ಚಂದ್ರಗುತ್ತಿ ದೇಗುಲದ ಜಾತ್ರೆಗೆ ದಿನಾಂಕ ನಿಗದಿ, ಈ ಬಾರಿ ಏನೇನೆಲ್ಲ ವ್ಯವಸ್ಥೆ ಮಾಡಲಾಗಿದೆ?

Chandragutti-Temple-Soraba.

SHIVAMOGGA LIVE NEWS | 19 FEBRUARY 2024 SORABA : ಸರ್ಕಾರದ ಮಾರ್ಗಸೂಚಿಯಂತೆ ಕಳೆದ ಬಾರಿಯಂತೆ ಈ ವರ್ಷವೂ ತಾಲೂಕಿನ ಇತಿಹಾಸ ಪ್ರಸಿದ್ಧ ಕ್ಷೇತ್ರ ಚಂದ್ರಗುತ್ತಿಯ ಶ್ರೀ ರೇಣುಕಾಂಬೆ ದೇವಿಯ ಜಾತ್ರಾ ಮಹೋತ್ಸವ ಮಾ.15 ರಿಂದ 20ರವರೆಗೆ ನಡೆಯಲಿದೆ ಎಂದು ಸಾಗರ ಉಪ ವಿಭಾಗಾಧಿಕಾರಿ ಆರ್.ಯತೀಶ್ ಹೇಳಿದರು. ತಾಲೂಕಿನ ಚಂದ್ರಗುತ್ತಿ ದೇವಸ್ಥಾನದ ಆಡಳಿತ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ತಾಲೂಕಿನ ಇತಿಹಾಸ ಪ್ರಸಿದ್ಧ ಚಂದ್ರಗುತ್ತಿ ರೇಣುಕಾಂಬಾ ದೇವಿ ಮಹಾರಥೋತ್ಸವ ಮಾ.18ರಂದು ಜರುಗಲಿದೆ. … Read more

ಕೋಟೆ ಮಾರಿಕಾಂಬಾ ಜಾತ್ರೆ, ಕಾಡಿನಿಂದ ಬಂತು ಮರ, ಶಿವಮೊಗ್ಗದಲ್ಲಿ ಪೂಜೆ, ಏನಿದು ಮರ ತರುವ ಶಾಸ್ತ್ರ?

Kote-Marikamba-jathre-shimoga-wood-comes-from-forest

SHIVAMOGGA LIVE NEWS | 20 JANUARY 2024 SHIMOGA : ಕೋಟೆ ಶ್ರೀ ಮಾರಿಕಾಂಬ ಜಾತ್ರೆ ಹಿನ್ನೆಲೆ ಮಾರಿಕಾಂಬೆಯನ್ನು ನಿರ್ಮಿಸುವ ಮರ ಶುಕ್ರವಾರ ಸಂಜೆ ಶಿವಮೊಗ್ಗ ಪುರ ಪ್ರವೇಶಿಸಿತು. ಮರಕ್ಕೆ ವಿಶೇಷ ಅಲಂಕಾರ ಮಾಡಿ, ಭಕ್ತರು ಪೂಜೆ ಸಲ್ಲಿಸಿದರು. ಮಡಿವಾಳ ಸಮಾಜದವರು ಕಾಡಿನಿಂದ ಮರವನ್ನು ಟ್ರಾಕ್ಟರ್‌ನಲ್ಲಿ ತಂದರು. ಮಂಡ್ಲಿಯಲ್ಲಿ ಮರಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು. ಅಲ್ಲಿಂದ ಮೆರವಣಿಗೆ ಮೂಲಕ ಗಾಂಧಿ ಬಜಾರ್‌ನಲ್ಲಿರುವ ಮಾರಿಕಾಂಬೆಯ ತವರು ಮನೆ ವಿಶ್ವಕರ್ಮ ಸಮಾಜದವರಿಗೆ ಒಪ್ಪಿಸಲಾಯಿತು. ಮಾರಿಕಾಂಬೆ ಮೂರ್ತಿ ಕೆತ್ತನೆ ಆರಂಭ … Read more

ಪೆನ್ಸಿಲ್‌ ಲೆಡ್‌ನಲ್ಲಿ 1 ಸೆಂಟಿ ಮೀಟರ್‌ನ ರಾಮ ಮಂದಿರ ನಿರ್ಮಿಸಿದ ಭದ್ರಾವತಿ ಯುವಕ, ಹೇಗಿದೆ? ನಿರ್ಮಿಸಿದ್ದು ಹೇಗೆ?

One-cm-ram-mandir-in-pencil-led-by-bhadravathi-varun-achar.

SHIVAMOGGA LIVE NEWS | 19 JANUARY 2024 BHADRAVATHI : ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ. ಈ ಮಧ್ಯೆ ಭದ್ರಾವತಿಯ ಮೈಕ್ರೋ ಆರ್ಟಿಸ್ಟ್‌ ವರುಣ್‌ ಆಚಾರ್‌ ಪೆನ್ಸಿಲ್‌ ಲೆಡ್‌ನಲ್ಲಿ ರಾಮ ಮಂದಿರದ ಮಾದರಿ ನಿರ್ಮಿಸಿದ್ದಾರೆ. ಪೆನ್ಸಿಲ್‌ ಲೆಡ್‌ನಲ್ಲಿ ನಿರ್ಮಿಸಿರುವ ರಾಮ ಮಂದಿರದ ಮಾದರಿಯು 1 ಸೆಂಟಿ ಮೀಟರ್‌ನಷ್ಟಿದೆ. ರಾಮ ಮಂದಿರದ ಗೋಪುರಗಳು, ಮೇಲೆ ಕೇಸರಿ ಧ್ವಜವಿದೆ. ಅತ್ಯಂತ ಸೂಕ್ಷ್ಮವಾಗಿ, ಸ್ಪಷ್ಟವಾಗಿ ಮಾದರಿಯನ್ನು ನಿರ್ಮಿಸಿದ್ದಾರೆ. ಭದ್ರಾವತಿ ಓಲ್ಡ್‌ ಟೌನ್‌ ನಿವಾಸಿ ವರುಣ್‌ ಆಚಾರ್‌ ಸಹಕಾರ … Read more

ಶಿವಮೊಗ್ಗ ಜಿಲ್ಲೆಯಲ್ಲಿ ಸಂಭ್ರಮದ ಸಂಕ್ರಾಂತಿ, ಎಲ್ಲೆಲ್ಲಿ ಹೇಗಿತ್ತು ವೈಭವ? ಫಟಾಫಟ್‌ ನ್ಯೂಸ್‌

Sankranti-celebration-in-sigandu-and-MP-BY-Raghavendra-house

SHIVAMOGGA LIVE NEWS | 16 JANUARY 2024 ಜಿಲ್ಲೆಯಾದ್ಯಂತ ಧಾರ್ಮಿಕ ಕಾರ್ಯಕ್ರಮ SHIMOGA : ಜಿಲ್ಲೆಯಾದ್ಯಂತ ಸಂಕ್ರಾಂತಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ವಿವಿಧ ದೇಗುಲಗಳಲ್ಲಿ ಧಾರ್ಮಿಕ ಕಾರ್ಯಕ್ರಮ, ಜಾತ್ರೆ, ರಥೋತ್ಸವ ನಡೆದವು. ಇವುಗಳ ಸಂಪೂರ್ಣ ವಿವರ ಇಲ್ಲಿದೆ. ಪ್ರತಿ ಸುದ್ದಿ ಓದಲು ಕೆಳಗಿರುವ NEXT ಬಟನ್‌ ಒತ್ತಿ.

ಶಿವಮೊಗ್ಗದಲ್ಲಿ ಪೊರಕೆ ಹಿಡಿದು ದೇಗುಲದ ಆವರಣದ ಸ್ವಚ್ಛಗೊಳಿಸಿದ ಸಂಸದ, ಶಾಸಕರು

Temple-cleaning-by-MP-BY-Raghavendra-and-MLA-Channabasappa

SHIVAMOGGA LIVE NEWS | 14 JANUARY 2024 SHIMOGA : ರಾಷ್ಟ್ರವ್ಯಾಪಿ ದೇಗುಲ ಸ್ವಚ್ಛತಾ ಅಭಿಯಾನದ ಹಿನ್ನೆಲೆ ನಗರದ ಹೊಳೆಹೊನ್ನೂರು ರಸ್ತೆ ರೈಲ್ವೆ ಗೇಟ್‌ ಪಕ್ಕದಲ್ಲಿರುವ ಅರಕೇಶ್ವರ ದೇಗುಲದಲ್ಲಿ ಶಿವಮೊಗ್ಗ ಬಿಜೆಪಿ ವತಿಯಿಂದ ಸ್ವಚ್ಛತಾ ಕಾರ್ಯ ನಡೆಸಲಾಯಿತು. ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಎಸ್‌.ಎನ್.ಚನ್ನಬಸಪ್ಪ ಪೊರಕೆ ಹಿಡಿದು ಶ್ರಮದಾನ ಮಾಡಿದರು. ವಿಧಾನ ಪರಿಷತ್‌ ಸದಸ್ಯರಾದ ಎಸ್‌.ರುದ್ರೇಗೌಡ, ಡಿ.ಎಸ್.‌ಅರುಣ್‌, ಪ್ರಮುಖರಾದ ಗಿರೀಶ್‌ ಪಟೇಲ್‌ ಸೇರಿದಂತೆ ಬಿಜೆಪಿಯ ಹಲವು ಪ್ರಮುಖರು ಈ ಸಂದರ್ಭ ಹಾಜರಿದ್ದರು. ಇದನ್ನೂ ಓದಿ – ಸಿಗಂದೂರು ಜಾತ್ರೆಗೆ … Read more

ತೀರ್ಥಹಳ್ಳಿ ಎಳ್ಳಮಾವಾಸ್ಯೆ ಜಾತ್ರೆ, ಪರಶುರಾಮ ಕೊಂಡದಲ್ಲಿ ಪುಣ್ಯ ಸ್ನಾನ

Ellamavasye-Punya-snana-at-Thirthahalli-tunga-river.

SHIVAMOGGA LIVE NEWS | 11 JANUARY 2024 THIRTHAHALLI : ಪುರಾಣ ಪ್ರಸಿದ್ಧ ಶ್ರೀ ರಾಮೇಶ್ವರ ದೇವರ ಎಳ್ಳಮಾವಾಸ್ಯೆ ಜಾತ್ರೆ ಅಂಗವಾಗಿ ಇವತ್ತು ಪರಶುರಾಮ ಕೊಂಡದಲ್ಲಿ ಭಕ್ತರು ಪುಣ್ಯ ಸ್ನಾನ ಮಾಡಿದರು. ದೊಡ್ಡ ಸಂಖ್ಯೆಯ ಭಕ್ತರು ಪುಣ್ಯ ಸ್ನಾನದಲ್ಲಿ ಪಾಲ್ಗೊಂಡಿದ್ದರು. ಪಲ್ಲಕ್ಕಿ ಪೂಜೆ ಬಳಿಕ ಪುಣ್ಯ ಸ್ನಾನ ಎಳ್ಳಮಾವಾಸ್ಯೆ ಸಂದರ್ಭ ಇಲ್ಲಿ ತೀರ್ಥ ಸ್ನಾನ ಮಾಡಿದರೆ ಪಾಪ ನಿವಾರಣೆಯಾಗಲಿದೆ ಎಂಬುದು ಭಕ್ತರ ನಂಬಿಕೆ. ಹಾಗಾಗಿ ಬೆಳಗಿನ ಜಾವದಲ್ಲಿಯೇ ಭಕ್ತರು ದೊಡ್ಡ ಸಂಖ್ಯೆಯಲ್ಲಿ ಸರತಿಯಲ್ಲಿ ನಿಂತಿದ್ದರು. ಶ್ರೀ … Read more

ಸಿಗಂದೂರು ಜಾತ್ರೆಗೆ ದಿನಾಂಕ ನಿಗದಿ, ಏನೆಲ್ಲ ಕಾರ್ಯಕ್ರಮ ಇರಲಿದೆ? ಯಾರೆಲ್ಲ ಭಾಗವಹಿಸ್ತಾರೆ?

Sigandur temple and Sharavathi river launch

SHIVAMOGGA LIVE NEWS | 4 JANUARY 2024 SAGARA : ಜ.14 ಮತ್ತು 15ರಂದು ಸಿಗಂದೂರು ಶ್ರೀ ಚೌಡೇಶ್ವರಿ ದೇವಿ ಜಾತ್ರೆ ಮಹೋತ್ಸವ ನಡೆಯಲಿದೆ. ದೇವಸ್ಥಾನದಲ್ಲಿ ಎರಡು ದಿನ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಏನೇನೆಲ್ಲ ಕಾರ್ಯಕ್ರಮ ಇರಲಿದೆ? ಜ.14 ರಂದು ಬೆಳಗ್ಗೆ ಶ್ರೀ ಕ್ಷೇತ್ರದಲ್ಲಿ ದೇವಿಗೆ ಮಹಾಭಿಷೇಕ, ಹೂವು ಮತ್ತು ಆಭರಣದ ಅಲಂಕಾರ ನೆರವೇರಿಸಲಾಗುತ್ತದೆ. ಗೋಪೂಜೆ, ಗುರು ಪೂಜೆ ನಡೆಯಲಿದೆ. ರಥ ಮತ್ತು ಪಲ್ಲಕ್ಕಿಯನ್ನು ಮೂಲಸ್ಥಾನಕ್ಕೆ ಕೊಂಡೊಯ್ಯಲಾಗುತ್ತದೆ. ದೇವಿಯ ಮೂಲ ಸ್ಥಳ ಸೀಗೆ ಕಣಿವೆಯಲ್ಲಿ … Read more

ಕೋಟೆ ಠಾಣೆ ರಸ್ತೆಯಲ್ಲಿ ಬ್ರಹ್ಮರಥೋತ್ಸವ, ಚಂಡಿಕಾದುರ್ಗಾ ಪರಮೇಶ್ವರಿ ಸನ್ನಿಧಿಯಲ್ಲಿ ಹೋಮ, ವಿಶೇಷ ಪೂಜೆ

Kote-Chandikadurga-Parameshwari-Bhrama-Ratotsava.

SHIVAMOGGA LIVE NEWS | 26 DECEMBER 2023 SHIMOGA : ನಗರದ ಗ್ರಾಮ ದೇವತೆ ಕೋಟೆ ಶ್ರೀ ಚಂಡಿಕಾದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಇಂದು ಬ್ರಹ್ಮರಥೋತ್ಸವ ನಡೆಯಿತು. ಇದಕ್ಕೂ ಮೊದಲು ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಕೋಟೆ ಪೊಲೀಸ್‌ ಠಾಣೆ ರಸ್ತೆಯಲ್ಲಿ ಬ್ರಹ್ಮರಥೋತ್ಸವ ನಡೆಯಿತು. ದೇಗುಲದ ಭಕ್ತರು ರಥೋತ್ಸವ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಇದಕ್ಕೂ ಮೊದಲು ಚಿಕ್ಕ ರಥ ರಾಜಬೀದಿ ಉತ್ಸವ ನಡೆಯಿತು. ನಗರದ ವಿವಿಧೆಡೆ ದೇವಿಯನ್ನು ಚಿಕ್ಕ ರಥದಲ್ಲಿ ಮೆರವಣಿಗೆ ನಡೆಸಲಾಯಿತು. ವಿವಿಧ ಧಾರ್ಮಿಕ ಕಾರ್ಯಕ್ರಮ … Read more

ಶಿವಮೊಗ್ಗದಲ್ಲಿ ಶ್ರದ್ಧಾ, ಭಕ್ತಿಯಿಂದ ವೈಕುಂಠ ಏಕಾದಶಿ, ಎಲ್ಲೆಲ್ಲಿ ಹೇಗಿತ್ತು ಪೂಜೆ, ಅಲಂಕಾರ? ಇಲ್ಲಿದೆ ಫೋಟೊ ಆಲ್ಬಂ

Vaikunta-Ekadashi-in-Shimoga-city

SHIVAMOGGA LIVE NEWS | 24 DECEMBER 2023 SHIMOGA : ಜಿಲ್ಲೆಯಾದ್ಯಂತ ಶ್ರದ್ಧಾ, ಭಕ್ತಿಯಿಂದ ವೈಕುಂಠ ಏಕಾದಶಿ ಆಚರಿಸಲಾಯಿತು. ಬೆಳಗ್ಗೆಯಿಂದಲೆ ಭಕ್ತರು ವಿವಿಧ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿದರು. ಸ್ವರ್ಗದ ಬಾಗಿಲಿನ ಮೂಲಕ ಹಾದು ಹೋಗಿ ಪುನೀತರಾದರು. ಇನ್ನು, ವೈಕುಂಠ ಏಕಾದಶಿ ಹಿನ್ನೆಲೆ ದೇಗುಲಗಳಲ್ಲಿ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಎಲ್ಲೆಲ್ಲಿ ಹೇಗಿತ್ತು ಪೂಜೆ, ಅಲಂಕಾರ? ಶಿವಮೊಗ್ಗದ ಕೋಟೆ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಸ್ಥಾನ, ನವುಲೆ ಶ್ರೀ ಲಕ್ಷ್ಮಿ ವೆಂಕಟರಮಣ ದೇಗುಲ, ಗೋಪಾಳದ ಆದಿ ರಂಗನಾಥ … Read more

ಶಿವಮೊಗ್ಗದಲ್ಲಿ ಶಕ್ತಿ ಪೂಜೆ, ಹೊಸಮನೆಯಲ್ಲಿ ಗಮನ ಸೆಳೆಯುತ್ತಿದೆ ಶಬರಿಮಲೆ ದೇಗುಲ ಮಾದರಿ

Shabarimale-Ayyappa-temple-model-in-Shimoga-Hosamane.

SHIVAMOGGA LIVE NEWS | 2 DECEMBER 2023 SHIMOGA : ನಗರದ ಹೊಸಮನೆ ಬಡಾವಣೆಯಲ್ಲಿ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಮಾದರಿ ನಿರ್ಮಿಸಿ ಭಕ್ತರು ಶಕ್ತಿ ಪೂಜೆ ನೆರವೇರಿಸಿದರು. ಹೊಸಮನೆ 5ನೇ ಅಡ್ಡರಸ್ತೆಯಲ್ಲಿ ಓಂ ಬಾಯ್ಸ್‌ ಯುವಕರ ಸಂಘದ ವತಿಯಿಂದ ಇವತ್ತು ಶಕ್ತಿ ಪೂಜೆ ನೆರವೇರಿಸಿದರು. ಮಾಲಾಧಾರಿಗಳು ಶಕ್ತಿ ಪೂಜೆಯಲ್ಲಿ ಭಾಗವಹಿಸಿದ್ದರು. ಪೂಜೆ ಹಿನ್ನೆಲೆ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಮಾದರಿಯನ್ನು ನಿರ್ಮಿಸಲಾಗಿತ್ತು. 18 ಮೆಟ್ಟಿಲು, ಗರ್ಭಗುಡಿಯಲ್ಲಿ ಅಯ್ಯಪ್ಪ ಸ್ವಾಮಿಯ ಫೋಟೊ ಇರಿಸಲಾಗಿತ್ತು. ಪೂಜೆ ಬಳಿಕ … Read more