‌ಭದ್ರಾ ನಾಲೆಯಲ್ಲಿ ಮುಳುಗಿ ಕುಂದಾಪುರ ಮೂಲದ ಇಬ್ಬರು ಬಾಲಕರು ಸಾವು

SHIVAMOGGA LIVE NEWS | 24 APRIL 2024

HOLEHONNURU : ಭದ್ರಾ ನಾಲೆಯಲ್ಲಿ ಮುಳುಗಿ ಇಬ್ಬರು ಬಾಲಕರು ಮೃತಪಟ್ಟಿದ್ದಾರೆ. ಹೊಳೆಹೊನ್ನೂರು ಸಮೀಪದ ಗುಡುಮಗಟ್ಟೆಯಲ್ಲಿ ಘಟನೆ ಸಂಭವಿಸಿದೆ. ಆನವೇರಿಯ ಉಮೇಶ್‌ ಶೆಟ್ಟಿ ಅವರ ಮಗ ರಜತ್‌ (10) ಮತ್ತು ಕುಂದಾಪುರದ ತೆಕ್ಕಟ್ಟೆ ನಿವಾಸಿ ನವೀನ್‌ ಶೆಟ್ಟಿ ಅವರ ಮಗ ರೋಹನ್‌ (15) ಮೃತ ದುರ್ದೈವಿಗಳು.

ಆಟವಾಡಲು ಹೋಗಿ ನೀರುಪಾಲದ ಮಕ್ಕಳು

ರಜತ್‌ ಮತ್ತು ರೋಹನ್‌ ನೀರಿನಲ್ಲಿ ಆಟವಾಡಲು ಭದ್ರಾ ನಾಲೆ ಬಳಿ ಹೋಗಿದ್ದರು. ಈ ವೇಳೆ ಆಯಾತಪ್ಪಿ ಇಬ್ಬರು ನೀರಿನಲ್ಲಿ ಮುಳುಗಿದ್ದಾರೆ ಎಂದು ಶಂಕಿಸಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯರು ಮತ್ತು ಅಗ್ನಿಶಾಮಕ ಸಿಬ್ಬಂದಿ ಮಕ್ಕಳಿಗೆ ಶೋಧ ಕಾರ್ಯ ನಡೆಸಿದರು. ಗುಡುಮಗಟ್ಟೆ ಸೇತುವೆ ಬಳಿ ಇಬ್ಬರ ಮೃತದೇಹ ಪತ್ತೆಯಾಗಿದೆ.

ರಜೆ ಕಳೆಯಲು ಕುಂದಾಪುರದಿಂದ ಬಂದಿದ್ದ

ಮೂಲತಃ ಕುಂದಾಪುರದ ಉಮೇಶ್‌ ಶೆಟ್ಟಿ ಆನವೇರಿಯಲಿ ಹೊಟೇಲ್‌ ನಡೆಸುತ್ತಿದ್ದಾರೆ. ಇವರ ಮಗ ರಜತ್‌ ನಾಲ್ಕನೆ ತರಗತಿ ಓದುತ್ತಿದ್ದ. ಸಂಬಂಧಿ ನವೀನ್‌ ಶೆಟ್ಟಿ ಅವರ ಮಗ ರೋಹನ್‌ ಕುಂದಾಪುರದಲ್ಲಿ ಎಸ್ಸೆಸ್ಸೆಲ್ಸಿ ಓದುತ್ತಿದ್ದ. ರಜೆ ಹಿನ್ನೆಲೆ ರೋಹನ್ ಆನವೇರಿಗೆ ಬಂದಿದ್ದ. ನೀರಿನಲ್ಲಿ ಆಟವಾಡಲು ಇಬ್ಬರು ಭದ್ರಾ ನಾಲೆ ಬಳಿ ತೆರಳಿದ್ದಾಗ ದುರ್ಘಟನೆ ಸಂಭವಿಸಿದೆ. ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಕುಂದಾಪುರದಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು. ಘಟನೆ ಸಂಬಂಧ ಹೊಳೆಹೊನ್ನೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ – ಭದ್ರಾವತಿಯಲ್ಲಿ ಪೊಲೀಸ್‌ ರೇಡ್‌, ಮಹಿಳೆ ಅರೆಸ್ಟ್‌, ಲಕ್ಷ ಲಕ್ಷದ ಮಾದಕ ವಸ್ತು ಸೀಜ್‌

ಚಿತ್ರದ ವಿವರಣೆ
Shaki Toyota, Shivamogga
ನಿತಿನ್ ಆರ್‌.ಕೈದೊಟ್ಲು
ನಿತಿನ್ ಆರ್‌.ಕೈದೊಟ್ಲು

Published : April 24, 2024 at 9:00 AM IST

JNN College of Engineering Admissions started

© ಶಿವಮೊಗ್ಗ ಲೈವ್‌ : ಏಪ್ರಿಲ್ 24, 2024

Leave a Comment