ಆಯನೂರಿನಲ್ಲಿ ಪತ್ರಿಕೆ ಹಂಚುವ ಹುಡುಗನ ಸಮಯ ಪ್ರಜ್ಞೆಗೆ ತಪ್ಪಿತು ದೊಡ್ಡ ಅನಾಹುತ, ಆಗಿದ್ದೇನು?
ಆಯನೂರು: ಪತ್ರಿಕೆ ಹಂಚುವ ಬಾಲಕನ ಸಮಯಪ್ರಜ್ಞೆಯಿಂದಾಗಿ ಆಯನೂರಿನಲ್ಲಿ ದೊಡ್ಡ ದುರಂತ (Short Circuit) ತಪ್ಪಿದೆ. ಕಟ್ಟಡವೊಂದರ ಮೀಟರ್ ಬೋರ್ಡ್ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಪತ್ರಿಕೆ ಹಂಚಲು ತೆರಳಿದ್ದ ಬಾಲಕ ಇದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದ. ಕೂಡಲೆ ಬೆಂಕಿ ನಂದಿಸಿದ್ದು ಭಾರಿ ನಷ್ಟ ತಪ್ಪಿದೆ. ಬಿ.ಹೆಚ್.ರಸ್ತೆಯ ಕಟ್ಟಡವೊಂದರ ಮೀಟರ್ ಬೋರ್ಡ್ನಲ್ಲಿ ಶಾರ್ಟ್ ಸರ್ಕ್ಯೂಟ್ನಿಂದಾಗಿ (Short Circuit) ಬೆಂಕಿ ಕಾಣಿಸಿಕೊಂಡಿತ್ತು. ಬೆಳಗ್ಗೆ 6.30ರ ಹೊತ್ತಿಗೆ ಪತ್ರಿಕೆ ಹಾಕಲು ತೆರಳಿದ್ದ ಶ್ರೇಯಸ್ ಮಿರಜ್ಕರ್ ಎಂಬ ಬಾಲಕ ಕೂಡಲೆ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. … Read more