SHIVAMOGGA LIVE NEWS | 20 OCTOBER 2023
BHADRAVATHI : ಮನೆ ಮುಂದೆ ಕಟ್ಟಿದ್ದ ಡಾಬರ್ ಮ್ಯಾನ್ ನಾಯಿಯನ್ನು ಎಳೆದೊಯ್ದಿರುವ ಚಿರತೆಯೊಂದು (Leopard) ಅರೆಬರೆ ತಿಂದು ಪರಾರಿಯಾಗಿದೆ. ಭದ್ರಾವತಿ ತಾಲೂಕು ಕಾರೇಹಳ್ಳಿ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಧನಂಜಯ ಎಂಬುವವರ ಮನೆ ಮುಂದೆ ಕಟ್ಟಿದ್ದ ನಾಯಿ ಮೇಲೆ ಚಿರತೆ ದಾಳಿ ನಡೆಸಿದೆ.
![]() |
ಇದನ್ನೂ ಓದಿ- ಸಿಗಂದೂರು ಚೌಡೇಶ್ವರಿ ಸೇರಿ ನವದೇವಿ ದರ್ಶನ, ಭದ್ರಾವತಿ FMನಲ್ಲಿ ನವರಾತ್ರಿ ವಿಶೇಷ ಕಾರ್ಯಕ್ರಮ, ಟೈಮಿಂಗ್ ಏನು?
ಡಾಬರ್ ಮ್ಯಾನ್ ನಾಯಿಯನ್ನು ಚೈನ್ ಹಾಕಿ ಮನೆ ಮುಂದೆ ಕಟ್ಟಲಾಗಿತ್ತು. ರಾತ್ರಿ ಹೊತ್ತಲ್ಲಿ ದಾಳಿ ನಡೆಸಿದ ಚಿರತೆ ಚೈನ್ ಸಹಿತ ನಾಯಿಯನ್ನು ತೋಟದತ್ತ ಎಳೆದೊಯ್ದಿದೆ. ಇತರೆ ನಾಯಿಗಳು ಬೊಗಳುವುದನ್ನು ಕೇಳಿ ಮನೆಯವರು ಹೊರಗೆ ಬಂದಾಗ ನಾಯಿ ಕಾಣಿಸಲಿಲ್ಲ. ಮನೆಯಿಂದ ಸ್ವಲ್ಪ ದೂರದಲ್ಲಿ ನಾಯಿಯನ್ನು ಅರೆಬರೆ ತಿಂದು ಬಿಟ್ಟಿರುವುದು ಕಂಡುಬಂದಿದೆ. ಧನಂಜಯ ಅವರು ಕೂಡಲೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200