ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ ಲೈವ್.ಕಾಂ | SORABA NEWS | 5 APRIL 2021
ಸೊರಬದಲ್ಲಿ ಕೆಎಸ್ಆರ್ಟಿಸಿ ವತಿಯಿಂದ ಮೊದಲ ನಗರ ಸಾರಿಗೆ ಬಸ್ ಸಂಚಾರ ಆರಂಭವಾಗಿದೆ. ಶಾಸಕ ಕುಮಾರ್ ಬಂಗಾರಪ್ಪ ಅವರು ಚಾಲನೆ ನೀಡಿ, ಬಸ್ಸಿನಲ್ಲೇ ಸಂಚರಿಸಿದರು.
ಪಟ್ಟಣದ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನದ ಮುಂಭಾಗ ಶಾಸಕ ಕುಮಾರ್ ಬಂಗಾರಪ್ಪ ಅವರು ಬಸ್ಸಿಗೆ ಹಸಿರು ನಿಶಾನೆ ತೋರಿಸಿದರು. ಬಳಿಕ ಮರೂರಿನ ತನಕ ಅವರು ಬಸ್ಸಿನಲ್ಲೇ ಸಂಚರಿಸಿದರು.
ಬಸ್ ರೂಟ್ ಹೇಗಿದೆ?
ರೂಟ್ 1 – ಕೆಎಸ್ಆರ್ಟಿಸಿ ಬಸ್ ನಿಲ್ದಾಣದಿಂದ ರಂಗನಾಥ ಸ್ವಾಮಿ ದೇಗುಲ, ಚರ್ಚ್ ಸ್ಕೂಲ್, ಅಮರ ಜ್ಯೋತಿ ಸರ್ಕಲ್, ಶೆಟ್ಟರ ಕೇರಿ, ಜೇಡಿಗೇರಿ, ಮಾರಿಗುಡಿ ಲಾಸ್ಟ್ ಸ್ಟಾಪ್
ರೂಟ್ 2 – ಸರ್ಕಾರಿ ಆಸ್ಪತ್ರೆಯಿಂದ ರಂಗನಾಥಸ್ವಾಮಿ ದೇಗುಲ, ದಂಡಾವತಿ ಬ್ಲಾಕ್, ಶ್ರೀ ನಾರಾಯಣಗುರು ಸರ್ಕಲ್, ಜಯಂತಿ ಗ್ರಾಮ, ಹಳೆ ಸೊರಬ
ರೂಟ್ 3 – ಸರ್ಕಾರಿ ಆಸ್ಪತ್ರೆಯಿಂದ ಜೂನಿಯರ್ ಕಾಲೇಜು, ಕಾನಕೊಪ್ಪ, ಕೊಡಕಣಿ, ಸೀಗೇಹಳ್ಳಿ
ರೂಟ್ 4 – ಸರ್ಕಾರಿ ಆಸ್ಪತ್ರೆಯಿಂದ ಹಳೇ ಮಾರುಕಟ್ಟೆ, ಜಂಗಿನಕೊಪ್ಪ
ರೂಟ್ 5 – ಸರ್ಕಾರಿ ಆಸ್ಪತ್ರೆಯಿಂದ ಹೌಸಿಂಗ್ ಬೋರ್ಡ್, ನಾಗರಕಟ್ಟೆ ಅರಳಿಮರ ಸರ್ಕಲ್, ಸಂತೆ ಮೈದಾನ, ಮರೂರು
ಸಾರಿಗೆ ಸೇವೆ ಮತ್ತಷ್ಟು ವಿಸ್ತರಣೆ
ಸಾರಿಗೆ ಸೇವೆಯಿಂದ ವಿದ್ಯಾರ್ಥಿಗಳು, ರೈತರು, ಕಚೇರಿ ಕೆಲಸಗಳಿಗೆ ಓಡಾಡುವವರಿಗೆ ಅನುಕೂಲವಾಗಲಿದೆ. ಜನರ ಅನುಕೂಲಕ್ಕೆ ತಕ್ಕ ಹಾಗೆ ಸಾರಿಗೆ ಸೇವೆಯನ್ನು ವಿಸ್ತರಣೆ ಮಾಡಲಾಗುತ್ತದೆ ಎಂದು ಶಾಸಕ ಕುಮಾರ್ ಬಂಗಾರಪ್ಪ ತಿಳಿಸಿದರು.
ಪುರಸಭೆ ಅಧ್ಯಕ್ಷ ಎಂ.ಡಿ.ಉಮೇಶ್, ಉಪಾಧ್ಯಕ್ಷ ಮಧುರಾಯ್ ಶೇಟ್, ತಹಶೀಲ್ದಾರ್ ಶಿವಾನಂದ ರಾಣೆ, ಮುಖ್ಯಾಧಿಕಾರಿ ಶೆಲ್ಜಾ ನಾಯ್ಕ್, ಕೆಎಸ್ಆರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ನವೀನ್, ಸಾಗರ ಘಟಕದ ವ್ಯವಸ್ಥಾಪಕ ಡಿ.ಎಸ್.ರಾಜಪ್ಪ ಸೇರಿದಂತೆ ಹಲವರು ಇದ್ದರು.



ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com
LATEST NEWS
- ಆಲ್ಕೊಳ ಬಳಿ ಪೊಲೀಸರ ಕಾರ್ಯಾಚರಣೆ, ಬೈಕ್ ಸಹಿತ ಇಬ್ಬರು ಅರೆಸ್ಟ್, ಕಾರಣವೇನು?

- ಶರಾವತಿ ನಗರದಲ್ಲಿ ಕಾರು ಗಾಜು ಪೀಸ್ ಪೀಸ್ ಕೇಸ್, ಮೂವರು ಅರೆಸ್ಟ್, ಘಟನೆಗೆ ಕಾರಣ ಮನೆ

- ಶಿವಮೊಗ್ಗದಲ್ಲಿ ಏರ್ಟೆಲ್ ಮೊಬೈಲ್ ಟವರ್ನ ಉಪಕರಣ ಕಳವು, ಆಗಿದ್ದೇನು?

- ಶಿವಮೊಗ್ಗ ಕಾಂಗ್ರೆಸ್ ಕಾರ್ಯದರ್ಶಿ ಸೇರಿ ಇಬ್ಬರು 6 ವರ್ಷ ಪಕ್ಷದಿಂದ ಉಚ್ಛಾಟನೆ, ಕಾರಣವೇನು?

- ಬೇಡರ ಹೊಸಹಳ್ಳಿ ಬಳಿ ಚಲಿಸುತ್ತಿದ್ದ ಬಸ್ಸಿನ ಸೀಟಿನಿಂದಲೇ ಹೊರಗೆ ಬಿದ್ದ ಪ್ರಯಾಣಿಕ

About The Editor
ನಿತಿನ್ ಆರ್.ಕೈದೊಟ್ಲು






