ಗಾಂಜಾ ಪತ್ತೆಗೆ ಮತ್ತೆ ಡ್ರೋಣ್ ಹಾರಿಬಿಟ್ಟ ಅಬಕಾರಿ ಇಲಾಖೆ, ಎಲ್ಲೆಲ್ಲಿ ಕಾರ್ಯಾಚರಣೆ ನಡೆಸಲಾಯ್ತು ಗೊತ್ತಾ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | ಸೊರಬ | 27 ಸೆಪ್ಟೆಂಬರ್ 2019

70578780 2398489037062520 5710410120999993344 n.jpg? nc cat=106& nc oc=AQmtfpzxUQSqQ3NR97juV4hAMIignDF5dhOG4C 8HYqMiPWz9 n5hg8ODHySqG71Ik67TQyBr8ZjtL1h2Hp6dfp5& nc ht=scontent.fixe1 1

ಜೋಳ ಮತ್ತು ಶುಂಠಿ ಬೆಳೆ ನಡುವೆ ಗಾಂಜಾ ಬೆಳೆ ಬೆಳೆದಿರುವುದನ್ನು ಪತ್ತೆ ಹಚ್ಚಲು ಅಬಕಾರಿ ಇಲಾಖೆ ಪುನಃ ಡ್ರೋಣ್ ಕಾರ್ಯಾಚರಣೆ ಆರಂಭಿಸಿದೆ. ಸೊರಬ ತಾಲೂಕಿನ ವಿವಿಧೆಡೆ ಮೊದಲ ಹಂತದ ಡ್ರೋಣ್ ಆಪರೇಷನ್ ನಡೆಸಲಾಗಿದೆ.

Prashanth GPS copy

ಸಾಗದ್ದೆ, ಕೊಡಕಣಿ, ಮಾಳೆಕೊಪ್ಪ, ಸಾರೆಕೊಪ್ಪ ಗ್ರಾಮಗಳಲ್ಲಿ ಜೋಳ ಮತ್ತು ಶುಂಠಿ ಬೆಳೆ ಮೇಲೆ ಅಬಕಾರಿ ಇಲಾಖೆ ಅಧಿಕಾರಿಗಳು ಡ್ರೋಣ್ ಹಾರಿಸಿಬಿಟ್ಟರು. ಆದರೆ ಗಾಂಜಾ ಪತ್ತೆ ಆಗಿಲ್ಲ. ಈ ನಡುವೆ ಡ್ರೋಣ್ ಕಾರ್ಯಾಚರಣೆ ನಡೆಸಿದ ಗ್ರಾಮಗಳಲ್ಲಿನ ಸಾರ್ವಜನಿಕರಲ್ಲಿ ಅಬಕಾರಿ ಇಲಾಖೆ ಜಾಗೃತಿ ಮೂಡಿಸಿತು.

ಅಬಕಾರಿ ಉಪ ಆಯುಕ್ತರ ಮಾರ್ಗದರ್ಶನದಲ್ಲಿ ಉಪ ಅಧೀಕ್ಷಕಿ ಲೀಲಾವತಿ ಅವರ ನೇತೃತ್ವದಲ್ಲಿ ಡ್ರೋಣ್ ಕಾರ್ಯಾಚರಣೆ ನಡೆಸಲಾಯಿತು. ಕಳೆದ ವರ್ಷ ಗಾಂಜಾ ಬೆಳೆ ಪತ್ತೆಗೆ ಅಬಕಾರಿ ಇಲಾಖೆ ವತಿಯಿಂದ ಜಿಲ್ಲೆಯಾದ್ಯಂತ ಡ್ರೋಣ್ ಕಾರ್ಯಾಚರಣೆ ನಡೆಸಲಾಗಿತ್ತು. ಇದರಿಂದ ಗಾಂಜಾ ಬೆಳೆ ಪ್ರಮಾಣ ತಗ್ಗಿತ್ತು.

ಅಬಕಾರಿ ನಿರೀಕ್ಷಕಿ ಸುಷ್ಮಾ, ಉಪ ನಿರೀಕ್ಷಕರಾದ ಸುಧಾ, ಅಣ್ಣಪ್ಪ, ಸಿಬ್ಬಂದಿಗಳಾದ ಗಂಗಾಧರ್, ವೀರಭದ್ರಪ್ಪ, ಪುಟ್ಟಪ್ಪ, ಜೀವನ್, ಸಚಿನ್, ಡ್ರೋಣ್ ಕ್ಯಾಮರಾ ನಿರ್ವಾಹಕ ಅಭಿ, ರವೀಂದ್ರನಾಥ್ ಸೇರಿದಂತೆ ಹಲವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

71590847 931935990501155 4041436531863322624 n.jpg? nc cat=103& nc oc=AQndCkm5igOUBlNXPlQfeHy5KMKAo8nGWtblFKfOzv1UAcBY2AMo3xN MHv8ZHNrBXMiU4N9pmGhg 0uxo 3AMWQ& nc ht=scontent.fixe1 1

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200

ಸುದ್ದಿಗಾಗಿ ಕರೆ ಮಾಡಿ – 9964634494

ಈ ಮೇಲ್ ಐಡಿ | shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment