ನಿಷೇಧವಿದ್ದರು ಪ್ಲಾಸ್ಟಿಕ್ ಬಾಟಲಿಯಲ್ಲಿ ನೀರು, ಸಭೆಗೆ ಬಂದರು ಮೊಬೈಲ್’ನಲ್ಲಿ ಮುಳುಗಿದ್ದರು, ಗೈರಾದವರಿಗೆ ನೊಟೀಸ್

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | SHIMOGA | 20 ಡಿಸೆಂಬರ್ 2019

ತಾಲೂಕು ಪಂಚಾಯಿತಿ ಕಾರ್ಯಾಲಯದಲ್ಲಿ ಇವತ್ತು ತ್ರೈಮಾಸಿಕ ಸಭೆ ಆಯೋಜಿಸಲಾಗಿತ್ತು. ತಹಶೀಲ್ದಾರ್ ಸೇರಿದಂತೆ ಹಲವು ಅಧಿಕಾರಿಗಳು ಸಭೆ ಗೈರಾಗಿದ್ದು ಶಾಸಕರ ಸಿಟ್ಟಿಗೆ ಕಾರಣವಾಯಿತು. ಮತ್ತೊಂದೆಡೆ ಪ್ಲಾಸ್ಟಿಕ್ ನಿಷೇಧವಿದ್ದರು ತಾಲೂಕು ಪಂಚಾಯಿತಿ ಸಭೆಯಲ್ಲಿ ಪ್ಲಾಸ್ಟಿಕ್ ವಾಟರ್ ಬಾಟಲ್’ಗಳು ರಾರಾಜಿಸಿದವು.

80028121 1005335083161245 7504404792169463808 n.png? nc cat=105& nc eui2=AeGkmeAgoOeFfNHwobv4NJHrUNjqNEdbzZh13Pu0WmJPB4PxFSel 02rZ5dyWAA6E3rZpLWiQYjY6A1vopGGW8Iqeq dSUUZ1vX6pt5FA2mwRQ& nc ohc=302 O8I5BTgAQkPqgtxDIfl5f8XRGuZYQKfdUFPgnHM4F2njlPYGtnjdw& nc ht=scontent.fblr11 1

ಆಫೀಸರ್’ಗಳೇ ಇಲ್ಲದ್ದಕ್ಕೆ ಗರಂ

ತಾಲೂಕು ಪಂಚಾಯಿತಿ ತ್ರೈಮಾಸಿಕ ಸಭೆಗೆ ಹಲವು ಅಧಿಕಾರಿಗಳು ಗೈರಾಗಿದ್ದರು. ಇದು ಶಾಸಕ ಅಶೋಕ್ ನಾಯ್ಕ್ ಅವರನ್ನು ಕೆರಳಿಸಿತು. ತಹಶೀಲ್ದಾರ್ ಗಿರೀಶ್, ಎಪಿಎಂಸಿ, ಕಾರ್ಮಿಕ ಇಲಾಖೆ, ಭೂ ವಿಜ್ಞಾನ ಇಲಾಖೆ, ಕೆಎಸ್ಆರ್’ಟಿಸಿ ಸೇರಿದಂತೆ ಹಲವರು ಇಲಾಖೆ ಅಧಿಕಾರಿಗಳು ಗೈರಾಗಿದ್ದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ಇದ್ದಿದ್ದರಿಂದ ತಹಶೀಲ್ದಾರ್ ಗಿರೀಶ್ ಗೈರಾಗಿದ್ದಾರೆ ಎಂದು ಉಪ ತಹಶೀಲ್ದಾರ್ ತಿಳಿಸಿದರು. ಹಾಗಾಗಿ ಗೈರಾದ ಅಧಿಕಾರಿಗಳಿಗೆ ನೊಟೀಸ್ ನೀಡುವಂತೆ ಸೂಚಿಸಿದರು.

ಜನಪ್ರತಿನಿಧಿಗಳಿಗೆ ಬಾಟಲಿ ನೀರು

ಪ್ಲಾಸ್ಟಿಕ್ ನಿಷೇಧದ ಹಿನ್ನೆಲೆ ಸರ್ಕಾರದ ಸಭೆ ಸಮಾರಂಭಗಳಲ್ಲಿ ಪ್ಲಾಸ್ಟಿಕ್ ಬಾಟಲಿ ಬಳಸದಂತೆ ಅದೇಶ ಹೊರಡಿಸಲಾಗಿದೆ. ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ, ಜಿಲ್ಲಾಧಿಕಾರಿ ಕಚೇರಿ ಸೇರಿದಂತೆ ಎಲ್ಲ ಸಭೆಗಳಲ್ಲೂ ಪ್ಲಾಸ್ಟಿಕ್ ಬಾಟಲಿಯಲ್ಲಿ ನೀರು ನೀಡುವುದು ನಿಷೇಧವಿದೆ. ಅದರೂ ತಾಲೂಕು ಪಂಚಾಯಿತಿ ಸಭೆಯಲ್ಲಿ ಬಾಟಲಿಯಲ್ಲಿ ನೀರು ಕೊಡಲಾಯಿತು. ಶಾಸಕರು, ಜಿ.ಪಂ. ಉಪಾಧ್ಯಕ್ಷರು, ತಾ.ಪಂ ಅಧ್ಯಕ್ಷೆ, ಉಪಾಧ್ಯಕ್ಷೆ ಸೇರಿದಂತೆ ಅಧಿಕಾರಿಗಳಿಗೆ ಬಾಟಲಿಯಲ್ಲಿ ನೀರು ನೀಡಿದ್ದು ಸರ್ಕಾರ ಆದೇಶ ಮತ್ತು ಆಶಯವನ್ನು ಪ್ರಶ್ನಿಸುವಂತಿತ್ತು.

79917889 1005335149827905 5217072559425585152 n.png? nc cat=101& nc eui2=AeFp5L WtJTpBd8vzSSL VzlskUmL8WYYBIX7P8zdLv8qW 2f xZrRM IaWquXI0oW1Hwa09lim npXbY576U7WyKS3UxZWICU MG3v1enpeBQ& nc ohc=sAfWEfiMvHUAQle00l7Ycqmrn4UQ73gJ3WpB X6i jj51nfviHrTe1O2g& nc ht=scontent.fblr11 1

ಮೊಬೈಲ್ ಮೊಬೈಲ್ ಮೊಬೈಲ್

ಸಭೆಗೆ ಬಂದ ಹಲವು ಅಧಿಕಾರಿಗಳು ಮೊಬೈಲ್’ನಲ್ಲಿ ಬ್ಯುಸಿಯಾಗಿದ್ದರು. ಸಭೆಯ ನಡುವೆಯು ಮೊಬೈಲ್’ನಲ್ಲಿ ಮಾತನಾಡುತ್ತಿದ್ದರು. ಕೆಲವರು ಮೊಬೈಲ್’ನಲ್ಲಿ ಏನನ್ನೋ ಸರ್ಚ್ ಮಾಡುತ್ತಿದ್ದರು. ಮತ್ತೊಂದೆಡೆ ಸಭೆಯಲ್ಲಿ ಆಯಾ ಇಲಾಖೆಯ ಕುರಿತು ಚರ್ಚೆ ಮುಗಿಯುತ್ತಿದ್ದಂತೆ ಎದ್ದು ಹೊರ ನಡೆಯುತ್ತಿದ್ದದ್ದು ಸಾಮಾನ್ಯವಾಗಿತ್ತು.

80381182 1005335053161248 9005060781934379008 n.png? nc cat=103& nc eui2=AeFULm65s0m ikYqGCe3sLXLw2mc7d8aGS wK8N6U 12jUn lE7O6qdGA2dERhq02mHXyAX9f8FpI6A lPGrWmtdPWsD9GN85mmrBQ3FCcFwTg& nc ohc=dhTVKM9V 0kAQniM4qwHeZsS7prvJFR1ZMAgpLOjupYbQpS4SPshzjIOA& nc ht=scontent.fblr11 1

ಸಭೆಯಲ್ಲಿ ಏನೇನೆಲ್ಲ ಚರ್ಚೆಯಾಯ್ತು?

ಎಸ್ಸೆಸ್ಸೆಲ್ಸಿ ಫಲಿತಾಂಶದ ಹೆಚ್ಚಳ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು. ಈ ವೇಳೆ ಫಲಿತಾಂಶ ಪ್ರಮಾಣ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅವರು ಸಭೆಗೆ ತಿಳಿಸಿದರು. ಈ ವೇಳೆ ಶಾಸಕ ಅಶೋಕ್ ನಾಯ್ಕ್ ಅವರು ಎಷ್ಟು ಫಲಿತಾಂಶ ಬರಲಿದೆ ಎಂದು ಪ್ರಶ್ನಿಸಿದರು. ಶೇ.90ರಷ್ಟು ಫಲಿತಾಂಶದ ಗುರಿ ಹೊಂದಿದ್ದೇವೆ ಎಂದರು.

https://www.facebook.com/liveshivamogga/videos/1651397178335561/

ಹಾಸ್ಟೆಲ್ ದುರಸ್ಥಿಗೆ ಸಮಾಜ ಕಲ್ಯಾಣ ಇಲಾಖೆಗೆ ಹಣ ಬಂದಿದ್ದು ಶಾಸಕರ ಗಮನಕ್ಕೆ ತಂದಿಲ್ಲ ಎಂದು ಅಶೋಕ್ ನಾಯ್ಕ್ ಗರಂ ಆದರು. 20 ಲಕ್ಷ ರೂ. ಹಣ ಬಂದಿದ್ದು, ಯಾವ್ಯಾವ ಹಾಸ್ಟೆಲ್ ದುರಸ್ಥಿತಿ ಮಾಡಲಾಗುತ್ತಿದೆ ಎಂಬುದನ್ನು ತಿಳಿಸಬೇಕು ಎಂದು ಸೂಚಿಸಿದರು.

ಸಣ್ಣ ನೀರಾವರಿ ಇಲಾಖೆ ವತಿಯಿಂದ ಕೊರೆಸಿರುವ ಬೋರ್’ವೆಲ್’ಗಳಿಗೆ ಕೂಡಲೇ ವಿದ್ಯುತ್ ಸಂಪರ್ಕ ನೀಡಬೇಕು, ಮಾರ್ಚ್’ನಲ್ಲೇ ಮುಗಿಯಬೇಕಿದ್ದ ನಿರಂತರ ಜ್ಯೋತಿ ಕಾಮಗಾರಿ ಈವರೆಗೂ ಮುಗಿದಿಲ್ಲ. ಕೂಡಲೇ ಗುತ್ತಿಗೆದಾರನನ್ನು ಬ್ಲಾಕ್ ಲಿಸ್ಟ್’ಗೆ ಹಾಕುವಂತೆ ಶಾಸಕ ಅಶೋಕ್ ನಾಯ್ಕ್ ಸೂಚಿಸಿದರು.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200

ಸುದ್ದಿಗಾಗಿ ಕರೆ ಮಾಡಿ – 9964634494

ಈ ಮೇಲ್ ಐಡಿ | shivamoggalive@gmail.com

Plastic Bottle water is being served in Shimoga Taluk Panchayath Meeting. It is the violation of Government Orders.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment