SHIVAMOGGA LIVE NEWS | 14 SEPTEMBER 2023
RIPPONPETE : ಪ್ರಸಿದ್ಧ ಗುಳುಗುಳಿ ಶಂಕರ (Guluguli Shankara) ದೇವಸ್ಥಾನದಲ್ಲಿ ಕಳ್ಳತನವಾಗಿದೆ. ಹುಂಡಿ (Hundi) ಒಡೆದಿರುವ ಕಳ್ಳರು ಅಂದಾಜು ಒಂದು ಲಕ್ಷ ರೂ. ಕಾಣಿಕ ಹಣ ಕದ್ದೊಯ್ದಿದ್ದಾರೆ ಎಂದು ಆರೋಪಿಸಲಾಗಿದೆ.
ರಿಪ್ಪನ್ಪೇಟೆ ಸಮೀಪದ ಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಳುಗುಳಿ ಶಂಕರ ಎಂದು ಪ್ರಸಿದ್ಧವಾಗಿರುವ ಶ್ರೀ ಶಂಕರೇಶ್ವರ ದೇಗುಲದಲ್ಲಿ ಕಳ್ಳತನವಾಗಿದೆ. ಮಂಗಳವಾರ ರಾತ್ರಿ ದೇಗುಲದ ಕಿಟಕಿಯ ಸರಳುಗಳನ್ನು ಮುರಿದು ಕಳ್ಳರು ಒಳಗೆ ನುಗ್ಗಿರುವ ಶಂಕೆ ಇದೆ. ಸಿಸಿಟಿವಿ ಮತ್ತು ಡಿವಿಆರ್ಗಳನ್ನು ಕಿತ್ತು ಕಾರ್ಣಿಕ ಪುಷ್ಕರಣಿಗೆ ಎಸೆಯಲಾಗಿದೆ.
ಇದನ್ನೂ ಓದಿ – ಇಂಟರ್ಸಿಟಿ ರೈಲು ಗಂಟೆಗಟ್ಟಲೆ ತಡವಾಗಿದ್ದಕ್ಕೆ ಕಾರಣ ಬಯಲು, ಕುಂಸಿಯ ಯುವಕರು, ಶಿವಮೊಗ್ಗದ ವ್ಯಾಪಾರಿಗಳು ಅರೆಸ್ಟ್
ಹುಂಡಿ ಒಡೆದು ಕಾಣಿಕೆ ಹಣವನ್ನು ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ. ಘಟನೆ ಸಂಬಂಧ ರಿಪ್ಪನ್ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200