HOLEHONNURU NEWS, 3 OCTOBER 2024 : ಕೂಡ್ಲಿಯ ತುಂಗಭದ್ರಾ ಸಂಗಮದಲ್ಲಿ ಸ್ನಾನಕ್ಕೆ (Missing) ಇಳಿದಿದ್ದ ಯುವಕ ಹರ್ಷಿತ್ (23) ನಾಪತ್ತೆಯಾಗಿದ್ದಾನೆ. ಹೊಳಲ್ಕೆರೆಯಿಂದ ಕುಟುಂಬದವರ ಜೊತೆ ಬುಧವಾರ ಕೂಡ್ಲಿ ತುಂಗಾ-ಭದ್ರಾ ಸಂಗಮದಲ್ಲಿ ಮಹಾಲಯ ಅಮಾವಾಸ್ಯೆ ಪೂಜೆ ನೆರವೇರಿಸಲು ಹರ್ಷಿತ್ ಬಂದಿದ್ದ.➤ ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.
ಪೂಜೆ ನೆರವೇರಿಸಿ ಸ್ನಾನಕ್ಕೆಂದು ಸಂಗಮಕ್ಕಿಳಿದಾಗ ನೀರಿನಲ್ಲಿ ಮುಳುಗಿದ್ದಾನೆ. ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯ ಈಜುಗಾರರ ತಂಡ ಸಂಗಮದಲ್ಲಿ ಯುವಕನಿಗಾಗಿ ಶೋಧ ಕಾರ್ಯ ನಡೆಸಿತು. ಸಂಜೆಯಾದರೂ ಯುವಕ ಪತ್ತೆಯಾಗಲಿಲ್ಲ. ಹೊಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ » ಶೆಡ್ ನಿರ್ಮಾಣದ ವೇಳೆ ಕರೆಂಟ್ ಶಾಕ್, ಯುವಕ ಕೊನೆಯುಸಿರು