ATMನಲ್ಲಿ ಹಣ ಬಿಡಿಸಲು ಹೋದಾಗ ಎಚ್ಚರ, ಭದ್ರಾವತಿಯ ರೈತನಿಗೆ ವಂಚನೆ, ಆಗಿದ್ದೇನು?

 ಶಿವಮೊಗ್ಗ  LIVE 

ಭದ್ರಾವತಿ: ATMನಲ್ಲಿ ಹಣ ಬಿಡಿಸಲು ಹೋದಾಗ ರೈತರೊಬ್ಬರು ವಂಚನೆಗೆ ಒಳಗಾಗಿ ₹79,000 ಕಳೆದುಕೊಂಡಿದ್ದಾರೆ.

ವಂಚನೆ ಆಗಿದ್ದು ಹೇಗೆ?

ಬೊಮ್ಮನಕಟ್ಟೆಯ ನಾರಾಯಣ ಅವರು 11 ತಿಂಗಳ ಹಿಂದೆ ರಂಗಪ್ಪ ವೃತ್ತ ಸಮೀಪದ ಬ್ಯಾಂಕ್ ಆಫ್ ಬರೋಡದ ಎಟಿಎಂನಲ್ಲಿ ಹಣ ಬಿಡಿಸಲು ಹೋಗಿದ್ದರು. ಆಗ ಹಿಂದೆ ನಿಂತಿದ್ದ ಇಬ್ಬರು ಅಪರಿಚಿತರಲ್ಲಿ ಒಬ್ಬ, ಹಣ ಬಿಡಿಸಿಕೊಡುವುದಾಗಿ ಎಟಿಎಂ ಕಾರ್ಡ್ ಪಡೆದಿದ್ದ. 3 ಬಾರಿ ಪ್ರಯತ್ನಿಸಿದರೂ ಹಣ ಬಂದಿರಲಿಲ್ಲ.

Sigandur-Janthre-2026-scaled.

ಹೀಗಾಗಿ ಅವರು ಕಾರ್ಡ್‌ ಹಿಂದಕ್ಕೆ ಪಡೆದು ಮನೆಗೆ ಹೋಗಿದ್ದರು. ನಂತರ ಅವರ ಖಾತೆಯಿಂದ ಹಂತ ಹಂತವಾಗಿ ಹಣ ಕಡಿತವಾಗಿತ್ತು. ಈ ಕುರಿತು ಮೊಬೈಲ್‌ಗೆ ಸಂದೇಶ ಬಂದಿತ್ತು.   

ಇದನ್ನೂ ಓದಿ » ಶಿವಮೊಗ್ಗದಲ್ಲಿ ಮಾಸ್ಟರ್‌ ಹೆಲ್ತ್‌ ಚೆಕ್‌ ಅಪ್‌ ಪ್ಯಾಕೇಜ್‌ಗೆ ಶೇ.25ರಷ್ಟು ರಿಯಾಯಿತಿ, ಏನೇನೆಲ್ಲ ಚೆಕ್‌ ಮಾಡ್ತಾರೆ?

ಬದಲಿ ಎಟಿಎಂ ಕಾರ್ಡ್‌ ಕೊಟ್ಟಿದ್ದರು

ಅಪರಿಚಿತರು ಮೂಲ ಎಟಿಎಂ ಕಾರ್ಡ್‌ ಪಡೆದು ಬೇರೊಂದು ಕಾರ್ಡ್ ಕೊಟ್ಟಿದ್ದು ನಾರಾಯಣ ಅವರಿಗೆ ನಂತರ ಗೊತ್ತಾಗಿತ್ತು. ಈ ಕುರಿತು ಅವರು ಡಿ.17ರಂದು ಹಳೇನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ತನಿಖೆ ನಡೆಯುತ್ತಿದೆ.

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment