ನಕಲಿ ಔಷಧ ಮಾರಾಟಗಾರರ ವಿರುದ್ಧ ರೊಚ್ಚಿಗೆದ್ದ ಜನ, ಬೇರೆ ರಾಜ್ಯ, ಜಿಲ್ಲೆಯಿಂದ ಬಂದ ವಾಹನಗಳನ್ನು ತಡೆದು ಆಕ್ರೋಶ, ಎಲ್ಲಿ ಗೊತ್ತಾ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | SAGARA | 9 ಮಾರ್ಚ್ 2020

ಕರೋನ ವೈರಸ್ ಭೀತಿ ಹಿನ್ನೆಲೆ ನರಸೀಪುರದ ಖ್ಯಾತ ನಾಟಿ ವೈದ್ಯ ನಾರಾಯಣ ಮೂರ್ತಿ ಅವರು ಗಿಡಮೂಲಿಕೆ ಔಷಧಿ ಕೊಡುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದಾರೆ. ಆದರೂ ಕೆಲವರು ನಾರಾಯಣಮೂರ್ತಿ ಅವರ ಹೆಸರಲ್ಲಿ ನಕಲಿ ಔಷಧಿ ವಿತರಿಸುತ್ತಿರುವುದನ್ನು ಖಂಡಿಸಿ, ನರಸೀಪುರದಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

87775039 1070024326692320 7719467694604419072 n.png? nc cat=100& nc sid=8024bb& nc ohc=COT2iPpP9ekAX EKnWu& nc ht=scontent.fblr1 3

ನರಸೀಪುರದಲ್ಲಿ ನಾಟಿ ವೈದ್ಯ ನಾರಾಯಣ ಮೂರ್ತಿ ಅವರು ವಿವಿಧ ಕಾಯಿಲೆಗೆ ನಾಟಿ ಔಷಧಿ ನೀಡುತ್ತಾರೆ. ಈ ದಿನಗಳಲ್ಲಿ ನರಸೀಪುರಕ್ಕೆ ರಾಜ್ಯ ಮತ್ತು ಹೊರ ರಾಜ್ಯದ ಹಲವು ಭಾಗದಿಂದ ಸಾವಿರಾರು ಜನರು ಬಂದು ಔಷಧಿ ಪಡೆಯುತ್ತಾರೆ. ಕರೋನ ವೈರಸ್ ಭೀತಿ ಹಿನ್ನೆಲೆ, ಔಷಧಿ ವಿತರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.

ನಕಲಿ ಔಷಧ ಹಾವಳಿ

ಔಷಧ ನೀಡುವುದು ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದರೂ, ಭಾನುವಾರ ದೊಡ್ಡ ಸಂಖ್ಯೆಯಲ್ಲಿ ಜನರು ಬಂದಿದ್ದರು. ಕೆಲವರು ಇವರಿಗೆ ನಕಲಿ ಔಷಧಿ ವಿತರಣೆ ಮಾಡುತ್ತಿದ್ದರು. ಈ ಬೆಳವಣಿಗೆ ಖಂಡಿಸಿ, ಗ್ರಾಮಸ್ಥರು ರಸ್ತೆ ತಡೆ ನಡೆಸಿದರು. ಬೇರೆ ಬೇರೆ ಕಡೆಯಿಂದ ಬಂದಿದ್ದವರ ವಾಹನಗಳನ್ನು ತಡೆಯಲಾಯಿತು. ಇದರಿಂದ ಕೆಲಕಾಲ ಸ್ಥಳದಲ್ಲಿ ಗೊಂದಲ ನಿರ್ಮಾಣವಾಗಿತ್ತು.

87482257 1070024493358970 5564737663681953792 n.png? nc cat=109& nc sid=8024bb& nc ohc=alkSzFocotYAX rqw78& nc ht=scontent.fblr1 3

ಹತ್ತು ಹನ್ನೆರಡು ದಿನದಿಂದ ಸ್ಥಗಿತ

ಈ ನಡುವೆ ಮಾಧ್ಯಮಗಳ ಜೊತೆ ಮಾತನಾಡಿದ ನಾರಾಯಣ ಮೂರ್ತಿ ಅವರು, 10 – 12 ದಿನದ ಹಿಂದೆಯೆ ಔಷಧಿ ನೀಡುವುದನ್ನು ಸ್ಥಗಿತಗೊಳಿಸಲಾಗಿದೆ. ಈ ಕುರಿತು ನಾಮಫಲಕದ ಮೂಲಕ ಸೂಚಿಸಲಾಗಿದೆ. ಆದರೂ ಜನರು ಬರುತ್ತಿದ್ದಾರೆ. ನಮ್ಮ ಕುಟುಂಬದಲ್ಲಿ ಔಷಧಿ ನೀಡುತ್ತಿಲ್ಲ. ಕೆಲವರು ಹಣದ ಆಸೆಗೆ ನಕಲಿ ಔಷಧ ಕೊಡುತ್ತಿದ್ದಾರೆ ಎಂದರು.

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494

ವಾಟ್ಸಪ್ ನಂಬರ್ | 7411700200

ಈ ಮೇಲ್ ಐಡಿ | shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment