ಸಾವಿರ ಸಾವಿರ ಅಭಿಮಾನಿಗಳೊಂದಿಗೆ ಮೆರವಣಿಗೆ, ಸಾಗರದಲ್ಲಿ ಹಾಲಪ್ಪ ಉಮೇದುವಾರಿಕೆ

BJP-Haratalu-Halappa-Nomination-in-Sagara.

SHIVAMOGGA LIVE NEWS | 12 APRIL 2023 SAGARA : ಬಿಜೆಪಿ ಅಭ್ಯರ್ಥಿ ಹರತಾಳು ಹಾಲಪ್ಪ  ಅವರು ಇವತ್ತು ನಾಮಪತ್ರ ಸಲ್ಲಿಸಿದರು. ದೊಡ್ಡ ಸಂಖ್ಯೆಯ ಅಭಿಮಾನಿಗಳು, ಬೆಂಬಲಿಗರ ಜೊತೆಗೆ ಮೆರವಣಿಗೆ ನಡೆಸಿದ ಹಾಲಪ್ಪ ಅವರು, ಚುನಾವಣಾಧಿಕಾರಿ ಕಚೇರಿಯಲ್ಲಿ ನಾಮಪತ್ರ (Nomination) ಸಲ್ಲಿಸಿದರು. ಪತ್ನಿ ಯಶೋಧ, ಈಚೆಗಷ್ಟೆ ಬಿಜೆಪಿ ಸೇರ್ಪಡೆಯಾದ ಡಾ. ರಾಜನಂದಿನಿ ಕಾಗೋಡು, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್‌, ರಾಜೇಶ್‌ ಕೀಳಂಬಿ ಅವರೊಂದಿಗೆ ಉಪ ವಿಭಾಗಾಧಿಕಾರಿ ಕಚೇರಿಯಲ್ಲಿ ಚುನಾವಣಾಧಿಕಾರಿಗೆ ನಾಮಪತ್ರ (Nomination) ಸಲ್ಲಿಸಿದರು. ಹುಟ್ಟೂರು, ಸಾಗರದಲ್ಲಿ ಪೂಜೆ … Read more

ಶಿವಮೊಗ್ಗ – ಆಯನೂರು ರಸ್ತೆಯಲ್ಲಿ ಹಿಟ್ ಅಂಡ್ ರನ್‍ ಅಪಘಾತ, ಒಬ್ಬ ಸಾವು, ಮತ್ತಿಬ್ಬರಿಗೆ ಗಂಭೀರ ಗಾಯ

Sagara-Road-Gadikoppa-Shimoga-city

SHIVAMOGGA LIVE NEWS | 15 APRIL 2023 SHIMOGA : ಚಲಿಸುತ್ತಿದ್ದ ಬೈಕಿಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಒಬ್ಬ ಬೈಕ್ ಸವಾರ ಮೃತಪಟ್ಟಿದ್ದು, ಇನ್ನಿಬ್ಬರು ಗಂಭೀರ ಗಾಯಗೊಂಡಿದ್ದಾರೆ. ಅಪಘಾತದ ಬಳಿಕ ಚಾಲಕ ಕಾರು ನಿಲ್ಲಿಸದೆ ಪರಾರಿಯಾಗಿದ್ದು, ಹಿಟ್ ಅಂಡ್ ರನ್ (Hit and Run) ಪ್ರಕರಣ ದಾಖಲಾಗಿದೆ. ಶಿವಮೊಗ್ಗದ ತ್ಯಾವರೆಕೊಪ್ಪದ ಸಿಂಹಧಾಮದ (Lion Safari) ಬಳಿ ಘಟನೆ ಸಂಭವಿಸಿದೆ. ದಾವಣಗೆರೆ ಜಿಲ್ಲೆಯ ನ್ಯಾಮತಿಯ ರಮೇಶ್ (43) ಮೃತಪಟ್ಟಿದ್ದಾನೆ. ಶಿವಮೊಗ್ಗದ ಚಿನ್ಮನೆ (Chinmane) ಗ್ರಾಮದ … Read more

ಶಿವಮೊಗ್ಗದ ರಾಮಣ್ಣ ಶ್ರೇಷ್ಠಿ ಪಾರ್ಕ್ನಿಂದ ಸೈಕಲ್ ಜಾಥಾ, ಎಲ್ಲೆಲ್ಲಿ ಸಾಗಿತು? ಉದ್ದೇಶವೇನು?

Cycle-Jaatha-For-Election-SWEEP-Programme

SHIVAMOGGA LIVE NEWS | 14 APRIL 2023 SHIMOGA : ಮತದಾನ ಜಾಗೃತಿಗಾಗಿ ಶಿವಮೊಗ್ಗ ನಗರದಲ್ಲಿ ಸೈಕಲ್ ಜಾಥಾ ಆಯೋಜಿಸಲಾಗಿತ್ತು. ರಾಮಣ್ಣ ಶ್ರೇಷ್ಠಿ ಪಾರ್ಕ್‍ನಿಂದ ನಗರದ ವಿವಿಧೆಡೆ ಜಾಥಾ (Jaatha) ನಡೆಸಿ, ಜಾಗೃತಿ ಮೂಡಿಸಲಾಯಿತು. ಜಿಲ್ಲಾಡಳಿತ, ಮಹಾನಗರ ಪಾಲಿಕೆಯ ಸ್ವೀಪ್ ಸಮಿತಿ ವತಿಯಿಂದ ಮತದಾನ ಜಾಗೃತಿಗಾಗಿ ಸೈಕಲ್ ಜಾಥಾ (Jaatha) ನಡೆಸಲಾಯಿತು. ಪಾಲಿಕೆಯ ನಲ್ಮ್ ಅಧಿಕಾರಿ ಅನುಪಮಾ ಅವರು ಸೈಕಲ್ ಜಾಥಾಗೆ ಹಸಿರು ನಿಶಾನೆ ತೋರಿಸಿದರು. ರಾಮಣ್ಣ ಶ್ರೇಷ್ಠಿ ಪಾರ್ಕ್‍ನಿಂದ ಕೋಟೆ ರಸ್ತೆ, ಬೆಕ್ಕಿನಕಲ್ಮಠ, ಬಿ.ಹೆಚ್.ರಸ್ತೆ, … Read more

ಯಡಿಯೂರಪ್ಪ, ಕಾಂತೇಶ್ ಭೇಟಿ ಕುತೂಹಲದ ಮಧ್ಯೆ ಬಿಜೆಪಿ ಟಿಕೆಟ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಿಸಿ ಬಿಸಿ ಚರ್ಚೆ

KE-Kantesh-meets-BS-Yedyurappa-in-Bangalore

SHIVAMOGGA LIVE NEWS | 14 APRIL 2023 SHIMOGA : ವಿಧಾನಸಭೆ ಚುನಾವಣೆಗೆ ಶಿವಮೊಗ್ಗದ ಅಭ್ಯರ್ಥಿಗಳ ಕುರಿತು ಕುತೂಹಲ ಮುಂದುವರೆದಿದೆ. ಈಶ್ವರಪ್ಪ ಪುತ್ರ ಕೆ.ಈ.ಕಾಂತೇಶ್ ಅವರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿಯಾಗಿರುವುದು ಚರ್ಚೆ ಹುಟ್ಟುಹಾಕಿದೆ. ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ಹಲವರ ಹೆಸರುಗಳು ಮುನ್ನಲೆಗೆ ಬಂದಿವೆ. ಆಕಾಂಕ್ಷಿಗಳಿಗೆ ಶುಭ ಕೋರುವ ಸಂದೇಶಗಳನ್ನೂ ಪ್ರಕಟಿಸಲಾಗುತ್ತಿದೆ. ticket ಯಡಿಯೂರಪ್ಪ, ಕಾಂತೇಶ್ ಭೇಟಿ ಚುನಾವಣಾ ರಾಜಕೀಯಕ್ಕೆ ಕೆ.ಎಸ್.ಈಶ್ವರಪ್ಪ ನಿವೃತ್ತಿ ಘೋಷಿಸಿದ್ದಾರೆ. ಹಾಗಾಗಿ ಅವರ ಪುತ್ರನಿಗೆ ಟಿಕೆಟ್ ನೀಡಬೇಕು ಎಂದು … Read more

ಹೊಳಲೂರು ಸೇತುವೆ ಬಳಿ ಹಿಟ್ ಅಂಡ್ ರನ್ ಅಪಘಾತ, ದಂಪತಿ ಆಸ್ಪತ್ರೆಗೆ ದಾಖಲು

ACCIDENT-NEWS-GENERAL-IMAGE.

SHIVAMOGGA LIVE NEWS | 14 APRIL 2023 SHIMOGA : ರಸ್ತೆ ಬದಿ ನಡೆದು ಹೋಗುತ್ತಿದ್ದ ದಂಪತಿಗೆ (Couple) ಬೈಕ್ ಡಿಕ್ಕಿ ಹೊಡೆದು ಗಾಯಗೊಂಡಿದ್ದಾರೆ. ಅವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗಳಿಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆನವೇರಿ ಗ್ರಾಮದ ಎಸ್‍.ಎಂ.ವಲ್ಲಿ ಮತ್ತು ಆತನ ಪತ್ನಿ ನಜ್ಮಾ ಬಾನು ಗಾಯಾಳುಗಳು. ಹೊಳಲೂರು ಆಸ್ಪತ್ರೆಗೆ ನಡೆದು ಹೋಗುತ್ತಿದ್ದಾಗ ಘಟನೆ ಸಂಭವಿಸಿದೆ. ಹೊಳಲೂರು ಹೊಸ ಸೇತುವೆ ದಾಟಿ ಸ್ವಲ್ಪ ಮುಂದೆ ಹೋಗುತ್ತಿದ್ದಾಗ, ಹಿಂಬದಿಯಿಂದ ವೇಗವಾಗಿ ಬಂದ ಬೈಕ್ ಡಿಕ್ಕಿ ಹೊಡೆದಿದೆ. … Read more

ಲಾರಿಯಲ್ಲಿ ಸಾಗಿಸಲಾಗುತ್ತಿತ್ತು 46 ಬೈಕ್, ಯಾವುದಕ್ಕೂ ಇರಲಿಲ್ಲ ಡಾಕ್ಯೂಮೆಂಟ್

46-bikes-seized-for-not-having-valid-documents

SHIVAMOGGA LIVE NEWS | 14 APRIL 2023 SAGARA : ಸೂಕ್ತ ದಾಖಲೆ ಇಲ್ಲದೆ ಕಂಟೇನರ್ ಲಾರಿಯಲ್ಲಿ ಸಾಗಿಸುತ್ತಿದ್ದ 46 ಹೊಸ ಬೈಕುಗಳನ್ನು (Bikes) ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಚೆಕ್‍ ಪೋಸ್ಟ್‍ನಲ್ಲಿ ತಪಾಸಣೆ ವೇಳೆ ಬೈಕುಗಳ ಸಾಗಣೆ ಬೆಳಕಿಗೆ ಬಂದಿದೆ. 33,78,336 ರೂ. ಮೌಲ್ಯದ ಬೈಕುಗಳನ್ನು ವಶಕ್ಕೆ ಪಡೆಯಲಾಗಿದೆ. ಕಾರ್ಗಲ್ ಪಿಎಸ್‍ಐ ತಿರುಮಲೇಶ್ ನೇತೃತ್ವದಲ್ಲಿ ಪರಿಶೀಲನೆ ವೇಳೆ ಬೈಕುಗಳು ಪತ್ತೆಯಾಗಿದೆ. ಸಾಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ – ಶಿವಮೊಗ್ಗ … Read more

ಶಿವಮೊಗ್ಗದಲ್ಲಿ ಆಲದ ಮರದ ಕೆಳಗೆ ವಾಮಾಚಾರ, ಜೀವಂತ ಕುರಿ ಪತ್ತೆ, ಚುನಾವಣೆಗಾಗಿ ನಡೆಯಿತಾ ಕೃತ್ಯ?

Black-magic-muddinakoppa-near-ayanuru-in-Shimoga

SHIVAMOGGA LIVE NEWS | 14 APRIL 2023 SHIMOGA : ರಾಷ್ಟ್ರೀಯ ಹೆದ್ದಾರಿ ಬದಿಯ ಆಲದ ಮರದ ಕೆಳಗೆ ವಾಮಾಚಾರ (Black Magic) ಮಾಡಲಾಗಿದೆ. ವಾಮಾಚಾರಕ್ಕೆ ಬಳಸಿದ ವಸ್ತುಗಳು ಮತ್ತು ಜೀವಂತ ಕುರಿ ಪತ್ತೆಯಾಗಿದೆ. ವಿಧಾನಸಭೆ ಚುನಾವಣೆ ಕಾರಣಕ್ಕೆ ವಾಮಾಚಾರ ನಡೆಸಿರುವ ಕುರಿತು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದು, ಚರ್ಚೆಗೆ ಹುಟ್ಟುಹಾಕಿದೆ. ಶಿವಮೊಗ್ಗ – ಸಾಗರ ರಸ್ತೆಯ ಮುದ್ದಿನಕೊಪ್ಪ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ ಪಕ್ಕದ ಆಲದ ಮರದ ಕೆಳಗೆ ವಾಮಾಚಾರ (Black Magic) ನಡೆಸಲಾಗಿದೆ. ಮಡಕೆಗಳು, … Read more

ಮಾಲೀಕನ ಮನೆಗೆ ಊಟಕ್ಕೆ ಹೋಗಿದ್ದ ಕೆಲಸಗಾರನ ಮೇಲೆ ದಾಳಿ

Doddapete-Police-Station.

SHIVAMOGGA LIVE NEWS | 14 APRIL 2023 SHIMOGA : ರಂಜಾನ್ ಹಬ್ಬದ ಪ್ರಯುಕ್ತ ಮಾಲೀಕರ ಮನೆಯಲ್ಲಿ ಊಟಕ್ಕೆ (Dinner) ತೆರಳಿದ್ದ ಕೆಲಸಗಾರನ ಮೇಲೆ ಹಲ್ಲೆ ನಡೆಸಲಾಗಿದೆ. ಈ ಸಂಬಂಧ ಹತ್ತು ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ಮಿಳಘಟ್ಟದ ಮೊಹಮದ್ ತಾಂಜಿಮ್ ಎಂಬುವವರು ಆರ್‍ಎಂಎಲ್‍ ನಗರದಲ್ಲಿರುವ ತನ್ನ ಮಾಲೀಕರ ಮನೆಗೆ ಊಟಕ್ಕೆ (Dinner) ತೆರಳಿದ್ದರು. ರಸ್ತೆಯಲ್ಲಿ ಅಡ್ಡಗಟ್ಟಿದ್ದ ನಿಹಾಲ್, ವಾದು, ಫೈಜಲ್ ಸೇರಿದಂತೆ ಹಲವರು, ಮೊಹಮದ್ ತಾಂಜಿಮ್‍ಗೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲಿಂದ ಮೊಹಮದ್ … Read more

ಬಸವನಗಂಗೂರು ಸೇತುವೆ ಬಳಿ ಬೈಕ್ ಸವಾರನ ಮೇಲೆ ರಾಡ್‌ನಿಂದ ಹಲ್ಲೆ, ಗಂಭೀರ ಗಾಯ, ಘಟನೆಗೇನು ಕಾರಣ?

Crime-News-General-Image

SHIVAMOGGA LIVE NEWS | 14 APRIL 2023 SHIMOGA : ಅಪಘಾತದ ವೇಳೆ ಜಗಳವಾಗಿದ್ದು ಬೈಕ್ ಸವಾರನ ಮೇಲೆ ಮಾರಣಾಂತಿಕ ಹಲ್ಲೆ (Attack) ನಡೆಸಲಾಗಿದೆ. ಇಬ್ಬರು ಯುವಕರಿಗೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಬಸವನಗಂಗೂರು ಸೇತುವೆ ಬಳಿ ಘಟನೆ ಸಂಭವಿಸಿದೆ. ಆದರ್ಶ ಎಂಬುವವರು ಗಂಭೀರ ಗಾಯಗೊಂಡಿದ್ದಾರೆ. ಪ್ರಸನ್ನ ಎಂಬುವವರ ಮೇಲೆಯು ಹಲ್ಲೆಯಾಗಿದೆ. ಏನಿದು ಪ್ರಕರಣ? ಆದರ್ಶ ಮತ್ತು ಪ್ರಸನ್ನ ಬೈಕಿನಲ್ಲಿ ಸ್ನೇಹಿತನ ಹುಟ್ಟುಹಬ್ಬಕ್ಕೆ ತೆರಳುತ್ತಿದ್ದರು. ಬಸವನಗಂಗೂರು ಸೇತುವೆ ಬಳಿ ಎದುರಿನಿಂದ ಬಂದ ಓಮ್ನಿ ಕಾರು ಮತ್ತು … Read more

ಸಾಲ ಬಾಧೆ, ಒಣಗುತ್ತಿದ್ದ ಅಡಕೆ ತೋಟ, ಮನನೊಂದು ರೈತ ಆತ್ಮಹತ್ಯೆ

soraba anavatti graphics

SHIVAMOGGA LIVE NEWS | 14 APRIL 2023 ANAVATTI : ಸಾಲ ಬಾಧೆ, ಅಡಕೆ ತೋಟ ಒಣಗುತ್ತಿದ್ದದ್ದನ್ನು ಕಂಡು ಮನನೊಂದಿದ್ದ ರೈತರೊಬ್ಬರು ಜಮೀನು ಪಕ್ಕದ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೊರಬ ತಾಲೂಕು ಆನವಟ್ಟಿ ಸಮೀಪದ ಕಾತುವಳ್ಳಿ ಗ್ರಾಮದ ರೈತ (Farmer) ಮಲ್ಲಿಕಾರ್ಜುನ ಗೌಡ (39) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಡಕೆ ತೋಟದಲ್ಲಿ ಕೊಳವೆ ಬಾವಿಯಲ್ಲಿ ನೀರು ಬತ್ತಿತ್ತು. ವಿದ್ಯುತ್ ಸ್ಥಗಿತದಿಂದಾಗಿ ಕೊಳವೆ ಬಾವಿಯಲ್ಲಿದ್ದ ಅಲ್ಪಸ್ವಲ್ಪ ನೀರನ್ನು ಮೇಲೆತ್ತಿ ತೋಟಕ್ಕೆ ಹಾಯಿಸಲು ಆಗುತ್ತಿರಲಿಲ್ಲ. ಇದರಿಂದ ತೋಟ … Read more