ಸಾಗರ: ಸಿಗಂದೂರು ಚೌಡೇಶ್ವರಿ ದೇವಸ್ಥಾನದ ಮುಂಭಾಗದ ಕ್ಯಾಂಟೀನ್ನಲ್ಲಿ ನೀರು ಚೆಲ್ಲಿದ ವಿಚಾರಕ್ಕೆ ಸಂಬಂಧಿಸಿದಂತೆ ಭಕ್ತರ ಮೇಲೆ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿದ ಆರೋಪ ಕೇಳಿ ಬಂದಿದೆ.
ಸುದ್ದಿಯ ಮುಂದಿನ ಭಾಗ ಕೆಳಗಿದೆ
ಇದನ್ನೂ ಓದಿ:➤ ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ ಭಾರಿ ಕುಸಿತ, ತುಂಗಾ, ಭದ್ರಾ ಡ್ಯಾಂಗಳಲ್ಲಿ ಎಷ್ಟಿದೆ ನೀರಿನ ಸಂಗ್ರಹ?
ತುಮಕೂರಿನಿಂದ ಸಿಗಂದೂರು ದೇವಸ್ಥಾನಕ್ಕೆ ಬಂದಿದ್ದ ತಿಮ್ಮಯ್ಯ (65) ಹಾಗೂ ಅವರ ಸಂಬಂಧಿಕರು ಜೂನ್ 9ರಂದು ಸಂಜೆ ದರ್ಶನ ಮುಗಿಸಿ ಊರಿಗೆ ಮರಳಲು ಬಸ್ ನಿಲ್ದಾಣಕ್ಕೆ ಬರುತ್ತಿದ್ದರು. ಈ ವೇಳೆ ದೇವಸ್ಥಾನದ ಮುಂಭಾಗದ ಸಾಲಿನಲ್ಲಿದ್ದ ಕ್ಯಾಂಟೀನ್ನಲ್ಲಿ ಬಜ್ಜಿ ತಿಂದು, ಕೈ ತೊಳೆದಿದ್ದಾರೆ.

ಕೈ ತೊಳೆದ ನೀರು ಕ್ಯಾಂಟೀನ್ ಒಳಗೆ ಬಂದಿದೆ ಎಂದು ಆಕ್ಷೇಪಿಸಿದ ಹೋಟೆಲ್ ಮಾಲೀಕ, ಭಕ್ತರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿ, ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಲಾಗಿದೆ. ಗಾಯಾಳುಗಳು ಸಾಗರ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಾರ್ಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
