ಸಂಘದ ಸುವರ್ಣ ಮಹೋತ್ಸವದ ಅಂಗವಾಗಿ ಬಂಗಾರದ ಬೆಡಗು ಶೀರ್ಷಿಕೆಯಡಿ ಎರಡು ದಿನಗಳ ಕುಸ್ತಿ ಪಂದ್ಯಾವಳಿ ನಡೆಯಲಿದೆ. ಕಳೆದ 49 ವರ್ಷಗಳಿಂದ ಗಾಂಧಿನಗರ ಯುವಜನ ಸಂಘ ಕಲೆ, ಸಾಹಿತ್ಯ, ಸಾಂಸ್ಕೃತಿಕ, ಜಾನಪದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಸಂಘವು ಸುವರ್ಣ ಮಹೋತ್ಸವ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಕುಸ್ತಿ ಪಂದ್ಯಾವಳಿ ಹಮ್ಮಿಕೊಂಡಿದೆ ಎಂದರು.
ಬೆಳ್ಳಿ ಗದೆ, ಬಂಗಾರದ ಬಳೆ, ಅಖಾಡ ಬಳೆ, ಪರ್ಸಿ ಬಳೆ ಸೇರಿ ಆಕರ್ಷಕ ನಗದು ಬಹುಮಾನ ಇಡಲಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಹರ್ಯಾಣ, ಪಂಜಾಬ್, ದೆಹಲಿ, ಬೆಳಗಾವಿ ಸೇರಿ ದೇಶದ ಬೇರೆಬೇರೆ ಭಾಗಗಳಿಂದ ಪೈಲ್ವಾನರು ಪಂದ್ಯಾವಳಿಗೆ ಆಗಮಿಸುತ್ತಿದಾರೆ. ಸುಮಾರು 120 ಜೋಡಿ ಅಖಾಡಕ್ಕೆ ಇಳಿಯುವ ಸಾಧ್ಯತೆ ಇದೆ. ಜತೆಗೆ ಮಹಿಳಾ ಕುಸ್ತಿ ಪಂದ್ಯಾವಳಿ ನಡೆಸಲಾಗುತ್ತಿದೆ ಎಂದರು.

ಇದನ್ನೂ ಓದಿ » ಶಿವಮೊಗ್ಗದಲ್ಲಿ ಹಬ್ಬದ ಖರೀದಿ ಅಬ್ಬರ, ಗಾಂಧಿ ಬಜಾರ್, ಹೂವಿನ ಮಾರುಕಟ್ಟೆಯಲ್ಲಿ ಜನಸಾಗರ
ಧರ್ಮರಾಜ್, ಡಾ. ಶ್ರೀಪಾದ ಹೆಗಡೆ, ಕೆ.ಜಿ.ಸಂತೋಷ್, ವೆಂಕಟೇಶ್, ಗಣೇಶ್, ಶ್ರೀನಿಧಿ, ಕೃಷ್ಣಾನಂದ್, ರಾಘವೇಂದ್ರ ಇತರರಿದ್ದರು.