಸಾಗರದಲ್ಲಿ ಪೂಜೆ … Read more

ಲಾರಿಯಲ್ಲಿ ಸಾಗಿಸಲಾಗುತ್ತಿತ್ತು 46 ಬೈಕ್, ಯಾವುದಕ್ಕೂ ಇರಲಿಲ್ಲ ಡಾಕ್ಯೂಮೆಂಟ್

46-bikes-seized-for-not-having-valid-documents

SHIVAMOGGA LIVE NEWS | 14 APRIL 2023 SAGARA : ಸೂಕ್ತ ದಾಖಲೆ ಇಲ್ಲದೆ ಕಂಟೇನರ್ ಲಾರಿಯಲ್ಲಿ ಸಾಗಿಸುತ್ತಿದ್ದ 46 ಹೊಸ ಬೈಕುಗಳನ್ನು (Bikes) ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಚೆಕ್‍ ಪೋಸ್ಟ್‍ನಲ್ಲಿ ತಪಾಸಣೆ ವೇಳೆ ಬೈಕುಗಳ ಸಾಗಣೆ ಬೆಳಕಿಗೆ ಬಂದಿದೆ. 33,78,336 ರೂ. ಮೌಲ್ಯದ ಬೈಕುಗಳನ್ನು ವಶಕ್ಕೆ ಪಡೆಯಲಾಗಿದೆ. ಕಾರ್ಗಲ್ ಪಿಎಸ್‍ಐ ತಿರುಮಲೇಶ್ ನೇತೃತ್ವದಲ್ಲಿ ಪರಿಶೀಲನೆ ವೇಳೆ ಬೈಕುಗಳು ಪತ್ತೆಯಾಗಿದೆ. ಸಾಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ – ಶಿವಮೊಗ್ಗ … Read more