ಈಗ ಬಟ್ಟೆ ಒಗೆಯೋದು ಬಹಳ ಸುಲಭ, ಹೇಗದು? | ವಿಡಿಯೋಗಾಗಿ ಕ್ಲಿಕ್ ಮಾಡಿ
ಶಿವಮೊಗ್ಗ ಲೈವ್.ಕಾಂ | SHIMOGA NEWS | 31 DECEMBER 2020
ಬೆಂಗಳೂರು – ಶಿವಮೊಗ್ಗ – ತಾಳಗುಪ್ಪ ಇಂಟರ್ಸಿಟಿ ರೈಲು ಹಳಿ ತಪ್ಪಿದೆ. ಹೊಸನಗರ ತಾಲೂಕು ಸೂಡೂರು ಬಳಿ ಘಟನೆ ಸಂಭವಿಸಿದೆ. ಲೋಕೊ ಪೈಲೆಟ್ (ಚಾಲಕ) ಸಮಯಪ್ರಜ್ಞೆಯಿಂದಾಗಿ ದೊಡ್ಡ ಅಪಾಯ ತಪ್ಪಿದೆ.
ಹಳಿ ತಪ್ಪಿದ್ದು ಹೇಗೆ?
ಶಿವಮೊಗ್ಗದಿಂದ ಸಾಗರದ ತಾಳಗುಪ್ಪ ಕಡೆಗೆ ಇಂಟರ್ಸಿಟಿ ರೈಲು ಸಂಚರಿಸುತ್ತಿತ್ತು. ಹೊಸನಗರದ ಸೂಡೂರು ಸಮೀಪ ರೈಲ್ವೆಯ 99ನೇ ಕಿ.ಮೀ.ನಲ್ಲಿ ರೈಲಿನ ಎಂಜಿನ್ ಚಕ್ರಗಳು, ಹಳಿಯಿಂದ ಕೆಳಗಿಳಿದಿವೆ. ಡ್ರಿಲ್ ಮೆಲ್ಟ್ ಆಗಿ ತುಂಡಾಗಿರುವುದರಿಂದ ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.
ನಿಧಾನವಾಗಿ ಚಲಿಸುತ್ತು ರೈಲು
ಸೂಡೂರು ರೈಲ್ವೆ ಗೇಟ್ ಮತ್ತು ಅರಸಾಳು ರೈಲ್ವೆ ನಿಲ್ದಾಣದ ನಡುವೆ ತಿರುವು ಇದೆ. ಹಾಗಾಗಿ ಇಲ್ಲಿ ಕೇವಲ 40 ರಿಂದ 50 ಕಿ.ಮೀ ವೇಗದಲ್ಲಿ ರೈಲು ಸಂಚರಿಸಬೇಕು. ಇದೇ ವೇಗದಲ್ಲಿದ್ದ ಇಂಟರ್ಸಿಟಿ ರೈಲು ಎಂಜಿನ್ ಹಳಿ ತಪ್ಪಿದೆ. ಲೋಕೋ ಪೈಲೆಟ್ (ರೈಲು ಚಾಲಕ) ಸಮಯ ಪ್ರಜ್ಞೆ ಮರೆದಿದ್ದರಿಂದ ದೊಡ್ಡ ಅಪಾಯ ತಪ್ಪಿದೆ.
ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ
ರೈಲಿನಲ್ಲಿದ್ದ ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಸಂಬಂಧಿಕರು, ಸ್ಥಳೀಯರ ನೆರವಿನೊಂದಿಗೆ ಪ್ರಯಾಣಿಕರು ಸಾಗರ, ತಾಳಗುಪ್ಪದ ಕಡೆಗೆ ತೆರಳುತ್ತಿದ್ದಾರೆ.
ರೈಲಿನ ಕಥೆ ಮುಂದೇನು?
ಘಟನಾ ಸ್ಥಳಕ್ಕೆ ರೈಲ್ವೆ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಹಳಿಯಿಂದ ಕೆಳಗಿಳಿದಿರುವ ಇಂಟರ್ಸಿಟಿ ರೈಲನ್ನು ಕುಂಸಿ ನಿಲ್ದಾಣಕ್ಕೆ ತರಲು ಯೋಜಿಸಲಾಗುತ್ತಿದೆ. ಮತ್ತೊಂದು ಎಂಜಿನ್ ಬಳಸಿ ರೈಲನ್ನು ತರಲು ಚಿಂತಿಸಲಾಗುತ್ತಿದೆ.
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200