ಶಿವಮೊಗ್ಗ ಹಿಂದೂ ಮಹಾಸಭಾ ಗಣಪತಿಗೆ ಡಿಸಿ, ಎಸ್ಪಿಯಿಂದ ಪೂಜೆ

ಶಿವಮೊಗ್ಗ: ಹಿಂದೂ ಮಹಾಸಭಾ ಗಣಪತಿ (ganesh) ರಾಜಬೀದಿ ಉತ್ಸವಕ್ಕೆ ಅಂತಿಮ ಸಿದ್ಧತೆ ನಡೆಯುತ್ತಿದೆ. ಸೆ.6ರಂದು ಶಿವಮೊಗ್ಗ ನಗರದಲ್ಲಿ ಗಣಪತಿಯ ಮೆರವಣಿಗೆ ನಡೆಯಲಿದೆ. ಜಿಲ್ಲಾಧಿಕಾರಿ ಮತ್ತು ಜಿಲ್ಲಾ ರಕ್ಷಣಧಿಕಾರಿ ಇವತ್ತು ಗಣಪತಿಯ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್‌ ಕುಮಾರ್‌ ನಗರದ ಕೋಟೆ ‍ಶ್ರೀ ಭೀಮೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಗಿರುವ ಹಿಂದೂ ಮಹಾಸಭಾ ಗಣಪತಿಯ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಇದೇ ವೇಳೆ ಹಿಂದೂ ಸಂಘಟನೆಗಳ ಮಹಾಮಂಡಲದ ಪ್ರಮುಖರೊಂದಿಗೆ ಮೆರವಣಿಗೆ ಕುರಿತು ಮಾಹಿತಿ … Read more

ಶಿವಮೊಗ್ಗದಲ್ಲಿ ಶೂ ಒಳಗೆ ಬೆಚ್ಚಗೆ ಮಲಗಿತ್ತು ಹಾವು

Cat-Snake-found-in-a-shoe-snake-kiran-rescue.

ಶಿವಮೊಗ್ಗ: ಮನೆ ಮುಂದೆ ಶೂ ಸ್ಟಾಂಡ್‌ನಲ್ಲಿ ಇರಿಸಿದ್ದ ಶೂ ಒಂದರಲ್ಲಿ ಸೇರಿದ್ದ ಹಾವನ್ನು (Snake) ಉರಗ ರಕ್ಷಕ ಸ್ನೇಕ್‌ ಕಿರಣ್‌ ರಕ್ಷಿಸಿದ್ದಾರೆ. ನಗರದ ಕಂಟ್ರಿ ಕ್ಲಬ್‌ ಸಮೀಪ ವೆಂಕಟೇಶ್‌ ಎಂಬುವವರ ಮನೆಯಲ್ಲಿ ಹಾವು ಪತ್ತೆಯಾಗಿದೆ. ಶೂ ಸ್ಟಾಂಡ್‌ನಲ್ಲಿದ್ದ ಶೂ ಒಳಗೆ ಹಾವು ಇರುವುದನ್ನು ಗಮನಿಸಿದ ಮನೆಯವರು ಸೇಕ್‌ ಕಿರಣ್‌ ಅವರಿಗೆ ವಿಷಯ ತಿಳಿಸಿದ್ದರು. ಕೂಡಲೆ ಮನೆ ಬಳಿ ತೆರಳಿದ ಸ್ನೇಕ್‌ ಕಿರಣ್‌ ಹಾವನ್ನು ರಕ್ಷಿಸಿದ್ದಾರೆ. ಶೂ ಒಳಗೆ ಇದ್ದದ್ದು ಕ್ಯಾಟ್‌ ಸ್ನೇಕ್‌ ಎಂದು ಸ್ನೇಕ್‌ ಕಿರಣ್‌ ತಿಳಿಸಿದ್ದಾರೆ. … Read more

BREAKING NEWS – ಶಿವಮೊಗ್ಗ ಜಿಲ್ಲೆಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರಕಟ, 19 ಶಿಕ್ಷಕರಿಗೆ ವಿಶೇಷ ಪ್ರಶಸ್ತಿ

DDPI-office-Shimoga.

ಶಿವಮೊಗ್ಗ: ಜಿಲ್ಲೆಯ ಅತ್ಯುತ್ತಮ ಶಿಕ್ಷಕ ಮತ್ತು ಶಿಕ್ಷಕಿಯ ಪಟ್ಟಿ ಪ್ರಕಟಿಸಲಾಗಿದೆ. ಶಿವಮೊಗ್ಗದ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿಯು ಪ್ರಶಸ್ತಿಗೆ ಆಯ್ಕೆಯಾದ ಶಿಕ್ಷಕರ ಹೆಸರನ್ನು ಬಹಿರಂಗಪಡಿಸಿದೆ. ಸೆ.5ರಂದು ನಡೆಯಲಿರುವ ಶಿಕ್ಷಕರ ದಿನಾಚರಣೆ (teachers day) ಕಾರ್ಯಕ್ರಮದಲ್ಲಿ ಅತ್ಯುತ್ತಮ ಶಿಕ್ಷಕರಿ ಪ್ರಶಸ್ತಿ ನೀಡಲಾಗುತ್ತದೆ. ಯಾರೆಲ್ಲ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ? ಕಿರಿಯ ಪ್ರಾಥಮಿಕ ಶಾಲಾ ವಿಭಾಗ ಸಾಗರದ ಆನಂದಪುರದ ಶೀಲಾ.ಪಿ, ಹೊಸನಗರದ ಬೈಸಗುಂದದ ಮಂಜಪ್ಪ.ಡಿ, ತೀರ್ಥಹಳ್ಳಿಯ ಬಾಳೆಹಳ್ಳಿಯ ಜ್ಯೋತಿ.ಹೆಚ್.ಎಂ, ಭದ್ರಾವತಿಯ ಹೊಳಗಂಗೂರಿನ ಶಾರದಾ.ಎಸ್‌, ಸೊರಬದ ಕಲ್ಕೊಪ್ಪದ ಗಣೇಶ ನಾಯ್ಕ.ಎನ್‌, ಶಿಕಾರಿಪುರದ ಜಕ್ಕನಹಳ್ಳಿಯ … Read more

ಯಡಿಯೂರಪ್ಪ ಲಕ್ಕಿ ಕಾರಿನಲ್ಲಿ ವಿಜಯೇಂದ್ರ ರೌಂಡ್ಸ್‌, ಅಪ್ಪನ ಏಟು, ಅಪಘಾತದ ಬಗ್ಗೆ ಮಾತು, ಏನೆಲ್ಲ ನೆನಪಿಸಿಕೊಂಡರು?

BY-Vijayendra-in-ambassador-car.

ಶಿವಮೊಗ್ಗ: ‘ಅಂಬಾಸಿಡರ್‌ (ambassador) ಕಾರಿನ ವಿಚಾರವಾಗಿ ಯಡಿಯೂರಪ್ಪ ಅವರು ಜಗಳ ಮಾಡಿ ನನಗೆ ಎರಡು ತಟ್ಟಿದ್ದರು’  ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಯಡಿಯೂರಪ್ಪ ಅವರ ಲಕ್ಕಿ ಅಂಬಾಸಿಡರ್‌ ಕಾರಿನ ಕುರಿತು ಮೆಲುಕು ಹಾಕಿದರು. ಶಿವಮೊಗ್ಗದ ತಮ್ಮ ನಿವಾಸದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಬಿ.ವೈ.ವಿಜಯೇಂದ್ರ, ಸಿಕೆಆರ್‌ 45 ನಂಬರ್‌ನ ಅಂಬಾಸಿಡರ್‌ ಕಾರಿನ ಜೊತೆಗೆ ಬಿಜೆಪಿಯ ಅನೇಕ ನಾಯಕರಿಗೆ ಭಾವನಾತ್ಮಕ ಸಂಬಂಧವಿದೆ. ಯಡಿಯೂರಪ್ಪ, ಅನಂತ ಕುಮಾರ್‌ ಸೇರಿ ಹಲವು ಪ್ರಮುಖರು ರಾಜ್ಯಾದ್ಯಂತ ಎಲ್ಲ ಜಿಲ್ಲೆಗೆ ಲಕ್ಷಾಂತರ ಕಿ.ಮೀ ಪ್ರವಾಸ ಕೈಗೊಂಡಿದ್ದಾರೆ. … Read more

ಗಾಂಧಿ ಬಜಾರ್‌ ಕೇಸರಿಮಯ, ಮಹಾದ್ವಾರ ರೆಡಿ, ಈ ಬಾರಿಯ ಕಾನ್ಸೆಪ್ಟ್‌ ಏನು?

gandhi-bazaar-hindu-mahasaba-mahadwara

ಶಿವಮೊಗ್ಗ: ಸೆ.6ರಂದು ಶಿವಮೊಗ್ಗದ ಹಿಂದೂ ಮಹಾಸಭಾ ಗಣಪತಿ (ganpati) ರಾಜಬೀದಿ ಉತ್ಸವ ನಡೆಯಲಿದೆ. ಇದಕ್ಕಾಗಿ ಸಿದ್ಧತೆ ಆರಂಭವಾಗಿದ್ದು, ನಗರ ಕೇಸರಮಯಗೊಂಡಿದೆ. ಅಲ್ಲಲ್ಲಿ ಮಹಾದ್ವಾರಗಳನ್ನು ನಿರ್ಮಿಸಲಾಗಿದೆ. ಗಾಂಧಿ ಬಜಾರ್‌ ಮುಂಭಾಗ ಪ್ರತಿ ವರ್ಷದಂತೆ ಈ ಬಾರಿಯು ವಿಭಿನ್ನ ಮಹಾದ್ವಾರ ಸ್ಥಾಪಿಸಲಾಗಿದೆ. ಎಲ್ಲೆಲ್ಲಿ ಹೇಗಿದೆ ಅಲಂಕಾರ? ಸಮುದ್ರ ಮಂಥನ ಮಹಾದ್ವಾರ ರೆಡಿ ಪ್ರತಿ ವರ್ಷದಂತೆ ಈ ಬಾರಿಯು ವಿಭಿನ್ನವಾದ ಮಹಾದ್ವಾರ ನಿರ್ಮಿಸಲಾಗಿದೆ. ದೇವತೆಗಳು ಮತ್ತು ರಾಕ್ಷಸರ ಮಧ್ಯೆ ಅಮೃತಕ್ಕಾಗಿ ಹಾಲಿನ ಸಮುದ್ರವನ್ನು ಕಡೆಯುವ ಕತೆಯನ್ನು ಈ ಬಾರಿಯ ಮಹಾದ್ವಾರ ಸ್ಥಾಪಿಸಲಾಗಿದೆ. … Read more

ದಿನ ಪಂಚಾಂಗ | 4 ಸೆಪ್ಟೆಂಬರ್ 2025 | ಇವತ್ತು ದ್ವಾದಶಿ, ಯಾವ್ಯಾವ ಸಮಯ ಯಾವಾಗಿದೆ?

Indina-Panchanga-today Panchanga

ಈ ದಿನದ ಪಂಚಾಂಗ (Panchanga Online) ವಾರ : ಗುರುವಾರ, 4 ಸೆಪ್ಟೆಂಬರ್ 2025‌ – ದ್ವಾದಶಿ ಸೂರ್ಯೋದಯ : 6.16 am ಸೂರ್ಯಾಸ್ತ : 6.37 pm ನಕ್ಷತ್ರ : ಉತ್ತರಾಷಾಢ ಶುಭ ಸಮಯ ಬ್ರಹ್ಮ ಮುಹೂರ್ತ ಬೆಳಗ್ಗೆ 4.43 ರಿಂದ 5.30ರವರೆಗೆ ಪ್ರಾಥಃ ಸಂಧ್ಯ ಬೆಳಗ್ಗೆ 5.06 ರಿಂದ 6.16ರವರೆಗೆ ಅಭಿಜಿತ್‌ ಮಧ್ಯಾಹ್ನ 12.02 ರಿಂದ 12.51ರವರೆಗೆ ವಿಜಯ ಮುಹೂರ್ತ ಮಧ್ಯಾಹ್ನ 2.30 ರಿಂದ 3.19ರವರಗೆ ಗೋಧೂಳಿ ಮುಹೂರ್ತ ಸಂಜೆ 6.37 ರಿಂದ 7.00ರವರೆಗೆ … Read more

ಶಿವಮೊಗ್ಗಕ್ಕೆ ಇವತ್ತೂ ಅಲರ್ಟ್‌ ಘೋಷಣೆ, ಮುಂದುವರೆಯುತ್ತಾ ಮಳೆ? ಹೇಗಿರುತ್ತೆ ಜಿಲ್ಲೆಯ ವಾತಾವರಣ?

WEATHER-REPORT-SHIMOGA-

ಹವಾಮಾನ ವರದಿ: ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತೆ ಮಳೆ ಆರಂಭವಾಗಿದೆ. ಮಂಗಳವಾರ ಜಿಲ್ಲೆಯ ಹಲವೆಡೆ ಸಾಧಾರಣದಿಂದ ಜೋರು ಮಳೆಯಾಗಿದೆ. ಇನ್ನೊಂದೆಡೆ ಇವತ್ತೂ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಅಲ್ಲದೆ ಇಂದೂ ಯಲ್ಲೋ ಅಲರ್ಟ್‌ ಪ್ರಕಟಿಸಲಾಗಿದೆ. (weather today) ಶಿವಮೊಗ್ಗ ಜಿಲ್ಲೆಯಲ್ಲಿ ಇವತ್ತು ಸಾಧಾರಣದಿಂದ ಜೋರು ಮಳೆಯಾಗಲಿದೆ. ಅಲ್ಲದೆ ಮೇಲ್ಮೈ ಗಾಳಿ ಜೋರಿರಲಿದೆ ಎಂದು ಅಲರ್ಟ್‌ನಲ್ಲಿ ಘೋಷಿಸಲಾಗಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಇವತ್ತು ಯಲ್ಲೋ ಅಲರ್ಟ್‌ ಪ್ರಕಟಿಸಲಾಗಿದೆ. ಎಲ್ಲೆಲ್ಲಿ ಎಷ್ಟಿದೆ ತಾಪಮಾನ? ಶಿವಮೊಗ್ಗ, ಭದ್ರಾವತಿ ತಾಲೂಕುಗಳಲ್ಲಿ ಇವತ್ತು ಗರಿಷ್ಠ 27 … Read more

ಆಧಾರ್‌ ಕಾರ್ಡ್‌ ಕುರಿತು ಮಹತ್ವದ ಅಪ್‌ಡೇಟ್‌, ಈಗಲೆ ದಾಖಲೆ ಒದಗಿಸುವಂತೆ ಸಾರ್ವಜನಿಕರಿಗೆ ಸೂಚನೆ

aadhar-card.webp

ಶಿವಮೊಗ್ಗ: ದಶಕಗಳ ಹಿಂದೆ ದಾಖಲೆ ಸಲ್ಲಿಸಿ ಆಧಾರ್‌ (aadhaar card) ನೋಂದಣಿ ಮಾಡಿಸಿಕೊಂಡವರು ಪುನಃ ತಮ್ಮ ವಿವರ ಸಲ್ಲಿಸಿ ಅಪ್‌ಡೇಟ್‌ ಮಾಡಿಸಿಕೊಳ್ಳಬೇಕಿದೆ. ಈ ಕುರಿತು ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಪರ ಜಿಲ್ಲಾಧಿಕಾರಿ ಸಿದ್ದಲಿಂಗರೆಡ್ಡಿ ಸಭೆ ನಡೆಸಿ, ಸಾರ್ವಜನಿಕರಿಗೆ ಮಾಹಿತಿ ನೀಡಿದರು. ಜಿಲ್ಲಾ ಮಟ್ಟದ ಆಧಾರ್ ನೋಂದಣಿ ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಪರ ಜಿಲ್ಲಾಧಿಕಾರಿಯ ಸೂಚನೆಗಳೇನು? ಪ್ರಸ್ತುತ ವಾಸಸ್ಥಳದ ವಿವರಗಳನ್ನು ತಮ್ಮ ಸಮೀಪದ ಅಂಚೆ ಕಚೇರಿ, ರಾಷ್ಟ್ರೀಕೃತ ಬ್ಯಾಂಕುಗಳು ಅಥವಾ ಆಧಾರ್ ಸೇವಾ ಕೇಂದ್ರಗಳಲ್ಲಿ … Read more

ಸಿಟಿ ಸೆಂಟರ್‌ ಪಕ್ಕದ ಅಂಡರ್‌ ಪಾಸ್‌ಗೆ ಎಂಎಲ್‌ಎ ಭೇಟಿ, ತ್ವರಿತ ಕ್ರಮಕ್ಕೆ ಸೂಚನೆ

MLA-Channabasappa-visit-Underpass-near-city-centre

ಶಿವಮೊಗ್ಗ: ನಗರದ (City) ಸಿಟಿ ಸೆಂಟರ್‌ ಪಕ್ಕದಲ್ಲಿರುವ ಅಂಡರ್‌ ಪಾಸ್‌ನಲ್ಲಿ ಮಳೆ ನೀರು ತುಂಬಿ ರಸ್ತೆ ಮೇಲೆ ಹರಿದು ವಾಹನ ಸವಾರರಿಗೆ ಸಮಸ್ಯೆಯಾಗಿದೆ. ವಿಷಯ ತಿಳಿಯುತ್ತಿದ್ದಂತೆ ಶಾಸಕ ಎಸ್‌.ಎನ್.ಚನ್ನಸಬಪ್ಪ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ವಿಷಯ ತಿಳಿಸಿ ತ್ವರಿತ ಕ್ರಮ ಕೈಗೊಳ್ಳಬೇಕು. ಅಲ್ಲದೆ ಮೋಟರ್‌ ಬಳಸಿ ನೀರು ಹೊರ ಹಾಕಿ ಎಂದು ಸೂಚಿಸಿದರು. ಸಾರ್ವಜನಿಕರಿಗೆ ತೊಂದರೆ ಉಂಟಾಗದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಮುಂದೆ ಇಂತಹ ಸಮಸ್ಯೆ ಮರುಕಳಿಸದಂತೆ ಶಾಶ್ವತ ಪರಿಹಾರ ಕ್ರಮ … Read more

ಬೆಳ್ಳಂಬೆಳಗ್ಗೆ ಮನೆಯಿಂದ ಹೊರ ಬಂದ ಯುವಕನಿಗೆ ಕಾದಿತ್ತು ಶಾಕ್

bike theft reference image

ಶಿವಮೊಗ್ಗ: ಮನೆ ಮುಂದೆ ನಿಲ್ಲಿಸಿದ್ದ ಪಲ್ಸರ್‌ ಎನ್‌ಎಸ್‌ 200 ಬೈಕ್‌ (Bike) ಕಳ್ಳತನವಾಗಿದೆ. ಶಿವಮೊಗ್ಗದ ಬಿ.ಬಿ.ರಸ್ತೆಯ ಶರತ್‌ ಎಂಬುವವರಿಗೆ ಸೇರಿದ ಬೈಕ್‌ ನಾಪತ್ತೆಯಾಗಿದೆ. ಆ.10ರ ನಡುರಾತ್ರಿ ಶರತ್‌ ಮನೆಗೆ ಬಂದು ಬೈಕ್‌ ನಿಲ್ಲಿಸಿದ್ದರು. ಬೆಳಗ್ಗೆ 6 ಗಂಟೆ ಹೊತ್ತಿಗೆ ಮನೆಯಿಂದ ಹೊರ ಬಂದಾ ಬೈಕ್‌ ನಾಪತ್ತೆಯಾಗಿತ್ತು ಎಂದು ಆರೋಪಿಸಿದ್ದಾರೆ. ಘಟನೆ ಸಂಬಂಧ ದೊಡ್ಡಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  ‌ ಇದನ್ನೂ ಓದಿ » ತಾಳಗುಪ್ಪ – ಮೈಸೂರು ಕುವೆಂಪು ಎಕ್ಸ್‌ಪ್ರೆಸ್‌ ವೇಳಾಪಟ್ಟಿ ಬದಲು, ಹೊಸ ಟೈಮ್‌ಟೇಬಲ್‌ ಏನು? … Read more