ಮುಂಬೈನಿಂದ ಶಿವಮೊಗ್ಗಕ್ಕೆ ಬಂದ ಖಾಸಗಿ ಬಸ್ಸಿನಲ್ಲಿದ್ದ ಲಗೇಜ್ ದಿಢೀರ್ ತಪಾಸಣೆ ಮಾಡಿದ ಪೊಲೀಸ್

East-West-Bus-luggage-checking-by-police

SHIVAMOGGA LIVE NEWS | 18 MARCH 2023 SHIMOGA : ಖಾಸಗಿ ಬಸ್ಸಿನಲ್ಲಿ ಕೋಟ್ಯಂತರ ರುಪಾಯಿ ಹಣ ಸಾಗಿಸಲಾಗುತ್ತಿದೆ ಎಂದು ಮಾಹಿತಿ ಹಿನ್ನಲೆ ಪೊಲೀಸರು ದಿಢೀರ್ ತಪಾಸಣೆ (Checking) ನಡೆಸಿದರು. ವೀರಭದ್ರೇಶ್ವರ ಟಾಕೀಸ್ ಬಳಿ ಇರುವ ಖಾಸಗಿ ಬಸ್ ಕಚೇರಿ ಬಳಿ ಬಸ್ಸು, ಪ್ರಯಾಣಿಕರು ಮತ್ತು ಲಗೇಜ್ ತಪಾಸಣೆ ನಡೆಸಿದರು. ಮುಂಬೈನಿಂದ ಬರುತ್ತಿರುವ ಬಟ್ಟೆಗಳ ಬಂಡಲ್ ಜೊತೆಗೆ ಕೋಟ್ಯಂತರ ರುಪಾಯಿ ಹಣವನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂದು ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆ ಪೊಲೀಸರು ದಿಢೀರ್ … Read more

ಮಹಾವೀರ ಸರ್ಕಲ್’ನಲ್ಲಿ ಮತ್ತೊಂದು ಅಪಘಾತ, KSRTC ಬಸ್ ಮುಂಭಾಗ ನುಜ್ಜುಗುಜ್ಜು, ಬೊಲೆರೋ ಪಿಕಪ್ ಪಲ್ಟಿ

ಶಿವಮೊಗ್ಗ ಲೈವ್.ಕಾಂ | 21 ಮೇ 2019 ಮಹಾವೀರ ಸರ್ಕಲ್’ನಲ್ಲಿ ಮತ್ತೊಂದು ಅಪಘಾತ ಸಂಭವಿಸಿದೆ. KSRTC ಬಸ್ ಮತ್ತು ಬೊಲೆರೋ ಪಿಕಪ್ ವಾಹನಗಳ ನಡುವೆ ಬೆಳಗಿನ ಜಾವ ಭೀಕರ ಅಪಘಾತ ಸಂಭವಿಸಿದ್ದು, ಮೂವರು ಗಾಯಗೊಂಡಿದ್ದಾರೆ. ಮಹಾವೀರ ಸರ್ಕಲ್’ನಲ್ಲಿ ಬಸ್, ಪಿಕಪ್ ವಾಹನ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಬಸ್ಸಿನ ಮುಂಭಾಗ ನುಜ್ಜುಗುಜ್ಜಾಗಿದೆ. ಪಿಕಪ್ ವಾಹನ ಪಲ್ಟಿಯಾಗಿದೆ. ಸರ್ಕಲ್’ನಲ್ಲಿದ್ದ ಸಿಗ್ನಲ್ ಲೈಟಿನ ಕಂಬಕ್ಕೂ ಹಾನಿಯಾಗಿದೆ. KSRTC ಬಸ್, ಬಿಜಾಪುರದಿಂದ ಮೈಸೂರಿಗೆ ತೆರಳುತ್ತಿತ್ತು. ಇನ್ನು, ಪಿಕಪ್ ವಾಹನ ಸೈಯದ್ ದಸ್ತಗೀರ್ ಎಂಬುವವರಿಗೆ … Read more