ಸಾಗರ: ಹೆಗ್ಗೋಡಿನ ನೀನಾಸಮ್ ರಂಗಶಿಕ್ಷಣ ಕೇಂದ್ರ, 2024-25 ಸಾಲಿನ ವಿದ್ಯಾರ್ಥಿಗಳ ನಾಟಕೋತ್ಸವವನ್ನು (Drama Festival) ಮೇ 11ರಿಂದ 15ರವರೆಗೆ ಪ್ರತಿ ದಿನ ಸಂಜೆ 7ಕ್ಕೆ ಹೆಗ್ಗೋಡಿನ ಶಿವರಾಮ ಕಾರಂತ ರಂಗಮಂದಿರದಲ್ಲಿ ಹಮ್ಮಿಕೊಂಡಿದೆ.
ಇದನ್ನೂ ಓದಿ » ಎಸ್ಸೆಸ್ಸೆಲ್ಸಿ ಫಲಿತಾಂಶ, ಶಿವಮೊಗ್ಗದ ಮೂವರು ವಿದ್ಯಾರ್ಥಿಗಳು ರಾಜ್ಯಕ್ಕೆ ಪ್ರಥಮ
» ಮೇ 11 ರಂದು ಬ್ರೆಕ್ಟ್ ವಿರಚಿತ ‘ಮದರ್ ಕರೇಜ್ ಮತ್ತು ಅವಳ ಮಕ್ಕಳು’ ನಾಟಕ ಪ್ರದರ್ಶನವಿದೆ. ಕೆ.ವಿ.ಅಕ್ಷರ ಕನ್ನಡಕ್ಕೆ ಅನುವಾದಿಸಿದ್ದಾರೆ. ಡಾ. ಎಂ. ಗಣೇಶ ವಿನ್ಯಾಸ, ನಿರ್ದೇಶನ ಮಾಡಿದ್ದಾರೆ.
» ಮೇ 12ರಂದು ಜಿ.ಬಿ. ಜೋಷಿ ವಿರಚಿತ ‘ಕದಡಿದ ನೀರು’ ಪ್ರದರ್ಶನವಿದೆ. ವಿನ್ಯಾಸ, ನಿರ್ದೇಶನ ಮಂಜು ಕೊಡಗು ಅವರದ್ದು.
» ಮೇ 13ರಂದು ಫ್ರೀಡ್ರಿಷ್ ಶಿಲರ್ ರಚನೆಯ ‘ದರೋಡೆಕೋರರು’ ನಾಟಕ ಪ್ರದರ್ಶಿಸಲಾಗುವುದು. ಮಾಧವ ಚಿಪ್ಪಳಿ ಕನ್ನಡಕ್ಕೆ ತಂದಿದ್ದಾರೆ. ವಿನ್ಯಾಸ, ನಿರ್ದೇಶನ ಗೋಟ್ಸ್ ಲೈನವೇಬರ್ ಲೈನವೇಬರ್ ಮತ್ತು ಮಂಜು ಕೊಡಗು ಅವರದ್ದು.
» ಮೇ 14ರಂದು ಸಿದ್ದಗಂಗಯ್ಯ ಕಂಬಾಳು (ನಿಸರ್ಗಪ್ರಿಯ) ವಿರಚಿತ ‘ಚೋರ ಪುರಾಣ’ವಿದೆ. ಇದರ ರಂಗಪಠ್ಯ, ವಿನ್ಯಾಸ, ನಿರ್ದೇಶನ ಮಂಜುನಾಥ ಎಲ್. ಬಡಿಗೇರ ಅವರದ್ದು.
» ಮೇ 15 ರಂದು ಪುತಿನ ಅವರ ಶ್ರೀಹರಿಚರಿತೆಯ ಆಯ್ದ ಸಾಲುಗಳ ಕಾವ್ಯರಂಗ ಪ್ರಸ್ತುತಿ ‘ಕೃಷ್ಣ ನೀ ಹಳೆಯವನಲ್ಲ’ ಇದೆ. ಇದರ ಸಂಯೋಜನೆ ಮತ್ತು ನಿರ್ದೇಶನವನ್ನು ಕೆ.ವಿ.ಅಕ್ಷರ ಮಾಡಿದ್ದಾರೆ. ನಾಟಕಗಳಿಗೆ ಪ್ರವೇಶ ಉಚಿತವಿದೆ ಎಂದು ನೀನಾಸಮ್ ಪ್ರಕಟಣೆ ತಿಳಿಸಿದೆ.

ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200