SHIVAMOGGA LIVE NEWS | 10 MAY 2024
KUMSI : ಒಂದೇ ಜಮೀನಿನಲ್ಲಿ ಎರಡು ಬಾರಿ ಶುಂಠಿ ಕಳ್ಳತನವಾಗಿದೆ. ಬೆಳೆಗಾರ ಇಲ್ಲದ ಸಂದರ್ಭ ಗಮನಿಸಿ 9 ಕ್ವಿಂಟಾಲ್ ಶುಂಠಿ ಕಳವು ಮಾಡಿರುವ ಶಂಕೆ ಇದೆ ಎಂದು ಆರೋಪಿಸಲಾಗಿದೆ. ಹಿಟ್ಟಗೊಂಡನಕೊಪ್ಪ ಗ್ರಾಮದಲ್ಲಿ ಜಮೀನು ಗುತ್ತಿಗೆ ಪಡೆದು ಕುಂಸಿಯ ದೇವೇಂದ್ರ ಎಂಬುವವರು ಶುಂಠಿ ಬೆಳೆದಿದ್ದರು. ನಿತ್ಯ ಜಮೀನಿಗೆ ಹೋಗಿ ಬರುತ್ತಿದ್ದರು.
ಏಪ್ರಿಲ್ 29ರ ರಾತ್ರಿ ಜಮೀನಿನಲ್ಲಿ ಬೆಳೆದಿದ್ದ ಸುಮಾರು 7 ಕ್ವಿಂಟಾಲ್ ಶುಂಠಿ ಕಳವು ಮಾಡಲಾಗಿತ್ತು. ಈ ಹಿನ್ನೆಲೆ ರಾತ್ರಿ ವೇಳೆ ಜಮೀನಿನಲ್ಲಿ ದೇವೇಂದ್ರ ಕಾವಲು ಕಾಯಲು ಆರಂಭಿಸಿದರು. ಮೇ 4ರಂದು ಮದುವೆ ಸಮಾರಂಭಕ್ಕೆ ದೇವೇಂದ್ರ ತೆರಳಿದ್ದರು. ಆ ರಾತ್ರಿ ನಾಲ್ಕು ಚೀಲ ಶುಂಠಿ ಕಳುವಾಗಿತ್ತು. ಬೆಳೆಗಾರ ಇಲ್ಲದ ಸಂದರ್ಭವನ್ನೆ ಗಮನಿಸಿ 92 ಸಾವಿರ ರೂ. ಮೌಲ್ಯದ ಶುಂಠಿ ಕಳ್ಳತನ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ – ಆಗುಂಬೆ ಬಳಿ ಅಪಘಾತ, ಒಬ್ಬ ಸಾವು, ಕ್ಯಾಂಟರ್ ಜಖಂ
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200