ತುಂಗಾ ಡ್ಯಾಂನ ಗೇಟ್‌ಗಳು ಮತ್ತೆ ಓಪನ್‌, ನಿನ್ನೆ ಎಲ್ಲ ಗೇಟ್‌ ಮೇಲೆತ್ತಲಾಗಿತ್ತು, ಇವತ್ತು ಹೊರ ಹರಿವು ಎಷ್ಟಿದೆ?

Gajanur-Dam-Shimoga-Tunga-Dam

SHIVAMOGGA LIVE | 21 JULY 2023 SHIMOGA : ಜಲಾನಯನ ಪ್ರದೇಶದಲ್ಲಿ  ಮಳೆ ಪ್ರಮಾಣ ಹೆಚ್ಚಳವಾದಂತೆ ತುಂಗಾ ಜಲಾಶಯದ (Dam) ಒಳ ಹರಿವು ಏರಿಕೆಯಾಗುತ್ತಿದೆ. ಪ್ರಸ್ತುತ ಜಲಾಶಯದಿಂದ 18,402 ಕ್ಯೂಸೆಕ್‌ ನೀರನ್ನು ಹೊರ ಬಿಡಲಾಗುತ್ತಿದೆ. ಅಷ್ಟೇ ಪ್ರಮಾಣದ ಒಳ ಹರಿವು ಇದೆ ಎಂದು ತಿಳಿದು ಬಂದಿದೆ. ಸದ್ಯ ತುಂಗಾ ಜಲಾಶಯದ 8 ಗೇಟ್‌ಗಳ ಮೂಲಕ ನೀರನ್ನು ಹೊಳೆಗೆ ಹರಿಸಲಾಗುತ್ತಿದೆ. ಸಂಜೆ ಹೊತ್ತಿಗೆ ಮಳೆ ಹೆಚ್ಚಳವಾಗುತ್ತಿದ್ದು ಜಲಾಶಯಕ್ಕೆ (Dam) ಹೆಚ್ಚಿನ ಪ್ರಮಾಣದ ನೀರು ಹರಿದು ಬರುತ್ತಿದೆ. ಈ … Read more

ಮನೆ ಗೇಟ್‌ ಮುಂದೆಯೆ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ, ಹತ್ಯೆಯಾದವನು ಯಾರು?

Bhadravathi-New-town-limits-mujahid-case

SHIVAMOGGA LIVE | 21 JULY 2023 BHADRAVATHI : ಪತ್ನಿ ಮನೆಯಿಂದ ಹೊರೆಗೆ ಬಂದಿದ್ದ ರೌಡಿ ಶೀಟರ್‌ ಮೇಲೆ ದಾಳಿ (Attack) ನಡೆಸಿ ಹತ್ಯೆ ಮಾಡಲಾಗಿದೆ. ಮುಜ್ಜು ಅಲಿಯಾಸ್‌ ಮುಜಾಹಿದ್‌ (35) ಹತ್ಯೆಯಾದವನು. ಭದ್ರಾವತಿಯ ಬೊಮ್ಮನಕಟ್ಟೆ ಬಡಾವಣೆ ಸಮೀಪ ಘಟನೆ ಸಂಭವಿಸಿದೆ. ಪತ್ನಿಯ ಮನೆಯಿಂದ ಹೊರ ಬಂದ ವೇಳೆ ಮುಜಾಹಿದ್‌ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಗೇಟ್‌ ಮುಂದೆಯೇ ಮುಜಾಹಿದ್‌ ಮುಖ ಮತ್ತು ಕೈ ಮೇಲೆ ಮಾರಕಾಸ್ತ್ರಗಳಿಂದ ದಾಳಿ (Attack) ಮಾಡಲಾಗಿದೆ. ಗೇಟ್‌ ಪಕ್ಕದಲ್ಲೇ ಮುಜಾಹಿದ್‌ನ … Read more

ಬೈಕ್‌ ಚಲಾಯಿಸಿ ಸಿಕ್ಕಿಬಿದ್ದ ಮಗ, ಅಪ್ಪನಿಗೆ 25 ಸಾವಿರ ದಂಡ, ಕಾರಣವೇನು?

Police-Jeep-at-Shimoga-General-Image

SHIVAMOGGA LIVE | 21 JULY 2023 BHADRAVATHI : ಅಪ್ರಾಪ್ತನಿಗೆ ದ್ವಿಚಕ್ರ ವಾಹನವನ್ನು (Bike Ride) ಚಾಲನೆಗೆ ನೀಡಿದ ಕಾರಣ ಬಾಲಕನ ತಂದೆಗೆ ಭದ್ರಾವತಿ ಜೆಎಂಎಫ್‌ಸಿ ನ್ಯಾಯಾಲಯ 25 ಸಾವಿರ ರೂ. ದಂಡ ವಿಧಿಸಿದೆ. ಜು.19ರಂದು ಹುತ್ತಾ ಕಾಲೋನಿ ಬಳಿ ಬೈಕ್‌ ಚಲಾಯಿಸಿಕೊಂಡು (Bike Ride) ಬಂದ ಅಪ್ರಾಪ್ತನನ್ನು ನ್ಯೂ ಟೌನ್‌ ಠಾಣೆ ಪಿಎಸ್‌ಐ ರಮೇಶ್‌ ಅಡ್ಡಗಟಿದ್ದರು. ಬಾಲಕನ ಬಳಿ ಯಾವುದೆ ದಾಖಲೆಗಳು ಇರಲಿಲ್ಲ. ಆತನಿಗೆ 18 ವರ್ಷವಾಗಿಲ್ಲ ಅನ್ನುವುದು ಖಾತ್ರಿಯಾಗಿದೆ. ಕೂಡಲೆ ಬಾಲಕನ ತಂದೆ … Read more

ಶಿವಮೊಗ್ಗ ಪೊಲೀಸರಿಂದ ಚರ್ಚ್‌ ಫಾದರ್‌ ಬಂಧನ, ವಿಚಾರಣೆ

Police-SP-Car-in-Shimoga

SHIVAMOGGA LIVE | 20 JULY 2023 SHIMOGA : ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯದ ಆರೋಪದ ಹಿನ್ನೆಲೆ ಕ್ರೈಸ್ತ ಪಾದ್ರಿಯೊಬ್ಬರ (Father) ವಿರುದ್ಧ ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ. ಸಂತ್ರಸ್ತೆ ಮತ್ತು ಆಕೆಯ ಕುಟುಂಬ ನೀಡಿದ ದೂರಿನ ಆಧಾರದಲ್ಲಿ ಶಿವಮೊಗ್ಗ ಪೊಲೀಸರು ಕ್ರೈಸ್ತ ಪಾದ್ರಿಯನ್ನು ಬಂಧಿಸಿ ವಿಚಾರಣೆ ನಡೆಸಿದರು. ಪಾದ್ರಿ ಕಾಲೇಜು ಒಂದರ ಪ್ರಾಂಶುಪಾಲರಾಗಿಯು ಜವಾಬ್ದಾರಿ ನಿಭಾಯಿಸುತ್ತಿದ್ದರು. ಇದನ್ನೂ ಓದಿ – ಪ್ರಾಣಿ ನುಂಗಿ ಚರಂಡಿಯಲ್ಲಿ ಮಲಗಿದ್ದ ಹೆಬ್ಬಾವು, ಹಗ್ಗ ಕಟ್ಟಿ ಮೇಲೆತ್ತಿದ ಗ್ರಾಮಸ್ಥರು ಪೋಕ್ಸೊ ಪ್ರಕರಣವಾಗಿರುವ … Read more

ಕುವೆಂಪು ವಿವಿ ಘಟಿಕೋತ್ಸವ, ರ‍್ಯಾಂಕ್ ವಿಜೇತರ ಪಟ್ಟಿ ಪ್ರಕಟ, ಹೆಚ್ಚು ಚಿನ್ನದ ಪದಕ ಪಡೆದವರಾರು?

Kuvempu-University-Vice-Chancellor-Prof-Veerabhadrappa.

SHIVAMOGGA LIVE | 20 JULY 2023 SHIMOGA : ಕುವೆಂಪು ವಿಶ್ವವಿದ್ಯಾಲಯದಲ್ಲಿ ಈ ಬಾರಿಯು ವಿದ್ಯಾರ್ಥಿನಿಯರು ಚಿನ್ನದ ಬೇಟೆ ಮುಂದುವರೆಸಿದ್ದಾರೆ. 33ನೇ ಘಟಿಕೋತ್ಸವದಲ್ಲಿ ಅತಿ ಹೆಚ್ಚು ಚಿನ್ನದ ಪದಕಗಳು ಮತ್ತು ನಗದು ಪುರಸ್ಕಾರಗಳನ್ನು (Rank Holders) ವಿದ್ಯಾರ್ಥಿನಿಯರೆ ಬಾಚಿಕೊಂಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಲಪತಿ ಪ್ರೊ. ಬಿ.ಪಿ.ವೀರಭದ್ರಪ್ಪ, ಜು.22ರಂದು ಶಂಕರಘಟ್ಟದ ಕುವೆಂಪು ವಿವಿ ಆವರಣದ ಬಸವ ಸಭಾ ಭವನದಲ್ಲಿ ಘಟಿಕೋತ್ಸವ ನಡೆಯಲಿದೆ. ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌, ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ.ಸುಧಾಕರ್‌ ಅವರು ಭಾಗವಹಿಸಲಿದ್ದಾರೆ. … Read more

ಅಡಿಕೆ ರೇಟ್‌ | 20 ಜುಲೈ 2023 | ಎಲ್ಲೆಲ್ಲಿ ಎಷ್ಟಿದೆ ಇವತ್ತಿನ ಅಡಿಕೆ ಧಾರಣೆ?

ADIKE-RATE-SHIVAMOGGA-LIVE-NEWS - Areca Price

SHIVAMOGGA LIVE | 20 JULY 2023 SHIMOGA : ಶಿವಮೊಗ್ಗ, ಸಾಗರ ಸೇರಿದಂತೆ ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಇವತ್ತಿನ ಅಡಿಕೆ ಧಾರಣೆ (Adike Rate) ಶಿವಮೊಗ್ಗ ಮಾರುಕಟ್ಟೆ ಗೊರಬಲು 21029 43259 ಬೆಟ್ಟೆ 49199 54699 ರಾಶಿ 40009 55099 ಸರಕು 53069 82696 ಸಾಗರ ಮಾರುಕಟ್ಟೆ ಕೆಂಪುಗೋಟು 26869 43609 ಕೋಕ 27869 36299 ಚಾಲಿ 34699 39399 ಬಿಳೆ ಗೋಟು 26161 33600 ರಾಶಿ 42009 53529 ಸಿಪ್ಪೆಗೋಟು 17699 22415 ಕಾರ್ಕಳ … Read more

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪಗೆ ಗೌರವ ಡಾಕ್ಟರೇಟ್‌, ಜು.21ರಂದು ಪ್ರದಾನ

yedyurappa-with-BY-Raghavendra-in-Shimoga

SHIVAMOGGA LIVE | 20 JULY 2023 SHIMOGA : ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ (Doctorate) ನೀಡಲಿದೆ. ಜು.21ರಂದು ನಡೆಯಲಿರುವ 8ನೇ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರು ಗೌರವ ಡಾಕ್ಟರೇಟ್‌ ಪ್ರಧಾನ ಮಾಡಲಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಲಪತಿ ಡಾ. ಆರ್‌.ಸಿ.ಜಗದೀಶ್‌ ಅವರು, ಮೂವರ ಹೆಸರನ್ನು ಅಂತಿಮಗೊಳಿಸಿ ರಾಜ್ಯಪಾಲರ ಅನುಮತಿಗೆ ಕಳುಹಿಸಲಾಗಿತ್ತು. ಕೃಷಿ ಕ್ಷೇತ್ರಕ್ಕೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕೊಡುಗೆ ಪರಿಗಣಿಸಿ … Read more

ಪ್ರಾಣಿ ನುಂಗಿ ಚರಂಡಿಯಲ್ಲಿ ಮಲಗಿದ್ದ ಹೆಬ್ಬಾವು, ಹಗ್ಗ ಕಟ್ಟಿ ಮೇಲೆತ್ತಿದ ಗ್ರಾಮಸ್ಥರು

200723-Ittigehalli-near-Holehonnuru-Hebbavu-caught-by-villagers.jpg

SHIVAMOGGA LIVE | 20 JULY 2023 HOLEHONNURU : ಚರಂಡಿ ಸ್ವಚ್ಛಗೊಳಿಸುವ ವೇಳೆ ಹೆಬ್ಬಾವು (the python) ಕಾಣಿಸಿಕೊಂಡಿದೆ. ಇದರಿಂದ ಕೆಲಕಾಲ ಕಾರ್ಮಿಕರು ಮತ್ತು ಗ್ರಾಮಸ್ಥರು ಆತಂಕಕ್ಕೀಡಾಗಿದ್ದರು. ಹೊಳೆಹೊನ್ನೂರು ಸಮೀಪದ ಇಟ್ಟಿಗೆಹಳ್ಳಿಯಲ್ಲಿ ಘಟನೆ ಸಂಭವಿಸಿದೆ. ಪ್ರಾಣಿ ನುಂಗಿ ಮಲಗಿತ್ತು ಇಟ್ಟಿಗೆಹಳ್ಳಿಯಲ್ಲಿ ಚರಂಡಿ ಸ್ವಚ್ಛತಾ ಕಾರ್ಯದ ವೇಳೆ ಹೆಬ್ಬಾವು (the python) ಕಾಣಿಸಿಕೊಂಡಿದೆ. ಕೂಡಲೆ ಕಾರ್ಮಿಕರು ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದು, ಜನರು ತಂಡೋಪ ತಂಡವಾಗಿ ಸ್ಥಳಕ್ಕೆ ಆಗಮಿಸಿ ಹೆಬ್ಬಾವನ್ನು ವೀಕ್ಷಿಸಿದರು. ಯಾವುದೋ ಪ್ರಾಣಿಯನ್ನು ನುಂಗಿದ್ದ ಹೆಬ್ಬಾವು, ಚರಂಡಿಯಲ್ಲಿ ಮಲಗಿತ್ತು. … Read more

ಶಿವಮೊಗ್ಗ ಜಿಲ್ಲೆಯಲ್ಲಿ ಕಳೆಗಟ್ಟಿದ ಮಳೆ, ಅಲ್ಲಲ್ಲಿ ಮರಗಳು ಧರೆಗೆ, ಕೆಲವೆಡೆ ಗೋಡೆ ಕುಸಿತ, ಛಾವಣಿಗೆ ಹಾನಿ

ree-falls-on-Thirthahalli-Shimoga-highway

SHIVAMOGGA LIVE | 20 JULY 2023 SHIMOGA : ಜಿಲ್ಲೆಯಾದ್ಯಂತ ಮಳೆ ಮುಂದುವರೆದಿದೆ. ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಹೊಂದಿಕೊಂಡಂತೆ ಇರುವ ಜಿಲ್ಲೆಯ ಭಾಗಗಲ್ಲಿ ಜೋರು ಮಳೆಯಾಗುತ್ತಿದೆ (Rain). ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ ನಿರಂತರ ಮಳೆಯಾಗುತ್ತಿದೆ. ಅರೆ ಮಲೆನಾಡು ಭಾಗದಲ್ಲಿ ಸೋನೆ ಸುರಿದು ಕೆಲ ಹೊತ್ತು ಬಿಡುವು ನೀಡುತ್ತಿದೆ. ನಿರಂತರ ಮಳೆಯಿಂದಾಗಿ ಅಲ್ಲಲ್ಲಿ ಮನೆಗಳಿಗೆ ಹಾನಿ, ಮರಗಳು ಧರೆಗುರುಳಿರುವ ವರದಿಯಾಗಿದೆ. ರಾತ್ರಿಯಿಂದಲೆ ಅಬ್ಬರದ ಮಳೆ ತೀರ್ಥಹಳ್ಳಿ ಮತ್ತು ಹೊಸನಗರ ತಾಲೂಕಿನ ವಿವಿಧೆಡೆ ಭಾರಿ ಮಳೆಯಾಗುತ್ತಿದೆ. ಹೊಸನಗರದ … Read more

ಶಿವಮೊಗ್ಗಕ್ಕೆ ರಾಜ್ಯಪಾಲ ಥಾವರ್‌ ಚೆಂದ್‌ ಗೆಹ್ಲೋಟ್‌, 2 ದಿನ ಪ್ರವಾಸ, ಎಲ್ಲಿಗೆಲ್ಲ ಭೇಟಿ ನೀಡಲಿದ್ದಾರೆ?

Karnataka-Governer-Thawar-Chand-Gehlot-in-Kuvempu-University

SHIVAMOGGA LIVE | 19 JULY 2023 SHIMOGA : ರಾಜ್ಯಪಾಲ (Governor) ಥಾವರ್‌ ಚಂದ್‌ ಗೆಹ್ಲೋಟ್‌ ಅವರು ಎರಡು ದಿನ ಶಿವಮೊಗ್ಗ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ಜು.21 ಮತ್ತು 22ರಂದು ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಈ ವೇಳೆ ಎರಡು ವಿಶ್ವವಿದ್ಯಾಲಯಗಳ ಘಟಿಕೋತ್ಸವದಲ್ಲಿ ಭಾಗವಹಿಸಲಿದ್ದಾರೆ. ರಾಜ್ಯಪಾಲರ ಭೇಟಿಯ ವಿವರ ರಾಜ್ಯಪಾಲ (Governor) ಥಾವರ್‌ ಚಂದ್‌ ಗೆಹ್ಲೋಟ್‌ ಅವರು ಜು.21ರಂದು ಬೆಳಗ್ಗೆ 9 ಗಂಟೆಗೆ ಬೆಂಗಳೂರಿನ ರಾಜಭವನದಿಂದ ನಿರ್ಗಮಿಸಲಿದ್ದಾರೆ. ಚಿತ್ರದುರ್ಗ ಮಾರ್ಗವಾಗಿ ಮಧ್ಯಾಹ್ನ 1.45ಕ್ಕೆ ಶಿವಮೊಗ್ಗ ತಲುಪಲಿದ್ದಾರೆ. ನಗರದ … Read more