ಸಾಗರ: ನೆಹರು ನಗರದ 7ನೇ ಕ್ರಾಸ್ನಲ್ಲಿ ಮನೆಯ ಮುಂದೆ ನಿಲ್ಲಿಸಿದ್ದ ಸ್ಪೆಂಡರ್ ಪ್ಲಸ್ ಬೈಕ್ ಕಳ್ಳತನ ಮಾಡಲಾಗಿದ. ಈ ಸಂಬಂಧ ಸಾಗರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ➤ ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ.
ಮಂಜುನಾಥ ಎಂ. ಎಂಬುವವರು ತಮ್ಮ ಸ್ಪೆಂಡರ್ ಪ್ಲಸ್ ಬೈಕನ್ನು ಆಗಸ್ಟ್ 1ರ ರಾತ್ರಿ ಮನೆಯ ಮುಂದೆ ನಿಲ್ಲಿಸಿದ್ದರು. ಮರುದಿನ ಬೆಳಿಗ್ಗೆ ನೋಡಿದಾಗ ಬೈಕ್ ಅಲ್ಲಿರಲಿಲ್ಲ. ಬೈಕ್ ನಾಪತ್ತೆಯಾಗಿದ್ದ ಹಿನ್ನೆಲೆ ಎಲ್ಲೆಡೆ ಹುಡುಕಿದ ಅವರು ಕೊನೆಗೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಇದನ್ನೂ ಓದಿ:➤ ದಿಢೀರ್ ತೆರೆದುಕೊಳ್ತು ಮಿನಿ ಬಸ್ ಡೋರ್, ದಾರಿಯಲ್ಲಿ ಹೋಗುತ್ತಿದ್ದ ವ್ಯಕ್ತಿಗೆ ಗಾಯ, ಎಲ್ಲಿ? ಆಗಿದ್ದೇನು?