11 ದಿನ, 11.79 ಲಕ್ಷ ರೂ. ಹಣ, ಶಿವಮೊಗ್ಗದಲ್ಲಿ ಠಾಣೆ ಮೆಟ್ಟಿಲೇರಿತು ಪ್ರಕರಣ, ಏನಿದು ಕೇಸ್‌?

SMS-Fraud-Shimoga-CEN-Police-Station.

SHIMOGA, 2 SEPTEMBER 2024 : ಹೊಟೇಲ್‌ ರಿವ್ಯು (Review) ಬರೆದು ಹಣ ಸಂಪಾದಿಸಬಹುದು ಎಂದು ನಂಬಿಸಿ ಯುವಕನೊಬ್ಬನಿಗೆ 11.79 ಲಕ್ಷ ರೂ ಹಣ ವಂಚಿಸಲಾಗಿದೆ. ಶಿವಮೊಗ್ಗದ ಯುವಕನಿಗೆ (ಹೆಸರು ಗೌಪ್ಯ) ಟೆಲಿಗ್ರಾಂ ಆಪ್‌ನಲ್ಲಿ ರಿವ್ಯು ಬರೆದು ಹಣ ಸಂಪಾದಿಸುವ ಕುರಿತು ಲಿಂಕ್‌ ಬಂದಿತ್ತು. ಇದನ್ನು ನಂಬಿ ರಿವ್ಯು ಬರೆಯುತ್ತಿದ್ದಂತೆ ಯುವಕನ ಬ್ಯಾಂಕ್‌ ಖಾತೆಗೆ 720 ರೂ. ನಗದು ಬಂದಿತ್ತು. ಆಮೇಲೆ 10 ಸಾವಿರ ರೂ. ಹಣ ಡೆಪಾಸಿಟ್‌ ಮಾಡಿ ಹೊಟೇಲ್‌ ರಿವ್ಯು ಬರೆದರೆ 7230 ರೂ. … Read more

ಶಿವಮೊಗ್ಗ ಜೈಲಿನಲ್ಲಿ ಬೀಡಿ, ಸಿಗರೇಟಿಗಾಗಿ ಕೈದಿಗಳ ಪ್ರತಿಭಟನೆ

Shimoga-Central-Jail-Building

SHIMOGA, 2 SEPTEMBER 2024 : ಬೀಡಿ, ಸಿಗರೇಟ್‌ ನೀಡುವಂತೆ ಆಗ್ರಹಿಸಿ ಸೋಗಾನೆಯಲ್ಲಿರುವ ಕೇಂದ್ರ ಕಾರಾಗೃಹದಲ್ಲಿ ಕೈದಿಗಳು (Jail Inmates) ಪ್ರತಿಭಟನೆ ನಡೆಸಿದರು. ಇಂದು ಬೆಳಗ್ಗೆ ಜೈಲಿನಲ್ಲಿ ಉಪಹಾರ ಸೇವಿಸದೆ ಕೈದಿಗಳು ಪ್ರತಿಭಟಿಸಿದರು. ಜೈಲು ಮ್ಯಾನುಯಲ್‌ನಲ್ಲಿ ನಿಷೇಧಿತ ವಸ್ತುಗಳು ಎಂಬ ಕಾರಣಕ್ಕೆ ಬೀಡಿ, ಸಿಗರೇಟ್‌ ಕೊಂಡೊಯ್ಯಲು ಕೈಗರಿಕ ಭದ್ರತಾ ಪಡೆ ಮತ್ತು ಜೈಲು ಸಿಬ್ಬಂದಿ ನಿರ್ಬಂಧ ವಿಧಿಸಿದ್ದಾರೆ. ಹಾಗಾಗಿ ಕೈದಿಗಳಿಗೆ ಬೀಡಿ, ಸಿಗರೇಟ್‌ ದೊರೆಯುತ್ತಿಲ್ಲ. ಬೀಡಿ, ಸಿಗರೇಟು ಕೊಡಬೇಕು ಎಂದು ಆಗ್ರಹಿಸಿ ಕೈದಿಗಳು ಇಂದು ಬೆಳಗ್ಗೆ ಉಪಹಾರ … Read more

ವಾಟ್ಸಪ್‌ ಸ್ಟೇಟಸ್‌ ಹಾಕಿ ನಾಪತ್ತೆಯಾಗಿದ್ದ ಯುವಕ ಶವವಾಗಿ ಪತ್ತೆ

010924-jayadeep-missing-in-thirthahalli-tunga-river.

THIRTHAHALLI, 2 SEPTEMBER 2024 : ವಾಟ್ಸಪ್‌ ಸ್ಟೇಟಸ್‌ನಲ್ಲಿ (Status) ಡೆತ್‌ ನೋಟ್‌ ಅಪ್‌ಲೋಡ್‌ ಮಾಡಿ ನಾಪತ್ತೆಯಾಗಿದ್ದ ಯುವಕ ಶವವಾಗಿ ಪತ್ತೆಯಾಗಿದ್ದಾನೆ. ತುಂಗಾ ನದಿಯ ಸ್ಮಶಾನಕಟ್ಟೆ ಬಳಿ ತುಂಗಾ ನದಿಯಲ್ಲಿ ಮೃತದೇಹ ಪತ್ತೆಯಾಗಿದೆ. ಇಂದಾವರ ಗ್ರಾಮದ ಜಯದೀಪ್‌ (24) ಶನಿವಾರ ನಾಪತ್ತೆಯಾಗಿದ್ದ. ಇದಕ್ಕೂ ಮೊದಲು ಮೂರು ಪುಟದ ಪತ್ರವನ್ನು ವಾಟ್ಸಪ್‌ ಸ್ಟೇಟಸ್‌ಗೆ ಅಪ್‌ಲೋಡ್‌ ಮಾಡಿದ್ದ. ಆತನ ಬೈಕ್‌ ತುಂಗಾ ನದಿ ದಂಡೆ ಮೇಲೆ ಪತ್ತೆಯಾಗಿತ್ತು. ಈ ಹಿನ್ನೆಲೆ ಅಗ್ನಿಶಾಮಕ ಸಿಬ್ಬಂದಿ ಶೋಧ ಕಾರ್ಯ ನಡೆಸಿದ್ದರು. ಆದರೆ ಜಯದೀಪ್‌ … Read more

ದಿನ ಭವಿಷ್ಯ | 1 ಸೆಪ್ಟೆಂಬರ್‌ 2024 | ಇವತ್ತು ಯಾವ್ಯಾವ ರಾಶಿಗೆ ಹೇಗಿದೆ?

DINA-BHAVISHYA

DINA BHAVISHYA, 1 SEPTEMBER 2024 ಮೇಷ : ವಿದ್ಯಾರ್ಥಿಗಳಿಗೆ ಒಳ್ಳೆಯ ಯೋಗ. ಬಂಧುಗಳಿಂದ ತೊಂದರೆ. ಆಸ್ತಿ ಖರೀದಿಸುವುದಕ್ಕೆ ಉತ್ತಮ ದಿನವಲ್ಲ. ಆರೋಗ್ಯ ನೋಡಿಕೊಳ್ಳಿ. ಮನಸ್ಸಿಗೆ ಬಂದಂತೆ ಖರ್ಚು. ಶುಭ ಸಂಖ್ಯೆ: 1-5-8-9, ಬಣ್ಣ : ಕೆಂಪು-ಬಿಳಿ-ಹಳದಿ ವೃಷಭ : ಕುಟುಂಬದ ಸಹಕಾರ ಬುದ್ದಿ ಶಕ್ತಿಗೆ ತಕ್ಕ ಲಾಭವಿಲ್ಲ. ಐದರ ಕೇತು ಬಾಧಿಸುತ್ತಾನೆ. ಶರೀರಾರೋಗ್ಯ ಕಡಿಮೆ. ಗಣೇಶನಿಗೆ ಅಭಿಷೇಕ ಸೇವೆ ಮಾಡಿಸಿ. ಶುಭ ಸಂಖ್ಯೆ : 2-7-10-11, ಬಣ್ಣ : ಕೇಸರಿ- ಬಿಳಿ-ಕೆಂಪು-ಹಸಿರು ಮಿಥುನ : ಈ … Read more

BREAKING NEWS – ಶಿವಮೊಗ್ಗದಲ್ಲಿ ಹುಕ್ಕಾ ಬಾರ್‌ ಮೇಲೆ ದಾಳಿ

raid-at-gopala

SHIMOGA, 31 AUGUST 2024 : ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಶಿವಮೊಗ್ಗ ನಗರದಲ್ಲಿರುವ ಹುಕ್ಕಾ ಬಾರ್‌ ಒಂದರ ಮೇಲೆ ಪೊಲೀಸರು ದಾಳಿ (raid) ನಡೆಸಿದ್ದಾರೆ. ಪೊಲೀಸ್‌ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಅಧಿಕಾರಿಗಳು ಇವತ್ತು ದಾಳಿ ನಡೆಸಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಗೋಪಾಳದಲ್ಲಿ ದಾಳಿ ನಡೆಸಿ ಹುಕ್ಕಾ ಬಾರ್‌ ತೆರವುಗೊಳಿಸಲಾಗಿದೆ. ಸಬ್‌ ಇನ್ಸ್‌ಪೆಕ್ಟರ್‌ ರಘುನಾಥ್‌, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರ ಹೇಮಂತ್‌ ರಾಜ್‌ ಅರಸ್‌, ಮಹಾನಗರ ಪಾಲಿಕೆ ಅಧಿಕಾರಿಗಳು, … Read more

ಶಿವಮೊಗ್ಗ ಜಿಲ್ಲೆ ಬಂದ್‌ನ ಎಚ್ಚರಿಕೆ ನೀಡಿದ ವೀರಶೈವ ಲಿಂಗಾಯತ ಮಹಾಸಭಾ, ಕಾರಣವೇನು?

Veerashaiva-Lingayatha-mahasabha-protest-in-Shimoga

SHIMOGA, 31 AUGUST 2024 : ಶರಾವತಿ ನದಿ ನೀರುನ್ನು ಬೆಂಗಳೂರಿಗೆ ಕೊಂಡೊಯ್ಯುವ ಅವೈಜ್ಞಾನಿಕ ಯೋಜನೆಯನ್ನು ತಕ್ಷಣ ಕೈ ಬಿಡಬೇಕು ಎಂದು ಆಗ್ರಹಿಸಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಆಗ್ರಹಿಸಿದೆ. ಈ ಸಂಬಂಧ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ ಮಹಾಸಭಾ ಜಿಲ್ಲಾ ಘಟಕ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿತು. ಮಹಾಸಭಾ ಮನವಿಯಲ್ಲಿ 3 ಪ್ರಮುಖಾಂಶ ಇದನ್ನೂ ಓದಿ ⇒ ಶಿವಮೊಗ್ಗದಲ್ಲಿ ಸಂಸ್ಕೃತೋತ್ಸವ, ವಿದ್ಯಾರ್ಥಿಗಳಿಂದ ಸಂಸ್ಕೃತದಲ್ಲಿ ವಿಜ್ಞಾನ ಕುರಿತು ಚರ್ಚೆ

ಸಚಿವ ಮಧು ಬಂಗಾರಪ್ಪ ಎರಡು ದಿನ ಶಿವಮೊಗ್ಗ ಜಿಲ್ಲಾ ಪ್ರವಾಸ, ಜನತಾ ದರ್ಶನ

Minister-Madhu-Bangarappa

SHIMOGA, 31 AUGUST 2024 : ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ಎರಡು ದಿನ ಜಿಲ್ಲಾ ಪ್ರವಾಸ (Tour) ಕೈಗೊಂಡಿದ್ದಾರೆ. ಬಗರ್‌ ಹುಕುಂ ಸಮಿತಿ ಸಭೆ, ಜನತಾ ದರ್ಶನ ಕಾರ್ಯಕ್ರಮಗಳನ್ನು ನಡೆಸಲಿದ್ದಾರೆ. ಸೆ.1ರಂದು ಬೆಳಗ್ಗೆ 5 ಗಂಟೆಗೆ ಬೆಂಗಳೂರಿನಿಂದ ಹೊರಡಲಿದ್ದಾರೆ. ಬೆಳಗ್ಗೆ 10 ಗಂಟೆಗೆ ಆನವಟ್ಟಿಯ ಶರಣ ನೂಲಿ ಚಂದ್ರಯ್ಯ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ರಾತ್ರಿ ಶಿವಮೊಗ್ಗದಲ್ಲಿ ವಾಸ್ತವ್ಯ ಮಾಡಲಿದ್ದಾರೆ ಎಂದು ಸಚಿವರ ಪ್ರವಾಸ ಪಟ್ಟಿಯಲ್ಲಿ ತಿಳಿಸಲಾಗಿದೆ. ಸೆ.2ರಂದು ಬೆಳಗ್ಗೆ 10 ಗಂಟೆಗೆ ಸೊರಬ … Read more

ಶಿವಮೊಗ್ಗ ಬಸ್‌ ನಿಲ್ದಾಣದಲ್ಲಿ ಮಲಗಿದ್ದ ವ್ಯಕ್ತಿ ಸಾವು – 5 ಫಟಾಫಟ್‌ ಅಪರಾಧ ಸುದ್ದಿ

Crime-News-General-Image

FATAFAT NEWS, 31 AUGUST 2024 ಇದನ್ನೂ ಓದಿ ⇒ ಶಿವಮೊಗ್ಗ ಜೈಲಿನಲ್ಲಿ ಕೈದಿಗಳ ಬ್ಯಾರೆಕ್‌ನಲ್ಲಿ ಮೊಬೈಲ್‌ ಚಾರ್ಜರ್‌, ಚಿಲುಮೆ, ಬೀಡಿ, ಸಿಗರೇಟ್‌..!

ಶಿವಮೊಗ್ಗದಲ್ಲಿ ಸಂಸ್ಕೃತೋತ್ಸವ, ವಿದ್ಯಾರ್ಥಿಗಳಿಂದ ಸಂಸ್ಕೃತದಲ್ಲಿ ವಿಜ್ಞಾನ ಕುರಿತು ಚರ್ಚೆ

amskurtotsava-in-Shimoga-pace-college.

SHIMOGA, 31 AUGUST 2024 : ನಗರದ ಪೇಸ್‌ ಪಿಯು ಕಾಲೇಜಿನಲ್ಲಿ ಸಂಸ್ಕೃತದಲ್ಲಿ ವಿಜ್ಞಾನ  (Sanskrit) ವಿಷಯದ ಸಂಸ್ಕೃತೋತ್ಸವ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿಗಳು ಸಂಸ್ಕೃತದಲ್ಲಿ ಅಡಕವಾಗಿವ ವೈಜ್ಞಾನಿಕ ವಿಷಯಗಳನ್ನು ಪ್ರಸ್ತಾಪಿಸಿದರು. ವೇದಗಣಿತ, ಗಣಿತಶಾಸ್ತ್ರ, ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ ಹಾಗೂ ಆಯುರ್ವೇದ ವಿಜ್ಞಾನದ ಸಂಗತಿಗಳನ್ನು ದ್ವಿತೀಯ ಪಿಯುಸಿಯ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದರು. ಅಲ್ಲದೆ ಸಂಸ್ಕೃತ ಗ್ರಂಥಗಳಲ್ಲಿ ಉಲ್ಲೇಖಿತವಾದ ಅಂಶಗಳನ್ನು ತಿಳಿಸಿದರು. ದ್ವಿತೀಯ ಪಿ.ಯು ವಿದ್ಯಾರ್ಥಿಗಳಾದ ನಂದನ್ ಕೌಡಿಕಿ, ನಚಿಕೇತ್, ಸನಕ ಕೆ. ಎಂ, ಅಭಿನವ್ ಶರ್ಮಾ, ಚನ್ನರಾಜ್, ಶ್ರಿಯಾ, ಅಮೃತ … Read more

ಶಿವಮೊಗ್ಗದ ವಾಹನ ಸವಾರರಿಗೆ 10 ದಿನದ ಗಡುವು, ತಪ್ಪಿದರೆ ದಂಡ ಫಿಕ್ಸ್‌, ಎಸ್‌ಪಿ ಹೇಳಿದ್ದೇನು?

Shimoga-SP-Mithun-Kumar-IPS

SHIMOGA, 31 AUGUST 2024 : ವಾಹನಗಳ ಇನ್ಷುರೆನ್ಸ್‌ (Insurance) ವಾಯಿದೆ ಮುಗಿದ್ದರೆ ತಕ್ಷಣ ರಿನಿವಲ್‌ ಮಾಡಿಸಿಕೊಳ್ಳಿ. ಸೆ.10ರ ನಂತರ ಇನ್ಷುರೆನ್ಸ್‌ ತಪಾಸಣೆ ಕಾರ್ಯಾಚರಣೆ ನಡೆಸಲಾಗುತ್ತದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್‌ ಕುಮಾರ್‌ ತಿಳಿಸಿದ್ದಾರೆ. ಈ ಸಂಬಂಧ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಮಿಥುನ್‌ ಕುಮಾರ್‌, ಕಳೆದ ಎರಡ್ಮೂರು ವರ್ಷದಲ್ಲಿ ಅಪಘಾತದಲ್ಲಿ ಮೃತರಾದ ಹಲವರ ಕುಟುಂಬಕ್ಕೆ ಪರಿಹಾರ ಸಿಕ್ಕಿಲ್ಲ. ವಾಹನಗಳ ಇನ್ಷುರೆನ್ಸ್‌ ರಿನಿವಲ್‌ ಮಾಡಿಸದೆ ಇರುವುದು ಇದಕ್ಕೆ ಕಾರಣ. ಆದ್ದರಿಂದ ವಾಹನ ಸವಾರರು ಇನ್ಷುರೆನ್ಸ್‌ ರಿನಿವಲ್‌ ಮಾಡಿಸಬೇಕು. … Read more