ಜನತಾ ಕರ್ಫ್ಯೂ, ಶಿವಮೊಗ್ಗದಲ್ಲಿ ಈಗ ಹೇಗಿದೆ ಪರಿಸ್ಥಿತಿ? ಇವತ್ತು ಏನಿರುತ್ತೆ? ಏನಿರಲ್ಲ?

220320 Shimoga City in Janata Curfew 1

ಶಿವಮೊಗ್ಗ ಲೈವ್.ಕಾಂ | SHIMOGA | 21 ಮಾರ್ಚ್ 2020 ಕರೋನ ಸೋಂಕು ಹರಡದಂತೆ ತಡೆಗಟ್ಟಲು ಪ್ರಧಾನಿ ನರೇಂದ್ರ ಮೋದಿ ಜನತಾ ಕರ್ಫೋ ಮಾಡುವಂತೆ ಮನವಿ ಮಾಡಿದ್ದರು. ಶಿವಮೊಗ್ಗ ನಗರದಲ್ಲಿಬೆಳಗ್ಗೆಯಿಂದಲೇ ಜನತಾ ಕರ್ಫ್ಯೂಗೆ ಬೆಂಬಲ ವ್ಯಕ್ತವಾಗಿದೆ. ಈ ಹೊತ್ತಿಗೆ ಶಿವಮೊಗ್ಗದಲ್ಲಿ ಹೇಗಿದೆ ಪರಿಸ್ಥಿತಿ? ಬೆಂಗಳೂರು ಸೇರಿದಂತೆ ವಿವಿಧೆಡೆಯಿಂದ ಶಿವಮೊಗ್ಗಕ್ಕೆ ಆಗಮಿಸಿದ್ದ ಪ್ರಯಾಣಿಕರಿಗೆ ‘ಜನತಾ ಕರ್ಫ್ಯೂ’ನ ಬಿಸಿ ತಟ್ಟಿದೆ. ಕೆಎಸ್ಆರ್’ಟಿಸಿ ಬಸ್ ನಿಲ್ದಾಣಕ್ಕೆ ಆಗಮಿಸಿದ ಪ್ರಯಾಣಿಕರು ತಮ್ಮೂರಿಗೆ ತೆರಳಲು ಬಸ್ ಸಿಗದೆ ಪರದಾಡಿದರು. ಖಾಸಗಿ ಬಸ್’ಗಳು ಸೇವೆ ಸ್ಥಗಿತಗೊಳಿಸಿದ್ದರಿಂದ … Read more

ಸಿಗಂದೂರು ದೇವಸ್ಥಾನ ಬಂದ್, ಚರ್ಚ್’ನಲ್ಲಿ ಪ್ರಾರ್ಥನೆಗೆ ಭಕ್ತರ ನಿಷೇಧ, ಶಿವಮೊಗ್ಗದ ಯಾವೆಲ್ಲ ಧರ್ಮಿಕ ಕ್ಷೇತ್ರ ಬಂದ್ ಆಗಿವೆ?

210320 Sigandur Temple Closed due to Corona 1

ಶಿವಮೊಗ್ಗ ಲೈವ್.ಕಾಂ | SHIMOGA | 21 ಮಾರ್ಚ್ 2020 ಕರೋನ ಮುನ್ನೆಚ್ಚರಿಕೆ ಹಿನ್ನೆಲೆ ಶಿವಮೊಗ್ಗದ ಹಲವು ಪ್ರಾರ್ಥನಾ ಮಂದಿರಗಳು ಬಂದ್ ಆಗಿವೆ. ಸಾಮೂಹಿಕ ಪ್ರಾರ್ಥನೆಯನ್ನು ನಿಷೇಧಿಸಲಾಗಿದೆ. ಯಾವ್ಯಾವ ದೇಗುಲ ಬಂದ್? ಶಿವಮೊಗ್ಗ ಜಿಲ್ಲೆಯ ಹಲವು ದೇಗುಲಗಳು ಬಂದ್ ಆಗುತ್ತಿವೆ. ಪ್ರಮುಖವಾಗಿ ಸಿಗಂದೂರು ಶ್ರೀ ಚೌಡೇಶ್ವರಿ ದೇವಿ ಸನ್ನಿಧಿ ಬಂದ್ ಮಾಡಲಾಗಿದೆ. ಹೆಚ್ಚು ಭಕ್ತರು ಮತ್ತು ಪ್ರವಾಸಿಗರು ಬರುವ ಧಾರ್ಮಿಕ ಕ್ಷೇತ್ರಗಳಲ್ಲಿ ಸಿಗಂದೂರು ಚೌಡೇಶ್ವರಿ ಸನ್ನಿಧಿಯು ಒಂದು. ಮಾರ್ಚ್ 31ರವರೆಗೆ ಚೌಡೇಶ್ವರಿ ಸನ್ನಿಧಿ ಬಂದ್ ಆಗಲಿದೆ. ಶಿಕಾರಿಪುರ … Read more

ಕರೋನ ಪರಿಣಾಮ, ಶಿವಮೊಗ್ಗದ ಆರು ರೈಲುಗಳ ಸಂಚಾರ ರದ್ದು, ಯಾವ್ಯಾವ ರೈಲು ಯಾವಾಗ ರದ್ದಾಗಿದೆ?

Train engine and boggies

ಶಿವಮೊಗ್ಗ ಲೈವ್.ಕಾಂ | SHIMOGA | 21 ಮಾರ್ಚ್ 2020 ಕರೋನ ಹಿನ್ನೆಲೆ ಶಿವಮೊಗ್ಗಕ್ಕೆ ಸಂಪರ್ಕ ಕಲ್ಪಿಸುವ ಆರು ರೈಲುಗಳ ಸಂಚಾರ ರದ್ದುಪಡಿಸಲಾಗಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆಲ್ಲಿ ತಿಳಿಸಿದೆ. ಮುಂಜಾಗ್ರತಾ ಕ್ರಮವಾಗಿ ರೈಲು ಸಂಚಾರ ರದ್ದುಗೊಳಿಸಲಾಗಿದೆ. ಯಾವ್ಯಾವ ರೈಲು ಸಂಚಾರ ರದ್ದಾಗಿದೆ? ಶಿವಮೊಗ್ಗ ಟೌನ್ – ಬೆಂಗಳೂರು ಪ್ಯಾಸೆಂಜರ್ ರೈಲು (56228) ಮತ್ತು ಬೆಂಗಳೂರು – ಶಿವಮೊಗ್ಗ ಟೌನ್ (56227) ರೈಲು ಸಂಚಾರವನ್ನು ಮಾರ್ಚ್ 21 ರಿಂದ ಮಾರ್ಚ್ 31ರವರೆಗೆ ರದ್ದುಗೊಳಿಸಲಾಗಿದೆ. ವಾರಕ್ಕೆರಡು ಬಾರಿ ಶಿವಮೊಗ್ಗದಿಂದ … Read more

ಶಿವಮೊಗ್ಗದ ಬಸ್ ನಿಲ್ದಾಣ, ರೈಲ್ವೆ ಸ್ಟೇಷನ್’ನಲ್ಲಿ ಫುಲ್ ಅಲರ್ಟ್, ವೈದ್ಯರ ತಂಡ ನಿಯೋಜನೆ

200320 Corona Test In Shimoga KSRTC Bus Stand 1

ಶಿವಮೊಗ್ಗ ಲೈವ್.ಕಾಂ | SHIMOGA | 20 ಮಾರ್ಚ್ 2020 ಕರೋನ ವೈರಸ್ ಶಿವಮೊಗ್ಗದಲ್ಲಿ ಹರಡದಂತೆ ತಡೆಯಲು ಜಿಲ್ಲಾಡಳಿತ ಕಠಿಣ ಕ್ರಮ ಕೈಗೊಂಡಿದೆ. ಹೊರಗಿನಿಂದ ಬರುವ ಪ್ರತಿಯೊಬ್ಬರನ್ನು ತಪಾಸಣೆ ನಡೆಸಲಾಗುತ್ತಿದೆ. ಶಿವಮೊಗ್ಗದ ರೈಲ್ವೆ ನಿಲ್ದಾಣಗಳು, ಬಸ್ ನಿಲ್ದಾಣಗಳಲ್ಲಿ ಬರುವ ಪ್ರತಿಯೊಬ್ಬರನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ. ಕರೋನ ಭೀತಿ ಹಿನ್ನೆಲೆ ತಪಾಸಣೆ ಬಳಿಕವೇ ಜನರನ್ನು ಶಿವಮೊಗ್ಗ ನಗರದ ಒಳ ಬಿಡಲಾಗುತ್ತಿದೆ. ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ವೈದ್ಯಕೀಯ ಸಿಬ್ಬಂದಿಗಳ ತಂಡವನ್ನು ನಿಯೋಜಿಸಲಾಗಿದೆ. ಈ ತಂಡ, ರೈಲು ಮೂಲಕ ಶಿವಮೊಗ್ಗಕ್ಕೆಬರುತ್ತಿರುವ ಎಲ್ಲ ಪ್ರಯಾಣಿಕರ … Read more

ಶಿವಮೊಗ್ಗದ ಫುಡ್ ಕೋರ್ಟ್’ಗಳು ಬಂದ್, ಸಭೆ, ಸಮಾರಂಭ ನಿಷೇಧ, ಕರೋನ ಹರಡದಂತೆ ಪಾಲಿಕೆ ಕೈಗೊಂಡ ಕ್ರಮಗಳೇನು?

BH Road Shivappanayaka Statue 1

ಶಿವಮೊಗ್ಗ ಲೈವ್.ಕಾಂ | SHIMOGA | 20 ಮಾರ್ಚ್ 2020 ಜಗತ್ತನ್ನು ತಲ್ಲಣಗೊಳಿಸಿರುವ ಕರೋನ ಸೋಂಕು ಹರಡದಂತೆ ಶಿವಮೊಗ್ಗ ಮಹಾನಗರ ಪಾಲಿಕೆ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದೆ. ಈ ಸಂಬಂಧ ಸುದ್ದಿಗೋಷ್ಠಿ ನಡೆಸಿದ ಮಹಾನಗರ ಪಾಲಿಕೆ ಮೇಯರ್ ಸುವರ್ಣ ಶಂಕರ್, ಶಾಪಿಂಗ್ ಕಾಂಪ್ಲೆಕ್ಸ್, ಬೀದಿ ಬದಿ ವ್ಯಾಪಾರ, ಫುಡ್ ಕೋರ್ಟ್’ಗಳನ್ನು ಬಂದ್ ಮಾಡಲಾಗುತ್ತಿದೆ ಎಂದರು ತಿಳಿಸಿದರು. ಪ್ರಧಾನಿ ಸೂಚಿಸಿದಂತೆ ನಡೆಯೋಣ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಜನತಾ ಕರ್ಫ್ಯೂ ಎಂದು ಸೂಚಿಸಿದ್ದಾರೆ. ಅದರಂತೆ ಆ ದಿನ ಜನರು … Read more

ಏರ್’ಗನ್ ತೋರಿಸಿ ಶಿವಮೊಗ್ಗ ಪೊಲೀಸರಿಗೆ ಅವಾಜ್ ಹಾಕಿದ್ದ ವಿಡಿಯೋ ವೈರಲ್, ಬೆದರಿಕೆ ಒಡ್ಡಿದವರ ಸ್ಥಿತಿ ಏನಾಗಿದೆ ಗೊತ್ತಾ?

prison hand cuff image

ಶಿವಮೊಗ್ಗ ಲೈವ್.ಕಾಂ | SHIMOGA | 20 ಮಾರ್ಚ್ 2020 ಹಾಡು ಹಾಕಿಕೊಂಡು, ಶಿವಮೊಗ್ಗ ಪೊಲೀಸರಿಗೆ ಬೆದರಿಕೆ ಹಾಕಿ, ವಿಡಿಯೊ ರೆಕಾರ್ಡ್ ಮಾಡಿ, ಅದನ್ನು ವೈರಲ್ ಮಾಡಿದ್ದ ಮೂವರು ಈಗ ಜೈಲು ಪಾಲಾಗಿದ್ದಾರೆ. ಶಿವಮೊಗ್ಗದ ಸೂಳೇಬೈಲ್’ನ ಶಾರು ಅಲಿಯಾಸ್ ಶೇಖ್ ಅಹಮದ್ (25), ಮಹಮದ್ ನೂರುಲ್ಲಾ ಅಲಿಯಾಸ್ ಕೋಳಿ (20), ರಾಗಿಗುಡ್ಡದ ಇಮ್ರಾನ್ ಖಾನ್ ಅಲಿಯಾಸ್ ಇಮ್ರಾನ್ (32) ಬಂಧಿತರು. ಇವರಿಂದ ಮಾರಕಾಸ್ತ್ರ, ಪಿಸ್ತೂಲು ಮಾದರಿಯ ಏರ್ ಗನ್ ವಶಕ್ಕೆ ಪಡೆಯಲಾಗಿದೆ. ಪೊಲೀಸರಿಗೆ ಆವಾಜ್ ಹಾಕಿದ್ದ ವಿಡಿಯೋ … Read more

ಶಿವಮೊಗ್ಗ ಸಿಟಿಯ ಹಲವು ಕಡೆ ಇನ್ಮುಂದೆ ವಾಹನ ನೋ ಪಾರ್ಕಿಂಗ್, ಕೆಲವು ಕಡೆ ಒನ್ ವೇ, ಆದೇಶ ಉಲ್ಲಂಘಿಸಿದರೆ ಬೀಳುತ್ತೆ ದಂಡ

Nehru Road Vehicles 1

ಶಿವಮೊಗ್ಗ ಲೈವ್.ಕಾಂ | SHIMOGA | 16 ಮಾರ್ಚ್ 2020 ಶಿವಮೊಗ್ಗ ನಗರದಲ್ಲಿ ಸುಗಮ ಸಂಚಾರ ಹಾಗೂ ಆಕಸ್ಮಿಕ ಅಫಘಾತಗಳನ್ನು ನಿಯಂತ್ರಿಸಲು ವಿವಿಧ ರಸ್ತೆಗಳಲ್ಲಿ ವಾಹನ ನಿಲುಗಡೆ, ವೇಗಮಿತಿ ಮತ್ತು ಏಕಮುಖ ಸಂಚಾರ ವ್ಯವಸ್ಥೆ ಕಲ್ಪಿಸಿ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಆದೇಶ ಹೊರಡಿಸಿದ್ದಾರೆ. ಯಾವ್ಯಾವ ರಸ್ತೆಯಲ್ಲಿ ಏನೆಲ್ಲ ಬದಲಾವಣೆಯಾಗಿದೆ? ಶಿವಮೊಗ್ಗ ನಗರದ ಅಶೋಕ ಸರ್ಕಲ್, ಅಮೀರ್ ಅಹ್ಮದ್ ಸರ್ಕಲ್, ಗೋಪಿ ಸರ್ಕಲ್, ಜೈಲ್ ಸರ್ಕಲ್, ವಿನೋಬ ನಗರ ಪೊಲೀಸ್ ಚೌಕಿ ಸರ್ಕಲ್ ಮತ್ತು ಹೆಲಿಪ್ಯಾಡ್ ಸರ್ಕಲ್ ಸೇರಿದಂತೆ … Read more

ಕಾರು ಚಾಲಕ, ಪತ್ನಿ ಆತ್ಮಹತ್ಯೆ ಪ್ರಕರಣ, ಸಾಗರದಲ್ಲಿ ಮೌನ ಪ್ರತಿಭಟನೆ

160320 Protest Against Car Driver Suicide 1

ಶಿವಮೊಗ್ಗ ಲೈವ್.ಕಾಂ | SAGARA | 16 ಮಾರ್ಚ್ 2020 ಕಾರು ಚಾಲಕ ಹರ್ಷಕುಮಾರ್ ಮತ್ತು ಅವರ ಪತ್ನಿ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಸಿಓಡಿಗೆ ವಹಿಸಬೇಕು ಎಂದು ವಿವಿಧ ಸಂಘಟನೆಗಳು ಸಾಗರದಲ್ಲಿ ಇವತ್ತು ಮೌನ ಪ್ರತಿಭಟನೆ ನಡೆಸಿದವು. ಉಪ ವಿಭಾಗಾಧಿಕಾರಿ ಕಚೇರಿ ಮುಂದೆ ಮೌನ ಪ್ರತಿಭಟನೆ ನಡೆಸಿದ ವಿವಿಧ ಸಂಘಟನೆಗಳು, ಪ್ರಕರಣದ ತನಿಖೆಯನ್ನು ಸಿಓಡಿಗೆ ವಹಿಸಬೇಕು. ಹರ್ಷಕುಮಾರ್ ಅವರ ಆತ್ಮಹತ್ಯೆ ಪ್ರಕರಣದ ಹಿಂದೆ ಕಾಣದ ಕೈಗಳಿವೆ ಎಂದು ಆರೋಪಿಸಿದರು. ಹರ್ಷಕುಮಾರ್ ಅವರ ಸಹೋದರಿ ಆಶಾರಾಣಿ, ಪ್ರಮುಖರಾದ ಗಿರೀಶ್ … Read more

ಮದ್ಯದ ಅಂಗಡಿ ವಿರುದ್ಧ ರೊಚ್ಚಿಗೆದ್ದ ಗ್ರಾಮಸ್ಥರು, ಶಿವಮೊಗ್ಗ ಅಬಕಾರಿ ಇಲಾಖೆ ಮುಂದೆ ಧರಣಿ

160320 Protest in front of Abakari Ilake Talaguppa 1

ಶಿವಮೊಗ್ಗ ಲೈವ್.ಕಾಂ | SHIMOGA | 16 ಮಾರ್ಚ್ 2020 ಗ್ರಾಮ ಪಂಚಾಯಿತಿ ಪರವಾನಗಿ ಇಲ್ಲದೆ, ಗ್ರಾಮಸ್ಥರ ವಿರೋಧದ ನಡುಗೆ ಮದ್ಯದ ಅಂಗಡಿ ತೆರೆಯಲಾಗಿದೆ. ಕೂಡಲೇ ಆ ಅಂಗಡಿಯನ್ನು ಬಂದ್ ಮಾಡಬೇಕು ಎಂದು ಒತ್ತಾಯಿಸಿ, ಶಿವಮೊಗ್ಗದಲ್ಲಿರುವ ಅಬಕಾರಿ ಇಲಾಖೆ ಕಚೇರಿ ಮುಂದೆ ಧರಣಿ ನಡೆಸಲಾಗುತ್ತಿದೆ. ಸಾಗರ ತಾಲೂಕಿನ ತಾಳಗುಪ್ಪದ ರಂಗನಾಥ ಕಾಲೋನಿ ನಿವಾಸಿಗಳು ಧರಣಿ ನಡೆಸುತ್ತಿದ್ದಾರೆ. ರಂಗನಾಥ ಕಾಲೋನಿಯಲ್ಲಿ ಇತ್ತೀಚೆಗೆ ಮದ್ಯದ ಅಂಗಡಿಯೊಂದನ್ನು ತೆರೆಯಲಾಗಿದೆ. ಇದಕ್ಕೆ ಗ್ರಾಮ ಪಂಚಾಯಿತಿ ಅನುಮತಿ ಇಲ್ಲ. ಮತ್ತೊಂದೆಡೆ ಇಲ್ಲಿನ ನಿವಾಸಿಗಳು ಕೂಡ … Read more

ವಿಶ್ವವಿಖ್ಯಾತ ಜೋಗ ಜಲಪಾತಕ್ಕೂ ತಟ್ಟಿದ ಮಹಾಮಾರಿ ಕರೋನ ಬಿಸಿ

160320 Jog Falls Closed due to corona 1

ಶಿವಮೊಗ್ಗ ಲೈವ್.ಕಾಂ | SHIMOGA | 16 ಮಾರ್ಚ್ 2020 ವಿಶ್ವವಿಖ್ಯಾತ ಜೋಗ ಜಲಪಾತಕ್ಕೂ ಕರೋನ ಬಿಸಿ ತಟ್ಟಿದೆ. ಕರೋನಾ ವೈರಸ್ ಆತಂಕದ ಹಿನ್ನೆಲೆಯಲ್ಲಿ ಜೋಗ ಜಲಪಾತದ ಗೇಟ್’ಗೆ ಬೀಗ ಹಾಕಲಾಗಿದೆ. ಪ್ರವಾಸಿಗರು ಬರುವುದನ್ನು ನಿರ್ಬಂಧಿಸಲು ಗೇಟ್ ಮುಚ್ಚಲಾಗಿದೆ. ಜೋಗ ಜಲಪಾತ ವೀಕ್ಷಣೆಗೆ ರಾಜ್ಯ, ಹೊರ ರಾಜ್ಯ ಮತ್ತು ವಿದೇಶದಿಂದ ಪ್ರವಾಸಿಗರು ಆಗಮಿಸುವ ಹಿನ್ನೆಲೆ, ಗೇಟ್ ಬಂದ್ ಮಾಡಲಾಗಿದೆ. ಇದರ ಮಾಹಿತಿ ಇಲ್ಲದೆ ಬಂದ ಪ್ರವಾಸಿಗರು ನಿರಾಸೆ ಅನುಭವಿಸುತ್ತಿದ್ದಾರೆ. ಕರೋನ ಸೋಂಕು ಹಬ್ಬುವುದನ್ನು ತಡೆಗಟ್ಟುವ ಹಿನ್ನೆಲೆ ರಾಜ್ಯ … Read more