ಶಿವಮೊಗ್ಗ ಲೈವ್
ಚಂದ್ರಗುತ್ತಿ: ಶ್ರೀ ರೇಣುಕಾಂಬಾ ದೇವಸ್ಥಾನದಲ್ಲಿ ಧನುರ್ಮಾಸದ (Dhanurmasa) ಪೂಜೆ ಅಂಗವಾಗಿ ಡಿ.16ರಿಂದ ಮಕರ ಸಂಕ್ರಮಣದವರೆಗೆ ಒಂದು ತಿಂಗಳು ವಿವಿಧ ಧಾರ್ಮಿಕ ಪೂಜಾ ಕಾರ್ಯಗಳು ಜರುಗಲಿವೆ.
ದೇವಿಗೆ ಪ್ರತಿದಿನ ಬೆಳಿಗ್ಗೆ 6.30ರಿಂದ ವಿಶೇಷ ಪೂಜೆ, ಮಹಾಮಂಗಳಾರತಿ ನಡೆಯಲಿವೆ. ಇದನ್ನು ದೇವಸ್ಥಾನದ ಪ್ರಧಾನ ಅರ್ಚಕರು ನೆರವೇರಿಸುವರು ಎಂದು ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಪ್ರಮೀಳಾ ಕುಮಾರಿ ತಿಳಿಸಿದ್ದಾರೆ.

ಇದನ್ನೂ ಓದಿ » ಸಾಗರ ಬಂದ್, ದಿನಾಂಕ ಪ್ರಕಟಿಸಿದ ಹೋರಾಟ ಸಮಿತಿ, ಬಂದ್ಗೆ ಕಾರಣವೇನು?
