ಪತ್ರೊಡೆ ಎಲೆ ಕೀಳಲು ಮರವೇರಿದ್ದ ಯುವಕ ಸಾವು, ಆಗಿದ್ದೇನು?

ತೀರ್ಥಹಳ್ಳಿ: ತಾಲೂಕಿನ ಹೊಸಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಕ್ಕುಂದ ಗ್ರಾಮದಲ್ಲಿ ಪತ್ರೊಡೆ ಎಲೆ ಕೀಳಲು ಮರವೇರಿದ್ದ ಯುವಕನೊಬ್ಬ 11 ಕೆ.ವಿ ವಿದ್ಯುತ್ ಲೈನ್‌ಗೆ ತಗುಲಿ ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ. ಲಕ್ಕುಂದ ಗ್ರಾಮದ ಅಭಿಷೇಕ್ (28) ಮೃತಪಟ್ಟ ದುರ್ದೈವಿ. ➤ ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.

ಅಭಿಷೇಕ್ ಅವರು ತಮ್ಮ ಗ್ರಾಮದ ಬಳಿ ಪತ್ರೊಡೆ ಎಲೆ ಕೀಳಲು ಮರ ಹತ್ತಿದ್ದರು. ಈ ವೇಳೆ ಮರದ ಪಕ್ಕದಲ್ಲೇ ಹಾದುಹೋಗಿದ್ದ 11 ಕೆ.ವಿ ಸಾಮರ್ಥ್ಯದ ವಿದ್ಯುತ್ ತಂತಿ ಆಕಸ್ಮಿಕವಾಗಿ ತಗುಲಿದೆ. ವಿದ್ಯುತ್ ಪ್ರವಾಹಿಸಿದ ತೀವ್ರತೆಗೆ ಯುವಕ ಮರದ ಮೇಲೆಯೇ ಪ್ರಾಣಬಿಟ್ಟಿದ್ದಾರೆ ಎನ್ನಲಾಗಿದೆ.

Thirthahalli-Abhishek-Incident.

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಸಾರ್ವಜನಿಕರು ಹಾಗೂ ಪೊಲೀಸರು ಯುವಕನ ಮೃತದೇಹವನ್ನು ಕೆಳಕ್ಕಿಳಿಸಿ, ಮರಣೋತ್ತರ ಪರೀಕ್ಷೆಗಾಗಿ ತೀರ್ಥಹಳ್ಳಿ ತಾಲೂಕು ಆಸ್ಪತ್ರೆಗೆ ರವಾನಿಸಿದ್ದಾರೆ. ಆಗುಂಬೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.
ಮುಂದಿನ ಸುದ್ದಿ ಓದಿ TRENDING

ಕಾರುಗಳಿಗೆ 30 ಪ್ರಮುಖ ಚೆಕಪ್‌ ಉಚಿತ, ಜುಲೈ 8ರವರೆಗೆ ಹಲವು ಆಫರ್‌, ಎಲ್ಲಿ? ಏನೇನೆಲ್ಲ ಆಫರ್‌ಗಳಿವೆ?