ಸಾಗರ: ಹೆಗ್ಗೋಡಿನ ನೀನಾಸಮ್ ರಂಗಶಿಕ್ಷಣ ಕೇಂದ್ರ, 2024-25 ಸಾಲಿನ ವಿದ್ಯಾರ್ಥಿಗಳ ನಾಟಕೋತ್ಸವವನ್ನು (Drama Festival) ಮೇ 11ರಿಂದ 15ರವರೆಗೆ ಪ್ರತಿ ದಿನ ಸಂಜೆ 7ಕ್ಕೆ ಹೆಗ್ಗೋಡಿನ ಶಿವರಾಮ ಕಾರಂತ ರಂಗಮಂದಿರದಲ್ಲಿ ಹಮ್ಮಿಕೊಂಡಿದೆ.
ಇದನ್ನೂ ಓದಿ » ಎಸ್ಸೆಸ್ಸೆಲ್ಸಿ ಫಲಿತಾಂಶ, ಶಿವಮೊಗ್ಗದ ಮೂವರು ವಿದ್ಯಾರ್ಥಿಗಳು ರಾಜ್ಯಕ್ಕೆ ಪ್ರಥಮ
» ಮೇ 11 ರಂದು ಬ್ರೆಕ್ಟ್ ವಿರಚಿತ ‘ಮದರ್ ಕರೇಜ್ ಮತ್ತು ಅವಳ ಮಕ್ಕಳು’ ನಾಟಕ ಪ್ರದರ್ಶನವಿದೆ. ಕೆ.ವಿ.ಅಕ್ಷರ ಕನ್ನಡಕ್ಕೆ ಅನುವಾದಿಸಿದ್ದಾರೆ. ಡಾ. ಎಂ. ಗಣೇಶ ವಿನ್ಯಾಸ, ನಿರ್ದೇಶನ ಮಾಡಿದ್ದಾರೆ.
» ಮೇ 12ರಂದು ಜಿ.ಬಿ. ಜೋಷಿ ವಿರಚಿತ ‘ಕದಡಿದ ನೀರು’ ಪ್ರದರ್ಶನವಿದೆ. ವಿನ್ಯಾಸ, ನಿರ್ದೇಶನ ಮಂಜು ಕೊಡಗು ಅವರದ್ದು.

» ಮೇ 13ರಂದು ಫ್ರೀಡ್ರಿಷ್ ಶಿಲರ್ ರಚನೆಯ ‘ದರೋಡೆಕೋರರು’ ನಾಟಕ ಪ್ರದರ್ಶಿಸಲಾಗುವುದು. ಮಾಧವ ಚಿಪ್ಪಳಿ ಕನ್ನಡಕ್ಕೆ ತಂದಿದ್ದಾರೆ. ವಿನ್ಯಾಸ, ನಿರ್ದೇಶನ ಗೋಟ್ಸ್ ಲೈನವೇಬರ್ ಲೈನವೇಬರ್ ಮತ್ತು ಮಂಜು ಕೊಡಗು ಅವರದ್ದು.

» ಮೇ 14ರಂದು ಸಿದ್ದಗಂಗಯ್ಯ ಕಂಬಾಳು (ನಿಸರ್ಗಪ್ರಿಯ) ವಿರಚಿತ ‘ಚೋರ ಪುರಾಣ’ವಿದೆ. ಇದರ ರಂಗಪಠ್ಯ, ವಿನ್ಯಾಸ, ನಿರ್ದೇಶನ ಮಂಜುನಾಥ ಎಲ್. ಬಡಿಗೇರ ಅವರದ್ದು.
» ಮೇ 15 ರಂದು ಪುತಿನ ಅವರ ಶ್ರೀಹರಿಚರಿತೆಯ ಆಯ್ದ ಸಾಲುಗಳ ಕಾವ್ಯರಂಗ ಪ್ರಸ್ತುತಿ ‘ಕೃಷ್ಣ ನೀ ಹಳೆಯವನಲ್ಲ’ ಇದೆ. ಇದರ ಸಂಯೋಜನೆ ಮತ್ತು ನಿರ್ದೇಶನವನ್ನು ಕೆ.ವಿ.ಅಕ್ಷರ ಮಾಡಿದ್ದಾರೆ. ನಾಟಕಗಳಿಗೆ ಪ್ರವೇಶ ಉಚಿತವಿದೆ ಎಂದು ನೀನಾಸಮ್ ಪ್ರಕಟಣೆ ತಿಳಿಸಿದೆ.


