ಎರಡು ಊರಿನ ಮಧ್ಯೆ ಅಪಘಾತ, ಮೃತ ವ್ಯಕ್ತಿ ಬಳಿ ಇದ್ದ ಹಣ ನಾಪತ್ತೆ ಆರೋಪ, ಏನಿದು ಪ್ರಕರಣ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE | 6 JULY 2023

HOLEHONNURU : ಜಾತ್ರೆಗೆ ಶಾಮಿಯಾನ (Shamiana) ಹಾಕಲು ಹಣ ಪಡೆದು ಬರುವುದಾಗಿ ತಿಳಿಸಿ ಹೋಗಿದ್ದ ವ್ಯಕ್ತಿಯೊಬ್ಬರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಅಪಘಾತದ ನಂತರ ಮೃತ ವ್ಯಕ್ತಿಯ ಬಳಿ ಮೊಬೈಲ್‌ Accidentಮಾತ್ರ ಇದ್ದು ಹಣ ಸಿಕ್ಕಿಲ್ಲ ಎಂದು ಕುಟುಂಬದವರು ಆಪಾದಿಸಿದ್ದಾರೆ.

ಏನಿದು ಪ್ರಕರಣ?

ಹಾರೊಬೆನವಳ್ಳಿ ನಿವಾಸಿ ಮಂಜನಾಯ್ಕ (40) ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ತಮ್ಮ ಬೈಕಿನಲ್ಲಿ ಬಿ.ಬೀರನಹಳ್ಳಿಯಿಂದ ಹಾರೊಬೆನವಳ್ಳಿಗೆ ಬರುತ್ತಿದ್ದಾಗ ಅಪಘಾತವಾಗಿದೆ. ಅಪರಿಚಿತ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ.

ಇದನ್ನೂ ಓದಿ – ಗ್ಯಾಸ್‌ ಏಜೆನ್ಸಿ ಶುರು ಮಾಡುವುದು ಹೇಗೆ? ಗೂಗಲ್‌ನಲ್ಲಿ ಹುಡುಕಿದ ನಿವೃತ್ತ ಉದ್ಯೋಗಿಗೆ ಕೊನೆಗೆ ಕಾದಿತ್ತು ಶಾಕ್

ಹಣ ಎಲ್ಲಿ ಹೋಯ್ತು?

ಮಂಜನಾಯ್ಕ ಶಾಮಿಯಾನ (Shamiana) ಇಟ್ಟುಕೊಂಡು ಗೂಡ್ಸ್‌ ಆಟೋ ಬಾಡಿಗೆಗೆ ಓಡಿಸಿಕೊಂಡಿದ್ದರು. ಬಿ.ಬೀರನಹಳ್ಳಿಯಲ್ಲಿ ಜಾತ್ರೆಯೊಂದಕ್ಕೆ ಶಾಮಿಯಾನ ಹಾಕಲು ಹಣ ಪಡೆದು ಬರುವುದಾಗಿ ತೆರಳಿದ್ದರು. ಮರಳಿ ಬರುವಾಗ ಘಟನೆ ಸಂಭವಿಸಿದೆ. ಮೃತ ವ್ಯಕ್ತಿಯ ಬಳಿ ಮೊಬೈಲ್‌ ಫೋನ್‌ ಮಾತ್ರ ಪತೆಯಾಗಿದ್ದು, ಹಾಣ ಕಾಣಿಸುತ್ತಿಲ್ಲ ಎಂದು ಕುಟುಂಬದವರು ಆರೋಪಿಸಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಾಗಿದೆ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment