ಸಾಗರ ನರಸಭೆಗೆ MLA ದಿಢೀರ್‌ ಭೇಟಿ, ಕಾರ್ಯವೈಖರಿ ಪರಿಶೀಲನೆ, ಕ್ಷೇತ್ರದ ಅಭಿವೃದ್ಧಿ ಕುರಿತು ಹೇಳಿದ್ದೇನು?

SHIVAMOGGA LIVE NEWS | 26 JUNE 2024➤ ಸುದ್ದಿಯ ಮುಂದಿನ 5 ಪ್ಯಾರಾಗಳು ಕೆಳಗಿವೆ.

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

SAGARA : ಶಾಸಕ ಬೇಳೂರು ಗೋಪಾಲಕೃಷ್ಣ ಅವರು ನಗರಸಭೆಗೆ ದಿಢೀರ್‌ ಭೇಟಿ (SUDDEN VISIT) ನೀಡಿ ಪರಿಶೀಲಿಸಿದರು. ಅಧಿಕಾರಿಗಳು ತ್ವರಿತವಾಗಿ ಸಾರ್ವಜನಿಕರಿಗೆ ಸೇವೆ ಒದಗಿಸಬೇಕು ಎಂದು ತಿಳಿಸಿದರು.

ಇದೇ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಸಾಗರ ಕ್ಷೇತ್ರದ ಅಭಿವೃದ್ಧಿಗೆ ತಾವು ಅನುದಾನ ತಂದಿಲ್ಲ ಎಂದು ಕೆಲವರು ಆರೋಪ ಮಾಡುತ್ತಿದ್ದಾರೆ. ಆದರೆ ಮೀನು ಮಾರುಕಟ್ಟೆಗೆ 1.20 ಕೋಟಿ ರೂ., ಮಿನಿ ವಿಧಾನಸೌಧಕ್ಕೆ 4.80 ಕೋಟಿ ರೂ., ಆಸ್ಪತ್ರೆಗೆ 1.70 ಕೋಟಿ ರೂ. ಹೀಗೆ ಎಲ್ಲ ಕಡೆ ಅನುದಾನ ಬಿಡುಗಡೆ ಮಾಡಿಸಿದ್ದೇನೆ. ಸರ್ಕಾರದ ಬಳಿ ಹಣವಿಲ್ಲ. ನಾನು ಅನುದಾನ ತಂದಿಲ್ಲ ಎಂದು ಹೇಳುವವರು ಇದನ್ನೆಲ್ಲ ಗಮನಿಸಬೇಕು. ಈ ಬಾರಿ 3.71 ಲಕ್ಷ ಕೋಟಿ ರೂ. ಬಜೆಟ್ ಮಂಡಿಸಲಾಗಿತ್ತು. ಮುಂದಿನ ವರ್ಷ 4 ಲಕ್ಷ ಕೋಟಿ ರೂ. ಬಜೆಟ್ ಮಂಡಿಸುವ ನಿರೀಕ್ಷೆ ಇದೆ. ಇದರಿಂದ ಅಭಿವೃದ್ಧಿಗೆ ಅನುದಾನ ಕಡಿಮೆ ಆಗುವುದಿಲ್ಲ ಎಂದು ತಿಳಿಸಿದರು.

ಒತ್ತುವರಿ ತೆರವು ಮಾಡಿದ ಗೋಶಾಲೆ

ನಾಡಕಲಸಿ ಗ್ರಾಮದಲ್ಲಿ ಗೋಶಾಲೆ ಜಾಗವನ್ನು ಯಾರೇ ಒತ್ತುವರಿ ಮಾಡಿಕೊಂಡಿಕೊಂಡಿದ್ದರು ತೆರವು ಮಾಡಿಸುತ್ತೇವೆ. ಅಲ್ಲಿ ಗೋಶಾಲೆ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ. ಗೋಶಾಲೆ ನಿರ್ಮಾಣದ ಬಳಿಕ ಉಳಿದ ಜಾಗವನ್ನು ವಸತಿ ಶಾಲೆಗಳ ನಿರ್ಮಾಣಕ್ಕೆ ಬಳಸಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.

ಉಪ ವಿಭಾಗಾಧಿಕಾರಿ ಯತೀಶ್, ನಗರಸಭೆ ಸದಸ್ಯರಾದ ಗಣಪತಿ ಮಂಡಗಳಲೆ, ತಸೀಫ್, ಹಮೀದ್, ರವಿಕುಮಾರ್ ಇದ್ದರು.

ಇದನ್ನೂ ಓದಿ – ಆನಂದಪುರ ಬಳಿ ಅಪಘಾತದಲ್ಲಿ ತೀವ್ರ ಗಾಯಗೊಂಡು ಯಕ್ಷಗಾನ ಭಾಗವತ ಸಾವು

Leave a Comment