ಕೊಡಚಾದ್ರಿ ಪ್ರವಾಸಿಗರಿಗೆ ಶಾಕ್‌ ನೀಡಿದ ವನ್ಯಜೀವಿ ವಿಭಾಗ, ಇವತ್ತಿನಿಂದ ಪ್ರವೇಶ ನಿಷೇಧ

Kodachadri-Road-Problem

SHIVAMOGGA LIVE | 30 JULY 2023 NITTURU : ಪ್ರಸಿದ್ಧ ಪ್ರವಾಸಿ ತಾಣ ಮತ್ತು ಶ್ರದ್ಧಾ ಕೇಂದ್ರ ಕೊಡಚಾದ್ರಿಗೆ (Kodachadri) ಪ್ರವಾಸಿಗರ ಪ್ರವೇಶ ನಿಷೇಧಿಸಲಾಗಿದೆ. ಮುಂದಿನ ಆದೇಶದವರೆಗೆ ವಾಹನದಲ್ಲಿ ತೆರಳುವುದು, ಚಾರಣ ಮಾಡುವುದನ್ನು ನಿಷೇಧಿಸಿ ವನ್ಯಜೀವಿ ವಿಭಾಗ ಆದೇಶ ಹೊರಡಿಸಿದೆ. ಕೊಡಚಾದ್ರಿಗೆ ದೊಡ್ಡ ಸಂಖ್ಯೆಯ ಪ್ರವಾಸಿಗರು ಆಗಮಿಸುತ್ತಿದ್ದರು. ವನ್ಯಜೀವಿ ವಿಭಾಗದ ಆದೇಶದಿಂದ ಪ್ರವಾಸಿಗರಿಗೆ ನಿರಾಸೆಯಾಗಿದೆ. ನಿಷೇಧಕ್ಕೆ ಕಾರಣವೇನು? ಭಾರಿ ಮಳೆಯಿಂದಾಗಿ ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಕಟ್ಟಿನಹೊಳೆ ಮೂಲಕ ಕೊಡಚಾದ್ರಿಗೆ ತೆರಳುವ ಜೀಪ್‌ ಮುಂತಾದ ವಾಹನಗಳು ಹಾಗೂ … Read more

ಶಿವಮೊಗ್ಗದಿಂದ ವಿಮಾನ ಹಾರಾಟ 20 ದಿನ ತಡವಾಗಲು ಕಾರಣವೇನು? ಇಲ್ಲಿದೆ 3 ಕಾರಣ

MP-BY-raghavendra-about-Shimoga-Airport-Flight

SHIVAMOGGA LIVE | 30 JULY 2023 SHIMOGA : ನಿಗದಿಯಂತೆ ಆ.11ರಿಂದ ಶಿವಮೊಗ್ಗ ವಿಮಾನ ನಿಲ್ದಾಣದಿಂದ (Airport) ವಿಮಾನ ಹಾರಾಟ ಆರಂಭವಾಗಬೇಕಿತ್ತು. ಆದರೆ ಆ.31ರಿಂದ ವಿಮಾನಯಾನ ಶುರುವಾಗುತ್ತಿದೆ. ಸೇವೆ 20 ದಿನ ವಿಳಂಬವಾಗಲು ಕಾರಣವೇನು? ಸಮಸ್ಯೆ ಪರಿಹರಿಸಿದ್ದು ಹೇಗೆ ಅನ್ನುವುದನ್ನು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು. ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರ ತಾಂತ್ರಿಕ ಕಾರಣವೇನು ಅನ್ನುವುದನ್ನು ತಿಳಿಸಿದರು. ಏನದು 3 ಕಾರಣ? ಕಾರಣ 1 : ಕೇಂದ್ರ ಸರ್ಕಾರದ ಬಾಂಬ್‌ ಥ್ರೆಟ್‌ ಕಂಟಿಂಜೆನ್ಸಿ ಪ್ಲಾನ್‌ … Read more

ಲಿಂಗನಮಕ್ಕಿ ಜಲಾಶಯದ ಒಳ ಹರಿವು ತೀವ್ರ ಕುಸಿತ, ಇವತ್ತು ಡ್ಯಾಂನ ನೀರಿನ ಮಟ್ಟ ಎಷ್ಟಿದೆ?

-Linganamakki-Dam-General-Image

SHIVAMOGGA LIVE | 30 JULY 2023 SAGARA : ಮಳೆ ಪ್ರಮಾಣ ಕಡಿಮೆಯಾಗಿದ್ದು ಲಿಂಗನಮಕ್ಕಿ ಜಲಾಶಯದ ಒಳ ಹರಿವು (INFLOW) ಭಾರಿ ಕುಸಿತ ಕಂಡಿದೆ. ಇವತ್ತು 18,487 ಕ್ಯೂಸೆಕ್‌ ಒಳ ಹರಿವು ದಾಖಲಾಗಿದೆ. ಜಲಾಶಯದ ನೀರಿನ ಮಟ್ಟ 1787 ಅಡಿಗೆ ತಲುಪಿದೆ. ಕಳೆದ 24 ಗಂಟೆಯಲ್ಲಿ ನೀರಿನ ಮಟ್ಟ 0.70 ಅಡಿಯಷ್ಟು ಮಾತ್ರ ಏರಿಕೆಯಾಗಿದೆ. ಕಳೆದ ವರ್ಷ ಇದೇ ದಿನ ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ 1798.50 ಅಡಿ ಇತ್ತು. ಇದನ್ನೂ ಓದಿ – ಶಿವಮೊಗ್ಗ ಜನಶತಾಬ್ದಿ … Read more

ಶಿವಮೊಗ್ಗ ದೂರದರ್ಶನದ ಟವರ್‌ ಮೇಲೆ ಸ್ಥಾಪನೆಯಾಗಲಿದೆ ಮತ್ತೊಂದು ಟ್ರಾನ್ಸ್‌ಮೀಟರ್‌, ಇದರ ಉಪಯೋಗವೇನು?

BY-Raghavendra-about-FM-Tower-on-Shimoga-Tv-tower

SHIVAMOGGA LIVE | 30 JULY 2023 SHIMOGA : ಭದ್ರಾವತಿ ಆಕಾಶವಾಣಿ ಕೇಂದ್ರದಲ್ಲಿರುವ ಎಫ್‌.ಎಂ ಕೇಂದ್ರವನ್ನು (FM Transmitter) ಮೇಲ್ದರ್ಜೆಗೇರಿಸಲು ಕೇಂದ್ರ ಸರ್ಕಾರದ ಪ್ರಸಾರ ಭಾರತಿ ಅನುಮತಿ ನೀಡಿದೆ. ಇದಕ್ಕಾಗಿ 10 ಕೋಟಿ ರೂ. ಮಂಜೂರು ಮಾಡಲಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿ ಸಂಸದ ರಾಘವೇಂದ್ರ, ಭದ್ರಾವತಿ ಆಕಾಶವಾಣಿ ಕೇಂದ್ರ ಪ್ರಸ್ತುತ 1 ಕಿಲೋ ವ್ಯಾಟ್‌ ಸಾಮರ್ಥ್ಯದ ಟ್ರಾನ್ಸ್‌ಮೀಟರ್‌ ಹೊಂದಿದೆ. ಇದನ್ನು 10 ಕಿ.ವ್ಯಾ.ಗೆ ಮೇಲ್ದೆರ್ಜೆಗೇರಿಸಲಾಗುತ್ತಿದೆ. ಇದಕ್ಕಾಗಿ 10 ಕೋಟಿ ರೂ. … Read more

ಶಿವಮೊಗ್ಗ ಡಿಸಿಸಿ ಬ್ಯಾಂಕ್‌ ಅ‍ಧ್ಯಕ್ಷರ ಪದಚ್ಯುತಿ, ಯಾರೆಲ್ಲ ಯಾರ ಪರ ಮತ ಚಲಾಯಿಸಿದರು? ಇಲ್ಲಿದೆ ಕಂಪ್ಲೀಟ್‌ ಮಾಹಿತಿ

dcc-bank-no-confidence-motion-against-president.

SHIVAMOGGA LIVE | 29 JULY 2023 SHIMOGA : ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ (DCC BANK)‌ ಅಧ್ಯಕ್ಷರ ವಿರುದ್ಧದ ಅವಿಶ್ವಾಸಕ್ಕೆ ಜಯವಾಗಿದೆ. ಈವರೆಗೂ ಅಧ್ಯಕ್ಷರಾಗಿದ್ದ ಚನ್ನವೀರಪ್ಪ ಅವರು ಅಧಿಕಾರ ಕಳೆದುಕೊಂಡಿದ್ದಾರೆ. DCC BANK ಸಭಾಂಗಣದಲ್ಲಿ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡನೆ ಮಾಡಲಾಯಿತು. ಅವಿಶ್ವಾಸದ ಪರವಾಗಿ 9 ಮತಗಳು, ವಿರುದ್ಧವಾಗಿ 3 ಮತ ಚಲಾವಣೆಯಾದವು. ಹಾಗಾಗಿ, ಎರಡೂವರೆ ವರ್ಷ ಅಧ್ಯಕ್ಷರಾಗಿದ್ದ ಚನ್ನವೀರಪ್ಪ ತಮ್ಮ ಸ್ಥಾನ ತ್ಯಜಿಸಬೇಕಾಯಿತು. ಷಡಾಕ್ಷರಿಗೆ ಪ್ರಭಾರ ಜವಾಬ್ದಾರಿ ಶಿವಮೊಗ್ಗ ಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷರಾಗಿ … Read more

ಶಿವಮೊಗ್ಗ ನಗರದಲ್ಲಿ ಯುವಕನಿಗೆ ಕರೆಂಟ್‌ ಶಾಕ್‌, ಸ್ಥಳದಲೇ ಸಾವು

Electric-Shock-for-youth-at-Ragigudda

SHIVAMOGGA LIVE | 29 JULY 2023 SHIMOGA : ವಿದ್ಯುತ್‌ ತಂತಿ ತಗುಲಿ (Shock) ಕುರಿಗಾಹಿಯೊಬ್ಬ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಶಿವಮೊಗ್ಗದ ರಾಗಿಗುಡ್ಡದಲ್ಲಿ ಕಳೆದ ರಾತ್ರಿ ಘಟನೆ ಬೆಳಕಿಗೆ ಬಂದಿದೆ. ಗಿರೀಶ (33) ಮೃತು ಕುರಿಗಾಹಿ. ರಾಗಿಗುಡ್ಡದ ಚಾನಲ್‌ ಸಮೀಪ ಶುಕ್ರವಾರ ಮಧ್ಯಾಹ್ನ ಗಿರೀಶ ಕುರಿ ಮೇಯಿಸುತ್ತ ಬಂದಿದ್ದ. ಈ ವೇಳೆ ವಿದ್ಯುತ್‌ ಕಂಬದ ತಂತಿ ತಗುಲಿ ಕರೆಂಟ್‌ ಶಾಕ್‌ ಹೊಡೆದಿದೆ ಎಂದು ಶಂಕಿಸಲಾಗಿದೆ. ರಾತ್ರಿಯಾದರು ಗಿರೀಶ ಮನೆಗೆ ಬಾರದ ಹಿನ್ನೆಲೆ ಆತನ ಕುಟುಂಬದವರು ಕರೆ ಮಾಡಿದ್ದಾರೆ. … Read more

GOOD NEWS | ಬೆಂಗಳೂರು – ಶಿವಮೊಗ್ಗ ವಿಮಾನದ ಟಿಕೆಟ್‌ ರೇಟ್‌ ಇಳಿಕೆ, ಈವರೆಗೂ ಎಷ್ಟಾಗಿದೆ ಬುಕಿಂಗ್‌?

Shivamogga-Bengaluru-Indigo-Airlines-ATR-72-Flight

SHIVAMOGGA LIVE | 28 JULY 2023 SHIMOGA : ಬೆಂಗಳೂರು – ಶಿವಮೊಗ್ಗ ವಿಮಾನ ಹಾರಾಟಕ್ಕೆ ದಿನಗಣನೆ ಆರಂಭವಾಗಿದೆ. ಮೊದಲ ದಿನ ವಿಮಾನದಲ್ಲಿ ಹಾರುವ ಅವಕಾಶಕ್ಕಾಗಿ ಟಿಕೆಟ್‌ ಬುಕಿಂಗ್‌ ಬಿರುಸಾಗಿ ನಡೆಯುತ್ತಿದೆ. ಈಗಾಗಲೆ ಶೇ.50ರಷ್ಟು ಸೀಟುಗಳು ಭರ್ತಿಯಾಗಿದೆ. ಈ ಮಧ್ಯೆ ಶಿವಮೊಗ್ಗ ವಿಮಾನಗಳ ಟಿಕೆಟ್‌ (Ticket Price) ದರದಲ್ಲಿ ಕಡಿತ ಮಾಡಲಾಗಿದೆ. ಶೇ.50ರಷ್ಟು ಸೀಟ್‌ ಭರ್ತಿ ಆ.31ರಿಂದ ಬೆಂಗಳೂರು – ಶಿವಮೊಗ್ಗ ಮತ್ತು ಶಿವಮೊಗ್ಗ – ಬೆಂಗಳೂರು ನಡುವೆ ವಿಮಾನ ಹಾರಾಟ ಆರಂಭವಾಗಲಿದೆ. ಇದಕ್ಕಾಗಿ ಬುಕಿಂಗ್‌ … Read more

ಶಿವಮೊಗ್ಗ ಜನಶತಾಬ್ದಿ ಸೇರಿ ವಿವಿಧ ರೈಲುಗಳು ಆ.1ರಂದು ತಡವಾಗಿ ಸಂಚರಿಸಲಿವೆ, ಇಲ್ಲಿದೆ ಕಾರಣ

Train-Jan-Shatabdi-General-Image

SHIVAMOGGA LIVE | 28 JULY 2023 SHIMOGA : ತುಮಕೂರು – ಅರಸೀಕೆರೆ ಭಾಗದ ಹೆಗ್ಗೆರೆ ನಿಲ್ದಾಣದ ಪಾದಚಾರಿಗಳ ಮೇಲ್ಸೇತುವೆ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆ ಆ.1ರಂದು ಲೈನ್‌ ಬ್ಲಾಕ್‌ ಮತ್ತು ಪವರ್‌ ಬ್ಲಾಕ್‌ ಮಾಡಲಾಗುತ್ತಿದೆ. ಹಾಗಾಗಿ ಶಿವಮೊಗ್ಗ ಸೇರಿದಂತೆ ವಿವಿಧ ರೈಲುಗಳ (Train) ಸೇವೆಯಲ್ಲಿ ವ್ಯತ್ಯಯವಾಗಲಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಯಾವ್ಯಾವ ರೈಲು ಸೇವೆ ವ್ಯತ್ಯಯ? ರೈಲು ಭಾಗಶಃ ರದ್ದು: ರೈಲು ಸಂಖ್ಯೆ 06514 ಶಿವಮೊಗ್ಗ ಟೌನ್-ತುಮಕೂರು ವಿಶೇಷ ಡೆಮು ರೈಲು … Read more

ಶಿವಮೊಗ್ಗ JNNCE ಕಾಲೇಜಿನ ಪಾರ್ವತಿ ರಾಜ್ಯಕ್ಕೆ ಫಸ್ಟ್‌, ಸ್ಮೃತಿಗೆ ಒಂಬತ್ತನೆ ಸ್ಥಾನ

JNNCE-College-Students-gets-first-rain-in-engineering-exams

SHIVAMOGGA LIVE | 28 JULY 2023 SHIMOGA : ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ನಡೆಸಿದ 2020-23 ನೇ ಸಾಲಿನ ವಿವಿಧ ಇಂಜಿನಿಯರಿಂಗ್ ವಿಭಾಗಗಳ ಪರೀಕ್ಷೆಗಳಲ್ಲಿ ಶಿವಮೊಗ್ಗದ ಜೆಎನ್‌ಎನ್‌ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿನಿ ಪಾರ್ವತಿ ಸಲೇರಾ ರಾಜ್ಯಕ್ಕೆ ಪ್ರಥಮ ರ‍್ಯಾಂಕ್‌ (Rank) ಪಡೆದಿದ್ದಾರೆ. ಎಲೆಕ್ಟ್ರಾನಿಕ್ಸ್ ಅಂಡ್ ಟೆಲಿಕಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿನಿ ಸ್ಮೃತಿ. ಕೆ.ವಂತಕರ್ ರಾಜ್ಯಕ್ಕೆ ಒಂಬತ್ತನೆ ರ‍್ಯಾಂಕ್‌ ಪಡೆದಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ರಾಷ್ಟ್ರೀಯ ಶಿಕ್ಷಣ ಸಮಿತಿ ಆಡಳಿತ ಮಂಡಳಿ ಸದಸ್ಯರು ಹಾಗೂ … Read more

ಕುವೆಂಪು ವಿಶ್ವವಿದ್ಯಾಲಯಕ್ಕೆ ನೂತನ ಕುಲಸಚಿವ, ಇವತ್ತು ಅಧಿಕಾರ ಸ್ವೀಕಾರ

Professor-P-Kannan-takes-charge-as-ne-Registrar-of-Kuvempu-University

SHIVAMOGGA LIVE | 28 JULY 2023 SHIMOGA : ಕುವೆಂಪು ವಿಶ್ವವಿದ್ಯಾಲಯದ ಕುಲಸಚಿವರಾಗಿ (Registrar) ಪ್ರೊ. ಪಿ.ಕಣ್ಣನ್‌ ಅಧಿಕಾರ ವಹಿಸಿಕೊಂಡರು. ಈ ಹಿಂದೆ ಅವರು ಕುವೆಂಪು ವಿವಿಯಲ್ಲಿ ಪರೀಕ್ಷಾಂಗ ಕುಲಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಪ್ರೊ. ಪಿ.ಕಣ್ಣನ್‌ ಅವರು ವಿಜಯಪುರ ಜಿಲ್ಲೆ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಇಂಗ್ಲೀಷ್‌ ಪ್ರಾಧ್ಯಾಪಕರಾಗಿ, ಆ ವಿಭಾಗದ ಮುಖ್ಯಸ್ಥರಾಗಿದ್ದರು. ಕುಲಸಚಿವರಾಗಿ (Registrar) ಅಧಿಕಾರ ವಹಿಸಕೊಂಡ ಪ್ರೊ. ಕಣ್ಣನ್‌ ಅವರಿಗೆ ಕುವೆಂಪು ವಿವಿ ಉಪನ್ಯಾಸಕರು, ಅಧಿಕಾರಿಗಳು, ಸಿಬ್ಬಂದಿ ಶುಭಾಶಯ ತಿಳಿಸಿದರು. ಇದನ್ನೂ ಓದಿ – ಸದ್ಯದಲ್ಲೇ ಶಿವಮೊಗ್ಗದಿಂದ … Read more