ಶಿವಮೊಗ್ಗ ಜಿಲ್ಲೆಯಾದ್ಯಂತ ಭದ್ರತೆ ಹೆಚ್ಚಳ, ಸಿಟಿಯಲ್ಲಿ ಪೊಲೀಸ್ ಗಸ್ತು ಜೋರು, ಇವತ್ತಿಂದ ಮದ್ಯ ನಿಷೇಧ

ಶಿವಮೊಗ್ಗ ಲೈವ್.ಕಾಂ | SHIMOGA | 9 ನವೆಂಬರ್ 2019 ಅಯೋಧ್ಯೆ ವಿವಾದ ಕುರಿತು ಸುಪ್ರೀಂಕೋರ್ಟ್ ತೀರ್ಪು ಪ್ರಕಟಿಸುತ್ತಿರುವ ಹಿನ್ನೆಲೆ ಶಿವಮೊಗ್ಗ ಜಿಲ್ಲೆಯಾದ್ಯಂತ ಬಂದೋಬಸ್ತ್ ಕೈಗೊಳ್ಳಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ ಶಿವಮೊಗ್ಗ ನಗರದಲ್ಲಿ ಪೊಲೀಸರು ಭದ್ರತೆ ಹೆಚ್ಚಳ ಮಾಡಿದ್ದಾರೆ. ಯಾವುದೆ ಅಹಿತಕರ ಘಟನೆ ನಡೆಯದಂತೆ ತಡೆಯಲು ಆಯಾ ಠಾಣೆಗಳ ವ್ಯಾಪ್ತಿಯಲ್ಲಿ ಗಸ್ತು ಹೆಚ್ಚಳ ಮಾಡಲಾಗಿದೆ. ಜಿಲ್ಲೆಯಾದ್ಯಂತ ಡ್ರೈ ಡೇ ಅಯೋಧ್ಯೆ ವಿವಾದ ಕುರಿತ ತೀರ್ಪು ಮತ್ತು ಈದ್ ಮಿಲಾದ್ ಹಬ್ಬದ ಹಿನ್ನೆಲೆ ಶಿವಮೊಗ್ಗ ಜಿಲ್ಲೆಯಾದ್ಯಂತ ಡ್ರೈ … Read more

ಶಿವಮೊಗ್ಗದಿಂದ 3 ಹೊಸ ರೈಲಿಗೆ ಹಸಿರು ನಿಶಾನೆ, ಎಲ್ಲೆಲ್ಲಿಗೆ ತಲುಪುತ್ತೆ? ಎಲ್ಲೆಲ್ಲಿದೆ ಸ್ಟಾಪ್? ರೈಲು ಓಡಾಟ ಯಾವತ್ತಿಂದ ಗೊತ್ತಾ?

Train engine and boggies

ಶಿವಮೊಗ್ಗ ಲೈವ್.ಕಾಂ | SHIMOGA | 8 ನವೆಂಬರ್ 2019 ಶಿವಮೊಗ್ಗಕ್ಕೆ ಮೂರು ಹೊಸ ರೈಲುಗಳ ಘೋಷಣೆ ಆಗಿದೆ. ಬಹು ಬೇಡಿಕೆ ಇದ್ದ ಶಿವಮೊಗ್ಗ – ಚೆನ್ನೈ, ಶಿವಮೊಗ್ಗ – ತಿರುಪತಿ ಮಾರ್ಗದಲ್ಲಿ ರೈಲು ಓಡಿಸಲು ರೈಲ್ವೆ ಇಲಾಖೆ ಒಪ್ಪಿಗೆ ನೀಡಿದೆ. ಮೈಸೂರು – ಶಿವಮೊಗ್ಗ ನಡುವೆ ಮತ್ತೊಂದು ರೈಲು ಘೋಷಣೆಯಾಗಿದೆ. ನೆವೆಂಬರ್ 10ರಂದು ಸಂಸದ ಬಿ.ವೈ.ರಾಘವೇಂದ್ರ ಅವರು ಹೊಸ ರೈಲುಗಳಿಗೆ ಹಸಿರು ನಿಶಾನೆ ತೋರಿಸಲಿದ್ದಾರೆ. ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ಹೊಸ ರೈಲುಗಳಿಗೆ ಚಾಲನೆ ಸಿಗಲಿದೆ. ಮೂರು … Read more

ಶಿಕಾರಿಪುರದಿಂದ ಹೊಸ ಕೆಎಸ್‌ಆರ್‌ಟಿಸಿ ಬಸ್ ಶುರು, ಸದ್ಯದಲ್ಲೇ ಡಿಪೋ ಆರಂಭ, ಗ್ರಾಮಗಳಿಗೂ ಬರುತ್ತೆ ಸರ್ಕಾರಿ ಬಸ್

ಶಿವಮೊಗ್ಗ ಲೈವ್.ಕಾಂ | SHIKARIPURA | 8 ನವೆಂಬರ್ 2019 ಶಿಕಾರಿಪುರದಿಂದ ಶ್ರೀ ಕ್ಷೇತ್ರ ಕೊಟ್ಟೂರಿಗೆ ನೂತನ ಕೆಎಸ್‌ಆರ್‌ಟಿಸಿ ಬಸ್ ಸಂಚಾರಕ್ಕೆ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ತಾಲೂಕಿನಲ್ಲಿ ಈಗಾಗಲೇ ಸಾಕಷ್ಟು ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಚರಿಸುತ್ತಿವೆ. ಡಿಪೋ ನಿರ್ಮಾಣಕ್ಕೆ ಚಾಲನೆ ನೀಡಲಾಗಿದ್ದು ಡಿಪೋ ಆದ ಬಳಿಕ ನಮಗೆ ಭಾರಿ ಅನುಕೂಲವಾಗಲಿದೆ. ಗ್ರಾಮಾಂತರ ಭಾಗಗಳಿಗೆ ಇನ್ನೂ ಹೆಚ್ಚಿನ ಬಸ್ ಸೇವೆ ಅಗತ್ಯವಾಗಿದೆ. ಹಳ್ಳಿಗಳಿಂದ ಬರುವ ವಿದ್ಯಾರ್ಥಿಗಳಿಗೆ ಅನುಕೂಲವಾಗಬೇಕು. ಶಿಕಾರಿಪುರದಿಂದ ವಾಣಿಜ್ಯ ನಗರಗಳಿಗೆ, … Read more

ಭಾರಿ ಮಳೆಗೆ ಶಿವಮೊಗ್ಗದಲ್ಲಿ ಜನಜೀವನ ಅಸ್ತವ್ಯಸ್ತ, ಸ್ಮಾರ್ಟ್ ಸಿಟಿ ಕಾಮಗಾರಿಗಳು ಜಲಾವೃತ, ಎಲ್ಲೆಲ್ಲಿ ಏನೇನಾಗಿದೆ ಗೊತ್ತಾ?

ಶಿವಮೊಗ್ಗ ಲೈವ್.ಕಾಂ | SHIMOGA | 7 ನವೆಂಬರ್ 2019 ಒಂದು ಗಂಟೆಗು ಹೆಚ್ಚು ಕಾಲ ಸುರಿದ ಭಾರಿ ಮಳೆಗೆ ಶಿವಮೊಗ್ಗದಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಕೆಲವು ಕಡೆ ರಸ್ತೆ ಮೇಲೆ ಮೊಣಕಾಲುದ್ದ ನೀರು ನಿಂತಿದೆ. ಇದರಿಂದ ವಾಹನ ಸವಾರರು ಪರದಾಡುವಂತಾಗಿದೆ. ಶಿವಮೊಗ್ಗ ನಗರದ ಹೃದಯ ಭಾಗದಲ್ಲೇ ಚರಂಡಿಗಳು ತುಂಬಿ ಹರಿದವು. ರಸ್ತೆಯ ಮೇಲೆ ದೊಡ್ಡ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದರಿಂದ ದ್ವಿಚಕ್ರ ವಾಹನ ಸವಾರರು ಎಚ್ಚರದಿಂದ ವಾಹನ ಚಲಾಯಿಸುವಂತಾಯಿತು. ಕಾಂಗ್ರೆಸ್ ಕಚೇರಿ ಮುಂದೆ ನೀರೋ ನೀರು ಶಿವಮೊಗ್ಗ ಜಿಲ್ಲಾ … Read more

ಶಿವಮೊಗ್ಗದಲ್ಲಿ ಮತ್ತೆ ಜೋರು ಗುಡುಗು, ಗಾಳಿ, ಮಳೆ, ತಗ್ಗು ಪ್ರದೇಶದ ನಿವಾಸಿಗಳಲ್ಲಿ ಢವಢವ

ಶಿವಮೊಗ್ಗ ಲೈವ್.ಕಾಂ | SHIMOGA | 7 ನವೆಂಬರ್ 2019 ಶಿವಮೊಗ್ಗದಲ್ಲಿ ಮತ್ತೆ ಮಳೆ ಆರಂಭವಾಗಿದೆ. ಗುಡುಗು, ಗಾಳಿ ಸಹಿತ ಜೋರು ಮಳೆಯಾಗುತ್ತಿದೆ. ಇದರಿಂದ ಜನರು ಮತ್ತೊಮ್ಮೆ ಆತಂಕ್ಕಕೀಡಾಗಿದ್ದಾರೆ. ಸಂಜೆ ವೇಳಗೆ ಅರ್ಧ ಗಂಟೆಗು ಹೆಚ್ಚು ಕಾಲ ಮಳೆ ಸುರಿದಿದೆ. ಜೋರು ಗಾಳಿಯ ಜೊತೆಗೆ ಮಳೆಯಾಗುತ್ತಿದೆ. ಭಾರಿ ಮಳೆಯಿಂದಾಗಿ ರಸ್ತೆಯ ಮೇಲೆಲ್ಲ ನೀರು ಹರಿಯುತ್ತಿದೆ. ತಗ್ಗು ಪ್ರದೇಶಗಳಲ್ಲಿ ಭಯ ಭಯ ಮಳೆ ಜೋರಾಗುತ್ತಿದ್ದಂತೆ ತಗ್ಗು ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರಲ್ಲಿ ಆತಂಕ ಸೃಷ್ಟಿಯಾಗಿದೆ. ಕಳೆದ ರಾತ್ರಿ ಸುರಿದ ಮಳೆಗೆ … Read more

ಡಿಸಿ ಆಫೀಸ್ ಬಾಗಿಲಲ್ಲೇ ಆಡುಗೆ, ಮಕ್ಕಳು, ವಸ್ತುಗಳ ಜೊತೆ ಇನ್ಮುಂದೆ ಇಲ್ಲೇ ವಾಸ, 13 ಕುಟುಂಬದಿಂದ ಧರಣಿ

ಶಿವಮೊಗ್ಗ ಲೈವ್.ಕಾಂ | SHIMOGA | 7 ನವೆಂಬರ್ 2019 ಇದ್ದ ಮನೆಯನ್ನು ಸರ್ಕಾರ ಉರುಳಿಸಿತು. ಟಾರ್ಪಲ್ ಟೆಂಟ್’ಗಳು ಮಳೆ, ಗಾಳಿಗೆ ಹಾರಿಹೋಯ್ತು. ನೆಲೆಯಿಲ್ಲದೆ ನಲುಗುತ್ತಿರುವವರ ಕುಟುಂಬಗಳು ಈಗ ಜಿಲ್ಲಾಧಿಕಾರಿ ಕಚೇರಿ ಮುಂದೆ ಆಸರೆಗಾಗಿ ಆಗ್ರಹಿಸಿ ಧರಣಿ ಆರಂಭಿಸಿವೆ. ಶಿವಮೊಗ್ಗ ತಾಲೂಕಿನ ವಿರೂಪಿನಕೊಪ್ಪದ ಹಸಿರುಗಿಡ ಗ್ರಾಮದ 13 ಕುಟುಂಬಗಳು ಈಗ ಬೀದಿಗೆ ಬಿದ್ದವೆ. ಹಾಗಾಗಿ ನೆರವು ಕೋರಿ ಜಿಲ್ಲಾಧಕಾರಿ ಕಚೇರಿ ಮುಂದೆ ಧರಣಿ ಆರಂಭಿಸಿದ್ದಾರೆ. ದಿನಸಿ, ಪಾತ್ರೆಗಳು, ವಸ್ತುಗಳ ಸಹಿತ ಧರಣಿ ಮನೆ ಇಲ್ಲದೆ ಇರುವುದರಿಂದ 13 … Read more

ತೀರ್ಥಹಳ್ಳಿಯಲ್ಲಿ ಗ್ರಾಮ ಲೆಕ್ಕಿಗಿನ ಮೇಲೆ ಹಿಗ್ಗಾಮುಗ್ಗಾ ಥಳಿಸಿದ ಸಹಾಯಕ, ಕ್ರಮಕ್ಕೆ ಆಗ್ರಹಿಸಿ ದೂರು

ಶಿವಮೊಗ್ಗ ಲೈವ್.ಕಾಂ | THIRTHAHALLI | 7 ನವೆಂಬರ್ 2019 ತೀರ್ಥಹಳ್ಳಿ ತಾಲೂಕು ನೆರಳೂರು ಗ್ರಾಮಲೆಕ್ಕಿಗ ಯಶವಂತ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿದ ಗ್ರಾಮ ಸಹಾಯಕ ಅವಿನಾಶ್ ಅವರನ್ನು ಕೆಲಸದಿಂದ ವಜಾಗೊಳಿಸುವಂತೆ ಒತ್ತಾಯಿಸಿ ಶಿವಮೊಗ್ಗ ತಾಲೂಕು ಗ್ರಾಮ ಲೆಕ್ಕಿಗರ ಸಂಘದ ಪ್ರಮುಖರು ಅಪರ ಜಿಲ್ಲಾಧಿಕಾರಿ ಜಿ.ಅನುರಾಧಾ ಅವರಿಗೆ ಮನವಿ ಸಲ್ಲಿಸಿದರು. ಗ್ರಾಮಲೆಕ್ಕಿಗ ಯಶವಂತ್ ಕಚೇರಿಯ ಕೆಲಸ ನಿರ್ವಹಿಸಲು ಗ್ರಾಮ ಸಹಾಯಕ ಅವಿನಾಶ್‌ಗೆ ಸೂಚಿಸಿದ್ದರು. ಇದೇ ಕಾರಣಕ್ಕೆ ಏಕಾಏಕಿ ಯಶವಂತ್ ಮೇಲೆ ಅವಿನಾಶ್ ಹಲ್ಲೆ ನಡೆಸಿದ್ದಾರೆ. … Read more

ನಡು ಬೀದಿಯಲ್ಲೆ ವ್ಯಾಪಾರಿಯ ಕತ್ತು ಸೀಳಿ ಕೊಲೆ, ಕ್ಷುಲಕ ಕಾರಣಕ್ಕೆ ಹರಿಯಿತು ನೆತ್ತರು

murder graphical image

ಶಿವಮೊಗ್ಗ ಲೈವ್.ಕಾಂ | SHIRALAKOPPA | 7 ನವೆಂಬರ್ 2019 ಶಿರಾಳಕೊಪ್ಪದ ಆನವಟ್ಟಿ ರಸ್ತೆಯಲ್ಲಿ ಕಬ್ಬಿನ ಹಾಲು ವ್ಯಾಪಾರಿಗೆ ಹಾಡಹಗಲೇ ಚಾಕುವಿನಿಂದ ಇರಿದು, ಕತ್ತು ಕೊಯ್ದು ಹತ್ಯೆ ಮಾಡಲಾಗಿದೆ. ಸೈಯದ್ ಜಾಫರ್ ಮುನ್ನಾ (26) ಹತ್ಯೆಗೀಡಾದ ಯುವಕ. ಬುಧವಾರ ಸಂಜೆ ಘಟನೆ ನಡೆದಿದೆ. ಈತನ ಕಬ್ಬಿನ ಹಾಲಿನ ಅಂಗಡಿ ಪಕ್ಕದಲ್ಲಿ ಕುಷನ್ ಅಂಗಡಿ ನಡೆಸುತ್ತಿರುವ ಜಾವೇದ್‌ ಬೇಗ್ (19) ಎಂಬಾತ ಈ ಕೃತ್ಯ ಎಸಗಿದ್ದಾನೆ. ಕ್ಷುಲ್ಲಕ ಕಾರಣಕ್ಕೆ ಇಬ್ಬರ ಮಧ್ಯೆ ಜಗಳ ನಡೆದು ಅದು ವಿಕೋಪಕ್ಕೆ ತಿರುಗಿ … Read more

ಶಿವಮೊಗ್ಗದಲ್ಲಿ ಕೆಜಿ ಈರುಳ್ಳಿಗೆ 19 ರೂ. ಅಂತಾ ಕೂಪನ್ ಹಂಚಿದ್ರು, ಗ್ರಾಹಕರು ಬಂದಾಗ ಹೊಸ ರೂಲ್ಸ್ ಹೇಳಿದ್ರು

ಶಿವಮೊಗ್ಗ ಲೈವ್.ಕಾಂ | SHIMOGA | 6 ನವೆಂಬರ್ 2019 ಶಿವಮೊಗ್ಗ ನಗರದ ಹೈಪರ್ ಮಾರ್ಕೆಟ್ ಒಂದರಲ್ಲಿ ಕಡಿಮೆ ರೇಟಿಗೆ ಈರುಳ್ಳಿ ಮಾರಾಟ ಮಾಡುವುದಾಗಿ ಕೂಪನ್ ಹಂಚಿಕೆ ಮಾಡಿ, ಬಳಿಕ ವಂಚಿಸಿದ್ದಾರೆ ಎಂದು ಗ್ರಾಹಕರು ಗಲಾಟೆ ಮಾಡಿದ್ದಾರೆ. ಆದರೆ ಈ ಕುರಿತು ಪ್ರತಿಕ್ರಿಯೆ ನೀಡಲು ಹೈಪರ್ ಮಾರ್ಕೆಟ್ ಸಿಬ್ಬಂದಿ ನಿರಾಕರಿಸಿದೆ. ಹೈಪರ್ ಮಾರ್ಕೆಟ್’ನ ಗ್ರಾಹಕರಿಗೆ ನವೆಂಬರ್ 6ರಂದು ಪ್ರತಿ ಕೆ.ಜಿ. ಈರುಳ್ಳಿಗೆ 19 ರೂ. ಎಂದು ಕೂಪನ್ ಹಂಚಲಾಗಿತ್ತು. ಕೂಪನ್ ಇದ್ದ ಗ್ರಾಹಕರು ಈರುಳ್ಳಿ ಖರೀದಿಗೆ ಬಂದಾಗ … Read more

ವಾಟ್ಸಪ್, ಫೇಸ್’ಬುಕ್ ಅಡ್ಮಿನ್’ಗಳಿಗೆ ಶಿವಮೊಗ್ಗ ಪೊಲೀಸ್ ಇಲಾಖೆ ಖಡಕ್ ವಾರ್ನಿಂಗ್

Whatsapp-General-Image

ಶಿವಮೊಗ್ಗ ಲೈವ್.ಕಾಂ | SHIMOGA | 5 ನವೆಂಬರ್ 2019 ವಾಟ್ಸಪ್, ಫೇಸ್’ಬುಕ್, ಇನ್ಸ್’ಟಾಗ್ರಾಂ ಅಡ್ಮಿನ್’ಗಳಿಗೆ ಜಿಲ್ಲಾ ಪೊಲೀಸ್ ಇಲಾಖೆ ಖಡಕ್ ವಾರ್ನಿಂಗ್ ನೀಡಿದೆ. ಸಂದೇಶಗಳನ್ನು ಫಾರ್ವರ್ಡ್ ಮಾಡುವಾಗ ಎಚ್ಚರ ವಹಿಸುವಂತ ಸೂಚನೆ ನೀಡಿದೆ. ಸಾಮಜಿಕ ಜಾಲತಾಣಗಳಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಮತ್ತು ಕೋಮು ಭಾವನೆ ಕೆರಳಿಸುವ ಮೆಸೇಜುಗಳನ್ನು ಫಾರ್ವರ್ಡ್ ಮಾಡಲಾಗುತ್ತಿದೆ. ಯಾರೋ ಕಳುಹಿಸಿದ ಮೆಸೇಜುಗಳನ್ನು ಫಾರ್ವರ್ಡ್ ಮಾಡಿದರೆ ಮೆಸೇಜು ಕಳುಹಿಸಿದವರು ಮತ್ತು ಗ್ರೂಪ್ ಅಡ್ಮಿನ್’ಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ … Read more