ಬಂಗಾರಧಾಮದಲ್ಲಿ ಬಂಗಾರಪ್ಪಗೆ ನಮನ, ಮೂವರಿಗೆ ಬಂಗಾರ ಪ್ರಶಸ್ತಿ ಪ್ರದಾನ

SORABA NEWS, 27 OCTOBER 2024 : ಮಾಜಿ ಮುಖ್ಯಮಂತ್ರಿ ಎಸ್‌.ಬಂಗಾರಪ್ಪ ಅವರ 92ನೇ ಜನ್ಮದಿನದ (Birthday) ಅಂಗವಾಗಿ ಮೂವರು ಸಾಧಕರಿಗೆ ಬಂಗಾರ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸೊರಬದ ಬಂಗಾರಧಾಮದಲ್ಲಿ ನಡೆದ ಸಮಾರಂಭದಲ್ಲಿ ಗೃಹ ಸಚಿವ ಡಾ. ಜಿ.ಪರಮೇಶ್ವರ್‌ ಪ್ರಶಸ್ತಿ ನೀಡಿ ಗೌರವಿಸಿದರು.

ಸುಮಂಗಲಿ ಸೇವಾಶ್ರಮದ ಅಧ್ಯಕ್ಷೆ ಎಸ್‌.ಜಿ.ಸುಶೀಲಮ್ಮ, ಸಾಹಿತಿ ಕುಂ.ವೀರಭದ್ರಪ್ಪ, ಗ್ರಾಮೀಣ ರಂಗಭೂಮಿ ಕಲಾವಿದೆ ಪ್ರತಿಭಾ ನಾರಾಯಣ್‌ ಅವರಿಗೆ ಬಂಗಾರ ಪ್ರಶಸ್ತಿ ಪ್ರದಾನ ಮಾಡಲಾಯಿತು.

Bangaradhama at soraba | Bangarappa Birthday

ಯಾರೆಲ್ಲ ಏನೆಲ್ಲ ಮಾತನಾಡಿದರು?

ಎಸ್. ಬಂಗಾರಪ್ಪ ಮುಖ್ಯಮಂತ್ರಿ ಆಗಿದ್ದಾಗ ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದರು. ಈ ಮೂಲಕ ಜನಮಾನಸದಲ್ಲಿ ಉಳಿದಿದ್ದಾರೆ. ಬಂಗಾರಪ್ಪ ನಮ್ಮಂತಹ ಯುವಕರನ್ನು ಆಕರ್ಷಿಸಿದ್ದರು. ರಮೇಶ್, ನಜೀರ್, ಜಾರ್ಜ್ ಬದುಕು ರೂಪಿಸುವ ಕೆಲಸ ಮಾಡಿದರು. ಅವರ ಮಾತು ಸ್ಫೂರ್ತಿ ಆಗಿವೆ. ಸಂಪುಟದಲ್ಲಿ ಯುವಕರಿಗೆ ಆದ್ಯತೆ ಕೊಟ್ಟಿದ್ದರು. ಬಂಗಾರಪ್ಪ ಅವರ ನೆನಪು ಸದಾ ತಾಜಾವಾಗಿಡಲು ಈ ಸ್ಥಳವನ್ನು ಮಧು ಬಂಗಾರಪ್ಪ ಅರ್ಥಗರ್ಭಿತವಾಗಿ ಸಮಾಜಕ್ಕೆ ಅರ್ಪಿಸಿದ್ದಾರೆ.

ಡಾ. ಜಿ.ಪರಮೇಶ್ವರ್‌, ಗೃಹ ಸಚಿವ

Kalleshwara-Enterprises.webp
Bangarappa-Birthday-at-Bangaradhama-in-Soraba.

BLUE-LINE

Bangaradhama at soraba | Bangarappa Birthday

ಬಡವರ ಪರ ಇರುವವರನ್ನು ಕಂಡರೆ ನನಗೆ ಪ್ರೀತಿ. ಅದೇ ರೀತಿ ನಾಡಿನ ಬಡವರ ಪರ ಮಾವ ಬಂಗಾರಪ್ಪ ನೀಡಿದ ಕೊಡುಗೆ ಅಪಾರ. ಹಾಗಾಗಿ ಅವರ ಬಗ್ಗೆ ಗೌರವ ಭಾವ. ಒಳ್ಳೆಯ ತಂದೆ, ಮಾವ ಪಡೆದಿರುವುದು ನನ್ನ ಪುಣ್ಯ. ಇಬ್ಬರೂ ನನಗೆ ಎರಡು ಕಣ್ಣುಗಳು.

ಡಾ. ಶಿವರಾಜ್‌ ಕುಮಾರ್‌, ಚಲನಚಿತ್ರ ನಟ

BLUE-LINE

ಬಂಗಾರಪ್ಪ ಅವರ ಚಿಂತನೆ, ರಾಜಕೀಯ ಮೌಲ್ಯಗಳ ನೆಲೆಯಲ್ಲಿಯೇ ತಾವು ಸಾಗುತ್ತಿದ್ದು, ಜಾತಿ, ಧರ್ಮ ಮೀರಿ ಪ್ರಾಮಾಣಿಕವಾಗಿ ನಾಡಿನ ಮಕ್ಕಳ ಶ್ರೇಯೋಭಿವೃದ್ಧಿಗೆ ದುಡಿಯುವೆ.

ಮಧು ಬಂಗಾರಪ್ಪ, ಶಿಕ್ಷಣ ಸಚಿವ

BLUE-LINE

ಬಂಗಾರಪ್ಪ ಸಮಾಧಿಗೆ ಪುಷ್ಪ ನಮನ

ವೇದಿಕೆ ಕಾರ್ಯಕ್ರಮಕ್ಕು ಮುನ್ನ ಗೃಹ ಸಚಿವ ಡಾ. ಜಿ.ಪರಮೇಶ್ವರ್‌ ಅವರು ಬಂಗಾರಧಾಮದಲ್ಲಿ ಬಂಗಾರಪ್ಪ ಮತ್ತು ಶಕುಂತಲಾ ಬಂಗಾರಪ್ಪ ಅವರ ಸಮಾಧಿಗಳಿಗೆ ಪುಷ್ಪ ನಮನ ಸಲ್ಲಿಸಿದರು. ಸಚಿವ ಮಧು ಬಂಗಾರಪ್ಪ, ಪತ್ನಿ ಅನಿತಾ, ಗೀತಾ ಶಿವರಾಜ್‌ ಕುಮಾರ್‌, ಡಾ. ಶಿವರಾಜ್‌ ಕುಮಾರ್‌, ವಿಧಾನ ಪರಿಷತ್‌ ಸದಸ್ಯರಾದ ಮಂಜುನಾಥ ಭಂಡಾರಿ, ಬಲ್ಕಿಷ್‌ ಬಾನು, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಪ್ರಸನ್ನ ಕುಮಾರ್‌, ಸೂಡ ಅಧ್ಯಕ್ಷ ಹೆಚ್‌.ಎಸ್.ಸುಂದರೇಶ್‌ ಸೇರಿದಂತೆ ಹಲವರು ಇದ್ದರು.

Bangaradhama at soraba | Bangarappa Birthday

ಇದನ್ನೂ ಓದಿ » ಕುಂಸಿ ಠಾಣೆಗೆ ಹೋಮ್‌ ಮಿನಿಸ್ಟರ್‌ ದಿಢೀರ್‌ ಭೇಟಿ, ಏನೆಲ್ಲ ಚೆಕ್‌ ಮಾಡಿದರು?

ವಿಜೇತ ಮಕ್ಕಳಿಗೆ ಪ್ರಶಸ್ತಿ Birthday

ಬಂಗಾರಪ್ಪ ಜನ್ಮದಿನದ ಹಿನ್ನೆಲೆ ಶಿವಮೊಗ್ಗ ಜಿಲ್ಲೆಯ ಪ್ರತಿ ತಾಲೂಕುವಾರು ಶಾಲೆ ವಿದ್ಯಾರ್ಥಿಗಳಿಗೆ ಪ್ರಬಂಧ ಮತ್ತು ಚರ್ಚಾ ಸ್ಪರ್ಧೆ ನಡೆಸಲಾಗಿತ್ತು. ಇದರಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಗೃಹ ಸಚಿವ ಡಾ. ಪರಮೇಶ್ವರ್‌, ನಟ ಶಿವರಾಜ್‌ ಕುಮಾರ್‌ ಪ್ರಶಸ್ತಿ ವಿತರಿಸಿದರು.

Bangaradhama at soraba | Bangarappa Birthday

ಶಿವಣ್ಣ ಹಾಡು, ಸಾಂಸ್ಕೃತಿಕ ಕಾರ್ಯಕ್ರಮ

ಕಾರ್ಯಕ್ರಮದಲ್ಲಿ ಡಾ. ಶಿವರಾಜ್‌ ಕುಮಾರ್‌, ಮುತ್ತಣ್ಣ ಮತ್ತು ಜೋಗಿ ಸಿನಿಮಾದ ಹಾಡುಗಳನ್ನು ಹಾಡಿ ಜನರನ್ನು ರಂಜಿಸಿದರು. ವೇದಿಕೆ ಕಾರ್ಯಕ್ರಮಕ್ಕು ಮುನ್ನ ಮತ್ತು ಆ ಬಳಿಕ ವಿವಿಧ ಕಲಾ ತಂಡಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟವು.

Bangaradhama at soraba | Bangarappa Birthday

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp

Leave a Comment