SHIMOGA | ಪಿಗ್ಮಿ, RD, FD ಕಟ್ಟಿಸಿಕೊಂಡು ಕೈ ಎತ್ತಿದ ಕೋ ಆಪರೇಟಿವ್ ಸೊಸೈಟಿ, ಶಿವಮೊಗ್ಗದಲ್ಲಿ ಪ್ರತಿಭಟನೆ

ಸಮೃದ್ದ ಜೀವನ್ ಮಲ್ಟಿಪರ್ಪಸ್ ಕೋ.ಆಪರೇಟಿವ್ ಸೊಸೈಟಿ ಹೂಡಿಕೆದಾರರಿಗೆ ಮೋಸ ಮಾಡಿದ್ದು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿ ಸನ್ಮಾರ್ಗ ಹಿತರಕ್ಷಣಾ ವೇದಿಕೆ ವತಿಯಿಂದ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು. ಶಿವಮೊಗ್ಗದ ಸಮೃದ್ಧ ಜೀವನ್ ಮಲ್ಟಿಪರ್ಪಸ್ ಕೋ.ಆಪರೇಟಿವ್ ಸೊಸೈಟಿ ಕಂಪೆನಿಯು ಕೋ.ಆಪರೇಟಿವ್ ಸೊಸೈಟಿ ಹೆಸರಿನಲ್ಲಿ ನಗರದಲ್ಲಿ ಕಾರ್ಯನಿರ್ವಹಿಸಿದ್ದು, ಪಿಗ್ಮಿ, ಆರ್‌ಡಿ, ಎಫ್‌ಡಿ ರೂಪದಲ್ಲಿ ಬಾಂಡ್‌ಗಳನ್ನು ನೀಡುವ ಮೂಲಕ ಸಾರ್ವಜನಿಕರಿಂದ ಲೀಡರ್ ಸಿಸ್ಟಮ್ ವ್ಯವಸ್ಥೆಯಡಿಯಲ್ಲಿ ಹಣ ಪಡೆಯಲಾಗಿದೆ ಎಂದರು. ಕಂಪೆನಿ, ಕಚೇರಿ ಬಂದ್ ಆಗಿರುವುದರಿಂದ ನಗರದಲ್ಲಿ ಹೂಡಿಕೆದಾರರು ಆತಂಕಕ್ಕೆ ಒಳಗಾಗಿದ್ದಾರೆ. ಕಷ್ಟಪಟ್ಟು … Read more

SHIMOGA | ಶಿವಮೊಗ್ಗ ಉಸ್ತುವಾರಿ ಸಚಿವರಿಗೆ ಓಪನ್ ಚಾಲೆಂಜ್ ಹಾಕಿದ ಜಿಲ್ಲಾ ಕಾಂಗ್ರೆಸ್, ಪರಿಹಾರದಲ್ಲಿ ಗೋಲ್ಮಾಲ್ ಆರೋಪ

ಶಿವಮೊಗ್ಗ ಲೈವ್.ಕಾಂ | SHIMOGA | 22 ನವೆಂಬರ್ 2019 ನೆರೆ ಪರಿಹಾರ ವಿತರಣೆಯಲ್ಲಿ ಭಾರೀ ಗೋಲ್ಮಾಲ್ ನಡೆದಿದೆ. ಬಿಜೆಪಿ ಪಕ್ಷದವರಿಗೆ ಮಾತ್ರ ದೊಡ್ಡ ಮೊತ್ತದ ಪರಿಹಾರ ವಿತರಿಸಲಾಗುತ್ತಿದೆ ಅಂತಾ ಜಿಲ್ಲಾ ಕಾಂಗ್ರೆಸ್ ಆರೋಪ ಮಾಡಿದೆ. ಅಲ್ಲದೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಬಹಿರಂಗ ಸವಾಲನ್ನು ಹಾಕಲಾಗಿದೆ. ಬಿಜೆಪಿ ಕಾರ್ಯಕರ್ತರಿಗಷ್ಟೆ 35 ಸಾವಿರ ಭಾರೀ ಮಳೆ, ನೆರೆಯಿಂದ ಮನೆ ಕಳೆದುಕೊಂಡಿರುವ ಕೆಲವರಿಗೆ ಕೇವಲ 10, 20 ಸಾವಿರ ಪರಿಹಾರದ ಹಣ ನೀಡಲಾಗಿದೆ. ಆದರೆ ಒಂದು ಪಕ್ಷದ ಕಾರ್ಯಕರ್ತರಿಗೆ ಮಾತ್ರ … Read more

SHIKARIPURA| ಶಿವಮೊಗ್ಗ ಶಿಕಾರಿಪುರ ರಾಣೇಬೆನ್ನೂರು ರೈಲ್ವೆ, ಭೂಸ್ವಾಧೀನಕ್ಕೆ ಸರ್ವೆ ಶುರು, ಎಲ್ಲಾಗುತ್ತೆ ಗೊತ್ತಾ ನಿಲ್ದಾಣ?

ಶಿವಮೊಗ್ಗ ಲೈವ್.ಕಾಂ | SHIKARIPURA | 20 ನವೆಂಬರ್ 2019 ಶಿವಮೊಗ್ಗ ಶಿಕಾರಿಪುರ ರಾಣೇಬೆನ್ನೂರು ರೈಲ್ವೆ ಮಾರ್ಗ ಯೋಜನೆಯ ಭೂ ಸ್ವಾಧೀನಕ್ಕೆ ಸರ್ವೇ ಕಾರ್ಯ ಆರಂಭವಾಗಿದೆ. ಭೂಸ್ವಾಧೀನಾಧಿಕಾರಿ ಮತ್ತು ರೈಲ್ವೆ ಇಲಾಖೆ ಅಧಿಕಾರಿಗಳು ಇವತ್ತು ಸರ್ವೇ ಕಾರ್ಯ ಆರಂಭಿಸಿದ್ದಾರೆ. ಯೋಜನೆಯ ಭೂಸ್ವಾಧೀನಾಧಿಕಾರಿ ಶಿವಕುಮಾರ್ ಅವರ ನೇತೃತ್ವದಲ್ಲಿ ಸರ್ವೇ ಕಾರ್ಯ ಆರಂಭವಾಗಿದೆ. ಇವತ್ತು ಯೋಜನೆ ವ್ಯಾಪ್ತಿಯ ವಿವಿಧೆಡೆ ಸರ್ವೇ ನಡೆಸಿದರು. ಮಾರ್ಗ ಗುರುತಿಸಿದ ರೈಲ್ವೆ ರೈಲ್ವೆ ಇಲಾಖೆಯು ಮಾರ್ಗವನ್ನು ಗುರುತಿಸಿದೆ. ಅಲ್ಲದೆ ರೈಲ್ವೆ ಅಧಿಕಾರಿಗಳು ಈಗಾಗಲೇ ಸರ್ವೆ ಕಾರ್ಯವನ್ನು … Read more

SHIMOGA| ತುಂಗಾ ಸೇತುವೆ ಮೇಲೆ ಬಂತು ಹೊಸ ಆ್ಯಂಗ್ಲರ್, ವಾಹನ ಡಿಕ್ಕಿ ತಪ್ಪಿಸಲು ಮತ್ತೊಂದು ಪ್ಲಾನ್

ಶಿವಮೊಗ್ಗ ಲೈವ್.ಕಾಂ | SHIMOGA | 20 ನವೆಂಬರ್ 2019 ಶಿವಮೊಗ್ಗ ತುಂಗಾ ಸೇತುವೆ ಆ್ಯಂಗ್ಲರ್’ಗೆ ವಾಹನಗಳು ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಪೊಲೀಸ್ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆ ಹೊಸ ಪ್ಲಾನ್ ಮಾಡಿದೆ. ಏನದು ಹೊಸ ಪ್ಲಾನ್? ತುಂಗಾ ಸೇತುವೆ ಮೇಲೆ ಭಾರಿ ವಾಹನ ಸಂಚಾರ ನಿಷೇಧಿಸಲಾಗಿದೆ. ದ್ವಿಚಕ್ರ ವಾಹನ, ಕಾರು, ಆಟೋರಿಕ್ಷಗಳು ಮಾತ್ರ ಸೇತುವೆ ಮೇಲೆ ಸಂಚರಿಸಬಹುದಾಗಿದೆ. ಭಾರಿ ವಾಹನಗಳು ಸಂಚಾರ ನಿರ್ಬಂಧಿಸಲು ಆ್ಯಂಗ್ಲರ್ ಹಾಕಲಾಗಿತ್ತು. ಆದರೆ ಮೂರ್ನಾಲ್ಕು ಬಾರಿ ವಾಹನಗಳು ಆ್ಯಂಗ್ಲರ್’ಗೆ ಡಿಕ್ಕಿ ಹೊಡೆದಿದ್ದವು. … Read more

ಸ್ವಾಮೀಜಿಯನ್ನು ನಿಂದಿಸಿದ ಮಿನಿಸ್ಟರನ್ನು ಸಂಪುಟದ ಕೈಬಿಡುವಂತೆ ಒತ್ತಾಯ, ಶಿವಮೊಗ್ಗದಲ್ಲಿ ಕುರುಬ ಸಂಘದ ಆಕ್ರೋಶ

ಶಿವಮೊಗ್ಗ ಲೈವ್.ಕಾಂ | SHIMOGA | 19 ನವೆಂಬರ್ 2019 ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಚಿವ ಮಾಧುಸ್ವಾಮಿ ಅವರನ್ನು ಸಂಪುಟದಿಂದ ಕೈಬಿಡಬೇಕು ಎಂದು ಕುರುಬ ಸಂಘ ಒತ್ತಾಯಿಸಿದೆ. ಕುರುಬ ಸಮಾಜದ ಶ್ರೀ ಈಶ್ವರಾನಂದ ಸ್ವಾಮೀಜಿ ಅವರಿಗೆ ಸಚಿವ ಮಾಧುಸ್ವಾಮಿ ಅವರು ಅಗೌರವ ತೋರಿದ್ದಾರೆ. ಹಾಗಾಗಿ ಸಚಿವರು ಕೂಡಲೇ ಸ್ವಾಮೀಜಿ ಅವರ ಕ್ಷಮೆಯಾಚಿಸಬೇಕು ಮತ್ತು ಅವರನ್ನು ಸಂಪುಟದಿಂದ ಕೈಬಿಡಬೇಕು ಎಂದು ಕುರುಬ ಸಂಘ ಒತ್ತಾಯಿಸಿದೆ. ಡಿಸಿ ಆಫಿಸ್ ಮುಂದೆ ಧಿಕ್ಕಾರದ ಘೋಷಣೆ ಸಚಿವ ಮಾಧುಸ್ವಾಮಿ ಅವರು ಸ್ವಾಮೀಜಿ ಅವರಿಗೆ … Read more

CRIME NEWS | ಶಿವಮೊಗ್ಗ ಬಸ್ ನಿಲ್ದಾಣದಿಂದ ಮಹಿಳೆ ಕಿಡ್ನಾಪ್, ಸುಲಿಗೆ ಕೇಸ್, ಮೂವರಿಗೆ ಶಿಕ್ಷೆ ಪ್ರಕಟ

prison hand cuff image

ಶಿವಮೊಗ್ಗ ಲೈವ್.ಕಾಂ | SHIMOGA | 19 ನವೆಂಬರ್ 2019 ಮಹಿಳೆಯೊಬ್ಬರನ್ನು ಅಪಹರಿಸಿ ಸುಲಿಗೆ ಮಾಡಿದ್ದ ಆರೋಪಿಗಳಿಗೆ ಶಿವಮೊಗ್ಗ ಕೋರ್ಟ್ ಶಿಕ್ಷೆ ವಿಧಿಸಿದೆ. ಮೂವರು ಆರೋಪಿಗಳು ಶಿವಮೊಗ್ಗ ಬಸ್ ನಿಲ್ದಾಣದಿಂದ ಮಹಿಳೆಯೊಬ್ಬರನ್ನು ಕಿಡ್ನಾಪ್ ಮಾಡಿದ್ದರು. ಏನಿದು ಘಟನೆ? ಬಾಳೆಕೊಪ್ಪದ ಸಹನಾ ಎಂಬುವವರನ್ನು ಶಿವಮೊಗ್ಗದ ಬಸ್ ನಿಲ್ದಾಣದಿಂದ ಅಪಹರಣ ಮಾಡಲಾಗಿತ್ತು. ಅನುಪಿನಕಟ್ಟೆ ಬಳಿ ಕೆರೆ ಅಂಗಳದಲ್ಲಿ ಸಹನಾ ಅವರ ಮೇಲೆ ಹಲ್ಲೆ ನಡೆಸಲಾಗಿತ್ತು. ಬಳಿಕ ಅವರ ಬಳಿ ಇದ್ದ ಮೊಬೈಲ್ ಕಿತ್ತುಕೊಂಡು, ಎಟಿಎಂನಿಂದ 9500 ರೂ. ಹಣ ಡ್ರಾ … Read more

CRIME NEWS | ಕೊಲೆ ಬೆದರಿಕೆ, ಆಯುಧ ತೋರಿಸಿ ಹಣ ವಸೂಲಿ, ಒಂದು ವರ್ಷ ಶಿವಮೊಗ್ಗದಿಂದ ಒಬ್ಬನ ಗಡಿಪಾರು

shivamogga graphics map

ಶಿವಮೊಗ್ಗ ಲೈವ್.ಕಾಂ | SHIMOGA | 19 ನವೆಂಬರ್ 2019 ವಾಹನಗಳನ್ನು ಅಡ್ಡಗಟ್ಟಿ ಆಯುಧ ತೋರಿಸಿ ಬೆದರಿಕೆಯೊಡ್ಡಿ ಹಣ ವಸೂಲಿ ಮಾಡುತ್ತಿದ್ದ ರೌಡಿಯೊಬ್ಬನನ್ನು ಗಡಿಪಾರು ಮಾಡಲಾಗಿದೆ. ಈ ಸಂಬಂಧ ಶಿವಮೊಗ್ಗ ಉಪವಿಭಾಗಾಧಿಕಾರಿ ಆದೇಶ ಹೊರಡಿಸಿದ್ದಾರೆ. ಗುರುಪುರದ ಸುನಿಲ್ ಅಲಿಯಾಸ್ ಬೆಕ್ಕು (25) ಎಂಬಾತನನ್ನು ಗಡಿಪಾರು ಮಾಡಲಾಗಿದೆ. ಈತನ ವಿರುದ್ಧ ಇದ್ದ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ಗಡಿಪಾರು ಮಾಡಲಾಗಿದೆ. ಏನೆಲ್ಲ ಆರೋಪಗಳಿವೆ? ಸುನಿಲ್ ಅಲಿಯಾಸ್ ಬೆಕ್ಕು ವಿರುದ್ಧ ಕೊಲೆ, ಕೊಲೆ ಬೆದರಿಕೆ, ಗುಂಪು ಕಟ್ಟಿಕೊಂಡು ಹೊಡೆದಾಡುವುದು ಸೇರಿದಂತೆ ಹಲವು … Read more

ಮನೆ ಕಳೆದುಕೊಂಡು ದೇವಸ್ಥಾನದ ಮೂಲೆಯಲ್ಲಿ ವಾಸವಿದ್ದ ವೃದ್ಧ ದಂಪತಿ ಬದುಕಲ್ಲಿ ಮಹಾ ಪವಾಡ, ಏನದು ಗೊತ್ತಾ?

181119 Yuva Brigade House Building 1

ಶಿವಮೊಗ್ಗ ಲೈವ್.ಕಾಂ | SHIMOGA | 18 ನವೆಂಬರ್ 2019 ಆ ವೃದ್ಧ ದಂಪತಿ ಬದುಕು ಬಹುತೇಕ ಬಿದ್ದಿಗೆ ಬಂದಿತ್ತು. ಇದ್ದ ಒಂದು ಮನೆಯನ್ನು ಮಳೆ ನುಂಗಿತ್ತು. ಜೀವನದ ಕೊನೆ ಘಟ್ಟ ದೇವಸ್ಥಾನದ ಮೂಲೆಯಲ್ಲೇ ನಡೆಯಬೇಕೇನೋ ಅಂತಾ ಯೋಚಿಸುವ ಹೊತ್ತಿಗೆ ಪವಾಡ ನಡೆಯಿತು. ಇತ್ತೀಚೆಗೆ ಸುರಿದ ಭಾರಿ ಮಳೆಗೆ ಬಾಪೂಜಿನಗರದ ತಗ್ಗು ಪ್ರದೇಶಕ್ಕೆ ನೀರು ನುಗ್ಗಿತ್ತು. ಇದರಿಂದ ಈ ಬಡಾವಣೆಯಲ್ಲಿದ್ದ ಹಲವರು ತುಂಬಾನೆ ನಷ್ಟ ಅನುಭವಿಸಿದರು. ಇಲ್ಲಿನ ಗಂಗಮ್ಮ ದೇವಸ್ಥಾನ ರಸ್ತೆಯಲ್ಲಿರುವ ಮುನಿಯಪ್ಪ, ನರಸಮ್ಮ ದಂಪತಿಯಂತು ಅಕ್ಷರಶಃ … Read more

ಬೆಳಂಬೆಳಗ್ಗೆ ಜೈಲ್ ಸರ್ಕಲ್ ಮಧ್ಯೆ ದಿಢೀರ್ ಪ್ರತ್ಯಕ್ಷವಾಯ್ತು ಹುತ್ತ, ಹೆಡೆ ಬಿಚ್ಚಿದ ನಾಗರ, ‘ರಾಜಕೀಯ ದ್ವೇಷ’ವೆ ಇದಕ್ಕೆಲ್ಲ ಕಾರಣ..!

ಶಿವಮೊಗ್ಗ ಲೈವ್.ಕಾಂ | SHIMOGA | 16 ನವೆಂಬರ್ 2019 ಜೈಲ್ ಸರ್ಕಲ್ ಮಧ್ಯೆ ದಿಢೀರ್ ಪ್ರತ್ಯಕ್ಷವಾಯ್ತು ಹುತ್ತ..! ಜನರನ್ನು ಭಯಬೀಳಿಸಿದವು ಬುಸ್ ಬುಸ್ ನಾಗಪ್ಪ..! ಸಮರ್ಪಕವಾಗಿ ಗುಂಡಿ ಮುಚ್ಚದ ಜನಪ್ರತಿನಿಧಿಗಳು, ಅಧಿಕಾರಿಗಳ ವಿರುದ್ಧ ಶಿವಮೊಗ್ಗದ ಪ್ರಜಾಕೀಯ ಪಕ್ಷ ವಿಭಿನ್ನವಾಗಿ ಪ್ರತಿಭಟನೆ ನಡೆಸಿತು. ಇದನ್ನು ಕಂಡು ಜೈಲ್ ಸರ್ಕಲ್’ನಲ್ಲಿ ಜನರು ಆಶ್ಚರ್ಯಚಕಿತರಾದರು. ಹೇಗಿತ್ತು ಪ್ರತಿಭಟನೆ? ಇವತ್ತು ಬೆಳಗ್ಗೆ ಜೈಲ್ ಸರ್ಕಲ್’ನ ಮಧ್ಯಭಾಗದಲ್ಲಿ ಹುತ್ತದ ಮಾದರಿ ನಿರ್ಮಿಸಲಾಗಿತ್ತು. ಅದರ ಮೇಲೆ ಹೆಡೆ ಬಿಚ್ಚಿದ ಮಾದರಿಯಲ್ಲಿದ್ದ ಎರಡು ಪ್ಲಾಸ್ಟಿಕ್ ನಾಗರ … Read more

CINEMA NEWS | ಚಾಲೆಂಜಿಂಗ್ ಸ್ಟಾರ್ ಫ್ಯಾನ್ಸ್ ಕೊಂಡಾಡಿದ ಬಾಲಿವುಡ್ ಡೈರೆಕ್ಟರ್ | ಒಂದೇ ಸಾಂಗ್’ನಲ್ಲಿ16 ಹೀರೊಯಿನ್ಸ್

ಶಿವಮೊಗ್ಗ ಲೈವ್.ಕಾಂ | FILMI UPDATE | 16 ನವೆಂಬರ್ 2019 ಮತ್ತೆ ನಿರ್ಮಾಣವಾಗಲಿದೆ ಪ್ರೇಮಲೋಕ ಬೆಂಗಳೂರು : ಕ್ರೇಜಿ ಸ್ಟಾರ್ ರವಿಚಂದ್ರನ್ ಅವರು ಪ್ರೇಮಲೋಕ ಸಿನಿಮಾದ ಸೀಕ್ವೆಲ್ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಭಾರತೀಯ ಸಿನಿಲೋಕದಲ್ಲಿ ಟ್ರೆಂಡ್ ಸೆಟ್ ಮಾಡಿದ್ದ ಪ್ರೇಮಲೋಕದ ಪಾರ್ಟ್ 2 ನಿರ್ಮಾಣಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪ್ರೇಮಲೋಕ 2ನಲ್ಲಿ ರವಿಚಂದ್ರನ್ ಅವರ ಮಕ್ಕಳಾದ ಮನೋರಂಜನ್ ಮತ್ತು ವಿಕ್ರಂ ಇಬ್ಬರು ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ರವಿಚಂದ್ರನ್ ಅವರೆ ಚಿತ್ರಕ್ಕೆ ಡೈರೆಕ್ಟ್ ಮಾಡಲಿದ್ದಾರೆ. ಒಂದೆ ಸಾಂಗಲ್ಲಿ ಕನ್ನಡದ 16 … Read more