ಮಳೆಯಲ್ಲೂ ಚಂದ್ರಗುತ್ತಿಯಲ್ಲಿ ಪೂಜೆ | ಕೂಡಲಿಯಲ್ಲಿ ಚಾತುರ್ಮಾಸ್ಯ ಆರಂಭ | ತೊಗರ್ಸಿ ಆಭರಣ ಸರ್ಕಾರದ ಸುಪರ್ದಿಗೆ

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

SHIVAMOGGA LIVE NEWS | 22 JULY 2024

SHIMOGA : ಹುಣ್ಣಿಮೆ ಹಿನ್ನೆಲೆ ಚಂದ್ರಗುತ್ತಿ ದೇವಸ್ಥಾನಕ್ಕೆ (Temple) ದೊಡ್ಡ ಸಂಖ್ಯೆಯ ಭಕ್ತರು ಆಗಮಿಸಿ ಪೂಜೆ ಸಲ್ಲಿಸಿದ್ದರು. ಕೂಡಲಿಯಲ್ಲಿ ಚಾತುರ್ಮಾಸ್ಯ ಆರಂಭ. ಇಲ್ಲಿದೆ ಫಟಾಫಟ್‌ ನ್ಯೂಸ್‌. ಸುದ್ದಿಯ ಮುಂದಿನ 17 ಪ್ಯಾರಾಗಳು ಕೆಳಗಿವೆ.

ಸೊರಬ

ಚಂದ್ರಗುತ್ತಿಯಲ್ಲಿ ಹುಣ್ಣಿಮೆ ಪೂಜೆ

chandragutti temple

ಶಿವಮೊಗ್ಗ ಲೈವ್.ಕಾಂ : ಎಡೆಬಿಡದೆ ಸುರಿಯುತ್ತಿರುವ ಮಳೆ ನಡುವೆಯೂ ಚಂದ್ರಗುತ್ತಿ ಶ್ರೀ ರೇಣುಕಾಂಬಾ fatafat-1-1.webpದೇವಸ್ಥಾನಕ್ಕೆ ಗುರುಪೂರ್ಣಿಮೆ ಅಂಗವಾಗಿ ಸಾವಿರಾರು ಭಕ್ತರು ಆಗಮಿಸಿ ಪೂಜೆ ಸಲ್ಲಿಸಿದರು. ದೇವಿಯ ಪಲ್ಲಕ್ಕಿ ಉತ್ಸವವು ಚಂದ್ರಗುತ್ತಿ ಸಮೀಪದ ಜೋಳದಗುಡ್ಡೆ ವರದಾ ನದಿ ತೀರದ ಪ್ರದೇಶಕ್ಕೆ ತೆರಳಿ ಕಳಸ ತೊಳೆಯುವ ಪದ್ಧತಿಯನ್ನು ವಿಧಿ ವಿಧಾನಗಳೊಂದಿಗೆ ನೆರವೇರಿಸಲಾಯಿತು. ನಂತರ ಪಲ್ಲಕ್ಕಿ ಉತ್ಸವ ಜೋಳದಗುಡ್ಡೆ ಮಾರ್ಗವಾಗಿ ದೇವಾಲಯದವರೆಗೆ ವಿವಿಧ ವಾದ್ಯಮೇಳಗಳೊಂದಿಗೆ ವಿಜೃಂಭಣೆಯಿಂದ ಜರುಗಿತು. ಭಕ್ತರು ಪರಿವಾರ ದೇವರುಗಳಾದ ನಾಗದೇವತೆ, ಮಾತಂಗಿ, ಕಾಲಭೈರವ, ಪರಶುರಾಮ, ತ್ರಿಶೂಲದ ಭೈರಪ್ಪ ದೇವರಿಗೆ ಹಾಗೂ ತೊಟ್ಟಿಲು ಬಾವಿಗೆ ವಿಶೇಷ ಪೂಜೆ ಸಲ್ಲಿಸಿದರು.

 ಶಿವಮೊಗ್ಗ  ಲೈವ್.ಕಾಂ 

ಶಿವಮೊಗ್ಗ

ಕೂಡಲಿ ಮಠದಲ್ಲಿ ವ್ಯಾಸಪೂಜೆಯೊಂದಿಗೆ ಚಾತುರ್ಮಾಸ್ಯ

kudli chaturmasya

ಶಿವಮೊಗ್ಗ ಲೈವ್.ಕಾಂ : ಕೂಡಲಿ ಮಠದಲ್ಲಿ ಶೃಂಗೇರಿ ಮಹಾಸಂಸ್ಥಾನ ದಕ್ಷಿಣಮ್ನಾಯ ಮೂಲ ಶಾರದಾ ಪೀಠದ fatafat-2.webpಜಗದ್ಗುರು ಶ್ರೀ ವಿದ್ಯಾಭಿನವ ವಿದ್ಯಾರಣ್ಯ ಭಾರತಿ ಸ್ವಾಮೀಜಿ 40ನೇ ವರ್ಷದ ಚಾತುರ್ಮಾಸ್ಯ ವ್ರತ ಸಂಕಲ್ಪವನ್ನು ವ್ಯಾಸಪೂಜೆಯೊಂದಿಗೆ ಭಾನುವಾರ ಆರಂಭಿಸಿದರು. ಚಾತುರ್ಮಾಸ್ಯದ ಅಂಗವಾಗಿ ಶ್ರೀ ಮಠದಲ್ಲಿ ಲೋಕಕಲ್ಯಾಣಾರ್ಥ ಇಷ್ಟಅಷ್ಟಕಾಮ್ಯ ಪ್ರಾಪ್ತಿಗಾಗಿ ಭಾನುವಾರದಿಂದ ಬುಧವಾರವರೆಗೆ ನಿತ್ಯ ಧಾರ್ಮಿಕ ಕಾರ್ಯಕ್ರಮಗಳು ಶ್ರೀಗಳ ಸಾನ್ನಿಧ್ಯದಲ್ಲಿ ನೆರವೇರಲಿವೆ. ಭಕ್ತರು ಕುಟುಂಬ ಸಮೇತ ಭಾಗವಹಿಸಿ ಶ್ರೀ ವಿದ್ಯಾಶಂಕರ, ಶ್ರೀ ವಾಲುಕಾಪರಮೇಶ್ವರ, ಶ್ರೀ ಚಂದ್ರಮೌಳೇಶ್ವರ, ಶ್ರೀ ಚಕ್ರನಿವಾಸಿನಿ ಸಹಿತ ಶ್ರೀ ಶಾರದಾಂಬೆ ಮತ್ತು ಶ್ರೀ ಶಂಕರರಾಚಾರ್ಯ ವಿದ್ಯಾಭಿನವ ವಿದ್ಯಾರಣ್ಯ ಭಾರತೀ ಸ್ವಾಮೀಜಿ ಪೂರ್ಣಾನುಗ್ರಹ ಪಡೆಯಬಹುದು ಎಂದು ಕೂಡಲಿ ಮಠದ ವ್ಯವಸ್ಥಾಪಕ ರಮೇಶ್ ಹುಲಿಮನಿ ತಿಳಿಸಿದ್ದಾರೆ.

 ಶಿವಮೊಗ್ಗ  ಲೈವ್.ಕಾಂ 

ಶಿಕಾರಿಪುರ

ತೊಗರ್ಸಿ ದೇಗುಲದ ಚಿನ್ನಾಭರಣ ಸರ್ಕಾರದ ಸುಪರ್ದಿಗೆ

ಶಿವಮೊಗ್ಗ ಲೈವ್.ಕಾಂ : ತೊಗರ್ಸಿ ಶ್ರೀ ಮಲ್ಲಿಕಾರ್ಜುನ ದೇವಾಲಯದ ಚಿನ್ನಾಭರಣಗಳ ರಕ್ಷಣೆಗಾಗಿ ತಾಲೂಕು fatafat-3.webpಖಜಾನೆಯಲ್ಲಿ ಸುರಕ್ಷಿತವಾಗಿಡಲು ಸಮಿತಿ ಮತ್ತು ಸಾರ್ವಜನಿಕರ ಮನವಿ ಮೇರೆಗೆ ಪಟ್ಟಿ ಮಾಡಿ ವಶಕ್ಕೆ ಪಡೆಯಲಾಗಿದೆ. ದೇವಾಲಯದ ಉತ್ಸವ ಹಾಗೂ ವಿಶೇಷ ಸಂದರ್ಭಗಳಲ್ಲಿ ಇವುಗಳನ್ನು ಕೊಡಲಾಗುವುದು ಎಂದು ತಹಸೀಲ್ದಾ‌ರ್ ಮಲ್ಲೇಶ್‌ ಬಿ. ಪೂಜಾ‌ರ್ ಹೇಳಿದರು. ಇತ್ತೀಚೆಗೆ ದೇಗುಲದಲ್ಲಿ ಆಭರಣಗಳು ಕಳುವಾದ ಹಿನ್ನೆಲೆ ಉಳಿದ ಚಿನ್ನಾಭರಣಗಳ ಸುರಕ್ಷತೆ ದೃಷ್ಟಿಯಿಷ ನಡೆದ ಸಭೆಯಲ್ಲಿ ಮಾತನಾಡಿದ ಅವರು, ದೇಗುಲದಲ್ಲಿ ಧಾರ್ಮಿಕ ಕಾರ್ಯಗಳು ಮುಗಿದ ನಂತರ ಪುನಃ ಖಜಾನೆಗೆ ಒಪ್ಪಿಸಬೇಕು. ಸಮಿತಿ ಹಾಗೂ ಮುಜರಾಯಿ ಇಲಾಖೆ ಜಂಟಿಯಾಗಿ ಕೆಲಸ ನಿರ್ವಹಿಸುತ್ತವೆ ಎಂದರು. ಮಳೆ ಹಿರೇಮಠದ ಶ್ರೀ ಮಹಾಂತ ದೇಶಿಕೇಂದ್ರ ಸ್ವಾಮೀಜಿ, ಪಂಚವಣ್ಣಿಗೆ ಮಠದ ಶ್ರೀ ಚನ್ನವೀರ ದೇಶಿಕೇಂದ್ರ ಸ್ವಾಮೀಜಿ, ಶಿರಸ್ತೇದಾರ್‌ ವಿನಯ್ ಆರಾಧ್ಯ, ಉಪ ತಹಸೀಲ್ದಾ‌ರ್ ಮಹೇಶ್‌ ಸೇರಿದಂತೆ ಹಲವರು ಇದ್ದರು.

ಇದನ್ನೂ ಓದಿ ⇓

ಸಾಗರದಲ್ಲಿ ಹೆಚ್ಚು ಮಳೆ, ಶಿವಮೊಗ್ಗದಲ್ಲಿ ಬಹಳ ಕಡಿಮೆ, ಯಾವ್ಯಾವ ತಾಲೂಕಿನಲ್ಲಿ ಎಷ್ಟಾಗಿದೆ ವರ್ಷಧಾರೆ?

220724 chandragutti temple and kudli mutt

Leave a Comment