ಸಾಗರ ಗಣಪತಿ ಕೆರೆ, ಮಾಜಿ ಮಿನಿಸ್ಟರ್‌ ಪರಿಶೀಲನೆ, ಟೈಲ್ಸ್‌ ವಿಚಾರಕ್ಕೆ ಗರಂ, ಕಾರಣವೇನು?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

SHIVAMOGGA LIVE NEWS, 18 JANUARY 2025

ಸಾಗರ : ಗಣಪತಿ ಕೆರೆ (Ganapathi kere) ದಂಡೆ ಮೇಲೆ ನಡೆಯುತ್ತಿರುವ ಕಾಮಗಾರಿಯನ್ನು ಮಾಜಿ ಸಚಿವ ಹರತಾಳು ಹಾಲಪ್ಪ ಪರಿಶೀಲಿಸಿದರು. ಈ ಸಂದರ್ಭ ಕಾಮಗಾರಿ ಆರಂಭದಲ್ಲಿ ಬಳಕೆಯಾದ ಇಂಟರ್‌ಲಾಕ್‌ ಟೈಲ್ಸ್‌ ಬದಲು ಬೇರೊಂದು ಟೈಲ್ಸ್‌ ಬಳಸಿರುವುದಕ್ಕ ಹಾಲಪ್ಪ ಆಕ್ಷೇಪ ವ್ಯಕ್ತಪಡಿಸಿದರು. ಸುದ್ದಿಯ ಮುಂದಿನ 5 ಪ್ಯಾರಾಗಳು ಕೆಳಗಿವೆ.

ಹಾಲಪ್ಪ ಏನೆಲ್ಲ ಹೇಳಿದರು?

ನಮ್ಮ ಆಡಳಿತಾವಧಿಯಲ್ಲಿ ಗಣಪತಿ ಕೆರೆ ದಂಡೆ ಮೇಲೆ ಬಣ್ಣ ಮಿಶ್ರಿತ ಇಂಟರ್‌ಲಾಕ್‌ ಟೈಲ್ಸ್‌ ಅಳವಡಿಸಿ ರಸ್ತೆ ನಿರ್ಮಾಣಕ್ಕೆ ಯೋಜಿಸಲಾಗಿತ್ತು. ಇದಕ್ಕಾಗಿ ನಗರಸಭೆಯಿಂದ 32 ಲಕ್ಷ ರೂ. ವೆಚ್ಚದ ಯೋಜನೆ ರೂಪಿಸಲಾಗಿತ್ತು. ಆದರೆ ಈಗ ಕಡಿಮೆ ಗುಣಮಟ್ಟದ ಟೈಲ್ಸ್‌ ಬಳಸಲಾಗಿದೆ ಎಂಬ ಆರೋಪವಿದೆ ಎಂದು ಹಾಲಪ್ಪ ತಿಳಿಸಿದರು.

Haratalu-halappa-visit-ganapathi-kere-in-sagara

ಮೂಲ ಯೋಜನೆಯಂತೆ ಬಣ್ಣ ಮಿಶ್ರಿತ ಲಾಕಿಂಗ್‌ ಟೈಲ್ಸ್‌ ಬಳಸಿ ರಸ್ತೆ ನಿರ್ಮಿಸಬೇಕು. ಸಹಾಯಕ ಆಯುಕ್ತರು, ನಗರಸಭೆ ಕಮಿಷನರ್‌ ಅವರು ಪರಿಶೀಲನೆ ನಡೆಸಿ ಕ್ರಮ ವಹಿಸಬೇಕು ಇಲ್ಲವಾದಲ್ಲಿ ಪ್ರತಿಭಟನೆ ನಡೆಸುವುದಾಗಿ ಹಾಲಪ್ಪ ಎಚ್ಚರಿಸಿದರು.

Haratalu-halappa-visit-ganapathi-kere-in-sagara

ತಮ್ಮ ಅವಧಿಯಲ್ಲಿ ಗಣಪತಿ ಕೆರೆ ಸ್ವಚ್ಛತೆಗೆ ನಗರಸಭೆಯ ಹಣ ಬಳಸಿರುವುದಾಗಿ ಸುದ್ದಿ ಬಿತ್ತಿರಸಲಾಗುತ್ತಿದೆ. ಆದರೆ ಸ್ವಚ್ಛತಾ ಕಾರ್ಯಕ್ಕೆ ನಗರಸಭೆಯಿಂದ ನಯಾಪೈಸೆ ಹಣವನ್ನು ಬಳಸಿಲ್ಲ ಎಂದು ಸ್ಪಷ್ಟನೆ ನೀಡಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್‌, ಪ್ರಮುಖರಾದ ಮಧುರಾ ಶಿವಾನಂದ್‌, ವಿ.ಮಹೇಶ್‌, ಗಣೇಶ್‌ ಪ್ರಸಾದ್‌, ಸವಿತಾ ವಾಸು, ಪ್ರೇಮ್‌ ಸಿಂಗ್‌, ಕೆ.ಎಸ್.ಪ್ರಶಾಂತ್‌ ಸೇರಿದಂತೆ ಹಲವರು ಇದ್ದರು.

Abhishek-padavidhara-sahakara-sanga

ಇದನ್ನೂ ಓದಿ » ಕಾಗೋಡು ತಿಮ್ಮಪ್ಪಗೆ ಒಂದೇ ದಿನ ಎರಡು ವಿವಿಯಿಂದ ಎರಡು ಗೌರವ ಡಾಕ್ಟರೇಟ್‌ ಪ್ರದಾನ

Leave a Comment