ಮಹಾನಗರ ಪಾಲಿಕೆಯಲ್ಲು ಅದ್ಧೂರಿ ಆಯುಧ ಪೂಜೆ, ಹೇಗಿತ್ತು ಗೊತ್ತಾ ಸಿಬ್ಬಂದಿಗಳ ಸಂಭ್ರಮ?

ಶಿವಮೊಗ್ಗ ಲೈವ್.ಕಾಂ | SHIMOGA | 7 ಅಕ್ಟೋಬರ್ 2019 ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲು ಆಯುಧ ಪೂಜೆಯನ್ನು ಸಿಬ್ಬಂದಿಗಳು ಅದ್ಧೂರಿಯಾಗಿ ಆಚರಿಸಿದರು. ಪಾಲಿಕೆ ಆವರಣದಲ್ಲಿ ಎಲ್ಲ ವಾಹನಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಪಾಲಿಕೆಯ ಸೇವೆಗೆ ಬಳಕೆ ಮಾಡುವ ಮೇಯರ್ ಕಾರಿನಿಂದ ಹಿಡಿದು ಟಿಪ್ಪರ್ ಲಾರಿ, ಜೆಸಿಬಿ, ಗೂಡ್ಸ್ ವಾಹನ, ಆಂಬುಲೆನ್ಸ್ ಸೇರಿದಂತೆ ಎಲ್ಲ ಬಗೆಯ ವಾಹನಗಳಿಗು ಅಲಂಕಾರ ಮಾಡಲಾಗಿತ್ತು. ಬೆಳಗ್ಗೆಯಿಂದ ಪ್ರತಿ ವಾಹನಕ್ಕು ವಿಶೇಷ ಪೂಜೆ ಸಲ್ಲಿಸಲಾಯಿತು. ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200 ಸುದ್ದಿಗಾಗಿ … Read more

ಮೂರು ದಿನದ ಅದ್ಧೂರಿ ಸಹ್ಯಾದ್ರಿ ಉತ್ಸವಕ್ಕೆ ಟಗರು ಹೀರೋಯಿನ್ ಚಾಲನೆ, ಹೇಗಿತ್ತು ಗೊತ್ತಾ ಮೆರವಣಿಗೆಯ ವೈಭವ?

ಶಿವಮೊಗ್ಗ ಲೈವ್.ಕಾಂ | SHIMOGA | 4 ಅಕ್ಟೋಬರ್ 2019 ಕುವೆಂಪು ವಿಶ್ವವಿದ್ಯಾಲಯದ ಮೂರು ದಿನದ ಸಹ್ಯಾದ್ರಿ ಉತ್ಸವಕ್ಕೆ ಟಗರು ಸಿನಿಮಾ ಹೀರೋಯಿನ್ ಮಾನ್ವಿತಾ ಹರೀಶ್ ಉದ್ಘಾಟನೆ ಮಾಡಿದರು. ಬಳಿಕ ಕುವೆಂಪು ವಿಶ್ವವಿದ್ಯಾಲಯದ ಜ್ಞಾನ ಸಹ್ಯಾದ್ರಿ ಕ್ಯಾಂಪಸ್, ಶಂಕರಘಟ್ಟ ಮುಖ್ಯರಸ್ತೆಯಲ್ಲಿ ಕಾಲೇಜು ವಿದ್ಯಾರ್ಥಿಗಳ ಕಲಾತಂಡಗಳು ಮೆರವಣಿಗೆ ನಡೆಸಿದವು. ಮೆರವಣಿಗೆ ಹೇಗಿತ್ತು? ವಿದ್ಯಾರ್ಥಿಗಳು ಏನೆಲ್ಲ ಕಲೆ ಪ್ರದರ್ಶಿಸಿದರು? ಫೋಟೊ ಆಲ್ಬಂ ಇಲ್ಲಿದೆ. ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200 ಸುದ್ದಿಗಾಗಿ ಕರೆ ಮಾಡಿ – 9964634494 ಈ … Read more

ಹಳೇ ಜೈಲು ಆವರಣಕ್ಕೆ ಉಪಮೇಯರ್ ಸೂಚಿಸಿದ ಹೆಸರಿಡುವುದು ಬೇಡ

Shimoga Old Jail 1

ಶಿವಮೊಗ್ಗ ಲೈವ್.ಕಾಂ | SHIMOGA | 3 ಅಕ್ಟೋಬರ್ 2019 ನಗರದ ಹಳೇ ಕಾರಾಗೃಹ ಅವರಣದಲ್ಲಿ ಸ್ವಾತಂತ್ರ್ಯ ಉದ್ಯಾನವನ ನಿರ್ಮಿಸುತ್ತಿರುವುದು ಸ್ವಾಗತಾರ್ಹ. ಆದರೆ ಉದ್ಯಾನವನಕ್ಕೆ ಇಂತಹವರದ್ದೆ ಹೆಸರು ಇಡಬೇಕು ಎಂಬುದು ಸೂಕ್ತವಲ್ಲ ಎಂದು ಜಿಲ್ಲಾ ಕಾಂಗ್ರೆಸ್ ಸೇವಾದಳದ ಅಧ್ಯಕ್ಷ ವೈ.ಎಚ್.ನಾಗರಾಜ್ ಹೇಳಿದ್ದಾರೆ. ಮುಖ್ಯಮಂತ್ರಿ ಅವರು ಸಾರ್ವಜನಿಕ ಬಳಕೆಗೆ ಈ ಆವರಣ ನೀಡಲಾಗುವುದು ಎಂದು ಹೇಳಿರುವುದು ಸ್ವಾಗತಾರ್ಹವಾಗಿದೆ. ಆದರೆ ಉಪಮೇಯರ್ ಎಸ್.ಎನ್.ಚನ್ನಬಸಪ್ಪ ಅವರು  ಸ್ವಾತಂತ್ರ್ಯ ಹೋರಾಟಗಾರ ಚಂದ್ರಶೇಖರ್ ಅಜಾದ್ ಅವರ ಹೆಸರಿಡಬೇಕು ಎಂದು ಹೇಳಿದ್ದಾರೆ. ಅದಕ್ಕೆ ಮುಖ್ಯಮಂತ್ರಿ ಅವರು … Read more

ಗೋಪಿ ಸರ್ಕಲ್’ನಲ್ಲಿ ಬೀದಿ ಭಾಷಣ, ಕಾಲೇಜುಗಳಲ್ಲಿ ಮಾದಕ ದ್ರವ್ಯ ಮಾಫಿಯಾ ವಿರುದ್ಧ ಆಕ್ರೋಶ

ಶಿವಮೊಗ್ಗ ಲೈವ್.ಕಾಂ | SHIMOGA | 3 ಅಕ್ಟೋಬರ್ 2019 ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಷನ್(ಎಸ್ಎಸ್ಎಫ್) ಶಿವಮೊಗ್ಗ ವಿಭಾಗದ ಕ್ಯೂ ಟಿಮ್ ವತಿಯಿಂದ ಗಾಂಧಿ ಜಯಂತಿ ಅಂಗವಾಗಿ ಗಾಂಧಿಜಿಯ ಕನಸು ನನಸಾಗಲಿ ಎಂಬ ಘೋಷಣೆಯೊಂದಿಗೆ ಗೋಪಿ ವೃತ್ತದಲ್ಲಿ ಮಾದಕ ದ್ರವ್ಯ ವಿರುದ್ಧ ಜನಜಾಗೃತಿ ಹಾಗೂ ಬೀದಿ ಭಾಷಣ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮಾತನಾಡಿದ ಎಸ್ಎಸ್ಎಫ್ ರಾಜ್ಯ ಉಪಾಧ್ಯಕ್ಷ ಸುಫಿಯಾನ್ ಸಖಾಫಿ, ವಿದ್ಯಾರ್ಥಿಗಳು ಮಾದಕ ದ್ರವ್ಯಗಳಿಗೆ ಬಲಿಯಾಗಿ ಸುಂದರ ಭವಿಷ್ಯವನ್ನು ಕಳೆದುಕೊಳ್ಳುತ್ತಿದ್ದಾರೆ. ಕಾಲೇಜು ಕ್ಯಾಂಪಸ್’ಗಳಲ್ಲಿ ಮಾದಕದ್ರವ್ಯ ಮಾಫಿಯಾಗಳು … Read more

ಶಿವಮೊಗ್ಗದಲ್ಲಿ ಗಾಂಧಿ ನಡಿಗೆ ಪಾದಯಾತ್ರೆ, ರಾಮಣ್ಣಶ್ರೇಷ್ಠಿ ಪಾರ್ಕ್’ನಿಂದ ಕಾಂಗ್ರೆಸ್ ಮೆರವಣಿಗೆ

ಶಿವಮೊಗ್ಗ ಲೈವ್.ಕಾಂ | SHIMOGA | 3 ಅಕ್ಟೋಬರ್ 2019 ಗಾಂಧಿ ಜಯಂತಿ ಅಂಗವಾಗಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಶಿವಮೊಗ್ಗದಲ್ಲಿ ಗಾಂಧಿ ನಡಿಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿತ್ತು. ರಾಮಣ್ಣ ಶ್ರೇಷ್ಠಿ ಪಾರ್ಕ್’ನಿಂದ ಆರಂಭವಾದ ನಡಿಗೆ ಗಾಂಧಿ ಬಜಾರ್ ಮಾರ್ಗವಾಗಿ ಶಿವಪ್ಪನಾಯಕ ಸರ್ಕಲ್, ಅಮೀರ್ ಅಮಹದ್ ಸರ್ಕಲ್, ನೆಹರು ರೋಡ್, ಬಾಲರಾಜ್ ಅರಸ್ ರಸ್ತೆ ಮೂಲಕ ಗಾಂಧಿ ಪಾರ್ಕ್’ಗೆ ತಲುಪಿತು. ಬಳಿಕ ಪಾರ್ಕ್’ನಲ್ಲಿರುವ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು. ಸಂದೇಶ ಸಾರುವ ಟ್ಯಾಬ್ಲೊದೊಂದಿಗೆ ಪಾದಯಾತ್ರೆಯಲ್ಲಿ ಇತ್ತು. ಜಿಲ್ಲಾಧ್ಯಕ್ಷ … Read more

ಅತಿಥಿ ಉಪನ್ಯಾಸಕಿ ಹೆಸರಲ್ಲಿ ನಕಲಿ ಟಿಕ್’ಟಾಕ್ ಅಕೌಂಟ್, ವಿಡಿಯೋ ಅಪ್’ಲೋಡ್ ಮಾಡಿದ ಕಿಡಿಗೇಡಿಗಳು

ಶಿವಮೊಗ್ಗ ಲೈವ್.ಕಾಂ | SHIMOGA | 2 ಅಕ್ಟೋಬರ್ 2019 ಅತಿಥಿ ಉಪನ್ಯಾಸಕಿಯೊಬ್ಬರ ಹೆಸರಿನಲ್ಲಿ ಟಿಕ್ ಟಾಕ್ ಖಾತೆ ತೆರೆದು ವಿಡಿಯೋಗಳನ್ನು ಅಪ್’ಲೋಡ್ ಮಾಡಿ, ಮಾನಸಿಕ ಕಿರುಕುಳ ನೀಡಲಾಗುತ್ತಿದೆ ಎಂದು ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕುವೆಂಪು ವಿಶ್ವವಿದ್ಯಾಲಯದಲ್ಲಿ ಅತಿಥಿ ಉಪನ್ಯಾಸಕಿ ಒಬ್ಬರ ಹೆಸರಿನಲ್ಲಿ ಕಿಡಿಗೇಡಿಗಳು ನಕಲಿ ಟಿಕ್ ಟಾಕ್ ಅಕೌಂಟ್ ತೆರೆದಿದ್ದಾರೆ. ಅದರಲ್ಲಿ ಅತಿಥಿ ಉಪನ್ಯಾಸಕಿ ಇರುವ ವಿಡಿಯೋಗಳಿಗೆ ವಾಯ್ಸ್ ಎಡಿಟ್ ಮಾಡಿ, ಅಪ್’ಲೋಡ್ ಮಾಡಲಾಗಿದೆ. ವಿಡಿಯೋಗಳಿಂದ ಮಾನಸಿಕ ಹಿಂಸೆಯಾಗಿದೆ ಎಂದು ಅತಿಥಿ … Read more

ನವುಲೆ ಬಳಿ ರಾತ್ರಿ ಮದ್ಯದಂಗಡಿಗೆ ಮಹಿಳೆಯರ ಮುತ್ತಿಗೆ, ಮಾರಾಟಗಾರರಿಗೆ ತರಾಟೆ

ಶಿವಮೊಗ್ಗ ಲೈವ್.ಕಾಂ | SHIMOGA | 1 ಅಕ್ಟೋಬರ್ 2019 ಓಪನ್ ಆದ ಮೊದಲ ದಿನವೆ ಮಹಿಳೆಯರು ಮದ್ಯದಂಗಡಿಗೆ ಮುತ್ತಿಗೆ ಹಾಕಿ ಬಂದ್ ಮಾಡಿಸಿದ್ದಾರೆ. ನವುಲೆ ಬಳಿಯ ತ್ರಿಮೂರ್ತಿ ನಗರದಲ್ಲಿ ಘಟನೆ ನಡೆದಿದೆ. ಜನವಸತಿ ಪ್ರದೇಶ, ಶಾಲೆಯ ಸಮೀಪದಲ್ಲಿ ಮದ್ಯದಂಗಡಿ ತೆರೆಯಲಾಗಿತ್ತು. ಮೊದಲ ದಿನವೆ ಮದ್ಯದಂಗಡಿಗೆ ಮುತ್ತಿಗೆ ಹಾಕಿದ ಮಹಿಳೆಯರು, ಬಾರ್’ನಲ್ಲಿದ್ದವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕೂಡಲೆ ಬಂದ್ ಮಾಡುವಂತೆ ಆಗ್ರಹಿಸಿದ್ದಾರೆ. ತ್ರಿಮೂರ್ತಿನಗರದ ಶ್ರೀ ವಿಘ್ನೇಶ್ವರ ಕನ್ನಡ ಯುವಕರ ಸೇವಾ ಸಮಿತಿ, ಯುವಕರ ಸಂಘಟನೆಗಳು ಮಹಿಳೆಯರಿಗೆ ಬೆಂಬಲ ನೀಡಿದವು. … Read more

ಶಿವಮೊಗ್ಗದ ‘ಫ್ರೀಡಂ ಪಾರ್ಕ್’ಗೆ ಸಿಎಂ ಗುದ್ದಲಿ ಪೂಜೆ, ಹೊಸ ಹೆಸರು ಘೋಷಣೆ

ಶಿವಮೊಗ್ಗ ಲೈವ್.ಕಾಂ | SHIMOGA | 30 ಸೆಪ್ಟೆಂಬರ್ 2019 ಬೆಂಗಳೂರು ಮಾದರಿಯಲ್ಲಿ ಶಿವಮೊಗ್ಗದ ಹಳೆ ಜೈಲು ಆವರಣದಲ್ಲಿ ಫ್ರೀಡಂ ಪಾರ್ಕ್ ನಿರ್ಮಾಣಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇವತ್ತು ಗುದ್ದಲಿ ಪೂಜೆ ಮಾಡಿದರು. ಇನ್ನು, ಫ್ರೀಡಾಂ ಪಾರ್ಕ್’ಗೆ ಸ್ವಾತಂತ್ರ್ಯ ಹೋರಾಟಗಾರ ಚಂದ್ರಶೇಖರ್ ಆಜಾದ್ ಅವರ ಹೆಸರಿಡಬೇಕು ಎಂದು ಉಪಮೇಯರ್ ಚನ್ನಬಸಪ್ಪ ಮನವಿ ಮಾಡಿದ್ದಾರೆ. ಇದಕ್ಕೆ ಸಿಎಂ ಪೂರಕವಾಗಿ ಸ್ಪಂದಿಸಿದ್ದಾರೆ. ಗುದ್ದಲಿ ಪೂಜೆ ಬಳಿಕ ಡಿಎಆರ್ ಮೈದಾನದಲ್ಲಿ ಆಯೋಜಿಸಲಾಗಿದ್ದ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಸಮಾರಂಭದಲ್ಲಿ, ಫ್ರೀಡಂ ಪಾರ್ಕ್’ಗೆ ಚಂದ್ರಶೇಖರ್ ಆಜಾದ್ … Read more

ಇನ್ನೆರಡು ವರ್ಷ ಕಾದು ನೋಡಿ, ಶಿವಮೊಗ್ಗದ ಚಿತ್ರಣವನ್ನೆ ಬದಲಿಸುತ್ತೇವೆ ಅಂದರು ಸಿಎಂ

ಶಿವಮೊಗ್ಗ ಲೈವ್.ಕಾಂ | SHIMOGA | 30 ಸೆಪ್ಟೆಂಬರ್ 2019 ಇನ್ನೊಂದೆರಡು ವರ್ಷದಲ್ಲಿ ಶಿವಮೊಗ್ಗ ಜಿಲ್ಲೆಯ ಸಂಪೂರ್ಣ ಚಿತ್ರಣವನ್ನೆ ಬದಲಿಸುತ್ತೇವೆ. ಯಾವುದೆ ಕಾಮಗಾರಿಗಳು ಬಾಕಿ ಉಳಿದಿವೆ ಎಂದು ಯಾರು ಹೇಳುವಂತಿರಲ್ಲ ಅಂತಾ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು. ಶಿವಮೊಗ್ಗದ ಡಿಎಆರ್ ಮೈದಾನದಲ್ಲಿ ನಡೆದ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಯಡಿಯೂರಪ್ಪ, ಎರಡು ವರ್ಷದಲ್ಲಿ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿ ಕೈಗೊಳ್ಳಲಾಗುತ್ತದೆ ಎಂದರು. ಸಿಎಂ ಯಡಿಯೂರಪ್ಪ ಏನೆಲ್ಲ ಹೇಳಿದರು? ಈ ಹಿಂದೆ ಉಪಮುಖ್ಯಮಂತ್ರಿ, ಮುಖ್ಯಮಂತ್ರಿ ಆಗಿದ್ದ ಸಂದರ್ಭ ವಿಮಾನ … Read more

ದಸರಾ ಹಬ್ಬದ ಭರ್ಜರಿ ಗಿಫ್ಟ್ ಕೊಟ್ಟ ಶಿವಮೊಗ್ಗ ಹಾಲು ಒಕ್ಕೂಟ, ಹಾಲು ಉತ್ಪಾದಕರು ಮತ್ತಷ್ಟು ಖುಷ್

SHIMUL-Nandini-1.jpg

ಶಿವಮೊಗ್ಗ ಲೈವ್.ಕಾಂ | SHIMOGA | 28 ಸೆಪ್ಟೆಂಬರ್ 2019 ಶಿವಮೊಗ್ಗ ಹಾಲು ಒಕ್ಕೂಟವು ಹಾಲು ಉತ್ಪಾದಕರಿಗೆ ದಸರಾ ಹಬ್ಬದ ಭರ್ಜರಿ ಕೊಡುಗೆ ನೀಡಿದೆ. ಉತ್ಪಾದಕರಿಗೆ ಹಾಲಿನ ದರವನನ್ಉ ಹೆಚ್ಚಳ ಮಾಡಲಾಗಿದೆ. ಅಕ್ಟೋಬರ್ 1ರಿಂದ ಜಾರಿಗೆ ಬರುವಂತೆ ಉತ್ಪಾದಕರ ಹಾಲಿನ ದರವನ್ನು ಲೀಟರ್’ಗೆ 2.50 ರೂ. ಹೆಚ್ಚಳ ಮಾಡಿದೆ. ಕೇವಲ ಒಂದೂವರೆ ತಿಂಗಳ ಅಂತರದಲ್ಲಿ ಹಾಲಿನ ದರವನ್ನು ಲೀಟರ್’ಗೆ 5 ರೂ. ಹೆಚ್ಚಳ ಮಾಡಿದಂತೆ ಆಗಿದೆ. ಲೀಟರ್ ಹಾಲಿಗೆ ಎಷ್ಟು ಮೊತ್ತ ಸಿಗಲಿದೆ ಗೊತ್ತಾ? ಹಾಲು ಒಕ್ಕೂಟವು … Read more