‘ಬೆಂಗಳೂರಿನ ಕಾಯಿಲೆ ಸಾಗರಕ್ಕೆ ಕಾಲಿಟ್ಟಿದೆ’, ಮಾಜಿ ಮಿನಿಸ್ಟರ್‌ ಹಾಲಪ್ಪ ಹೀಗೆ ಹೇಳಿದ್ದೇಕೆ?

ಸಾಗರ : ನಕಲಿ ದಾಖಲೆ ಸೃಷ್ಟಿ ಸರ್ಕಾರಿ ಜಮೀನು (Land Mafia) ಕಬಳಿಸುವ ಬೆಂಗಳೂರಿನ ಕಾಯಿಲೆ ಸಾಗರಕ್ಕು ಕಾಲಿಟ್ಟಿದೆ. ಆದರೆ ಕಮಿಷನ್‌ ಹಂಚಿಕೆಯಲ್ಲಿ ಉಂಟಾದ ವ್ಯತ್ಯಾಸದಿಂದ ಪ್ರಕರಣಗಳು ಬೆಳಕಿಗೆ ಬರುತ್ತಿದೆ ಎಂದು ಮಾಜಿ ಸಚಿವ ಹರತಾಳು ಹಾಲಪ್ಪ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹರತಾಳು ಹಾಲಪ್ಪ, ಅಧಿಕಾರದಲ್ಲಿರುವ ರಾಜಕಾರಣಿಗಳು, ಅವರ ಹಿಂಬಾಲಕರು, ಅಧಿಕಾರಿಗಳು ಸೇರಿ ನಕಲಿ ದಾಖಲೆ ಸೃಷ್ಟಿ ಜಮೀನು ಮಾರಾಟ ಮಾಡುತ್ತಿದ್ದಾರೆ. ಆದರೆ ಕಮಿಷನ್‌ ಹಂಚಿಕೆ ವೇಳೆ ವ್ಯತ್ಯಾಸವಾಗಿದೆ. ಈ ಸಂಬಂಧ ಬುಧವಾರ ಸಣ್ಣಪುಟ್ಟ ಗಲಾಟೆಯು ಆಗಿದೆ ಎಂದು ಆರೋಪಿಸಿದರು.

ಎಲ್ಲೆಲ್ಲಿ ಭೂ ಕಬಳಿಕೆ ಆಗಿದೆ?

Former-Minister-Haratalu-Halappa-BJP

ಸಾಗರ ನಗರ ಸಮೀಪದ ಮಂಕೋಡು ಗ್ರಾಮದಲ್ಲಿ 16 ಎಕರೆ, ಬಿಳಿಸಿರಿಯ ಹೊಳಗೋಡಿನಲ್ಲಿ 10 ಎಕರೆ, ಮಳ್ಳ ಗ್ರಾಮದಲ್ಲಿ 6 ಎಕರೆ, ಬಳಸಗೋಡು ಗ್ರಾಮದಲ್ಲಿ 23 ಎಕರೆ ಎಕರೆ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಲಾಗಿದೆ. ಮಂಕೋಡು ಗ್ರಾಮದ ಜಮೀನಿನಲ್ಲಿ ಬಹುಪಾಲು ಮಾರಾಟ ಮಾಡಲಾಗಿದೆ. ಇತ್ತ ಬಳಸಗೋಡು ಗ್ರಾಮದಲ್ಲಿನ ಜಮೀನನ್ನು ತಾವು ಶಾಸಕರಾಗಿದ್ದಾಗ ಮೆಡಿಕಲ್‌ ಕಾಲೇಜು ಮತ್ತು ಆಸ್ಪತ್ರೆಗೆ ಜಾಗ ಮೀಸಲಿಡಲಾಗಿತ್ತು ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ದೇವೇಂದ್ರಪ್ಪ ಯಲಕುಂದ್ಲಿ, ಗಣೇಶ್‌ ಪ್ರಸಾದ್‌, ಡಾ. ರಾಜನಂದಿನಿ ಕಾಗೋಡು, ರತ್ನಾಕರ ಹೊನಗೋಡು, ಟಿ.ಡಿ.ಮೇಘರಾಜ್‌ ಸೇರಿದಂತೆ ಹಲವರು ಇದ್ದರು.

https://parishramaneetacademy.com/landing-page/
ಹೆಚ್ಚಿನ ಮಾಹಿತಿಗೆ ಈ ಫೋಟೊ ಮೇಲೆ ಕ್ಲಿಕ್‌ ಮಾಡಿ

ಇದನ್ನೂ ಓದಿ » ಗಾಜನೂರಿನಲ್ಲಿ ವಿದ್ಯುತ್‌ ಕಂಬಕ್ಕೆ ಕಾರು ಡಿಕ್ಕಿ, ಚಾಲಕನ ವಿರುದ್ಧ ಕೇಸ್‌ ದಾಖಲಿಸಿದ ಮೆಸ್ಕಾಂ

ನಿತಿನ್ ಆರ್‌.ಕೈದೊಟ್ಲು
ನಿತಿನ್ ಆರ್‌.ಕೈದೊಟ್ಲು

Published : March 22, 2025 at 9:20 AM IST

JNN College of Engineering Admissions started

© ಶಿವಮೊಗ್ಗ ಲೈವ್‌ : ಮಾರ್ಚ್ 22, 2025

Leave a Comment