ಶಿಕಾರಿಪುರ ಬಂದ್‌, ಪಟ್ಟಣದಲ್ಲಿ ತಮಟೆ ಮೂಲಕ ಜಾಗೃತಿ, ಬೆಳಗ್ಗೆಯಿಂದ ಹೇಗಿದೆ ಪರಿಸ್ಥಿತಿ?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಶಿಕಾರಿಪುರ: ಟೋಲ್‌ ಗೇಟ್‌ ವಿರೋಧಿ ಹೋರಾಟ ಸಮಿತಿ ಕರೆ ನೀಡಿರುವ ಶಿಕಾರಿಪುರ ಬಂದ್‌ (Bandh) ಕಾವು ಪಡೆಯುತ್ತಿದೆ. ಪಟ್ಟಣದಲ್ಲಿ ತಮಟೆ ಬಾರಿಸಿ ಬಂದ್‌ ಕುರಿತು ಮಾಹಿತಿ ನೀಡಲಾಗುತ್ತಿದೆ.

ಕುಟ್ರಳ್ಳಿ ಟೋಲ್‌ ಗೇಟ್‌ ವಿರೋಧಿ ಹೋರಾಟ ಸಮಿತಿ ಇಂದು ಶಿಕಾರಿಪುರ ಬಂದ್‌ ಘೋಷಿಸಿದೆ. ವಿವಿಧ ಸಂಘಟನೆಗಳು ಬಂದ್‌ ಬೆಂಬಲಿಸಿವೆ. ಹಾಗಾಗಿ ಇಂದು ಬೆಳಗ್ಗೆಯಿಂದಲೆ ಶಿಕಾರಿಪುರ ಪಟ್ಟಣದಲ್ಲಿ ಬಂದ್‌ಗೆ ಬೆಂಬಲ ವ್ಯಕ್ತವಾಗುತ್ತಿದೆ. ಸುದ್ದಿಯ ಮುಂದಿನ 4 ಪ್ಯಾರಾಗಳು ಕೆಳಗಿವೆ.

ಇತ್ತ ಬೆಳಗ್ಗೆಯಿಂದ ಖಾಸಗಿ ಮತ್ತು ಸರ್ಕಾರಿ ಬಸ್ಸುಗಳು ಸಂಚರಿಸುತ್ತಿವೆ. ವಿದ್ಯಾರ್ಥಿಗಳು, ಕಚೇರಿ ಸೇರಿದಂತೆ ವಿವಿಧ ಕೆಲಸಕ್ಕೆ ತೆರಳುವವರು ಬಸ್ಸುಗಳಲ್ಲಿ ಕಾಣಿಸುತ್ತಿದ್ದಾರೆ. ವಾಹನ ಸಂಚಾರವು ಎಂದಿನಂತಿದೆ. ಸಾಮಾನ್ಯವಾಗಿ 10 ಗಂಟೆ ಬಳಿಕ ಶಿಕಾರಿಪುರದಲ್ಲಿ ಅಂಗಡಿ ಮುಂಗಟ್ಟು ಬಾಗಿಲು ತೆರೆಯಲಿವೆ. ಪ್ರತಿಭಟನಾ ಮೆರವಣಿಗೆಯು ಇದೇ ಸಮಯಕ್ಕೆ ಶುರುವಾಗಲಿದೆ.

ಇನ್ನು, ಪಟ್ಟಣದಲ್ಲಿ ತಮಟೆ ಬಾರಿ ಬಂದ್‌ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಪಟ್ಟಣದ ಬಿ.ಎಸ್‌.ಯಡಿಯೂರಪ್ಪ ಖಾಸಗಿ ಬಸ್‌ ನಿಲ್ದಾಣದ ಮುಂದೆ ತಮಟೆ ಬಾರಿಸಲಾಯಿತು.

Shikaripura Bandh
ಶಿಕಾರಿಪುರದಲ್ಲಿ ಅಂಗಡಿ ಮುಂಗಟ್ಟು ಬಂದ್‌
Shikaripura Bandh
ಶಿಕಾರಿಪುರದ ಬಿ.ಎಸ್‌.ಯಡಿಯೂರಪ್ಪ ಬಸ್‌ ನಿಲ್ದಾಣದ ಸದ್ಯದ ದೃಶ್ಯ.
Shikaripura Bandh
ಖಾಸಗಿ ಬಸ್‌ ನಿಲ್ದಾಣ ಮುಂಭಾಗ ತಮಟೆ ಬಾರಿಸಿ ಬಂದ್‌ ಕುರಿತು ಜನಜಾಗೃತಿ.

ಇದನ್ನೂ ಓದಿ » ಶಿವಮೊಗ್ಗದ 21 ವರ್ಷದ ಯುವಕನಿಗೆ 7 ವರ್ಷ ಕಠಿಣ ಜೈಲು ಶಿಕ್ಷೆ, ₹10,000 ದಂಡ

Shikaripura Bandh

Leave a Comment