SHIVAMOGGA LIVE NEWS | 12 MAY 2024
HOSANAGARA : ಪುರಾಣ ಪ್ರಸಿದ್ಧ ಕಾರಣಗಿರಿಯ ಶ್ರೀ ಸಿದ್ಧಿವಿನಾಯಕ ಸ್ವಾಮಿ ಮಹಾರಥೋತ್ಸ ಸಂಭ್ರಮದಿಂದ ನಡೆಯಿತು. ಶನಿವಾರ ಅಭಿಜನ್ ಮುಹೂರ್ತದಲ್ಲಿ ದೇವರ ಅದ್ಧೂರಿ ಮಹಾರಥೋತ್ಸವ ನಡೆಯಿತು.
ಕಾರಣಗಿರಿ ಸಿದ್ಧಿವಿನಾಯಕ ಸ್ವಾಮಿ ದೇವರ ರಜತ ರಥೋತ್ಸವ ಮತ್ತು ಮನ್ಮಹಾರಥೋತ್ಸವದಲ್ಲಿ ದೊಡ್ಡ ಸಂಖ್ಯೆಯ ಭಕ್ತರು ಭಾಗವಹಿಸಿದ್ದರು. ಜಿಲ್ಲೆ ಮತ್ತು ಹೊರ ಜಿಲ್ಲೆಯಿಂದ ಜನರು ಆಗಮಿಸಿದ್ದರು. ರಥೋತ್ಸವದ ಹಿನ್ನೆಲೆ ದೇವರ ಉತ್ಸವವು ಪ್ರತಿ ದಿನವೂ ಒಂದೊಂದು ಊರಿಗೆ ಹೋಗಿ ಅಲ್ಲಿ ವಸಂತ ಪೂಜೆ ನಡೆಸಲಾಯಿತು. ಶನಿವಾರ ಸಂಜೆ ಮಹಾ ರಥೋತ್ಸವವು ಕಾರಣಗಿರಿ ವೃತ್ತದವರೆಗೆ ಮಂಗಳ ವಾದ್ಯಗಳೊಂದಿಗೆ ಸಾಗಿ ಬಂತು. (ಫೋಟೊ : ವಿನಾಯಕ ವಾರಂಬಳ್ಳಿ)
ಇದನ್ನೂ ಓದಿ – ಶಿವಮೊಗ್ಗದಲ್ಲಿ ಇವತ್ತು ಮಳೆ ಸುರಿಯುವ ಸಾಧ್ಯತೆ, ಕೂಲ್ ಕೂಲ್ ಆಗಲಿದೆ ಜಿಲ್ಲೆ, ಎಷ್ಟಿದೆ ತಾಪಮಾನ?
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200