ಸಾಗರ: ಸಿಗಂದೂರು ಸೇತುವೆ (Sigandur Bridge) ಸಮೀಪ ಕಳೆದ ರಾತ್ರಿ ಅಪಘಾತ ಸಂಭವಿಸಿದೆ. ಸೇತುವೆಯ ತಿರುವಿನಲ್ಲಿ ಥಾರ್ ಜೀಪ್ ಪಲ್ಟಿಯಾಗಿದೆ. ಸಿಗಂದೂರು ಕಡೆಯಿಂದ ಸಾಗರ ಕಡೆಗೆ ಪ್ರಯಾಣಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ.

ಥಾರ್ ವಾಹನದಲ್ಲಿದ್ದವರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಸೇತುವೆಯ ಕೊನೆಯಲ್ಲಿರುವ ತಿರುವು ಅವೈಜ್ಞಾನಿವಾಗಿದೆ. ಇದರಿಂದಾಗಿಯೆ ಅಪಘಾತ ಸಂಭವಿಸುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.








