ರೈಲು ಡಿಕ್ಕಿಯಾಗಿ ಹಳಿ ಪಕ್ಕದ ಚರಂಡಿಯಲ್ಲಿ ಸಿಲುಕಿದ ಕಾಡು ಕೋಣ

Bison-trapped-at-Railway-Drinage-at-Rechikoppa-in-Kumsi

SHIVAMOGGA LIVE NEWS | 17 MAY 2023 SHIMOGA : ರೈಲು ಡಿಕ್ಕಿ ಹೊಡೆದು ಗಾಯಗೊಂಡಿರುವ ಕಾಡುಕೋಣವೊಂದು (Bison) ಹಳಿ ಪಕ್ಕದ ಚರಂಡಿಯಲ್ಲಿ ಸಿಕ್ಕಿಬಿದ್ದಿದೆ. ಶಿವಮೊಗ್ಗ ತಾಲೂಕು ಕುಂಸಿ ಸಮೀಪದ ರೇಚಿಕೊಪ್ಪ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಇವತ್ತು ಬೆಳಗ್ಗೆ ಕಾಡು ಕೋಣವೊಂದಕ್ಕೆ ರೈಲು ಡಿಕ್ಕಿ ಹೊಡೆದಿದೆ. ಗಾಯಗೊಂಡಿರುವ ಕಾಡು ಕೋಣ (Bison) ಹಳಿ ಪಕ್ಕದ ಚರಂಡಿಗೆ ಬಿದ್ದಿದೆ. ಮುಂಭಾಗದ ಕಾಲು ಚರಂಡಿ ಮೇಲೆ, ಸಿಲುಕಿದೆ. ಸ್ಥಳೀಯರು ಇದನ್ನು ಗಮನಿಸಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. … Read more

ದಿಢೀರ್‌ ಅಸ್ವಸ್ಥಗೊಂಡು 8 ಜಾನುವಾರುಗಳು ಸಾವು, ಮರಣೋತ್ತರ ಪರೀಕ್ಷೆ ಬಳಿಕ ಪ್ರಯೋಗಾಲಯಕ್ಕೆ ಮಾದರಿ ರವಾನೆ

Cows-Succumbed-consuming-poisonous-plant

SHIVAMOGGA LIVE NEWS | 17 MAY 2023 SORABA : ವಿಷದ ಹುಲ್ಲು ಸೇವಿಸಿ 8 ಜಾನುವಾರುಗಳು (Cows) ಸಾವನ್ನಪ್ಪಿವೆ. ಸೊರಬ ತಾಲೂಕು ಕೆರೆಕೊಪ್ಪ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ದ್ಯಾವರಾಯಪ್ಪ ಮತ್ತು ರಾಮಣ್ಣ ಎಂಬುವವರಿಗೆ ಸೇರಿದ ತಲಾ ನಾಲ್ಕು ಜಾನುವಾರುಗಳು ಸಾವನ್ನಪ್ಪಿವೆ. ಜಮೀನಿನಲ್ಲಿ ಮೆಕ್ಕೆಜೋಳ ಕಟಾವು ಮಾಡಿದ್ದು, ಅದರಲ್ಲಿ ಬೆಳೆದ ಮರುಕೊಳೆ ಹುಲ್ಲು ಸೇವಿಸಿದ 10 ಜಾನುವಾರುಗಳು ಅಸ್ವಸ್ಥಗೊಂಡಿದ್ದವು. ಪಶು ವೈದ್ಯರು ಚಿಕಿತ್ಸೆ ನೀಡಿದ್ದರಿಂದ ಎರಡು ಜಾನುವಾರುಗಳು ಬದುಕುಳಿದಿವೆ. WATCH VIDEO ಜಾನುವಾರುಗಳ (Cows) ಮರಣೋತ್ತರ … Read more

ಮರಕ್ಕೆ ಕಾರು ಡಿಕ್ಕಿಯಾಗಿ ಕಾಂಗ್ರೆಸ್‌ ಮುಖಂಡ ಸಾವು, ಇನ್ನಿಬ್ಬರಿಗೆ ಗಾಯ

Car-Mishap-near-anandapura-congress-leader-dies

SHIVAMOGGA LIVE NEWS | 17 MAY 2023 ANANDAPURA : ರಸ್ತೆ ಪಕ್ಕದ ಮರಕ್ಕೆ ಕಾರು (Car) ಡಿಕ್ಕಿಯಾಗಿ ಕಾಂಗ್ರೆಸ್‌ ಮುಖಂಡ ಸಾವನ್ನಪ್ಪಿದ್ದಾರೆ. ಕಾರಿನಲ್ಲಿದ್ದ ಮತ್ತಿಬ್ಬರು ಗಾಯಗೊಂಡಿದ್ದು, ಈ ಪೈಕಿ ಒಬ್ಬನಿಗೆ ಗಂಭೀರ ಗಾಯವಾಗಿದೆ. ಸಾಗರ ತಾಲೂಕು ಆನಂದಪುರ ಸಮೀಪ ಅಂಬ್ಲಿಗೊಳ ಬಳಿ ಘಟನೆ ಸಂಭವಿಸಿದೆ. ಕಾಂಗ್ರೆಸ್‌ ಮುಖಂಡ ತುರುಗೋಡು ನಾಗರಾಜ ಗೌಡ (55) ಮೃತಪಟ್ಟಿದ್ದಾರೆ. WATCH VIDEO ಶಿಕಾರಿಪುರದಿಂದ ಮಾರುತಿ ಸ್ವಿಫ್ಟ್‌ ಕಾರಿನಲ್ಲಿ (Car) ತಮ್ಮೂರಿಗೆ ಹಿಂತಿರುಗುತ್ತಿದ್ದರು. ಈ ವೇಳೆ ನಿಯಂತ್ರಣ ತಪ್ಪಿದ ಕಾರು … Read more

ಶಿವಮೊಗ್ಗದಲ್ಲಿ ಚರಂಡಿಗೆ ಸ್ಲ್ಯಾಬ್‌ ಬದಲು ಡಾ. ಅಂಬೇಡ್ಕರ್‌ ನಾಮಫಲಕದ ಹೊದಿಕೆ, ಕ್ರಮಕ್ಕೆ ಒತ್ತಾಯ

SDPI-Imran-Urges-action-against-officers-for-disrespecting-Dr-Ambedkar

SHIVAMOGGA LIVE NEWS | 16 MAY 2023 SHIMOGA : ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್‌ (Dr Ambedkar) ಅವರ ನಾಮಫಲಕವನ್ನು ಚರಂಡಿಗೆ ಹೊದಿಕೆ ಮಾಡಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಎಸ್‌ಡಿಪಿಐ ಸಂಘಟನೆ ಆಗ್ರಹಿಸಿದೆ. ಈ ಕುರಿತು ಪ್ರಕಟಣೆ ಹೊರಡಿಸಿರುವ ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಇಮ್ರಾನ್‌, ಡಾ. ಬಿ.ಆರ್.ಅಂಬೇಡ್ಕರ್‌ (Dr Ambedkar) ಅವರಿಗೆ ಅವಮಾನ ಮಾಡುವುದನ್ನು ಸಹಿಸಲು ಸಾಧ್ಯವಿಲ್ಲ. ಜೈಲ್‌ ಸರ್ಕಲ್‌ನಲ್ಲಿ ಪೊಲೀಸ್‌ ಚೌಕಿ ಪಕ್ಕದಲ್ಲಿ ಅಂಬೇಡ್ಕರ್‌ ಅವರ ಹೆಸರಿನ ಫಲಕವನ್ನು ಚರಂಡಿಗೆ … Read more

ಸಾಗರ ನಗರಸಭೆಗೆ ಕಾಗೋಡು ತಿಮ್ಮಪ್ಪ ನೇತೃತ್ವದ ನಿಯೋಗ, ಐದು ವರ್ಷದ ಆಡಳಿತದ ವಿರು‍ದ್ಧ ಆಕ್ರೋಶ

Former-Minister-Kagodu-Thimmappa-visit-Sagara-Nagara-Sabhe

SHIVAMOGGA LIVE NEWS | 16 MAY 2023 SAGARA : ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ಅತಿ ಹೆಚ್ಚು ಸ್ಥಾನ ಗೆಲ್ಲಲು ಗ್ಯಾರಂಟಿ ಕಾರ್ಡ್‌ (Guarantee Card) ಪ್ರಮುಖ ಪಾತ್ರ ವಹಿಸಿದೆ. ಹಾಗಾಗಿ ಸರ್ಕಾರ ರಚನೆಯಾಗುತ್ತಿದ್ದಂತಗೆ ಗ್ಯಾರಂಟಿ ಕಾರ್ಡ್‌ನಲ್ಲಿರುವ ಭರವಸೆಗಳನ್ನು ಕೂಡಲೆ ಈಡೇರಿಸುವ ನಂಬಿಕೆ ಇದೆ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಗೋಡು ತಿಮ್ಮಪ್ಪ ಅವರು, ಸಾಗರ ಕ್ಷೇತ್ರದಲ್ಲಿ ಕಳೆದ ಐದು ವರ್ಷದಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿದೆ. ಅಭಿವೃದ್ದಿ ಮರೀಚಿಕೆಗೆಯಾಗಿತ್ತು. ತಾನು ಶಾಸಕನಾಗಿದ್ದ … Read more

ಸಾಗರದಲ್ಲಿ ವಿದ್ಯಾರ್ಥಿಗಳ ದಿಢೀರ್‌ ಪ್ರತಿಭಟನೆ, ಶಾಸಕ ಬೇಳೂರು ಗೋಪಾಲಕೃಷ್ಣ ಫೋನ್‌ ಬಳಿಕ ಹೋರಾಟ ಅಂತ್ಯ

Students-protest-for-KSRTC-Buses-in-Sagara

SHIVAMOGGA LIVE NEWS | 16 MAY 2023 SAGARA : ಕಾಲೇಜು ಬಳಿ ಕೆಎಸ್‌ಆರ್‌ಟಿಸಿ ಬಸ್ಸುಗಳ (Protest For Bus) ನಿಲುಗಡೆಗೆ ಒತ್ತಾಯಿಸಿ ಸಾಗರದ ಸರ್ಕಾರಿ ಪದವಿ ಕಾಲೇಜು ವಿದ್ಯಾರ್ಥಿಗಳು ಬಸ್‌ಗಳನ್ನು ತಡೆದು ದಿಢೀರ್‌ ಪ್ರತಿಭಟನೆ ನಡೆಸಿದರು. ಸರ್ಕಾರಿ ಪದವಿ ಕಾಲೇಜು ಬಳಿ ಕೆಎಸ್‌ಆರ್‌ಟಿಸಿ ಬಸ್ಸುಗಳನ್ನು ನಿಲ್ಲಿಸುತ್ತಿಲ್ಲ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು. ಬಸ್ಸುಗಳನ್ನು ತಡೆದು ಪ್ರತಿಭಟನೆ ನಡೆಸಿದರು. WATCH VIDEO ಸ್ಥಳಕ್ಕೆ ಆಗಮಿಸಿದ ಡಿಪೋ ಮ್ಯಾನೇಜರ್‌ ರಾಜಪ್ಪ ಅವರು, ಬೆಳಗ್ಗೆ ಸಾಗರ – ಶಿವಮೊಗ್ಗ … Read more

ಅಡಕೆ ಧಾರಣೆ | 16 ಮೇ 2023 | ಯಾವ್ಯಾವ ಮಾರುಕಟ್ಟೆಗಳಲ್ಲಿ ಎಷ್ಟಿದೆ ಅಡಕೆ ರೇಟ್?

Areca Price in Shimoga APMC

SHIVAMOGGA LIVE NEWS | 16 MAY 2023 SHIMOGA : ಶಿವಮೊಗ್ಗ, ಸಾಗರ, ಭದ್ರಾವತಿ ಸೇರಿದಂತೆ ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಇವತ್ತಿನ ಅಡಕೆ ಧಾರಣೆ (adike rate) ಶಿವಮೊಗ್ಗ ಮಾರುಕಟ್ಟೆ ಗೊರಬಲು 18000 34651 ಬೆಟ್ಟೆ 46500 53599 ರಾಶಿ 34169 48100 ಸರಕು 45159 81519 ಸಾಗರ ಮಾರುಕಟ್ಟೆ ಕೆಂಪುಗೋಟು 30989 33699 ಕೋಕ 24223 31989 ಚಾಲಿ 35299 36400 ಬಿಳೆ ಗೋಟು 15690 31170 ರಾಶಿ 33009 47219 ಸಿಪ್ಪೆಗೋಟು 19866 … Read more

ಲಾರಿ ಚಾಲಕನ ತಲೆಗೆ ಕ್ರಿಕೆಟ್‌ ಬ್ಯಾಟ್‌ನಿಂದ ಹೊಡೆದ ಯುವಕರು, ಮೆಗ್ಗಾನ್‌ ಆಸ್ಪತ್ರೆಗೆ ದಾಖಲು

Crime-News-General-Image

SHIVAMOGGA LIVE NEWS | 16 MAY 2023 SHIMOGA : ಕ್ರಿಕೆಟ್‌ ಆಡುವಾಗ ಕ್ಷುಲಕ ವಿಚಾರಕ್ಕೆ ಜಗಳವಾಗಿದ್ದು ಇಬ್ಬರು ಯುವಕರು ಲಾರಿ ಚಾಲಕನ (Truck Driver) ತಲೆಗೆ ಬ್ಯಾಟ್‌ನಿಂದ ಹೊಡೆದು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಹಲ್ಲೆಯಿಂದ ತೀವ್ರ ನೋವಾಗಿರುವ ಹಿನ್ನೆಲೆ ಲಾರಿ ಚಾಲಕನನ್ನು ಮೆಗ್ಗಾನ್‌ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. WATCH VIDEO ಲಾರಿ ಚಾಲಕ ದೇವಕಾತಿಕೊಪ್ಪದ ಸುಧಾಕರ್‌.ಎನ್‌ ಅವರು ಭಾನುವಾರ ಕೆಐಒಬಿ ಲೇಔಟ್‌ನಲ್ಲಿ ಊರಿನ ಹುಡುಗರೊಂದಿಗೆ ಕ್ರಿಕೆಟ್‌ ಆಡಲು ತೆರಳಿದ್ದರು. ಈ ವೇಳೆ ಕ್ಷುಲಕ … Read more

ಶಿವಮೊಗ್ಗದಲ್ಲಿ ಬೈಕ್‌ಗೆ ಸಿಟಿ ಬಸ್‌ ಡಿಕ್ಕಿ, ರೊಚ್ಚಿಗೆದ್ದ ಜನರಿಂದ ಗ್ಲಾಸ್‌ಗೆ ಕಲ್ಲು

bus-collides-with-bike-glass-break-in-Shimoga-Mahaveera-Circle

SHIVAMOGGA LIVE NEWS | 16 MAY 2023 SHIMOGA : ಬಸ್‌ ಮತ್ತು ಬೈಕ್‌ ಮಧ್ಯೆ ಡಿಕ್ಕಿಯಾಗಿ ಬೈಕ್‌ ಸವಾರ ಗಾಯಗೊಂಡಿದ್ದಾರೆ. ಇದರಿಂದ ರೊಚ್ಚಿಗೆದ್ದ ಬೈಕ್‌ ಸವಾರನ ಕಡೆಯವರು ಬಸ್ಸಿನ ಗಾಜಿಗೆ (Glass Break) ಕಲ್ಲು ತೂರಿದ್ದಾರೆ. ಶಿವಮೊಗ್ಗದ ಮಹಾವೀರ ವೃತ್ತದಲ್ಲಿ ಘಟನೆ ಸಂಭವಿಸಿದೆ. ಗೋಪಿ ಸರ್ಕಲ್‌ ಕಡೆಯಿಂದ ಶಾಂತಿ ನಗರ ಕಡೆಗೆ ತೆರಳುತ್ತಿದ್ದ ಸಿಟಿ ಬಸ್‌, ಜಿಲ್ಲಾಧಿಕಾರಿ ಕಚೇರಿ ಕಡೆಯಿಂದ ತೆರಳುತ್ತಿದ್ದ ಹೋಂಡಾ ಆಕ್ಟೀವಾ ಬೈಕ್‌ ಡಿಕ್ಕಿಯಾಗಿವೆ. ಮಹಾವೀರ ಸರ್ಕಲ್‌ನ ಸಿಗ್ನಲ್‌ನಲ್ಲಿ ಅಪಘಾತವಾಗಿದೆ. WATCH … Read more

ಜೈಲ್‌ ಸರ್ಕಲ್‌ನಲ್ಲಿ ಸ್ವಲ್ಪ ಯಾಮಾರಿದ್ರು ಬೈಕ್‌ ಸವಾರರಿಗೆ ಅಪಾಯ ಫಿಕ್ಸ್‌

Unfinished-Smart-city-works-in-Shimoga-Jail-Circle.

SHIVAMOGGA LIVE NEWS | 16 MAY 2023 SHIMOGA : ಸ್ಮಾರ್ಟ್‌ ಸಿಟಿ (Smart City) ಯೋಜನೆಯ ಅಪೂರ್ಣ ಕಾಮಗಾರಿಯಿಂದ ಜೈಲ್‌ ವೃತ್ತದಲ್ಲಿ ವಾಹನ ಸವಾರರು ಸಮಸ್ಯೆ ಅನುಭವಿಸುವಂತಾಗಿದೆ. ತಿರುವಿನಲ್ಲಿ ಕಾಮಗಾರಿ ಪೂರ್ಣಗೊಳ್ಳದೆ ಜೆಲ್ಲಿ ಕಲ್ಲುಗಳನ್ನು ಹಾಗೆ ಬಿಡಲಾಗಿದೆ. ಇದು ದ್ವಿಚಕ್ರ ವಾಹನ ಸವಾರರಿಗೆ ಸಂಕಷ್ಟ ತಂದೊಡ್ಡಿದೆ. ಜೈಲ್‌ ವೃತ್ತದ ಒಂದು ಬದಿಯಲ್ಲಿ ಸ್ಮಾರ್ಟ್‌ ಸಿಟಿ (Smart City) ಯೋಜನೆಯ ಕಾಮಗಾರಿ ಪೂರ್ಣಗೊಂಡಿಲ್ಲ. ಹೈಟೆಕ್‌ ಪೊಲೀಸ್‌ ಚೌಕಿ ನಿರ್ಮಿಸಿ, ಅದರ ಮುಂದೆ ರಸ್ತೆ ಕಾಮಗಾರಿಯನ್ನು ಅರ್ಧಕ್ಕೆ … Read more