ಸಾಗರ: ದರೋಡೆ ಪ್ರಕರಣದ ಆರೋಪಿ ಶ್ಯಾಡೊ ಸಚಿನ್ (Shadow Sachin) ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ಬಂಧಿಸಲು ತೆರಳಿದ್ದ ಪೊಲೀಸ್ ಸಿಬ್ಬಂದಿ ಮೇಲೆಯೇ ಶ್ಯಾಡೋ ಸಚಿನ್ ಹಲ್ಲೆ ನಡೆಸಿದ್ದಾನೆ. ಆತ್ಮರಕ್ಷಣೆಗೆ ಪಿಎಸ್ಐ ಹಾರಿಸಿದ ಗುಂಡು ಆರೋಪಿ ಕಾಲಿಗೆ ತಗುಲಿದೆ.
ಆನಂದಪುರ ಠಾಣೆ ಪೊಲೀಸರು ಶ್ಯಾಡೋ ಸಚಿನ್ನ ಬಂಧನಕ್ಕೆ ಮೆಣಸಿನಸರ ಸಮೀಪ ತೆರಳಿದ್ದಾಗ ಘಟನೆ ಸಂಭವಿಸಿದೆ. ಹೆಡ್ ಕಾನ್ಸ್ಟೇಬಲ್ ಅಶೋಕ್ ಮೇಲೆ ಶ್ಯಾಡೋ ಸಚಿನ್ ಮಚ್ಚಿನಿಂದ ಹಲ್ಲೆ ನಡೆಸಿದ್ದ. ಈ ಸಂದರ್ಭ ಪಿಎಸ್ಐ ಯುವರಾಜ್ ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದಾರೆ.
ಇತ್ತೀಚೆಗಷ್ಟೆ ಜೈಲಿನಿಂದ ಬಿಡುಗಡೆಯಾಗಿದ್ದ
ವಿವಿಧ ಪ್ರಕರಣ ಸಂಬಂಧ ಜೈಲಿನಲ್ಲಿ ಬಂಧಿಯಾಗಿದ್ದ ಶ್ಯಾಡೋ ಸಚಿನ್ ಒಂದು ತಿಂಗಳ ಹಿಂದಷ್ಟೆ ಬಿಡುಗಡೆಯಾಗಿದ್ದ.

ಟಿಪ್ಪರ್ ಲಾರಿ ಅಡ್ಡಗಟ್ಟಿ ದರೋಡೆ
ಸಾಗರದ ಕಾಸ್ಪಾಡಿ ಸಮೀಪ ಈಚೆಗೆ ಟಿಪ್ಪರ್ ಲಾರಿ ಅಡ್ಡಗಟ್ಟಿ ಚಾಲಕನ ಬಳಿ ಇದ್ದ ಮೊಬೈಲ್ ಮತ್ತು ಹಣ ಕಳ್ಳತನ ಮಾಡಲಾಗಿತ್ತು. ಟಿಪ್ಪರ್ ಲಾರಿಯು ಆನಂದಪುರದಿಂದ ಸಾಗರದ ಕಡೆಗೆ ತೆರಳುತ್ತಿತ್ತು. ಐಗಿನಬೈಲಿನಿಂದ ಕೆಟಿಎಂ ಬೈಕಿನಲ್ಲಿ ಹಿಂಬಾಲಿಸಿಕೊಂಡು ಬಂದ ಇಬ್ಬರು ದುಷ್ಕರ್ಮಿಗಳು ಕಾಸ್ಪಾಡಿ ಸಮೀಪ ಲಾರಿ ಅಡ್ಡಗಟ್ಟಿದ್ದರು.
ಚಾಕು ತೋರಿಸಿ, ಕಲ್ಲು ಎತ್ತಿ ಹಾಕುವುದಾಗಿ ಬೆದರಿಸಿದ ದುಷ್ಕರ್ಮಿಗಳು, ಟಿಪ್ಪರ್ ಲಾರಿ ಚಾಲಕನ ಬಳಿ ಇದ್ದ ಓಪೊ ಮೊಬೈಲ್ ಫೋನ್ ಮತ್ತು 10 ಸಾವಿರ ರೂ. ನಗದು ಕಿತ್ತುಕೊಂಡಿದ್ದರು. ಈ ಪ್ರಕರಣದಲ್ಲಿ ಶ್ಯಾಡೋ ಸಚಿನ್ ಭಾಗಿಯಾಗಿದ್ದ ಎಂದು ಆರೋಪಿಸಲಾಗಿದೆ.
ಬೀಡಾ ಅಂಗಡಿ ಮಾಲೀಕನ ಮೇಲೂ ದಾಳಿ
ಬೀಡಾ ಅಂಗಡಿಯೊಂದರಲ್ಲಿ ಸುಲಿಗೆ ಮಾಡಿರುವ ಸಂಬಂಧ ಶ್ಯಾಡೋ ಸಚಿನ್ ವಿರುದ್ಧ ಪ್ರಕರಣ ದಾಖಲಾಗಿದೆ. ನವುಲೆಯ ಮೂಲ ವೈನ್ಸ್ ಸ್ಟೋರ್ ಪಕ್ಕದಲ್ಲಿರುವ ಬೀಡಾ ಅಂಗಡಿ ಮಾಲೀಕ ಪ್ರತಾಪ್ ಮೇಲೆ ಮೇ 29ರ ರಾತ್ರಿ ಹಲ್ಲೆ ನಡೆಸಿದ್ದ. ಅಂಗಡಿಯಲ್ಲಿ 2 ಸಾವಿರ ರೂ. ಸುಲಿಗೆ ಮಾಡಿದ್ದ ಎಂದು ಆರೋಪಿಸಲಾಗಿದೆ. ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ » ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್, ಅರ್ಜಿ ಸಲ್ಲಿಸುವುದು ಹೇಗೆ? ಶಿವಮೊಗ್ಗದಲ್ಲಿ ಎಲ್ಲೆಲ್ಲಿ ಅರ್ಜಿ ಸಲ್ಲಿಸಬಹುದು?
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200