ಭದ್ರಾವತಿಯಲ್ಲಿ ಕಾರ್ಮಿಕರಿಂದ ವಿಐಎಸ್ಎಲ್ ಕಾರ್ಖಾನೆ ಅಪ್ಪಿಕೋ ಚಳವಳಿ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 18 FEBRURARY 2023

BHADRAVATHI : ವಿಐಎಸ್ಎಲ್ ಉಳಿವಾಗಿ ಕಾರ್ಮಿಕರು ನಡೆಸುತ್ತಿರುವ ಪ್ರತಿಭಟನೆ 30 ದಿನ ಪೂರೈಸಿದೆ. ಈವರೆಗು ಪೆಂಡಾಲ್ ನಿರ್ಮಿಸಿ ಪ್ರತಿಭಟನೆ ನಡೆಸುತ್ತಿದ್ದ ಕಾರ್ಮಿಕರು, ಈಗ ವಿಭಿನ್ನ ರೀತಿಯಲ್ಲಿ ಕಾರ್ಖಾನೆಯೊಂದಿಗಿನ ತಮ್ಮ ಸಂಬಂಧವನ್ನು ಜಗತ್ತಿಗೆ ಸಾರುವ ಪ್ರಯತ್ನ ಮಾಡಿದರು. ಪಟ್ಟಣದಲ್ಲಿ ಕಾರ್ಖಾನೆಯನ್ನು ಅಪ್ಪಿಕೋ ಚಳವಳಿ (Appiko Chalavali) ನಡೆಸಲಾಯಿತು.

VISL-Wokers-held-Appiko-chalavali-in-Bhadravathi

ಶುಕ್ರವಾರ ಮಧ್ಯಾಹ್ನ ಕಾರ್ಮಿಕರು ವಿಐಎಸ್ಎಲ್ ಗೇಟ್, ಕಾಂಪೌಂಡ್ ಸುತ್ತುವರೆದು, ಅಪ್ಪಿಕೊಂಡರು. ‘ಕಾರ್ಖಾನೆಯೊಂದಿಗೆ ತಮಗೆ ಅವಿನಾಭಾವ ಸಂಬಂಧವಿದೆ. ಇದು ತಾಯಿ ಮಕ್ಕಳ ಸಂಬಂಧ. ಕಾರ್ಖಾನೆ ಮುಚ್ಚಿ ಹೋದರೆ ಕಾರ್ಮಿಕರು ಬೀದಿಗೆ ಬೀಳುತ್ತಾರೆ. ಹಾಗಾಗಿ ತಾಯಿಯ ರಕ್ಷಣೆಗಾಗಿ ಆಕೆಯನ್ನು ಅಪ್ಪಿಕೊಂಡಿದ್ದೇವೆ’ ಎಂದು ಕಾರ್ಮಿಕರು ತಿಳಿಸಿದರು.

ಇದನ್ನೂ ಓದಿ – ಭದ್ರಾವತಿಯಿಂದ ಬೈಕ್ ಜಾಥಾ, ಶಿವಮೊಗ್ಗದ ಪ್ರಮುಖ ವೃತ್ತಗಳಲ್ಲಿ ರಸ್ತೆ ತಡೆ, ಕಾರ್ಮಿಕರ ಆಕ್ರೋಶ

ಈವರೆಗೂ ಕಾರ್ಖಾನೆ ಮುಂಭಾಗ ಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದರು. ಆದರೆ ವಿಐಎಸ್ಎಲ್ ಪುನಶ್ಚೇತನಕ್ಕೆ ಆಗ್ರಹಿಸಿ ಈಗ ವಿಭಿನ್ನ ಮತ್ತು ಭಾವನಾತ್ಮಕ ರೀತಿಯಲ್ಲಿ ಆಗ್ರಹ ವ್ಯಕ್ತಪಡಿಸಿದ್ದಾರೆ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : February 18, 2023

Leave a Comment